Skip to main content

Blog number 1798.ಆನಂದಪುರಂನ ಕಠಾರೆ ಕುಟುಂಬದ ಅವಳಿ ಸಹೋದರರಾದ ರಾಮ ಮತ್ತು ಲಕ್ಷ್ಮಣ ಕಠಾರೆ ಕುಟುಂಬ ಯಡೇಹಳ್ಳಿಯ ಶ್ರೀವರ ಸಿದ್ದಿ ವಿನಾಯಕ ದೇವಸ್ಥಾನಕ್ಕೆ ನೂತನ ಪಲ್ಲಕ್ಕಿ ಸಮರ್ಪಿಸಿದ್ದಾರೆ.

https://youtu.be/ol2FB95YtSE?feature=shared

#ನಮ್ಮ_ಊರಿನ_ವರಸಿದ್ದಿವಿನಾಯಕ_ದೇವರಿಗೆ_ಪಲ್ಲಕ್ಕಿ_ಕೊಡುಗೆ.

#ಅವಳಿ_ಜವಳಿ_ಸಹೋದರರ_ಕುಟುಂಬದಿಂದ

#ಅವಳಿ_ಸಹೋದರರಾದ_ರಾಮ_ಲಕ್ಷ್ಮಣರು_ಟೈಲರ್_ಗೋವಿಂದಪ್ಪರ_ಮಕ್ಕಳು

#ಇವತ್ತು_ದಸರಾ_ಪಲ್ಲಕ್ಕಿ_ಉತ್ಸವ_ಈ_ಕುಟುಂಬದ_ಕೊಡುಗೆಯಾದ_ನೂತನ_ಪಲ್ಲಕ್ಕಿಯಲ್ಲಿ_ನೆರವೇರಿತು.

    ನಮ್ಮ ಊರಿನ ಶ್ರೀವರ ಸಿದ್ಧಿ ವಿನಾಯಕ ದೇವಸ್ಥಾನ ಪ್ರಾರಂಭದ ಪ್ರತಿಷ್ಟಾಪನೆಯಿಂದ ಇವತ್ತಿನವರೆಗೆ 17 ವರ್ಷಗಳಿಂದ ನಿರಂತರ ವರಸಿದ್ದಿ ವಿನಾಯಕ ದೇವರ ಸೇವೆ ಭಕ್ತಿ ಪೂರ್ವಕವಾಗಿ ಮಾಡುವವರಲ್ಲಿ ಟೈಲರ್ ರಾಮಣ್ಣ ಮತ್ತು ಅವರ ಪುತ್ರ ಪತ್ರಕರ್ತ ಪವನಾ ಯಾವುತ್ತೂ ಮುಂದಿರುತ್ತಾರೆ ಮತ್ತು ಯಾವತ್ತೂ ತಮ್ಮ ಹೆಸರು ಅಥವ ಪ್ರಚಾರ ಬಯಸದೇ ಎಲೆಮರೆಯ ಕಾಯಿಯಂತೆ ದೇವರ ಸೇವೆ ಮಾಡುತ್ತಾರೆ.
  ಟೈಲರ್ ರಾಮಣ್ಣರ ಪೂರ್ತಿ ಹೆಸರು ರಾಮ ಕಠಾರೆ ಇವರ ಅವಳಿ ಸಹೋದರ ಲಕ್ಷ್ಮಣ ಕಠಾರೆ, ಆ ಕಾಲದ ಟೈಲರ್ ಗೋವಿಂದಪ್ಪನವರಿಗೆ  ಈ ಅವಳಿ ಪುತ್ರರು ಸೇರಿ ಒಟ್ಟು ಆರು ಗಂಡು ಮಕ್ಕಳು.
   ಇವರ ದೊಡ್ಡ ಮಗ ನಾರಾಯಣಪ್ಪ, ರಾಮಣ್ಣ ಮತ್ತು ಚಿಕ್ಕ ಮಗ ಅಶೋಕ (ಸಿಮೆಂಟ್ ವ್ಯಾಪಾರಿ) ಆನಂದಪುರಂನಲ್ಲೇ ನೆಲೆಸಿದ್ದಾರೆ, ಅವಳಿ ಜವಳಿ ಪುತ್ರರಲ್ಲಿ ರಾಮಣ್ಣ ಇಲ್ಲಿ ಉಳಿದರೆ ಲಕ್ಷ್ಮಣ ಮುಂಬೈಯಲ್ಲಿ ನೆಲೆಸಿದ್ದರು, ಕೆಲ ವರ್ಷಗಳ ಹಿಂದೆ (17-ಡಿಸೆಂಬರ್ 2017) ಬಂದಾಗ ಇವರಿಬ್ಬರೂ ಒಟ್ಟಿಗೆ ನನ್ನ ಬೇಟಿಗೆ ಬಂದಾಗ ತೆಗೆದ ಪೋಟೋ ಇಲ್ಲಿದೆ.
   ಕೆಲ ತಿಂಗಳ ಹಿಂದೆ ಮುಂಬೈನಲ್ಲಿ ಲಕ್ಷ್ಮಣ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದರಿಂದ ದಿವಂಗತ ಲಕ್ಷಣ ಕಠಾರೆ ಮತ್ತು  ಶ್ರೀಮತಿ ರಾಜೇಶ್ವರಿ ದಂಪತಿಗಳ ಪುತ್ರರಾದ ಗಿರೀಶ್ ಮತ್ತು ವಿನಯ್ ಹಾಗೂ ಆನಂದಪುರಂನಲ್ಲಿ ನೆಲೆಸಿರುವ ಅವಳಿ ಸಹೋದರ ಶ್ರೀ ರಾಮ ಕಠಾರೆ ಮತ್ತು ಶ್ರೀಮತಿ ರೇಣುಕಾ ದಂಪತಿಗಳ ಮಗಳು ಶ್ರೀಮತಿ ಪವಿತ್ರಾ, ಪುತ್ರರಾದ ಪವನಾ ಹಾಗೂ ಕಾರ್ತಿಕ್ ಸೇರಿ ಎರೆಡೂ ಕುಟುಂಬದ ವತಿಯಿಂದ ಸ್ಟೈನ್ ಲೆಸ್ ಸ್ಟೀಲ್ ನಿಂದ ನಿರ್ಮಿಸಿದ ಪಲ್ಲಕ್ಕಿ ವರಸಿದ್ಧಿ ವಿನಾಯಕ ದೇವರಿಗೆ ಇಂದು (24- ಅಕ್ಟೋಬರ್ -2023ರ) ಮಂಗಳವಾರ ವಿಜಯ ದಶಮಿಯಂದು ಸಮರ್ಪಿಸಿದ್ದಾರೆ.
  ವಿಜಯ ದಶಮಿಯ ಪಲ್ಲಕ್ಕಿ ಉತ್ಸವ ನೂತನ ಪಲ್ಲಕ್ಕಿಯಲ್ಲಿ ಈ ದಿನ ಭಕ್ತಿ ಪೂರ್ವಕವಾಗಿ ನೆರವೇರಲ್ಪಟ್ಟಿದೆ ಹಾಗೂ ಪಲ್ಲಕ್ಕಿ ನೀಡಿದ ಕುಟುಂಬಕ್ಕೆ ದೇವಾಲಯದ ಟ್ರಸ್ಟ್ ವತಿಯಿಂದ ಗೌರವ ಸಮರ್ಪಣೆ ಕೂಡ ನೀಡಲಾಯಿತು.
   ಈ ಸುಂದರವಾದ ಪಲ್ಲಕ್ಕಿಯನ್ನು ಆಚಾಪುರದ ಜಬೀಯುಲ್ಲಾ ಪಲ್ಲಕ್ಕಿ ದಾನಿ ಕುಟುಂಬದ ನಿರೀಕ್ಷೆಗೆ ತಕ್ಕಂತೆ ತಮ್ಮ ವರ್ಕ್ ಶಾಪ್ ನಲ್ಲಿ ನಿರ್ಮಿಸಿ ಕೊಟ್ಟಿದ್ದಾರೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...