Skip to main content

Blog number 1798.ಆನಂದಪುರಂನ ಕಠಾರೆ ಕುಟುಂಬದ ಅವಳಿ ಸಹೋದರರಾದ ರಾಮ ಮತ್ತು ಲಕ್ಷ್ಮಣ ಕಠಾರೆ ಕುಟುಂಬ ಯಡೇಹಳ್ಳಿಯ ಶ್ರೀವರ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ನೂತನ ಪಲ್ಲಕ್ಕಿ ಸಮರ್ಪಿಸಿದ್ದಾರೆ.

https://youtu.be/ol2FB95YtSE?feature=shared

#ನಮ್ಮ_ಊರಿನ_ವರಸಿದ್ದಿವಿನಾಯಕ_ದೇವರಿಗೆ_ಪಲ್ಲಕ್ಕಿ_ಕೊಡುಗೆ.

#ಅವಳಿ_ಜವಳಿ_ಸಹೋದರರ_ಕುಟುಂಬದಿಂದ

#ಅವಳಿ_ಸಹೋದರರಾದ_ರಾಮ_ಲಕ್ಷ್ಮಣರು_ಟೈಲರ್_ಗೋವಿಂದಪ್ಪರ_ಮಕ್ಕಳು

#ಇವತ್ತು_ದಸರಾ_ಪಲ್ಲಕ್ಕಿ_ಉತ್ಸವ_ಈ_ಕುಟುಂಬದ_ಕೊಡುಗೆಯಾದ_ನೂತನ_ಪಲ್ಲಕ್ಕಿಯಲ್ಲಿ_ನೆರವೇರಿತು.

    ನಮ್ಮ ಊರಿನ ಶ್ರೀವರ ಸಿದ್ಧಿ ವಿನಾಯಕ ದೇವಸ್ಥಾನ ಪ್ರಾರಂಭದ ಪ್ರತಿಷ್ಟಾಪನೆಯಿಂದ ಇವತ್ತಿನವರೆಗೆ 17 ವರ್ಷಗಳಿಂದ ನಿರಂತರ ವರಸಿದ್ದಿ ವಿನಾಯಕ ದೇವರ ಸೇವೆ ಭಕ್ತಿ ಪೂರ್ವಕವಾಗಿ ಮಾಡುವವರಲ್ಲಿ ಟೈಲರ್ ರಾಮಣ್ಣ ಮತ್ತು ಅವರ ಪುತ್ರ ಪತ್ರಕರ್ತ ಪವನಾ ಯಾವುತ್ತೂ ಮುಂದಿರುತ್ತಾರೆ ಮತ್ತು ಯಾವತ್ತೂ ತಮ್ಮ ಹೆಸರು ಅಥವ ಪ್ರಚಾರ ಬಯಸದೇ ಎಲೆಮರೆಯ ಕಾಯಿಯಂತೆ ದೇವರ ಸೇವೆ ಮಾಡುತ್ತಾರೆ.
  ಟೈಲರ್ ರಾಮಣ್ಣರ ಪೂರ್ತಿ ಹೆಸರು ರಾಮ ಕಠಾರೆ ಇವರ ಅವಳಿ ಸಹೋದರ ಲಕ್ಷ್ಮಣ ಕಠಾರೆ, ಆ ಕಾಲದ ಟೈಲರ್ ಗೋವಿಂದಪ್ಪನವರಿಗೆ  ಈ ಅವಳಿ ಪುತ್ರರು ಸೇರಿ ಒಟ್ಟು ಆರು ಗಂಡು ಮಕ್ಕಳು.
   ಇವರ ದೊಡ್ಡ ಮಗ ನಾರಾಯಣಪ್ಪ, ರಾಮಣ್ಣ ಮತ್ತು ಚಿಕ್ಕ ಮಗ ಅಶೋಕ (ಸಿಮೆಂಟ್ ವ್ಯಾಪಾರಿ) ಆನಂದಪುರಂನಲ್ಲೇ ನೆಲೆಸಿದ್ದಾರೆ, ಅವಳಿ ಜವಳಿ ಪುತ್ರರಲ್ಲಿ ರಾಮಣ್ಣ ಇಲ್ಲಿ ಉಳಿದರೆ ಲಕ್ಷ್ಮಣ ಮುಂಬೈಯಲ್ಲಿ ನೆಲೆಸಿದ್ದರು, ಕೆಲ ವರ್ಷಗಳ ಹಿಂದೆ (17-ಡಿಸೆಂಬರ್ 2017) ಬಂದಾಗ ಇವರಿಬ್ಬರೂ ಒಟ್ಟಿಗೆ ನನ್ನ ಬೇಟಿಗೆ ಬಂದಾಗ ತೆಗೆದ ಪೋಟೋ ಇಲ್ಲಿದೆ.
   ಕೆಲ ತಿಂಗಳ ಹಿಂದೆ ಮುಂಬೈನಲ್ಲಿ ಲಕ್ಷ್ಮಣ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದರಿಂದ ದಿವಂಗತ ಲಕ್ಷಣ ಕಠಾರೆ ಮತ್ತು  ಶ್ರೀಮತಿ ರಾಜೇಶ್ವರಿ ದಂಪತಿಗಳ ಪುತ್ರರಾದ ಗಿರೀಶ್ ಮತ್ತು ವಿನಯ್ ಹಾಗೂ ಆನಂದಪುರಂನಲ್ಲಿ ನೆಲೆಸಿರುವ ಅವಳಿ ಸಹೋದರ ಶ್ರೀ ರಾಮ ಕಠಾರೆ ಮತ್ತು ಶ್ರೀಮತಿ ರೇಣುಕಾ ದಂಪತಿಗಳ ಮಗಳು ಶ್ರೀಮತಿ ಪವಿತ್ರಾ, ಪುತ್ರರಾದ ಪವನಾ ಹಾಗೂ ಕಾರ್ತಿಕ್ ಸೇರಿ ಎರೆಡೂ ಕುಟುಂಬದ ವತಿಯಿಂದ ಸ್ಟೈನ್ ಲೆಸ್ ಸ್ಟೀಲ್ ನಿಂದ ನಿರ್ಮಿಸಿದ ಪಲ್ಲಕ್ಕಿ ವರಸಿದ್ಧಿ ವಿನಾಯಕ ದೇವರಿಗೆ ಇಂದು (24- ಅಕ್ಟೋಬರ್ -2023ರ) ಮಂಗಳವಾರ ವಿಜಯ ದಶಮಿಯಂದು ಸಮರ್ಪಿಸಿದ್ದಾರೆ.
  ವಿಜಯ ದಶಮಿಯ ಪಲ್ಲಕ್ಕಿ ಉತ್ಸವ ನೂತನ ಪಲ್ಲಕ್ಕಿಯಲ್ಲಿ ಈ ದಿನ ಭಕ್ತಿ ಪೂರ್ವಕವಾಗಿ ನೆರವೇರಲ್ಪಟ್ಟಿದೆ ಹಾಗೂ ಪಲ್ಲಕ್ಕಿ ನೀಡಿದ ಕುಟುಂಬಕ್ಕೆ ದೇವಾಲಯದ ಟ್ರಸ್ಟ್ ವತಿಯಿಂದ ಗೌರವ ಸಮರ್ಪಣೆ ಕೂಡ ನೀಡಲಾಯಿತು.
   ಈ ಸುಂದರವಾದ ಪಲ್ಲಕ್ಕಿಯನ್ನು ಆಚಾಪುರದ ಜಬೀಯುಲ್ಲಾ ಪಲ್ಲಕ್ಕಿ ದಾನಿ ಕುಟುಂಬದ ನಿರೀಕ್ಷೆಗೆ ತಕ್ಕಂತೆ ತಮ್ಮ ವರ್ಕ್ ಶಾಪ್ ನಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...