Skip to main content

Blog number 1789. ಜಂಗಲ್ ವಾಲೇ ಬಾಬಾ ಎಂದೇ ಉತ್ತರ ಭಾರತೀಯರು ಪ್ರೀತಿಯಿಂದ ಕರೆಯುತ್ತಿದ್ದ ಜಿನೈಕ್ಯ ಜೈನ ಮುನಿ ರಾಷ್ಟ್ರ ಸಂತ 108 ಶ್ರೀ ಚಿನ್ಮಯ ಸಾಗರಜಿ ಮಹಾರಾಜರ 4ನೇ ಸಮಾದಿ ದಿವಸ್ 18 ಅಕ್ಟೋಬರ್ 2023. ಇವರು ನಮ್ಮ ಶ್ರೀಕೃಷ್ಣ ಸರಸ ಕಲ್ಯಾಣ ಮಂಟಪದಲ್ಲಿ ತಂಗಿದ್ದರು ಮತ್ತು ಇವರ ಸಂದರ್ಶನ ಮಾಡಿದ್ದೆ ಎನ್ನುವ ನೆನಪೇ ವಿಶೇಷ ಇದು ನನ್ನ ಬಾಗ್ಯ.

#ಜ೦ಗಲ್_ವಾಲೆ_ಬಾಬಾ_ಜೈನ_ಮುನಿ_ರಾಷ್ಟ್ರ_ಸಂತ_108_ಶ್ರೀಚಿನ್ಮಯಸಾಗರರ_ನಾಲ್ಕನೆ_ಸಮಾದಿ_ದಿವಸ.

#ಯಮ_ಸಲ್ಲೇಖನ_ವೃತ_ಮಾಡಿ_ದೇಹ_ತ್ಯಾಗ_ಮಾಡಿದ_ಕಠೋರ_ಸಾದಕರು.

#ಬ್ರಹ್ಮಚರ್ಯ_ಪಾಲಿಸುವ_ವಾಹನ_ಬಳಸದೆ_ಬರಿಕಾಲಿನಲ್ಲಿ_ಪರಿಕ್ರಮಿಸುವ
#ಆಹಾರ_ವಸ್ತ್ರವನ್ನು_ತ್ಯಜಿಸುವ_ಜೈನ_ಮುನಿಗಳು

#ಇಂತಹ_ಸಂತರು_ನಮ್ಮಲ್ಲಿ_ತಂಗಿದ್ದರು_ಅವರಿ೦ದ_ಆಶ್ರೀವಾದ_ಪಡೆದದ್ದು

#ಅವರ_ಸಂದರ್ಶನ_ಮಾಡಿದ್ದು_ನನ್ನ_ಪೂರ್ವ_ಜನ್ಮದ_ಪುಣ್ಯ.

#ಅಕ್ಟೋಬರ್_18_ಅವರ_ನಾಲ್ಕನೆ_ಪುಣ್ಯಸ್ಮರಣೆ.

    
  ಜಂಗಲ್ ವಾಲೆ ಬಾಬ ಎಂದು ಪ್ರಖ್ಯಾತರಾಗಿದ್ದ ಜೈನ ಮುನಿ #ರಾಷ್ಟ್ರ_ಸಂತ_108_ಶ್ರೀ_ಚಿನ್ಮಯ_ಸಾಗರ_ಮಹಾರಾಜರು ಅತ್ಯಂತ ಸಣ್ಣ ವಯಸ್ಸಿನಲ್ಲಿ ನಿಯಮ್ ಸಲ್ಲೇಖನ ವೃತ (ಕೇವಲ ನೀರು ಮಾತ್ರ ಸೇವನೆ) ಕೈಗೊಂಡು ಒಂದು ತಿಂಗಳ ನಂತರ 12 ಅಕ್ಟೋಬರ್ 2019 ರಿಂದ ಯಮ ಸಲ್ಲೇಖನ ವೃತ ಅಂದರೆ ನೀರು ಸ್ವೀಕರಿಸದೆ ದೇಹ ತ್ಯಾಗಕ್ಕೆ ಮುಂದಾಗಿ ದಿನಾಂಕ 18 ಅಕ್ಟೋಬರ್ 2019 ದೇಹ ತ್ಯಾಗ ಮಾಡಿ ಜಿನೈಕರಾದರು.
  2022 ರ ಅಕ್ಟೋಬರ್ 18ಕ್ಕೆ ಅವರು ಜಿನೈಕ್ಯರಾಗಿ 4ನೇ ಸಮಾದಿ ದಿವಸ್ ( ಪುಣ್ಯ ತಿಥಿ) ಆಚರಿಸಲಾಗುತ್ತಿದೆ, ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಅವರ ಹುಟ್ಟೂರು ಜುಗೂಳ ಎಂಬ ಹಳ್ಳಿಯಲ್ಲಿ ಅವರ ಸಮಾದಿ ಇದೆ.
  ಇಂತಹ ಪುಣ್ಯಪುರುಷರು ನಮ್ಮ ಕಲ್ಯಾಣ ಮಂಟಪದಲ್ಲಿ ತಂಗಿದ್ದರು,ಇವರ ಜೊತೆ ಕೆಲಸಮಯ ಕಳೆದದ್ದು, ಪತ್ರಿಕಾ ಸಂದಶ೯ನ ಮಾಡಿದ್ದು ನನ್ನ ಸೌಬಾಗ್ಯ ಮತ್ತು ಪೂವ೯ಜನ್ಮದ ಪುಣ್ಯ ಎಂದು ಬಾವಿಸುತ್ತೇನೆ .
  ಇಡೀ ದೇಶದಲ್ಲಿ ಜಂಗಲ್ ವಾಲೆ ಬಾಬ ಎಂದೇ ಚಿರಪರಿಚಿತರಾದ ಜೈನ ಮುನಿ ರಾಷ್ಟ್ರ ಸಂತ 108 ಮುನಿ ಶ್ರೀ ಚಿನ್ಮಯ ಸಾಗರ ಮಹರಾಜರು ನಮ್ಮಲ್ಲಿ ತ0ಗಿದ್ದರು ಮತ್ತು ಅವರನ್ನ ಶಿವಮೊಗ್ಗದ ಶೃ೦ಗೇಶ್ ರ ಜನ ಹೋರಾಟ ಪತ್ರಿಕೆಗೆ ಸಂದಶ೯ನ ಮಾಡಿದ್ದೆ ಅಂದರೆ ಅವರನ್ನ ಬಲ್ಲವರು ನಂಬುವುದಿಲ್ಲ.
    ಯಾಕೆಂದರೆ ಅವರು ಆಚರಿಸುವ ಚಾತುಮಾ೯ಸಕ್ಕೆ ಅನೇಕ ರಾಜ್ಯದ ಮುಖ್ಯಮಂತ್ರಿಗಳು, ಕೇಂದ್ರ ಸಕಾ೯ರದ ಮಂತ್ರಿಗಳು, ಉನ್ನತ ಹುದ್ದೆಯ ಅಧಿಕಾರಿಗಳು ಅವರನ್ನ ಹುಡುಕಿಕೊಂಡು ಬರುತ್ತಿದ್ದರು.
     ರಾಜೀವ್ ಗಾ೦ದಿ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮನ್ಮೋಹನ್ ಸಿಂಗ್, ಮೋದಿ ಇವರೆಲ್ಲ ಇವರಿಗೆ ನೇರ ಸಂಪಕ೯ ಇರುವವರು, 2015ರಲ್ಲಿ ಇವರು ಕನಾ೯ಟಕಕ್ಕೆ ಬಂದಾಗ ಬೆಳಗಾಂ ಜಿಲ್ಲೆಯ ಖಾನಾಪುರದ ದಟ್ಟ ಅರಣ್ಯದಲ್ಲಿ ಚಾತುಮಾ೯ಸ ನಡೆಸಿದಾಗ ಅನೇಕ ಉತ್ತರ ಭಾರತದ ರಾಜ್ಯಗಳ ಮುಖ್ಯಮಂತ್ರಿಗಳು ಇವರ ದರ್ಶನಕ್ಕೆ ಬಂದಿದ್ದರು.
 ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗೂಳ ಎಂಬ ಹಳ್ಳಿಯಲ್ಲಿ 6- ಆಗಸ್ಟ್ - 1961 ರಲ್ಲಿ ಜನಿಸಿದ ಇವರು 1988 ರಲ್ಲಿ ಮದ್ಯಪ್ರದೇಶದಲ್ಲಿ ಮಹಾವೀರ ಜಯಂತಿಯಂದು ದೀಕ್ಷಾ ಸ್ವೀಕರಿಸಿ 32 ವರ್ಷ ಕಾಲದಲ್ಲಿ ಸುಮಾರು 50 ಸಾವಿರ ಕಿಲೋ ಮೀಟರ್ ಬರಿಗಾಲಿನಲ್ಲಿ ನಡೆದೇ ದೇಶ ಸಂಚಾರ ಮಾಡಿದ್ದಾರೆ.
  2018ರ ಶ್ರವಣ ಬೆಳಗೊಳದ ಮಹಾಮಸ್ತಕಾಭಿಷೇಕದಲ್ಲಿ ಭಾಗವಹಿಸಿದ್ದರು.
   ತಮ್ಮ ಜೀವನ ಪೂರ್ತಿ ದಟ್ಟ ಅರಣ್ಯದಲ್ಲಿ ತಪಸ್ಸು ಧ್ಯಾನ ಚಾತುರ್ಮಾಸ ಮಾಡುತ್ತಾ ಗುಡ್ಡಗಾಡು ಅಧಿವಾಸಿ ಜನಗಳಲ್ಲಿರುವ ಮೂಡ ನಂಬಿಕೆಗಳನ್ನು ನಿವಾರಿಸಿದವರು ಮತ್ತು ಅವರಲ್ಲಿದ್ದ ಕುಡಿತ ದೂಮಪಾನದಂತ ಚಟಗಳಿಂದ ಅವರನ್ನು ಮುಕ್ತ ಮಾಡಿದ್ದಾರೆ ಆದ್ದರಿಂದಲೇ ಅವರಿಗೆ ಜಂಗಲ್ ವಾಲೆ ಬಾಬ ಎಂಬ ಅನ್ವರ್ಥ ನಾಮದಿಂದ ಜನ ಕರೆದರು.
   ಇವರು ಮೂರು ಸಾವಿರಕ್ಕಿಂತ ಹೆಚ್ಚು ನಕ್ಸಲೈಟರನ್ನು ಮುಖ್ಯ ವಾಹಿನಿಗೆ ಕರೆತಂದ ಮಹಾನ್ ದಾಖಲೆ ಇವರದ್ದು.
    ಕರ್ನಾಟಕದ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಜುಗೂಳ ಎಂಬ ಹಳ್ಳಿ ಇವರ ಹುಟ್ಟೂರು.
   ಜಂಗಲ್ ವಾಲೆ ಬಾಬರ ಆತಿಥ್ಯ ನೀಡುವ ಬಾಗ್ಯ ನನಗೆ ಸಿಕ್ಕಿತ್ತು ಅಂದಾಗ ಸತಾರದ ಜೈನ ಮುಖಂಡರು ಜೈನ ಪ್ರಮುಖರಾದ ದಮ೯ಸ್ಥಳದ ವೀರೇ೦ದ್ರ ಹೆಗ್ಗೆಡೆಯವರಿಗೂ ಇವರ ದಶ೯ನ ಇನ್ನೂ ಸಿಕ್ಕಿಲ್ಲ ನಿಮಗೆ ಅವರ ದರ್ಶನ ಆಗಿದ್ದು ನಿಮ್ಮ ಅದೃಷ್ಟ ಅಂತ ಹೇಳಿದ್ದರು.
     ಅವಾಗ ಅವರನ್ನ ಸಂದಶಿ೯ಸಿದ ಪತ್ರಿಕೆ ಮತ್ತು ಪೋಟೋ ನೋಡಿದ ಅವರು ನನಗೆ ನೀವೇ ಪುಣ್ಯವಂತರು ಅಂದರು.
      ನನಗೆ ಇಂತ ಅವಕಾಶ ಯಾಕೆ ಸಿಗುತ್ತೆ ಗೊತ್ತಿಲ್ಲ ಆದರೆ ಸಾದು ಸಂತರು ನಮ್ಮಲ್ಲಿ ಬರುತ್ತಾರೆ ಉಳಿಯುತ್ತಾರೆ ಹಾಗು ಯಾರ ಹತ್ತಿರ ಬೆರೆಯದವರು ನನ್ನ ಹತ್ತಿರ ಆತ್ಮೀಯವಾಗಿ ಬೆರೆತು, ಕಾಲ ಕಳೆದು ಹೋಗುವಾಗ ಆಶ್ರೀವಾದ ಮಾಡಿ ಹೋಗುತ್ತಾರೆ.
       ನನ್ನ ತಂದೆ ಕೃಷ್ಣಪ್ಪ ಮತ್ತು ತಾಯಿ ಸರಸಮ್ಮರ ಸ್ಮರಣಾಥ೯ ನಿಮಿ೯ಸಿರುವ "ಕೃಷ್ಣ ಸರಸ ಕನ್ವೆನ್ಷನ್ ಹಾಲ್" ನ ಮಹಿಮೆ ಅಂತ ಬಾವಿಸುತ್ತೇನೆ ನಮ್ಮ ಈ ಕಲ್ಯಾಣ ಮಂಟಪದಲ್ಲಿ ಈ ವರೆಗೆ ಸಾವಿರಕ್ಕೂ ಹೆಚ್ಚು ಜೈನ ಮುನಿಗಳು ಮತ್ತು ಮಾತೆಯರಿಗೆ ವಾಸ್ತವ್ಯ ಮಾಡಿದ ಪುಣ್ಯ ನಮ್ಮದು, ಎರೆಡು ಶ್ರವಣ ಬೆಳಗೋಳದ ಮಹಾ ಮಸ್ತಕಾಭಿಶೇಕಕ್ಕೆ ಈ ಮಾರ್ಗದಲ್ಲಿ ಬಂದ ಸಂತರು ನಮ್ಮಲ್ಲಿ ತಂಗಿದ್ದರು ಮತ್ತು ಅನೇಕರು ಮಹಾ ಮಸ್ತಕಾಭಿಷೇಕ ಮುಗಿಸಿ ತೆರಳುವಾಗ ನಮ್ಮಲ್ಲಿ ತಂಗಿದ್ದರು.
      ಜಂಗಲ್‌ ವಾಲೆ ಬಾಬ ಬರುವ ಹಿಂದಿನ ದಿನ ಸಾಗರದ ಜೈನ ಮುಖಂಡರಾದ ರಾಜ್ ಕುಮಾರ್ ಜೈನ್ ಮತ್ತು ವಿ.ಟಿ.ಸ್ವಾಮಿ ಬಂದು ನಾಳೆ ಒಬ್ಬ ಸಂತರು ಬರುತ್ತಾರೆ ಅವರಿಗೆ ತಂಗಲು ವ್ಯವಸ್ಥೆ ಮಾಡಬೇಕಾಗಿ ತಿಳಿಸಿದರು ಅದರಂತೆ ಮರುದಿನ ಬಂದವರು ಜಂಗಲ್ ವಾಲೆ ಬಾಬ.
        ಅವರು ಬಂದು ವಿರಾಜಮಾನರಾದ ನಂತರ ಮಾಲಿಕರನ್ನ ಕರೆಯಿರಿ ಅಂದರಂತೆ,ಅವರಾಗಿ ಕರೆದದ್ದರಿಂದ ಹೋಗಿ ದಶ೯ನ ಪಡೆದು ಅವರನ್ನ ಮಾತಿಗೆ ಎಳೆದೆ, ಶಿವಮೊಗ್ಗದ ಜನ ಹೋರಾಟ ದಿನಪತ್ರಿಕೆಗೆ ಅವರ ಅನುಮತಿಯಿಂದ ಸಂದಶ೯ನ ಮಾಡಿದೆ, ಅವರು 3000ಕ್ಕೂ ಹೆಚ್ಚು ನಕ್ಸಲೈಟ್ಸ್ ರನ್ನ ಮುಖ್ಯ ವಾಹಿನಿಗೆ ತಂದ ಬಗ್ಗೆ ಅವರಿಗೆ ಪುನರ್ವಸತಿ ಪರಿಹಾರ ವ್ಯವಸ್ಥೆ ಮಾಡಿದ ಬಗ್ಗೆ ವಿವರಿಸಿದ್ದರು.
    ಹೆಚ್ಚಾಗಿ ಅರಣ್ಯ ಮತ್ತು ಅರುಣ್ಯ ವಾಸಿಗಳೊಂದಿಗೆ ಇರುವುದರಿಂದ ಇವರಿಗೆ ಜಂಗಲ್ ವಾಲೆ ಬಾಬ ಅಂತಲೇ ಹೆಸರಾಗಿತ್ತು.
     2015 ರಿಂದ 2016 ರ ವರೆಗೆ ಕನಾ೯ಟಕದ ಪ್ರಮುಖ ಜೈನ ಕೇಂದ್ರ ಸಂದಶಿ೯ಸಿದ್ದರು  ಈ ಅವದಿಯಲ್ಲಿ ಎರೆಡು ಚಾತುಮಾ೯ಸ ಕನಾ೯ಟಕದಲ್ಲಿ ಮಾಡಿದ್ದಾರೆ ಒಂದು ಖಾನಾಪುರ ಮತ್ತೊಂದು  ಮೈಸೂರಿನ ಚಾಮುಂಡಿ ಬೆಟ್ಟದ ಅರಣ್ಯದಲ್ಲಿ.
           ದಮ೯ಸ್ಥಳದಲ್ಲಿ ಇವರಿಗೆ ವಿರೇಂದ್ರ ಹೆಗ್ಗಡೆಯವರು ನೀಡಿದ ಸ್ವಾಗತದ ನಂತರ ಇವರು ಹೋದಲ್ಲೆಲ್ಲ ಇವರನ್ನ ಬೇಟಿ ಮಾಡಿದ ಗಣ್ಯರ ಮಾಹಿತಿ ಟ್ವಿಟರ್ ನಲ್ಲಿ ಮತ್ತು ಅಂತರ್ಜಾಲದಲ್ಲಿ ನೋಡಿದಾಗ, ನಮ್ಮ ಆತಿಥ್ಯ ಸ್ವೀಕರಿಸಿದವರು, ಸಂದಶ೯ನಕ್ಕೆ ಅವಕಾಶ ನೀಡಿದವರು ಮತ್ತು ಆಶ್ರೀವದಿಸಿದವರು ಇವರೇಯೆ ? ಎಂಬ ಅನುಮಾನ ಉಂಟಾಗುತ್ತೆ, ಇಂತಹ ರಾಷ್ಟ್ರ ಸಂತರ ಸಂದಶಿ೯ಸಿದ ಹೆಮ್ಮೆ ನನ್ನದು.
   18 ಅಕ್ಟೋಬರ್ 2019 ರಂದು ತಮ್ಮ 58ನೆ ವಯಸ್ಸಿನಲ್ಲಿ ತಮ್ಮ ಯಮ ಸಲ್ಲೇಖನ ವೃತದಿಂದ ತಮ್ಮ ಇಹಲೋಕ ತ್ಯಜಿಸಿ ಜಿನೈಕರಾದರು.
  ಅವರು ಜನಿಸಿದ ಊರಲ್ಲೇ ಅವರ ಸಮಾದಿ ಮಾಡಲಾಗಿದೆ ಅವತ್ತು ಅಲ್ಲಿ ನೆರೆದವರು ಜಂಗಲ್‌ವಾಲೆ ಬಾಬ ಸ್ಮರಣಾರ್ಥ #ಚಿನ್ಮಯ_ಆಸ್ಪತ್ರೆ ನಿರ್ಮಿಸಿ ಪ್ರತಿ ರೋಗಿಗೆ ಕೇವಲ 10 ರೂಪಾಯಿಯಲ್ಲಿ ಚಿಕಿತ್ಸೆ ನೀಡುವ ಸಂಕಲ್ಪ ಮಾಡಿ ತಲಾ ಒಂದು ಕೋಟಿ ರೂಪಾಯಿ ನೀಡಿದ್ದಾರೆ.
   ನಾಡಿದ್ದು ಬುದವಾರ  (18 - ಅಕ್ಟೋಬರ್ -2023 ) ಜಂಗಲ್ ವಾಲೆ ಬಾಬಾರೆಂದೆ ದೇಶದಾದ್ಯಂತ ಪ್ರಸಿದ್ಧರಾಗಿರುವ ಜಿನೈಕ ರಾಷ್ಟ್ರ ಸಂತ 108 ಚಿನ್ಮಯ ಸಾಗರಜೀ ಮಹಾರಾಜರ 4ನೇ ಸಮಾದಿ ದಿವಸ್  (ಪುಣ್ಯ ಸ್ಮರಣೆ) ಆಚರಿಸಲಾಗುತ್ತಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ