Skip to main content

Blog number 1792. ಮಲೆನಾಡು ಪ್ರದೇಶವಾದ ಶಿವಮೊಗ್ಗ ಜಿಲ್ಲೆಯ ಸಾಗರ - ತೀರ್ಥಹಳ್ಳಿ - ಹೊಸನಗರ ತಾಲೂಕುಗಳಲ್ಲಿ ಕಾಡಾನೆಗಳ ಸಂಚಾರ.

https://youtu.be/OQeD71WPZBw?feature=shared

#ಕಳೆದ_ವಾರ_ಸಾಗರ_ಹೊಸನಗರ_ಬಾರ್ಡರ್_ಕೆಂಚನಾಲದಲ್ಲಿ_ಕಾಣಿಸಿಕೊಂಡ_ಕಾಡಾನೆ_ಮತ್ತು_ಮರಿಯಾನೆ .

#ಕೆಲವು_ದಶಕದ_ನಂತರ_ಸಾಗರ_ಹೊಸನಗರ_ತೀರ್ಥಹಳ್ಳಿ_ತಾಲ್ಲೂಕುಗಳಲ್ಲಿ_ಕಾಡಾನೆ.

#ಎಪ್ಪತ್ತರ_ದಶಕದಲ್ಲಿ_ಅರಸಾಳಿನಲ್ಲಿ_ಖೆಡ್ಡಾದಲ್ಲಿ_ಸೆರೆಹಿಡಿದ_ಆನೆ_ಮೃತವಾಗಿತ್ತು.

#ಕೆಲವಷ೯ದ_ಹಿಂದೆ_ಸಾಗರ_ತಾಲ್ಲುಕಿನ_ಗಿಣಿವಾರದಲ್ಲಿ_ಮಹಿಳೆ_ಕೊಂದ_ಕಾಡಾನೆ.

#ಆಗುಂಬೆ_ಭಾಗದಲ್ಲಿ_ಸಂಚರಿಸುತ್ತದೆ.
   1930 ರ ನಂತರ ಮಲೆನಾಡಿನ ಸಾಗರ - ಹೊಸನಗರ - ತೀರ್ಥಹಳ್ಳಿ ಭಾಗದಲ್ಲಿ ಕಾಡಾನೆ ಸಂಚಾರ ಕ್ರಮೇಣವಾಗಿ ಕಡಿಮೆ ಆಗಿ ನಂತರ ಕಾಡಾನೆ ಈ ಭಾಗದಲ್ಲಿ ಘೋಚರಿಸಲೇ ಇಲ್ಲ.
   ಜೋಗದ ಎ.ಬಿ. ಸೈಟಿನಲ್ಲಿ ದಾಂಡೇಲಿ ಅರಣ್ಯದಿಂದ ನೂರಾರು ಕಾಡಾನೆಗಳು ಬಂದು ಹೋಗುತ್ತಿದ್ದ ಆನೆ ಕಾರಿಡಾರ್ ವಿದ್ಯುತ್ ಯೋಜನೆಯಿಂದ ಈಗಿಲ್ಲ.
  1970 ರ ದಶಕದಲ್ಲಿ ರಿಪ್ಪನ್ ಪೇಟೆ ಸಮೀಪದ ಅರಸಾಳು ಕೇಂದ್ರವಾಗಿಸಿಕೊಂಡು ಒಂದು ಕಾಡಾನೆ ಸಂಚರಿಸುತ್ತಿತ್ತು ನಂತರ ಅದು ಜನ ಸಾಮಾನ್ಯರಿಗೆ ತೊಂದರೆ ಕೊಡಲು ಪ್ರಾರಂಬಿಸಿದ್ದರಿಂದ ಮತ್ತು ಆಯನೂರು ರಿಪ್ಪನ್ ಪೇಟೆ ರಸ್ತೆ ಮಾರ್ಗದಲ್ಲಿ ಸಂಚರಿಸುವ ವಾಹನಗಳು ಈ ಆನೆಯ ಕಾಟದಿಂದ ಈ ಮಾರ್ಗದಲ್ಲಿ ವಾಹನ ಸಂಚಾರಕ್ಕೂ ಭಯ ಪಡುವಂತಾದಾಗ ಸರ್ಕಾರ ಈ ಆನೆ ಹಿಡಿಯಲು ತೀರ್ಮಾನಿಸಿತ್ತು.
  ಆಗ ಕಾಡಾನೆ ಹಿಡಿಯುವ ಮತ್ತು ಪಳಗಿಸುವ ವಿಧಾನ ಶತಮಾನಗಳಷ್ಟು ಹಿಂದಿನ ಮಾದರಿ ಆಗಿದ್ದ ಖೆಡ್ಡಾ ಮಾದರಿ ಅದರಂತೆ ಅರಸಾಳಿನಲ್ಲಿ ದೊಡ್ಡದಾದ ಬಾವಿ ಆಕಾರದಲ್ಲಿ ಮಣ್ಣು ತೆಗೆದು, ತೆಗೆದ ಮಣ್ಣು ಆನೆಗೆ ಸಂಶಯ ಬರದಂತೆ ಅಲ್ಲಿಂದ ಬಹುದೂರಕ್ಕೆ ರವಾನಿಸಿ ಆ ಬಾವಿ ಆಕಾರದ ಖೆಡ್ಡಾ ದ ಮೇಲೆ ಅಡ್ಡವಾಗಿ ಮರದ ರೆಂಬೆ ಹಾಕಿ ಅದರ ಮೇಲೆ ಸೊಪ್ಪು ಹಾಸಿ, ಸೊಪ್ಪಿನ ಮೇಲೆ ಮಣ್ಣು ಹರಡಿ ಅದಕ್ಕೆ ನೀರು ಗೊಬ್ಬರ ಹರಡಿ ರಾಗಿ ಬಿತ್ತುತ್ತಾರೆ ಕೆಲವೇ ದಿನಗಳಲ್ಲಿ ರಾಗಿ ಬೆಳೆದು ಹಸಿರಾದಾಗ ಕಾಡಾನೆ ಇದನ್ನು ನೋಡಿ ಆಸೆಯಿಂದ ರಾಗಿ ಹುಲ್ಲನ್ನು ತಿನ್ನಲು ಬಂದಾಗ ಖೆಡ್ಡಾದ ಶಿಥಿಲ ಮೇಲ್ಚಾವಣೆ ಕುಸಿದು ಬಾವಿ (ಖೆಡ್ಡಾ) ಒಳಗೆ ಬೀಳುತ್ತದೆ ಇದೇ ಕಾಡಾನೆ ಹಿಡಿಯುವ ಖೆಡ್ಡಾ ಯೋಜನೆ.
  ಆದರೆ ದುರದೃಷ್ಟಕ್ಕೆ ಆ ಕಾಡಾನೆ ಬದುಕಲಿಲ್ಲ, ಅಲ್ಲಿವರೆಗೆ ಅರಸಾಳಿನ ಕಾಡಾನೆಯಿಂದ ಬೇಸತ್ತಿದ್ದ ಸ್ಥಳಿಯರು ಈ ಕಾಡಾನೆ ಮೇಲೆ ವ್ಯಕ್ತಪಡಿಸುತ್ತಿದ್ದ ಕೋಪ ತಾಪಗಳು ಈ ಖೆಡ್ಡಾ ದುರಂತದಲ್ಲಿ ಆನೆ ಜೀವ ತ್ಯಾಗದಿಂದ ಬದಲಾಗಿ ದುಃಖದ ಕಣ್ಣೀರಾಗಿ ಅನೇಕ ವರ್ಷ ನಮ್ಮ ಭಾಗದಲ್ಲಿ ಇದೊಂದು ಕಥೆ ಆಗಿತ್ತು.
   ಈಗ ಕಾಡಾನೆಗೆ ಪ್ರಜ್ಞೆ ತಪ್ಪಿಸುವ ಇಂಜೆಕ್ಷನ್ ರೈಪಲ್ ಮೂಲಕ ವನ್ಯಜೀವಿ ಸಂರಕ್ಷಣಾ ಪಡೆಯ ವೈದ್ಯರು ಕಾಡಾನೆಯ ದೇಹಕ್ಕೆ ಇಂಜೆಕ್ಟ್ ಮಾಡಿ ಪ್ರಜ್ಞೆ ತಪ್ಪಿಸಿ ಅದನ್ನು ಅರಣ್ಯ ಇಲಾಖಾ ಸಿಬ್ಬಂದಿಗಳು ಮತ್ತು  ಪಳಗಿಸಿದ ಆನೆಗಳು ಸೇರಿ ಹಗ್ಗ ಚೈನ್ ಗಳಿಂದ ಬಂದಿಸಿ ಆನೆ ತರಬೇತಿ ಕೇಂದ್ರಕ್ಕೆ ರವಾನಿಸುತ್ತಾರೆ.
   ಇತ್ತೀಚೆಗೆ ಕಾಡಾನೆಗಳು ಸಾಗರ - ಹೊಸನಗರ- ತೀರ್ಥಹಳ್ಳಿ ತಾಲ್ಲೂಕುಗಳಲ್ಲಿ ದಿಡೀರ್ ಆಗಿ ಗೋಚರಿಸುತ್ತಿರುವುದು ಆಶ್ಚರ್ಯಕರ ವಿಚಾರವಾಗಿದೆ.
  ಕಳೆದ ವಷ೯ ಶಿವಮೊಗ್ಗ ಸಮೀಪದ ಭದ್ರಾ ಅಭಿಯಾರಣ್ಯದ ಅಂಚಿನಲ್ಲಿ ರೈತರು ಬೆಳೆದ ಜೋಳದ ಹೊಲದಲ್ಲಿ ಅಕ್ರಮ ವಿದ್ಯುತ್ ಸಂಪರ್ಕದಿಂದ ಎರೆಡು ಆನೆಗಳು ಮೃತವಾಗಿದ್ದ ಘಟನೆ ನಡೆದಿತ್ತು.
   ಸಾಗರ ತಾಲ್ಲೂಕಿನ ಅವಿನಹಳ್ಳಿಯ ಗಿಣಿವಾರದಲ್ಲಿ ರೈತ ಮಹಿಳೆಯೋರ್ವರು ಕಾಡಾನೆ ದಾಳಿಗೆ ಬಲಿಯಾದ ಘಟನೆ ನಡೆದಿತ್ತು ಆ ಆನೆ ವರ್ಷದಲ್ಲಿ ಕೆಲ ತಿಂಗಳು ಈಗಲೂ ಆಗು೦ಬೆ ಭಾಗದಲ್ಲಿ ಸಂಚರಿಸುತ್ತಿದೆ.
  ಇದರ ಮಧ್ಯ ಕಳೆದ ಸೋಮವಾರ ಸಂಜೆ (16- ಅಕ್ಟೋಬರ್ -2023)  ಆನಂದಪುರಂ ಮತ್ತು ರಿಪ್ಪನ್ ಪೇಟೆ ಗಡಿ ಪ್ರದೇಶವಾದ ಕೆಂಚನಾಲದ ಸುತ್ತ ಮುತ್ತ ಕಾಡಾನೆ ತನ್ನ ಮರಿಯಾನೆ ಜೊತೆ ರೈತರ ಹೊಲಗಳಿಗೆ ದಾಳಿ ನಡೆಸಿದ ಚಿತ್ರ ಸ್ಥಳಿಯರು ಸೆಲ್ ಫೋನ್ ನಲ್ಲಿ ಸೆರೆ ಹಿಡಿದಿದ್ದಾರೆ ನಂತರ ಈ ಆನೆ  ಚೊರಡಿ ಭಾಗದಲ್ಲಿ ಘೋಚರಿಸಿತ್ತು ನಂತರ ಅದು ಆನಂದಪುರಂನ ಗಿಳಾಲಗುಂಡಿ ಮಾರ್ಗದಲ್ಲಿದೆ ಎಂಬ ಸುದ್ದಿ ಬುಧವಾರ ಬೆಳಿಗ್ಗೆ ಹರಡಿತ್ತು ಆದರೆ ಇವತ್ತು ಕುಂಸಿ ಬಾಗದ ಕೃಷಿ ಜಮೀನಿನಲ್ಲಿ ಸಾಗಿ ಹೋಗಿದೆ ಎಂಬ ಸುದ್ದಿ ಇದೆ.
   ಮರಿಯಾನೆ ಜೊತೆ ಸಾಗುತ್ತಿರುವ ಈ ಒಂಟಿ ಕಾಡಾನೆ ಅಪಾಯಕಾರಿ ಕೂಡ ಹೌದು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ