Skip to main content

Blog number 1801. ಹಿಂದೂ ಧರ್ಮದಲ್ಲಿ ಪವಿತ್ರ ಸ್ಥಾನ ಪಡೆದ ತುಳಸಿ.

https://youtu.be/QvYnCsnTv1M?feature=shared

#ನಾನು_ಧರಿಸುವ_ತುಳಸಿ_ಮಾಲೆ_ಬೆಂಗಳೂರಿನ_ಇಸ್ಕಾನಿಂದ_ಖರೀದಿಸಿದ್ದು.

#ಇಪ್ಪತ್ತೈದು_ವರ್ಷದಿಂದ_ಧರಿಸುತ್ತಿದ್ದೇನೆ.

#ತುಳಸಿ_ಮಾಲೆಯೇ_ನನ್ನ_ಬಂಗಾರ.

#ನನ್ನಲ್ಲಿರುವ_ಚಿನ್ನ_ಗುಲಗುಂಜಿ_ಗಾತ್ರದ_ಪುಷ್ಯರಾಗದ_ಹರಳು_ಪೊಣಿಸಿದ_ಕೊಂಡಿ_ಮಾತ್ರ.

#ವಿದೇಶದಲ್ಲಿ_ಅಡುಗೆಯಲ್ಲಿ_ತುಳಸಿ_ಬಳಸುತ್ತಾರೆ

#ನನ್ನ_ದೀರ್ಘಕಾಲದ_ಗಂಟಲು_ಸೋಂಕು_ಗುಣವಾಗಿದ್ದು_ನಿತ್ಯ_ಬೆಳಿಗ್ಗೆ_ತುಳಸಿ_ಕುಡಿ_ಸೇವಿಸಿದ್ದರಿಂದ .

    
    ತುಳಸಿ ಭಾರತ ಮೂಲದ ಔಷದಿ ಸಸ್ಯ ಇದರ ಸುವಾಸನೆ, ಔಷದಿಯುಕ್ತ ರುಚಿ ವಿಬಿನ್ನ , ಭಾರತದಲ್ಲಿ 5000 ವರ್ಷದಿಂದ ಬಳಕೆಯಲ್ಲಿದೆಯಂತೆ.
  ಹಿಂದೂ ಧರ್ಮದಲ್ಲಿ ತುಳಸಿಗೆ ಪವಿತ್ರ ಸ್ಥಾನ ನೀಡಿದೆ, ಪೂಜಾ ವಿಧಾನಗಳಲ್ಲಿ ತುಳಸಿ ಬೇಕೇ ಬೇಕು, ಪ್ರತಿಯೊಬ್ಬ ಹಿಂದು ಧರ್ಮಿಯರ ಮನೆಯಲ್ಲಿ ತುಳಸಿ ಗಿಡ ಇರದೇ ಇರದು.
  ತುಳಸಿ ಮಾಲೆ ಧರಿಸಿದರೆ ಯಾವುದೇ ಸಾಂಕ್ರಮಿಕ ರೋಗ ಅಥವ ಅಕಾಲಿಕ ಮರಣ ಎದುರಾಗುವುದಿಲ್ಲ ಎಂಬ ಹಿಂದೂ ಧಾರ್ಮಿಕ ನಂಬಿಕೆ ಆಚರಣೆಯಲ್ಲಿದೆ.
  ತುಳಸಿ ಮಾಲೆ ಜ್ವರ - ನೆಗಡಿ-ತಲೆನೋವು - ಚರ್ಮ ರೋಗ ನಿವಾರಣೆ ಮಾಡುವ ಆಯುರ್ವೇದ ಔಷದಿ ಶಕ್ತಿ ಹೊಂದಿದೆ.
  108 ತುಳಿಸಿ ಮಣಿಯ ಹಾರ ನಾನು 1995 ರಿಂದ ಧರಿಸುತ್ತಿದ್ದೇನೆ ಮತ್ತು ಇದನ್ನು ನಾನು ಖರೀದಿಸುವುದು ಬೆಂಗಳೂರಿನ ಇಂಟರನ್ಯಾಷನಲ್ ಸೊಸೈಟಿ ಪಾರ್ ಕೃಷ್ಣ ಕಾನ್ಷಿಯಸ್ನೆಸ್ (ISKON) ಸಂಸ್ಥೆಯಲ್ಲಿ.
  ಹೋದಾಗೆಲ್ಲ 5-6 ತುಳಸಿ ಮಣಿ ಹಾರ ಖರೀದಿಸಿ ತರುತ್ತೇನೆ ಅದು ಶಿಥಿಲವಾದಾಗ ಅಥವ ಮಣಿಗಳು ಕಳಚಿ ಹೋದಾಗ ಮತ್ತೆ ಹೊಸದನ್ನು ಧರಿಸುತ್ತೇನೆ.
  1966 ರಲ್ಲಿ ಸ್ವಾಮಿ ಪ್ರಭು ಪಾದರು ಸ್ಥಾಪಿಸಿದ ಈ ಕೃಷ್ಣ ಆರಾದನ ಸಂಸ್ಥೆ ವಿಶ್ವದಾದ್ಯಂತ 500 ಕ್ಕೂ ಹೆಚ್ಚು ದೇವಾಲಯ ನಿರ್ಮಿಸಿದೆ ಈ ಸಂಸ್ಥೆ ತುಳಸಿ ಗಿಡದ ಕಾಂಡ ಮತ್ತು ಬೇರುಗಳಿಂದ ತುಳಸಿಮಣಿ ತಯಾರಿಸಿ ಅದಕ್ಕೆ ರಂದ್ರ ಕೊರೆದು ಬಿಸಿಲಲ್ಲಿ ಒಣಗಿಸಿ ಗಟ್ಟಿ ರೇಷ್ಮೆದಾರದಲ್ಲಿ 108 ಮಣಿಗಳನ್ನು ಪೊಣಿಸಿ ತುಳಸಿ ಮಾಲೆ ತಯಾರಿಸಿ ವಿಶ್ವದಾದ್ಯಂತ ಕೃಷ್ಣ ಭಕ್ತರಿಗೆ ತಲುಪಿಸುತ್ತದೆ ಆದ್ದರಿಂದ ನನ್ನ ತುಳಸಿ ಮಾಲೆ ಆಯ್ಕೆ ಖರೀದಿ ಸ್ಥಳ ಇಸ್ಕಾನ್ ಮಾತ್ರ, ಬೇರೆ ಕಡೆ ತುಳಸಿ ಮಾಲೆ ಹೆಸರಲ್ಲಿ ಬಳಸುವುದು ತುಳಸಿಯೇತರ ಕಟ್ಟಿಗೆಯ ನಕಲಿ ತುಳಸಿ ಮಾಲೆ.
   ಈ ತುಳಸಿ ಮಾಲೆಗೆ ನಾನು ಪುಷ್ಯ ಹಾರದ ಒಂದು ಹರಳಿನ ಮಣಿ ಗುಲಗುಂಜಿ ತೂಕದ ಬಂಗಾರದ ತಂತಿಯಲ್ಲಿ ಪೊಣಿಸಿದ ಕೊಂಡಿಯನ್ನು ಲಗತ್ತಿಸುತ್ತೇನೆ.
   ಈ ಪುಷ್ಯ ಹಾರದ ಮಣಿ ನೀಡಿದವರು ಕೃಷ್ಣ ರಾವ್ ಎಂಬ ನಿವೃತ್ತ ನೇವಿ ಅಧಿಕಾರಿ, ನಂತರ ಅವರು ಶಿವಮೊಗ್ಗ ಜಿಲ್ಲಾ ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡಿದವರು ಇವರು ಇಂತಹ ಪುರಾತನ ಕಾಲದ ಹರಳುಗಳ ಸಂಗ್ರಹಕಾರರು.
   ನಾನು ಚಿನ್ನ ಧರಿಸಬಾರದೆಂಬ ಶಪಥ ತೊಟ್ಟವನಾದ್ದರಿಂದ ನನ್ನ ಹತ್ತಿರ ಯಾವುದೇ ಚಿನ್ನದ ಆಭರಣ ಇಲ್ಲ ಆದರೆ ಈ ಪುಷ್ಯರಾಗದ ಹರಳು ಧರಿಸಲಿಕ್ಕಾಗಿ ಗುಲಗುಂಜೆ ಗಾತ್ರದ ಚಿನ್ನ ಬಳಸಿದ್ದೇನೆ, ನನ್ನ ದೇಹದಲ್ಲಿ ಬೆಳ್ಳಿ ಧರಿಸಿದರೆ ಒಂದೇ ದಿನದಲ್ಲಿ ಬೆಳ್ಳಿ ಕಪ್ಪಾಗುತ್ತದೆ.
   ತುಳಸಿ ಮಾಲೆ ಎಲ್ಲರೂ ಧರಿಸುವಂತಿಲ್ಲ, ಮಾಂಸ ಹಾರ ಸೇವಿಸುವವರು ತುಳಸಿ ಮಾಲೆ ಧರಿಸ ಭಾರದು ಎಂತೆಲ್ಲ ಬೂದುಗುಂಬಳ ಕಾಯಿಯ ಬಳಕೆ ಮಾಡಲು ಇಲ್ಲ ಸಲ್ಲದ ಕಾರಣಗಳನ್ನು ಹೇಳುವಂತೆ ಹೇಳುತ್ತಾರೆ ಆದರೆ ಅದೆಲ್ಲ ಮೂಡನಂಬಿಕೆ ಮಾತ್ರ.
   ವಿದೇಶಗಳಲ್ಲಿ ತುಳಸಿಯನ್ನು ಅಡಿಗೆಯಲ್ಲಿ ನಾವು ಶುಂಠಿ ಬಳಸುವಂತೆ ಬಳಸುತ್ತಾರೆ.
   ನನಗೆ ದೀರ್ಘ ಕಾಲದ ಗಂಟಲು ಸೋಂಕು ಗುಣವಾಗಿದ್ದು ಪ್ರತಿ ದಿನ ಬೆಳಿಗ್ಗೆಯೇ ತುಳಸಿ ಕುಡಿಗಳನ್ನು ತಿನ್ನುವುದರಿಂದ ನಿನ್ನೆ ಹಳೆಯದಾಗಿದ್ದ ತುಳಸಿ ಮಣಿ ಹಾರ ಬದಲಿಸಿ ಹೊಸದಾದ ಇಸ್ಕಾನ್ ಸಂಸ್ಥೆಯ ತುಳಸಿ ಮಣಿ ಹಾರ ಧರಿಸುವಾಗ ಇದೆಲ್ಲ ನೆನಪಾಯಿತು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ