Skip to main content

Blog number 1776. ದೇಹದ ಪಿಟ್ ನೆಸ್ ಮಾನಿಟರಿಂಗ್ ಮಾಡುವ ಸ್ಮಾರ್ಟ್ ವಾಚ್ ಧರಿಸುವ ಕಾಲ ಬಂದಿದೆ.

#ನಾನು_1990ರಿಂದ_ವಾಚ್_ಧರಿಸಿಲ್ಲ

#ಸೆಲ್_ಪೋನ್_ಇರುವಾಗ_ವಾಚ್_ಬೇಕಾಗಿಲ್ಲ

#ನವ_ಮದುಮಗ_ತನಗೆ_ಇಂತಹದ್ದೇ_ವಾಚ್_ವರದಕ್ಷಿಣೆಯಾಗಿ_ಬೇಕೆನ್ನುವ_ಕಾಲವಿತ್ತು.

#ಈಗಿನ_ಬಹುಪಯೋಗಿ_ಪಿಟ್_ನೆಸ್_ವಾಚ್_ಧರಿಸಲು_ಪ್ರಾರಂಬಿಸಿದ್ದೇನೆ.

#ಇದು_ನಮ್ಮ_ಹೃದಯ_ಬಡಿತದಿಂದ_ನಡಿಗೆ_ನಿದ್ದೆ_ಎಲ್ಲಾ_ಕ್ಷಣ_ಕ್ಷಣದ_ಮಾಹಿತಿ_ದಾಖಲಿಸುತ್ತದೆ.


   ನನಗೂ ಡಿಪ್ಲೋಮಾ ಸೇರಿದಾಗ ಕೈಗಡಿಯಾರ, ಬೂಟ್ಸ್ ಇಂತಹ ಕ್ರೇಜ್ ಇತ್ತು, ನಮ್ಮ ಊರಿಂದ ಭಟ್ಕಳಕ್ಕೆ (ಆಗ ಭಟ್ಕಳ ವಿದೇಶಿ ವಸ್ತು ಸಿಗುವ ಜಾಗ, ಕೇರಳದ ಕಾಸರಗೋಡು ಇದ್ದ ಹಾಗೆ) ಹೋಗಿ ಗೋಲ್ಡ್ ಕಲರ್ ಸಿಟಿಜನ್ ವಾಚ್ ಖರೀದಿಸಿದ್ದೆ ಅದನ್ನು ಗೆಳೆಯ ತಗೊಂಡು ಹೋದವನು ಕೊಡಲೇ ಇಲ್ಲ, ನಂತರ ವಾಚ್ ಧರಿಸಲು ಇಷ್ಟವಾಗಲ್ಲಿವಾದ್ದರಿಂದ ಈವರೆಗೆ ಅಂದರೆ 1990 ರಿಂದ ವಾಚ್ ದರಿಸದೇ ಇರುವುದು #ಅರವಿಂದ_ಚೊಕ್ಕಾಡಿ ಅವರ ಪೋಸ್ಟ್ ನಿಂದ ನೆನಪಾಯಿತು (ಅವರ ವಾಚ್ ಖರೀದಿ ವಿಷಯವಾಗಿ).
   ಆ ಕಾಲದಲ್ಲಿ ನಿರ್ದಿಷ್ಟವಾದ ವಾಚ್ ನ ಬೇಡಿಕೆ ಇಡುತ್ತಿದ್ದ ಮದುಮಗನಿಗೆ ಆ ವಾಚ್ ವರದಕ್ಷಿಣೆ ಆಗಿ ನೀಡಲೇ ಬೇಕಿತ್ತು ಅದೆಲ್ಲ ಈ ಕಾಲದಲ್ಲಿ ಹಾಸ್ಯಾಸ್ಪದ ಅನ್ನಿಸಿದರೂ ಅದು ವಾಸ್ತವ.
  ಈಗೆಲ್ಲ ಅನುದಿನ ನಿತ್ಯ ಸಂಗಾತಿ ಆಗಿರುವ ಸೆಲ್ ಫೋನ್ ಇರುವಾಗ ವಾಚ್ ಗಳ ಅವಶ್ಯಕತೆಯೂ ಇಲ್ಲವಾಗಿದೆ ಆದರೆ ಈಗ ಸ್ಮಾರ್ಟ್ ವಾಚ್ / ಪಿಟ್ ನೆಸ್ ವಾಚ್ ಗಳ ಕಾಲ.
  ಹೃದಯ ಬಡಿತ, ರಕ್ತ ಪರಿಚಲನೆಯಲ್ಲಿ ಆಮ್ಲಜನಕದ ಪ್ರಮಾಣ, ರಕ್ತದ ಒತ್ತಡ, ನಮ್ಮ ದಿನದ ಒಟ್ಟು ನಡಿಗೆಯ ಹೆಜ್ಜೆ ದಾಖಲೆ, ಶಕ್ತಿಯ ಬಳಸಿದ ಕ್ಯಾಲರಿಗಳ ಮಾಹಿತಿ, ದಿನದ ನಿದ್ದೆ ಅವಧಿ ಮತ್ತು ಅದರಲ್ಲಿ ದೀರ್ಘ ನಿದ್ದೆ/ ಎಚ್ಚರಗಳ ಒಟ್ಟು ಸಮಯ ಮುಂತಾದ ಪಿಟ್ ನೆಸ್ ಟ್ರಾಕಿಂಗ್ ಮಾಡುತ್ತಾ ಸಮಯ ಮತ್ತು ದಿನಾಂಕಗಳನ್ನು ತೋರಿಸುತ್ತಾ ಕೈಯ ಮುಂಗೈನಲ್ಲಿ ದರಿಸುವ ಸ್ಮಾಟ್೯ ವಾಚ್ ಗಳು ಹೊಸ ಜಮಾನದ ಉಪಯುಕ್ತ ವಾಚ್ ಗಳಾಗಿದೆ.
  ಈ ವಾಚ್ ಗಳು ನಮ್ಮ ಸೆಲ್ ಫೋನ್ ಗೆ, ಕಂಪ್ಯೂಟರ್ ಗೂ ಲಿಂಕ್ ಮಾಡುವ ಮೂಲಕ ನಮ್ಮ ದೇಹದ ಆರೋಗ್ಯದ ಮಾನಿಟರಿಂಗ್ ಮಾಡ ಬಹುದಾಗಿದೆ.
  ಸುಮಾರು 40 ವರ್ಷ ವಾಚ್ ದರಿಸದ ನಾನು ಮೊನ್ನೆಯಿಂದ ಅಳಿಯ ಮಗಳು ತಂದು ಕೊಟ್ಟ ಈ ಸ್ಮಾರ್ಟ್ ವಾಚ್ ಧರಿಸಿ ಅದರಲ್ಲಿನ ಎಲ್ಲಾ ಸಾಧ್ಯವಿರುವ ತಪಾಸಣೆಗಳನ್ನು ನೋಡುತ್ತಿದ್ದೇನೆ.
   ಪ್ರತಿ ಬೆಳಿಗ್ಗೆ ನಾನು ಒಂದು ಗಂಟೆ ಮಾಡುವ ವಾಕಿಂಗ್ ಕನಿಷ್ಟ 5 ಕಿ.ಮಿ. ಆಗುತ್ತದೆ ಮತ್ತು 7000 ಹೆಜ್ಜೆ ನಡೆಯುತ್ತೇನೆ ಆದರೆ ಈ ವಾಚ್ ನಲ್ಲಿ ನನ್ನ ನಡಿಗೆ 3750 ತೋರಿಸಿತು ಮತ್ತು ಕ್ರಮಿಸಿದ ದೂರ 2.5 ಕಿ.ಮಿ. ತೋರಿಸಿದೆ ಇದಕ್ಕೆ ಕಾರಣ ನನ್ನ ಎತ್ತರ ಮತ್ತು ಹೆಜ್ಜೆಯ ದೂರ ನಿಖರವಾಗಿ ದಾಖಲಿಸಲು ಮಿಥ್ಯ ನೈಜತೆಯ (vertual reality) ಈ ಪಿಟ್ ನೆಸ್ ವಾಚ್ ತಪ್ಪು ದಾಖಲಿಸಿರ ಬಹುದಾದರೂ ಇದು ಸ್ಥೂಲ ಕಾಯ ನಿವಾರಣೆಗೆ ಪ್ರಯತ್ನ ಮಾಡುವವರಿಗೆ ಉಪಯುಕ್ತವಾದ ವಾಚ್ ಆಗಿದೆ.
   ಅಮೇಜಾನ್ / ಪ್ಲಿಪ್ ಕಾರ್ಟ್ ನಲ್ಲಿ ತರಹೇವಾರಿ ಮತ್ತು ಕನಿಷ್ಟ ಬೆಲೆಯಿಂದ ಗರಿಷ್ಟ ಬೆಲೆಯ ಪಿಟ್ ನೆಸ್ ವಾಚ್ ಗಳು ಲಭ್ಯವಿದೆ, ಸಿಟಿಜನ್ - ಪಾಸ್ಟ್ ಟ್ರಾಕ್ - ಸ್ಯಾಮ್ಸಂಗ್ ಗ್ಯಾಲಕ್ಸಿ ಮುಂತಾದ ಪ್ರಸಿದ್ಧ ಸಂಸ್ಥೆಗಳು ಈ ವಾಚ್ ತಯಾರಿಸಿ ಮಾರಾಟ ಮಾಡುತ್ತಿದೆ.
  ನಮ್ಮ ಮನೆಗಳಲ್ಲೇ ನಮ್ಮ ಆರೋಗ್ಯ ಮಾನಿಟರಿಂಗ್ ಮಾಡುವ ಈ ಬಹುಪಯೋಗಿ ಸ್ಮಾಟ್೯ ವಾಚ್ ಆಕಷ೯ಕವಾಗಿದೆ ಕುಟುಂಬದ ಉಳಿದ ಸದಸ್ಯರಿಗಾಗಿ ಹೆಚ್ಚುವರಿ ಆಗಿ 4 ಸ್ಮಾರ್ಟ್ ವಾಚ್ ಗೆ ಆರ್ಡರ್ ಮಾಡಿದ್ದೇನೆ.
  ನಾನ್ಯಾಕೆ ವಾಕಿಂಗ್ ಮಾಡಬೇಕು... ನಿತ್ಯ ನನ್ನ ಮನೆ ಕೆಲಸದಲ್ಲೇ ಅಷ್ಟು ವಾಕಿಂಗ್ ಆಗುತ್ತೆ ಅಂತ ವಾದ ಮಾಡುವವರು ಈ ವಾಚ್ ಧರಿಸಿದರೆ ಅವರಿಗೆ ಗೊತ್ತಾಗುತ್ತದೆ ಅವರ ವಾಕಿಂಗ್ ಎಷ್ಟು ಅಂತ !!.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...