Skip to main content

Blog number 1793. ನಮ್ಮ ನಮ್ಮ ಉದ್ಯಮದಲ್ಲಿ ವೈರ್ ಲೆಸ್ ವಾಕಿ ಟಾಕಿ ಸಂಪರ್ಕ ಸಾಧನ ಬಳಸಲು ಸಕಾಲ.

https://youtu.be/0fXeoNDB8GI?feature=shared

#ಆನಂದಪುರಂನ_ಹೊಂಬುಜ_ರೆಸಿಡೆನ್ಸಿ_ಹೋಟೆಲ್_ಉದ್ಯಮದ_ಕಾರ್ಮಿಕರು_ವಾಕಿ_ಟಾಕಿ_ಬಳಸುತ್ತಿದ್ದಾರೆ.

#ಹಳ್ಳಿಯಲ್ಲಿ_ನಡೆಸುವ_ನಮ್ಮ_ಉದ್ಯಮದಲ್ಲಿ_ನಾವು_ಸದಾ

#ಅಪ್_ಡೇಟಿಂಗ್_ಮತ್ತು_ಅಪ್_ಗ್ರೇಡಿಂಗ್_ಆಗುತ್ತಿರುತ್ತೇವೆ

#ಈಗ_ನಮ್ಮ_ಸಂಸ್ಥೆಯಲ್ಲಿ_ವಾಕಿ_ಟಾಕಿ_ಸಂಪರ್ಕಕ್ಕಾಗಿ_ಬಳಸುತ್ತಿದ್ದೇವೆ.

#ವಾಕಿಟಾಕಿ_ವೈರ್_ಲೆಸ್_ಸಾಧನ_ಎರಡನೆ_ಮಹಾಯುದ್ಧಕಾಲದಲ್ಲಿ_ಆವಿಷ್ಕಾರ_ಆದದ್ದು

#ಈಗ_ಸೆಲ್ಯುಲಾರ್_ಟೆಲಿಫೋನ್_ನೆಟ್_ವರ್ಕಗಳು_ಪುಶ್_ಟು_ಟಾಕ್_ಹ್ಯಾಂಡ್_ಸೆಟ್_ನೀಡುತ್ತಿದೆ.

#ಕೈಗೆಟುಕುವ_ಬೆಲೆಯಲ್ಲಿ_ಲಭ್ಯವಿರುವ_ವಾಕಿಟಾಕಿಗಳು_ಸಿಗುತ್ತಿದೆ.


   ಪೋಲಿಸ್ ಇಲಾಖೆ, ಅರಣ್ಯ ಇಲಾಖೆ ಮತ್ತು ಮಿಲಿಟರಿಗಳಲ್ಲಿ ಶಕ್ತಿಶಾಲಿ ವಾಕಿ ಟಾಕಿ / ವೈರ್ ಲೆಸ್ ಬಳಕೆ ಮಾಡುತ್ತಿದ್ದರು ಯಾರು ಮಾತಾಡುತ್ತಾರೆ ಎನ್ನಲು ಗುಪ್ತವಾದ ಅವರ ಹೆಸರು ಹೇಳಿ ಮತ್ತು ಯಾರಿಗೆ ಸಂದೇಶ ರವಾನಿಸುತ್ತಾರೆ ಅವರ ಗುಪ್ತ ನಾಮ ಹೇಳಿ ಏನು ಸಂದೇಶ ನೀಡ ಬೇಕೊ ಅದನ್ನು ತಿಳಿಸಿ ತಮ್ಮ ಮಾತು ಮುಕ್ತಾಯ ಆಯಿತೆನ್ನಲು ಓವರ್ ಎನ್ನುತ್ತಾರೆ.
   ಸಂದೇಶ ಅರ್ಥವಾಯಿತು ಎನ್ನಲು ಸಂದೇಶ ಸ್ವೀಕರಿಸಿದವರು Copy ಅನ್ನುತ್ತಾರೆ ಈ ರೀತಿ ಟೂ ವೇ ರೇಡಿಯೋ ಎಂಬ ವಾಕಿ ಟಾಕಿ ಖಾಸಾಗಿ ಅವರ ಬಳಕೆಗೆ ನಿಶೇದವಿತ್ತು ಈಗ ಖಾಸಾಗಿಯವರು ಬೇರೆ ಪ್ರೀಕ್ವೆನ್ಸಿಯಲ್ಲಿ ಬಳಸುವ ಅವಕಾಶ ಕಲ್ಪಿಸಲಾಗಿದೆ.
  PTT ಅಂದರೆ ಪುಶ್ ಟು ಟಾಕ್ ಬಟನ್ ಅಂಟೇನಾ ರೇಡಿಯೋ ಸಿಗ್ನಲ್ ಏಕಮುಖ ಮಾತ್ರ ಸಂಭಾಷಣೆ ಸಾಧ್ಯವಿರುವ ಸಾಧನ, PTT ಒತ್ತಿದಾಗ ರಿಸಿವರ್ ಆಫ್ ಆಗಿ ಟ್ರಾನ್ಸಿಸ್ಟರ್ ಆನ್ ಆಗುತ್ತದೆ.
  ಹ್ಯಾಂಡ್ ಹೆಲ್ಡ್ ಟ್ರಾನ್ಸ್ ಸಿವರ್ (HT) ವೈರ್ ಲೆಸ್ ಕಂಡು ಹಿಡಿದಿದ್ದು ಎರಡನೆ ಮಹಾಯುದ್ದ ಕಾಲದಲ್ಲಿ ಡೊನಾಲ್ಡ್ ಹಿಂಗ್ಸ್, ರೇಡಿಯೋ ಇಂಜಿನಿಯರ್ ಆಲ್ಫ್ರೆಡ್ ಜಿ. ಗ್ರಾಸ್, ಹೆನ್ರಿಕ್ ಮ್ಯಾಗ್ನಸಿ ಮತ್ತು ಮೊಟೊರಾಲದಲ್ಲಿನ ಇಂಜಿನಿಯರಿಂಗ್ ತಂಡ.
   ನಿರ್ಮಾಣ ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ಹೋಟೆಲ್ ಉದ್ಯಮಗಳಲ್ಲಿ ಈ ವಾಕಿ ಟಾಕಿ ಗಳು ಅತ್ಯುತ್ತಮ ಸಂಪರ್ಕ ಜಾಲ ಕಲ್ಪಿಸುತ್ತದೆ.
  ನಮ್ಮದೇ ಆದ ಹೋಟೆಲ್ ಉದ್ಯಮದಲ್ಲಿ ನಿರ್ದಿಷ್ಟ ಸಮಯದಲ್ಲಿ ಕೆಲಸಗಾರರ ಸಂಪರ್ಕ ಸಾಧ್ಯವಾಗುವುದಿಲ್ಲ ಕಾರಣ ಅವರ ಸೆಲ್ ಫೋನ್ ಬೇರೆ ಕರೆಯಲ್ಲಿ ನಿರತವಾಗಿರುವುದು, ಸ್ವಿಚ್ ಆಫ್ ಆಗಿರುವುದು, ಸಿಗ್ನಲ್ ಇಲ್ಲದಿರುವುದು ಇತ್ಯಾದಿ ಆದರೆ ಈ ವೈರ್ ಲೆಸ್ ವಾಕಿ ಟಾಕಿಗಳು ಪುಶ್ ಟು ಟಾಕ್ ಬಟನ್ ಒತ್ತಿ ಮಾತಾಡಿದ್ದು ಅವರ ರಿಸಿವರ್ ನಲ್ಲಿ ಅವರಿಗೆ ತಲುಪುತ್ತದೆ ಇದು ರೇಡಿಯೋ ಸಿಗ್ನಲ್ ಆದ್ದರಿಂದ ಯಾವುದೇ ತಡೆ ಇಲ್ಲದೆ ರವಾನೆ ಆಗುತ್ತದೆ.
  ಇದರಿಂದ ನಮ್ಮ ಕೆಲಸದ ಸಂದೇಶ ರವಾನಿಸಲು ಇದು ಸೆಲ್ ಫೋನ್ ಗಿಂತ ಸುಲಭ ಮತ್ತು ಪರಿಣಾಮಕಾರಿ ಈಗ 16 ಚಾನಲ್ ನ ಎಂಟು ವಾಕಿ ಟಾಕಿ ನಮ್ಮ ಸಂಸ್ಥೆಯಲ್ಲಿ ವ್ಯವಸ್ತೆ ಮಾಡಲಾಗಿದೆ ಇದಕ್ಕೆ ನಾವು ಮಾಡಿದ ವೆಚ್ಚ ಹತ್ತು ಸಾವಿರ ಮಾತ್ರ ಇದು ನಾಲ್ಕು ನೂರು ಮೀಟರ್ ರೇಡಿಯಸ್ ವ್ಯಾಪ್ತಿಯಲ್ಲಿ ಸ್ಪಷ್ಟವಾಗಿ ಕಾರ್ಯನಿರ್ವಹಿಸುತ್ತಿದೆ.
  ವಾಕಿ ಟಾಕಿಯಲ್ಲಿ ಗರಿಷ್ಟ ವ್ಯಾಪ್ತಿಯ ವಾಕಿ ಟಾಕಿಗೆ ಲಕ್ಷಗಟ್ಟಲೆ ಬೆಲೆ ಇದೆ ಆದರೆ ನಮ್ಮದೇ ಸೀಮಿತ ಪರಿಮಿತಿಗೆ ನಾನು ಖರೀದಿಸಿದ ವಾಕಿ ಟಾಕಿ ಸಾಕು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...