ನಾನು_ಬರೆದ_ಕಾದಂಬರಿ
#ಬೆಸ್ತರರಾಣಿ_ಚಂಪಕಾ
#ಡಾ_ಜನಾರ್ದನಭಟ್ಟರ_ವಿಮರ್ಶಾ_ಗ್ರಂಥ
#ವಿನೂತನ_ಕಥನ_ಕಾರಣದಲ್ಲಿ.
#DrJanardhanbhat #vinuthanakathanakarana #bestararanichampaka #keladihistory #Arunprasad #Rajavenkatappanayaka
ಡಾ.ಜನಾರ್ದನ ಭಟ್ ಅವರ ವಿನೂತನ ಕಥನ ಕಾರಣ ವಿಮರ್ಶಾ ಪುಸ್ತಕದಲ್ಲಿ ಐತಿಹಾಸಿಕ ಕಾದಂಬರಿಗಳಲ್ಲಿ ಆಧುನಿಕ ವಿಧಾನ ಎಂಬ ಪುಟಗಳಲ್ಲಿ ನಾನು ಬರೆದ ಕಾದಂಬರಿ #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತ_ಬೆಸ್ತರರಾಣಿ_ಚಂಪಕಾದ ಉಲ್ಲೇಖ ಮಾಡಿದ್ದಾರೆ.
ಡಾಕ್ಟರ್ ಬಿ ಜನಾರ್ದನ್ ಭಟ್ ಅವರು ಸಾಹಿತ್ಯ ವಿಮರ್ಶೆಯ ವಿಶೇಷ ಪುಸ್ತಕವನ್ನು ಪ್ರಕಟ ಮಾಡಿದ್ದಾರೆ, ಅದರ ಹೆಸರು ವಿನೂತನ ಕಥನ ಕಾರಣ.
ಈ ಪುಸ್ತಕದ ಪುಟ 39ರಲ್ಲಿ ಐತಿಹಾಸಿಕ ಕಾದಂಬರಿಗಳಲ್ಲಿ ಆಧುನಿಕ ವಿಧಾನ ಎಂಬ ವಿಮರ್ಶೆಯಲ್ಲಿ ಅವರು ಈ ರೀತಿ ಉಲ್ಲೇಖ ಮಾಡಿದ್ದಾರೆ.
ಹಿಂದಿನ ಐತಿಹಾಸಿಕ ಕಾದಂಬರಿಗಳಲ್ಲಿ ಅಧ್ಯಯನದ ಕೊರತೆಯಿಂದ ಅಥವಾ ಐತಿಹಾಸಿಕ ಮಾಹಿತಿಗಳ ಲಭ್ಯತೆಯಿಂದ ಅವು "ಜನಪ್ರಿಯ ರೋಚಕ ಕಾದಂಬರಿಗಳ" ಸಮುದಾಯಕ್ಕೆ ಸೇರಿ ಹೋಗಿತ್ತು.
ಹೆಚ್ಚಿನ ಅಧ್ಯಯನದಿಂದ ಈ ಕಾಲದಲ್ಲಿ ಬರೆಯಲ್ಪಟ್ಟಿರುವ ಐತಿಹಾಸಿಕ ಕಾದಂಬರಿಗಳು ಇತಿಹಾಸದ ಹೀರೋಗಳ ಬಗೆಗೆ ಇರದೆ ಆ ಕಾಲದ ಸಮಾಜದ ಮತ್ತು ಜನಾಂಗಗಳ ವೈಶಿಷ್ಟ್ಯ ಮತ್ತು ವ್ಯಕ್ತಿತ್ವಗಳ ಚಿತ್ರಣವನ್ನು ಉದ್ದೇಶವಾಗಿ ಇರಿಸಿಕೊಂಡಿವೆ.
ಇವುಗಳ ಹಿಂದೆ ಅಧ್ಯಯನದ ಬಲವಿದೆ ಯಾವುದೇ ವಿಚಾರ ಹೀಗೆ ನಡೆದಿರಲಾರದು ಎಂದು ಸಂಶಯ ವ್ಯಕ್ತಪಡಿಸಿದರೆ ಅದಕ್ಕೆ ಇತಿಹಾಸದ ಪುಸ್ತಕಗಳಲ್ಲಿ ದಾಖಲೆಗಳನ್ನು ಈ ಲೇಖಕರು ತೋರಿಸಬಹುದು.
ವಸುದೇಂದ್ರ ಅವರ #ತೇಜೋತುಂಗಭದ್ರಾ
ರೇಖಾ ಕಾಖಂಡಕಿ ಅವರ #ದೈವಸ್ಟತ
ಕೆ. ಅರುಣ್ ಪ್ರಸಾದ್ ಅವರ #ಕೆಳದಿ_ಸಾಮ್ರಾಜ್ಯ_ಇತಿಹಾಸ_ಮರೆತಿರುವ_ಬೆಸ್ತರರಾಣಿ_ಚಂಪಕ
ಗಜಾನನ ಶರ್ಮ ಅವರ #ಚೆನ್ನಬೈರಾದೇವಿ ಕಾದಂಬರಿಗಳು ಈ ಮಾದರಿಯ ಬರವಣಿಗೆಗಳು.
ಈ ಮಾದರಿಗೆ ಕೊಡಬಹುದಾದ ಇನ್ನೊಂದು ಉದಾಹರಣೆ ಎಂದರೆ ಕೆ. ಅರುಣ್ ಪ್ರಸಾದ್ ಅವರ ಕೆಳದಿ ಸಾಮ್ರಾಜ್ಯ ಇತಿಹಾಸ ಮರೆತಿರುವ ಬೆಸ್ತರ ರಾಣಿ ಚಂಪಕ (2020) ಎಂಬ ಕಾದಂಬರಿ.
ಇದಕ್ಕೊಂದು ವಿವರಣೆಯು ಮುಖಪುಟದಲ್ಲಿಯೇ ಇದೆ, ಕೆಳದಿಯ ಖ್ಯಾತ ರಾಜ ವೆಂಕಟಪ್ಪ ನಾಯಕ ಮತ್ತು ಚಂಪಕ ರಾಣಿ ದುರಂತ ಪ್ರೇಮ ಕಥೆ.
ಈ ಕಾದಂಬರಿಯನ್ನು ಬರೆಯುವ ಉದ್ದೇಶ ಮರೆತಿರುವ ಇತಿಹಾಸವನ್ನು ಜನರಿಗೆ ತಿಳಿಸುವುದು ಎನ್ನುವುದನ್ನು ಮೊದಲಿಗೆ ಸ್ಪಷ್ಟ ಪಡಿಸಿದಂತಾಗಿದೆ.
ಇತಿಹಾಸದ ಘಟನೆಯೊಂದನ್ನು ಚಂಪಕ ರಾಣಿಯನ್ನು ವರ್ತಮಾನ ಕಾಲದಲ್ಲಿ ವಿಕೃತವಾಗಿ ಪರಿಚಯಿಸುತ್ತಿರುವುದನ್ನು ಕಂಡು ಅಸಮಾಧಾನ ಗೊಂಡ ಲೇಖಕರು ಇದರ ಬಗ್ಗೆ ಸತ್ಯ ಸಂಗತಿಯನ್ನು ತಿಳಿಸುವ ಉದ್ದೇಶದಿಂದ ಇದನ್ನು ರಚಿಸಲು ಮುಂದಾದರು.
ಅಂದರೆ ಇಲ್ಲಿ ಅತೀತವಾದ ಘಟನೆಯನ್ನು ಇಟ್ಟುಕೊಂಡು ಚಿತ್ರಿಸಿದ್ದಾಗಿನ ವರ್ತಮಾನದ ಆಶಯ ವಿಕೃತ ಸಂಕಟನಗಳನ್ನು ತಡೆಗಟ್ಟುವುದು ಕೆಳದಿ ಅರಸರು ಆನಂದಪುರಂನ ಚಂಪಕ ಸರಸ್ಸು ವನ್ನು ವೇಶ್ಯೆ ಒಬ್ಬಳ ನೆನಪಿಗಾಗಿ ಕಟ್ಟಿದರು ಎಂದು ಒಮ್ಮೆ ಎಲ್ಲಾ ಪತ್ರಿಕೆಗಳಲ್ಲಿ ಬಂದ ಪರಿಚಯದ ಲೇಖನದಲ್ಲಿ ಬಂದಿತ್ತಂತೆ ಅದನ್ನು ಖಂಡಿಸಿ ಪತ್ರಿಕೆಗಳಿಗೆ ಪ್ರತಿಕ್ರಿಯೆ ನೀಡಿದ್ದ ಅರುಣ್ ಪ್ರಸಾದ್ ಮುಂದೆ ಒಂದು ಸುಂದರ ಐತಿಹಾಸಿಕ ಕಾದಂಬರಿಯನ್ನೇ ಬರೆದರು.
ಅವರು ಅತೀತದ ಘಟನೆಗೆ ಈ ಕಾಲದ ವ್ಯಕ್ತಿಗಳಿಗಿಂತ ಸಮೀಪವಿದ್ದ ವೃದ್ಧೆ ಅಗಸರ ನೀಲಜ್ಜಿ ಈ ಬಗ್ಗೆ ಹೇಳಿದ್ದ ಐತಿಹ್ಯವನ್ನು ಇಲ್ಲಿ ಬಳಸಿಕೊಂಡಿದ್ದಾರೆ, ಕ್ಷೇತ್ರಕಾರ್ಯ ಮಾಡಿದ್ದಾರೆ, ಸಾಕಷ್ಟು ಗ್ರಂಥಗಳನ್ನು ಅಧ್ಯಯನ ಮಾಡಿದ್ದಾರೆ.
ಅವರು ವಿನಯದಿಂದ ಹೀಗೆ ಹೇಳಿದ್ದಾರೆ... ಈ ಐತಿಹಾಸಿಕ ಬೆಸ್ತರ ರಾಣಿ ಚಂಪಕ ಎಂಬ ಕಾದಂಬರಿ ಇತಿಹಾಸದ ಪುಟದಲ್ಲಿ ದಾಖಲಾದ ಮಾಹಿತಿಗಳಿಗೆ ಪೂರಕವಾಗಿ ಮತ್ತು ಜನಪದದಲ್ಲಿನ ಚಂಪಕಾಳ ಕಥೆಯ ಅನುಗುಣವಾಗಿ ಬರೆದಿದ್ದೇನೆ, ಕೆಲವೊಂದು ತಪ್ಪು ಇರಬಹುದು, ಇತಿಹಾಸಕ್ಕೂ ಈ ಕಾದಂಬರಿಗೂ ತಾಳೆ ಆಗದಿರಬಹುದು, ಇನ್ನೂ ಸ್ಪಷ್ಟವಾದ ಮಾಹಿತಿಗಳು ಸಿಕ್ಕಿದರೆ ಅದನ್ನು ಸ್ವೀಕರಿಸಲು ತಾನು ಮುಕ್ತವಾಗಿರುವುದನ್ನು ಕೂಡ ಲೇಖಕರು ಹೇಳಿದ್ದಾರೆ.
"ಈ ಕಾದಂಬರಿ ಎಲ್ಲಾ ರೀತಿಯ ವಿಮರ್ಶೆ ಮತ್ತು ಸಲಹೆಗಳಿಗೆ ಮುಕ್ತ ನನ್ನ ವಿಚಾರಗಳೇ ಸಂಪೂರ್ಣವಾಗಿ ಸರಿ ಎಂಬ ಭಾವನೆ ನನಗಿಲ್ಲ" (ಸೃಜನಶೀಲ ಕಾದ೦ಬರಿಯನ್ನು ಬರೆದವರು ಹೀಗೆ ಹೇಳಲಾರರು).
ಈ ಕಾದಂಬರಿಯಲ್ಲಿ ರಾಜವಂಶಸ್ಥರು ಶಿವನ ಭಕ್ತರು ಸಸ್ಯಹಾರಿಗಳು, ನಾಯಕಿ ಚಂಪಕ ಬೆಸ್ತರ ಹೆಣ್ಣು ಆಗಿದ್ದು ಆಹಾರ ಪದ್ಧತಿಯ ವ್ಯತ್ಯಾಸದಿಂದ ಆದ ಸಮಸ್ಯೆಗಳನ್ನು ಚರ್ಚಿಸಿದ್ದಾರೆ.
ಇದರಲ್ಲಿ ಸಾಮಾಜಿಕ ಸಾಮರಸ್ಯ, ಸೌಹಾರ್ದಗಳಿಗೆ ತೊಂದರೆ ಆಗುವ ಸಮುದಾಯ ದ್ವೇಷ ಜಾತಿನಿಂದನೆ ಇತ್ಯಾದಿ ಇಲ್ಲ.
ಮೊದಲನೆಯ ಹೆಂಡತಿ ಇದ್ದಾಗಲೇ ರಾಜ ಬೇರೆ ಜಾತಿಯ ಚಂಪಕಳನ್ನು ಮದುವೆಯಾದದು ಮುಖ್ಯವಾಗಿ ಕೌಟುಂಬಿಕ ಬಿರುಕುಗಳಿಗೆ ಕಾರಣವಾಗಿರಬೇಕು.
ಹಿರಿಯ ರಾಣಿಯ ಕಡೆಯವರು ಚಂಪಕ ಒಬ್ಬಳು ವೇಶ್ಯೆ ಎಂದು ಪ್ರಚಾರ ಮಾಡಲು ಪ್ರಾರಂಭಿಸಿದ್ದರು ಎನ್ನುವ ಸೂಚನೆ ಇದೆ ಆದರೆ ಕಾದಂಬರಿಕಾರರ ಪ್ರಕಾರ ಅಪಪ್ರಚಾರಕ್ಕೆ ಮೂಲವಾಗಿದ್ದು ರಾಜ ಇನ್ನೊಂದು ಮದುವೆಯಾದ ಎನ್ನುವುದಾಗಿರದೆ ಆಹಾರ ಪದ್ಧತಿಯೇ.
ಹಿರಿಯ ರಾಣಿ ಸಸ್ಯಹಾರಿಯಾಗಿದ್ದು, ಚಂಪಕಾಳ ಬೆಸ್ತರ ಕುಲದ ಮಾಂಸಹಾರ ಪದ್ಧತಿ ಅವಳಿಗೆ ಒಪ್ಪಿತವಾಗಿರಲಿಲ್ಲ ಎಂದು ಕಾದಂಬರಿ ಹೇಳುತ್ತದೆ.
ಇಂತಹ ತೀರ್ಮಾನಗಳಿಗೆ ಇತಿಹಾಸದ ಪುರಾವೆಯನ್ನು ನವಚಾರಿತ್ರಿಕ ವಿಶ್ಲೇಷಕರು ಪರಿಶೀಲಿಸಬಹುದು, ಈ ಸಮಸ್ಯೆ ಈಗಲೂ ಕಾಣುವ ಸಮಸ್ಯೆ ಯಾಗಿರುವುದರಿಂದ ಆಗ ಇದ್ದಿರಲಾರದು ಎಂದು ಹೇಳುವಂತಿಲ್ಲ ಆದರೆ ಬೇರೆ ದಾಖಲೆಗಳು ಸಿಕ್ಕಿದರೆ ಬೇರೆ ಕಾರಣಗಳು ಸಿಗಬಹುದು.
ಕನ್ನಡ ಸಾಹಿತ್ಯ ಲೋಕದಲ್ಲಿ ಡಾ. ಜನಾರ್ದನ ಭಟ್ಟರಂತ ಮೇರು ವ್ಯಕ್ತಿತ್ವದ ವಿಮರ್ಶಕರು - ಸಾಹಿತಿಗಳು - ತಜ್ಞರು ನನ್ನ ಕಾದಂಬರಿಯನ್ನ ಅವರ ವಿಮರ್ಶಾ ಗ್ರಂಥದಲ್ಲಿ ದಾಖಲಿಸಿ ನನ್ನ ಕಾದಂಬರಿಗೊಂದು ವಿಶೇಷ ಸ್ಥಾನಮಾನ ನೀಡಿದ್ದಾರೆ ಅವರಿಗೆ ಕೃತಜ್ಞತೆಗಳನ್ನ ಅರ್ಪಿಸುತ್ತೇನೆ.
ಅವನನ್ನು ಈವರೆಗೆ ಮುಖಃತಾ ಭೇಟಿ ಮಾಡಲಾಗಿಲ್ಲ ಅವರ ಭೇಟಿಗಾಗಿ ಕಾದಿದ್ದೇನೆ.
Comments
Post a Comment