Skip to main content

Blog number 1787. ರಾಷ್ಟ್ರೀಕೃತ ಬ್ಯಾಂಕ್ ಗಳು RBI ಗೈಡ್ ಲೈನ್ ಪಾಲಿಸದೆ ರೈತರನ್ನು ನಿರ್ಲಕ್ಷಿಸುತ್ತಿದೆ ಇದನ್ನು ಜನ ಪ್ರತಿನಿದಿಗಳು ಮತ್ತು ರೈತ ಪರ ಸಂಘಟನೆಗಳು ಗಮನಿಸಬೇಕು.

#ಬ್ಯಾಂಕುಗಳೇಕೆ_ಹೀಗೆ ?

#ರೈತರ_ಮಕ್ಕಳೆ_ಬ್ಯಾಂಕ್_ಉದ್ಯೋಗಿ_ಆಗಿ_ರೈತರನ್ನು_ತಾತ್ಸರ_ಮಾಡುವುದೇಕೆ?

#ರಾಷ್ಟ್ರೀಕೃತ_ಬ್ಯಾಂಕ್_ಶಾಖೆಯಲ್ಲಿ_ರೈತ_ಗ್ರಾಹಕನಿಗೆ_ಮೂರನೆ_ದರ್ಜೆ_ಸ್ಥಾನಮಾನ_ಏಕೆ?

#ಶೇಕಡಾ_4_ರ_ಬಡ್ಡಿ_ಸಾಲ_ರೈತರಿಗೆ_ನೀಡಲು_ಬ್ಯಾಂಕ್_ಹಿಂದೇಟು_ಹಾಕುವುದೇಕೆ?

#ಪ್ರತಿ_ಬ್ಯಾಂಕಿನಲ್ಲಿ_ರೈತರಿಗೆ_ಸಿಗುವ_ಸಾಲ_ಸೌಲಭ್ಯದ_ಮಾಹಿತಿ_ಫಲಕ_ಯಾಕೆ_ಹಾಕುತ್ತಿಲ್ಲ?

#ಆರ್_ಬಿ_ಐ_ಸುತ್ತೋಲೆ_ಪ್ರತಿ_ಬ್ಯಾಂಕ್_ಪಾಲಿಸಿದರೆ_ರೈತರ_ಆತ್ಮಹತ್ಯೆ_ತಡೆಯಬಹುದು

#ಈ_ಬಗ್ಗೆ_ಸ್ಥಳಿಯ_ಜನಪ್ರತಿನಿದಿಗಳು_ರೈತ_ಸಂಘಟನೆಗಳು_ರೈತರ_ಜನ_ಜಾಗೃತಿಗೆ_ಮುಂದಾಗ_ಬೇಕು.

  ಕೃಷಿಕರು ಅತಿವೃಷ್ಟಿ ಅನಾವೃಷ್ಟಿಗಳಿಂದ ಅಥವ ಬೆಳೆದ ಬೆಳೆಗೆ ಬೆಲೆ ಬರದಾದಾಗ ಉಂಟಾಗುವ ನಷ್ಟದಿಂದ ನಲುಗುತ್ತಾನೆ ಖಾಸಾಗಿ ಹಣಕಾಸು ಲೇವಾದೇವಿಗಾರರಿಂದ ಪಡೆದ ಸಾಲ ಬಡ್ಡಿ ಸಕಾಲದಲ್ಲಿ ಪಾವತಿಸಲಾಗದೆ ಮತ್ತು ವಸೂಲಿಗಾರರ ಹಿಂಸೆಯಿಂದ ಹತಾಶರಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಈಗ ಎಲ್ಲೆಡೆ ನೋಡುತ್ತಿದ್ದೇವೆ.
  ಈ ಬಗ್ಗೆ ಕೇಂದ್ರ ಸರ್ಕಾರ ಅನೇಕ ರೀತಿಯಲ್ಲಿ ರೈತನಿಗೆ ಖಾಸಾಗಿ ಲೇವಾದೇವಿದಾರರ ಕಪಿ ಮುಷ್ಟಿಯಲ್ಲಿ ಸಿಗಬಾರದೆಂದು ಅನೇಕ ರೀತಿಯ ಅನುಕೂಲಕರವಾದ ಕಡಿಮೆ ಬಡ್ಡಿಯ ಬೆಳೆ ಸಾಲ, ಕೃಷಿ ಅಭಿವೃದ್ದಿ ಸಾಲ ನೀಡುವಂತ ಯೋಜನೆ ರಿಸರ್ವ ಬ್ಯಾಂಕ್ ಇಂಡಿಯಾ ಮೂಲಕ ದೇಶದಾದ್ಯಂತ ಬ್ಯಾಂಕುಗಳಿಗೆ ಗೈಡ್ ಲೈನ್ ನೀಡಿದೆ ಮತ್ತು ಬ್ಯಾಂಕಿನ ಶಾಖೆಯಲ್ಲಿ ರೈತರಿಗೆ ಸಾಲ ಸೌಲಭ್ಯ ವಿಳಂಬವಾಗಬಾರದೆಂದು ರೈತರ ಬೆಳೆ ಸಾಲ ಮಂಜೂರು ಮಾಡಲು ಪ್ರತಿ ಬ್ಯಾಂಕ್ ಶಾಖೆಯಲ್ಲಿ  ಕೃಷಿ ಸಾಲಕ್ಕೆ ಪ್ರತ್ಯೇಕ ಮ್ಯಾನೇಜರ್ ಹುದ್ದೆ ಮಂಜೂರು ಮಾಡಿದೆ.
  ರೈತರ ಪ್ರತಿ ಎಕರೆ ಅಡಿಕೆಗೆ 1.20 ಲಕ್ಷ, ರಬ್ಬರ್ ಬೆಳೆಗೆ ಎಕರೆಗೆ 80 ಸಾವಿರ, ಇತರ ಬೆಳೆಗೆ ಎಕರೆಗೆ 40 ಸಾವಿರದಂತೆ ಬೆಳೆ ಸಾಲ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೀಡು ಮಾಡದೆ ಬ್ಯಾಂಕ್ ಶಾಖೆಯಲ್ಲಿ ಶೇಕಡಾ 4% ಬಡ್ಡಿ ದರದಲ್ಲಿ ತಕ್ಷಣ ಸಾಲ ಮಂಜೂರು ಮಾಡುವ ಅಧಿಕಾರ ನೀಡಿದೆ.
  4 ಲಕ್ಷದ ತನಕ 4% ಬಡ್ಡಿ ಮತ್ತು 4 ಲಕ್ಷ ಮೀರಿದರೆ 7.5% ಬಡ್ಡಿ ನಿಗದಿ ಮಾಡಿದೆ.
  ಕೃಷಿ ಜಮೀನು ಅಭಿವೃಧ್ಧಿಗಾಗಿ ಜಮೀನು ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ದೀಡು ಮಾಡಿ ಅವಶ್ಯವಿರುವಷ್ಟು ಹಣ ಸಾಲದ ರೂಪದಲ್ಲಿ ಮಂಜೂರು ಮಾಡುತ್ತಾರೆ.
  ರೈತರು ಸೊಸೈಟಿ, ಪಿ.ಎಲ್. ಡಿ. ಬ್ಯಾಂಕಿನಲ್ಲಿ ಸಾಲ ಇದ್ದರೂ ಬ್ಯಾಂಕ್ ಪರಿಗಣಿಸದೆ ಸಾಲ ನೀಡಬೇಕು ಮತ್ತು ಸಿಬಿಲ್ ಸ್ಕೋರ್ ಇತ್ಯಾದಿ ಪರಿಗಣಿಸದೆ ರೈತರಿಗೆ ಸಾಲ ನೀಡಬೇಕು, ರೈತರು ಬ್ಯಾಂಕಿಗೆ ಸಾಲ ಪಡೆಯಲು ಬಂದಾಗ ಅವರಿಗೆ ಸದರಿ ಬ್ಯಾಂಕಿನಲ್ಲಿ ಸ್ಪಷ್ಟವಾಗಿ ಕಾಣುವಂತೆ ರೈತರಿಗೆ ಸದರಿ ಬ್ಯಾಂಕ್ ನೀಡುವ ಸಾಲ ಸೌಲಭ್ಯದ ಫಲಕ ಹಾಕಿರಬೇಕು ಹಾಗೂ ಬ್ಯಾಂಕಿಗೆ ಬರುವ ರೈತ ಗ್ರಾಹಕರಿಗೆ ಗೌರವದಿಂದ ಕಾಣಬೇಕು ಅವರನ್ನು ಕುಳ್ಳಿರಿಸಿ ಮಾಹಿತಿ ನೀಡಬೇಕು, ಸತಾಯಿಸ ಬಾರದು, ತಪ್ಪು ಮಾಹಿತಿ ನೀಡಬಾರದು ಮತ್ತು ಅವರಿಗೆ ಚಹಾ ಪಾನಿ ನೀಡಿದರೆ ಅದನ್ನು ಬ್ಯಾಂಕ್ ಶಾಖೆಯ ಜನರಲ್ ಚಾರ್ಜಸ್ ಖಾತೆ (GC) ಮೂಲಕ ಖರ್ಚು ಮಾಡಲು ಅವಕಾಶ ನೀಡಿದೆ.
  ರೈತರ ಅನುಕೂಲಕ್ಕಾಗಿ ಪ್ರತಿ ಬ್ಯಾಂಕ್ ಶಾಖೆಯಲ್ಲಿ ಪ್ರತ್ಯೇಕ ಮ್ಯಾನೇಜರ್ ಹುದ್ದೆ ಸೃಷ್ಟಿಸಿ ಅವರಿಗೆ 80 ರಿಂದ ಒಂದು ಲಕ್ಷ ವೇತನ, TA & DA ಮತ್ತು ಮನೆ ಬಾಡಿಗೆ ಇತ್ಯಾದಿ ಸವಲತ್ತು ನೀಡಿದೆ.
   ಇವರು ರೈತರ ಜೊತೆ ಸರಿಯಾಗಿ ವರ್ತಿಸದಿದ್ದರೆ ಬೆಂಗಳೂರಿನ HRMS ಗೆ ದೂರು ನೀಡುವ ಮೂಲಕ ರೈತರಿಗೆ ನ್ಯಾಯ ಒದಗಿಸುವ ವ್ಯವಸ್ಥೆ ಇದೆ.
  ಆದರೆ ವಾಸ್ತವವಾಗಿ ಏನಾಗಿದೆ? ... ರೈತರನ್ನು ಯಾವುದೇ ಬ್ಯಾಂಕ್ ಶಾಖೆ ತನ್ನ RBI ಗೈಡ್ ಲೈನ್ ಪ್ರಕಾರ ಗೌರವಯುತವಾಗಿ ನಡೆಸುಕೊಳ್ಳುತ್ತಿಲ್ಲ, ರೈತರಿಗೆ ಅವಶ್ಯವಿಲ್ಲದ ದಾಖಲೆಗಾಗಿ ಅಲೆದಾಡಿಸುತ್ತಾರೆ, ಬ್ಯಾಂಕಿನ ಶಾಖೆಯಲ್ಲಿ ಅವರನ್ನು ಕನಿಷ್ಟ ಕುಳ್ಳಿರಿಸಿ ಮಾಹಿತಿ ಕೂಡ ನೀಡುವುದಿಲ್ಲ, ಅವರ ಹೆಸರಲ್ಲಿ ಸಿಬ್ಬಂದಿಗಳು ಕಾಫಿ /ಟಿ ಪಾರ್ಟಿ ಮಾಡಿ GC ಕ್ಲೈಮ್ ಮಾಡುತ್ತಿದ್ದಾರೆ, ಇರಬೇಕಾದ ನಾಮ ಫಲಕ ಬ್ರಾಂಚಿನ ಗೋದಾಮಿನಲ್ಲಿ ಒಗೆದಿರುತ್ತಾರೆ, ಮೇಲಾದಿಕಾರಿ ಬರುವಾಗ ಮಾತ್ರ ಪ್ರದಶಿ೯ಸುತ್ತಾರೆ.
  ಕೃಷಿ ಸಾಲಕ್ಕೆ ನೇಮಕವಾಗಿರುವ ಮ್ಯಾನೇಜರ್ ರೈತರಿಗೆ ಸತಾಯಿಸಿ ಸಾಲ ನಿರಾಕರಿಸುವುದರಲ್ಲೆ ತನ್ನ ಸಮಯ ಕಳೆದು ತಿಂಗಳಾಂತ್ಯದಲ್ಲಿ ಲಕ್ಷಾಂತರ ಸಂಬಳ ಸಾರಿಗೆ ಪಡೆಯುವ ಮೋಸದಾಟ ನಡೆಸುತ್ತಾರೆ.
  ಇದು ಒಂದು ಬ್ಯಾಂಕಿನ ಶಾಖೆ ಅಥವ ಒಂದು ಊರಿನ ಕಥೆ ಅಲ್ಲ ಇಡೀ ರಾಜ್ಯದ ಎಲ್ಲಾ ಬ್ಯಾಂಕಿನ ಶಾಖೆಗಳಲ್ಲಿ ನಿರಂತರವಾಗಿ ರೈತರನ್ನು ಶೋಷಣೆ ಮಾಡುವ ಕಥೆ ಆಗಿದೆ.
   ಪಕ್ಕದ ಮಹಾರಾಷ್ಟ್ರ, ಕೇರಳ ಮತ್ತು ತಮಿಳುನಾಡಿನಲ್ಲಿ ಶಾಸಕರುಗಳು ತಮ್ಮ ಕ್ಷೇತ್ರದ ಪ್ರತಿ ಬ್ಯಾಂಕಿನ ಶಾಖೆಯಲ್ಲಿ ಈ ರೀತಿ ಅಪರಾತಪರ ನಡೆಯಲು ಬಿಡುವುದಿಲ್ಲ ಮತ್ತು ಅಲ್ಲಿನ ರೈತ ಸಂಘಟನೆಗಳು ಪ್ರತಿ ಬ್ಯಾಂಕಿನಲ್ಲಿ ರೈತರಿಗೆ ನೀಡುವ ಸಾಲ ಸೌಲಭ್ಯವನ್ನು ಮಾನಿಟರಿಂಗ್ ಮಾಡುತ್ತದೆ ಮತ್ತು ರೈತರಲ್ಲಿ RBI ಗೈಡ ಲೈನ್ ಮಾಹಿತಿ ನೀಡುವ ಜನ ಜಾಗೃತಿ ಕಾರ್ಯಕ್ರಮ ನಿರಂತರವಾಗಿ ನಡೆಸುವುದರಿಂದ ಬ್ಯಾಂಕ್ ಸಿಬ್ಬಂದಿ ನಮ್ಮ ರಾಜ್ಯದಂತೆ ರೈತರನ್ನು ಸತಾಯಿಸುವುದಿಲ್ಲ.
  ನಮ್ಮ ರಾಜ್ಯದ ಬ್ಯಾಂಕ್ ಸಿಬ್ಬಂದಿಗಳು ರೈತರ ಮಕ್ಕಳೇ ಆದರೂ ರೈತರನ್ನೇ ಶೋಷಿಸುವ ಹಿಂಸಾ ವಿನೋದಿಗಳಾಗಿರುವುದು ( Sadist) ವಿಪಯಾ೯ಸವಾಗಿದೆ.
  ಮುಂದಿನ ದಿನಗಳಲ್ಲಿ ಸ್ಥಳಿಯ ಜನಪ್ರತಿನಿದಿಗಳು, ರೈತ ಸಂಘಟನೆಗಳು, ಶಾಸಕರು, ಸಂಸದರು, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಎಲ್ಲಾ ಬ್ಯಾಂಕ್ ಶಾಖೆಗೆ ಬೇಟಿ ನೀಡಿ ಪರಿಶೀಲಿಸಲು ಪ್ರಾರಂಬಿಸಿದರೆ ರೈತರಿಗೆ ದೊಡ್ಡ ಸಹಾಯ ಮಾಡಿದಂತೆ ಆಗಲಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...