ಬಿ_ಕೃಷ್ಣಪ್ಪ_ದಲಿತ_ಸಂಘರ್ಷ_ಸಮಿತಿ_ಸಂಸ್ಥಾಪಕರು.
9- ಜೂನ್ 1938 ಪ್ರೋಪೆಸರ್ ಬಸಪ್ಪ ಕೃಷ್ಣಪ್ಪರ ಜನ್ಮದಿನ ಇವತ್ತು ಅವರ 88ನೇ ಹುಟ್ಟು ಹಬ್ಬ.
ಇವರು ಭದ್ರಾವತಿಯ ಸಿಲ್ವರ್ ಜುಬಿಲಿ ಕಾಲೇಜಿನಲ್ಲಿ (ಈಗಿನ ಸರ್ ಎಂ.ವಿ. ಕಲೆ ಮತ್ತು ವಾಣಿಜ್ಯ ಕಾಲೇಜು) ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಕರ್ನಾಟಕದಲ್ಲಿ ನಡೆದ #ಬೂಸಾ ಚಳವಳಿಯ ನಂತರ ದಲಿತರಲ್ಲಿ ಜಾಗೃತಿ ಉಂಟಾಯಿತು.
ಈ ಹಿನ್ನೆಲೆಯಲ್ಲಿ 1974ರಲ್ಲಿ ಬಿ. ಕೃಷ್ಣಪ್ಪ, #ದೇವನೂರುಮಹಾದೇವ, #ಸಿದ್ದಲಿಂಗಯ್ಯ ಮುಂತಾದ ಪ್ರಮುಖ ಪ್ರಗತಿಪರ ಚಿಂತಕರೊಂದಿಗೆ ಸೇರಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಿ.ಎಸ್.ಎಸ್) ಯನ್ನು ಸ್ಥಾಪಿಸಿದರು.
ಕೃಷ್ಣಪ್ಪನವರು ಈ ಸಂಘಟನೆಯ ರಾಜ್ಯ ಸಂಚಾಲಕರಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ತಳಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸಿದರು.
ಇವರು ಡಾ. ಬಿ.ಆರ್. ಅಂಬೇಡ್ಕರ್ ಅವರ ವಿಚಾರಧಾರೆ ಮತ್ತು ಮಾರ್ಕ್ಸ್ವಾದಿ ತತ್ವಗಳಿಂದ ಆಳವಾಗಿ ಪ್ರಭಾವಿತರಾಗಿದ್ದರು.
ಜಾತಿ ಪದ್ಧತಿಯ ನಿರ್ಮೂಲನೆ, ದಲಿತರ ಮೇಲಿನ ದೌರ್ಜನ್ಯಗಳ ವಿರುದ್ಧ ಪ್ರತಿಭಟನೆ, ಭೂ ರಹಿತ ದಲಿತರಿಗೆ ಭೂಮಿ ಕೊಡಿಸುವುದು ಮತ್ತು ಶಿಕ್ಷಣದ ಹಕ್ಕುಗಳಿಗಾಗಿ ರಾಜ್ಯಾದ್ಯಂತ ಹಗಲಿರುಳು ಶ್ರಮಿಸಿದರು.
ಇವರ ಹೋರಾಟ ಅದು ಕೇವಲ ನಗರ ಕೇಂದ್ರಿತವಾಗಿರದೆ, ಕರ್ನಾಟಕದ ಹಳ್ಳಿ ಹಳ್ಳಿಗಳಿಗೂ ತಲುಪಿ ಶೋಷಿತರಲ್ಲಿ ಆತ್ಮಗೌರವವನ್ನು ಜಾಗೃತಗೊಳಿಸಿತು.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ರೈತ ಬಂದು ಗ್ರಾಮೋದ್ಯೋಗದ ಕಾರ್ಮಿಕ ಹೋರಾಟಕ್ಕೆ ಅವರು ಬೆಂಬಲಿಸಿದ್ದರು.
ಚಂದ್ರಗುತ್ತಿ ಬೆತ್ತಲೆ ಸೇವೆ ನಿಷೇದಕ್ಕೆ ಕಾರಣವಾಗಿತ್ತು ಅವರ ಹೋರಾಟ.
ಹರಿಹರ ಅವರ ಹುಟ್ಟಿದ ಊರು, ಅವರ ಶಿಕ್ಷಣ ಚಿತ್ರದುರ್ಗದಲ್ಲಿ ಆಯಿತು,ಬಿ.ಕೃಷ್ಣಪ್ಪರ ಮೊದಲ ಉದ್ಯೋಗ #ಸಾಗರದ_ಲಾಲ್_ಬಹದ್ದೂರ್_ಶಾಸ್ತ್ರಿ_ಕಾಲೇಜಿನಲ್ಲಿ.
ಸಾಗರದ LB ಕಾಲೇಜಿನಲ್ಲಿ ಅವರು ತಾತ್ಕಲಿಕ ಉಪನ್ಯಾಸ ಹುದ್ದೆಗೆ ಸೇರುತ್ತಾರೆ.
ನಂತರ ಭದ್ರಾವತಿ ಸರ್.ಎಂ. ವಿಶ್ವೇಶ್ವರಯ್ಯ ಕಾಲೇಜಿನಲ್ಲಿ ದೀರ್ಘಾವದಿ ಸೇವೆ ಸಲ್ಲಿಸಿದ್ದರು.
ಇಡೀ ರಾಜ್ಯದಲ್ಲಿ ದಲಿತರ ಹಕ್ಕುಗಳ ಬಗ್ಗೆ ಜನ ಜಾಗೃತಿಯ ಆಂದೋಲನದ ಜ್ಯೋತಿ ಬೆಳಗಿದ ಅವರ ಹೋರಾಟ ಸಣ್ಣದಲ್ಲ.
ಅವರ ಯೌವನದಲ್ಲಿ ಅವರು ಫ್ರೋ. ನಂಜುಂಡ ಸ್ವಾಮಿ, ಪೂರ್ಣಚಂದ್ರ ತೇಜಸ್ವಿ, ಲಂಕೇಶರ ಜೊತೆ ಸಮಾಜವಾದಿ ಯುವ ಜನ ಸಭಾದಲ್ಲಿ ಮುಂಚೂಣಿಯಲ್ಲಿದ್ದರು.
ಆ ಸಮಯದಲ್ಲೇ ಅವರ ಪ್ರೇಮ ವಿವಾಹ ಕವಿ ಗೋಪಾಲ ಕೃಷ್ಣ ಅಡಿಗರ ಅಣ್ಣನ ಪುತ್ರಿ ಇಂದಿರಾ ಜೊತೆ ಆಗುತ್ತದೆ.
ಬಿ.ಕೃಷ್ಣಪ್ಪ ಮತ್ತು ಇಂದಿರಾ ವಿವಾಹ ದಲಿತ ಮತ್ತು ಬ್ರಾಹ್ಮಣರ ಅಂತರ್ಜಾತಿ ವಿವಾಹವಾದ್ದರಿಂದ ಆ ಕಾಲದಲ್ಲಿ ಭದ್ರಾವತಿಯಲ್ಲಿ ಜಾತಿ ಕಲಹಕ್ಕೆ ಕಾರಣವಾಗಿತ್ತು.
1983-84ರಲ್ಲಿ ನಮ್ಮ ಊರು ಆನಂದಪುರಂನ ರೈತಬಂದು ಗ್ರಾಮೋದ್ಯೋಗದ ರೈಸ್ ಮಿಲ್ ಐಕಾನ್ ಸುಬ್ಬಣ್ಣನಾಯಕರು ಸುಪ್ರ ಸಿದ್ದರು, ಆ ಕಾಲದಲ್ಲೇ ಸಂಸ್ಥೆಯ ನಾಲ್ವರು ಕಾರ್ಮಿಕರ ಕೊಲೆ ಆಗುತ್ತದೆ ಇದನ್ನು ತನಿಖೆಗೆ ಒತ್ತಾಯಿಸಿ ನಾವು ಹೋರಾಟ ಮಾಡಿದ್ದೆವು.
ಆಗಿನ ಹೋರಾಟಕ್ಕೆ ಸಾಗರದ ಆಗಿನ ಜನರಲ್ ವರ್ಕರ್ಸ್ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ #S_S_ನಾಗರಾಜ್, ಆಗಿನ ಸಾಗರ ತಾಲೂಕಿನ ದಲಿತ ಸಂಘರ್ಷ ಸಮಿತಿ ಸಂಚಾಲಕ #ಶಿವಾನಂದಕುಗ್ವೆ, ಜನಪರ ಹೋರಾಟಗಾರ ನ್ಯಾಯದ ತಕ್ಕಡಿ ಪತ್ರಿಕೆ ಸಂಪಾದಕ #ತೀನಾ_ಶ್ರೀನಿವಾಸ್, ಆಗಿನ ವಿದ್ಯಾರ್ಥಿ ಮುಖಂಡ #ಅದರಂತೆವಿಶ್ವನಾಥಗೌಡ, ಆಗಿನ ಯುವ ಮುಖಂಡರಾದ #ಕುಗ್ವೆವಸಂತ್, #ಪ್ರೆಡರಿಕ್, #ಆಟೋಮೋಹನ್,#ಮಂಡಗಳಲೆನಾರಾಯಣ್ ಮುಂತಾದವರೆಲ್ಲ ಬೆಂಬಲಿಸಿ ಬಂದಿದ್ದರು.
ಪ್ರತಿಭಟನೆ ನಡೆಸುವವರ ಮೇಲೆ ಲಾಠಿ ಛಾರ್ಜ್, ಬಂದನ ಹೀಗೆ ಅನೇಕ ಹಿಂಸೆ ಹೋರಾಟಗಾರರು ಅನುಭವಿಸ ಬೇಕಾಯಿತು ಆಗ ನಮ್ಮ ಬೆಂಬಲಕ್ಕೆ ಬಂದವರು ಡಿ.ಎಸ್. ಎಸ್. ಸಂಸ್ಥಾಪಕರಾದ ಬಿ.ಕೃಷ್ಣಪ್ಪನವರು.
ನಾವು ಆನಂದಪುರಂನಿಂದ ಶಿವಮೊಗ್ಗಕ್ಕೆ ನೂರಾರು ಯುವಕರು ಸೈಕಲ್ ಜಾಥಾ ಮಾಡಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ಮಾಡಲು ಶಿವಮೊಗ್ಗ ತಲುಪಿದಾಗ ಶಿವಮೊಗ್ಗದ ಸರ್ಕಿಟ್ ಹೌಸ್ ಎದರು ನಮ್ಮ ಸೈಕಲ್ ಜಾತಾ ಸ್ವಾಗತಿಸಲು ಬಿ. ಕೃಷ್ಣಪ್ಪನವರು ಭದ್ರಾವತಿಯಿಂದ ತಮ್ಮ ನೀಲಿ ಬಣ್ಣದ ಬಜಾಜ್ ಸ್ಕೂಟರ್ ನಲ್ಲಿ ಬಂದಿದ್ದರು.
ಪ್ರತಿಭಟನಾ ಸಭೆಯಲ್ಲಿ ಬಿ.ಕೃಷ್ಣಪ್ಪನವರು ನಮ್ಮ ಹೋರಾಟ ಬೆಂಬಲಿಸಿ ಮಾತಾಡಿದ್ದರು.
ಆಗ ಶಿವಮೊಗ್ಗದ ಕಾರ್ಮಿಕ ಮುಖಂಡ ವಕೀಲರಾದ #ತಿರುಕಪ್ಪನವರು, ಡಿವಿಎಸ್ ಕಾಲೇಜಿನ ಉಪನ್ಯಾಸಕರಾದ ಜನಪರ ಹೋರಾಟಗಾರ #ರಾಚಯ್ಯ, ವಿದ್ಯಾರ್ಥಿ ಮುಖಂಡ #ಈಸೂರುಲೋಕೇಶ್ ಮತ್ತು ಗೆಳೆಯರು ನಮ್ಮ ಹೋರಾಟ ಬೆಂಬಲಿಸಿದ್ದರು.
30 ಏಪ್ರಿಲ್ 1997ರಂದು ತಮ್ಮ 58 ನೆ ವರ್ಷಕ್ಕೆ ಇಹಲೋಕ ಯಾತ್ರೆ ಮುಗಿಸಿದ ಬಿ.ಕೃಷ್ಣಪ್ಪರ ದಲಿತ ಜನ ಜಾಗೃತೆ ಅಸಾಧಾರಣ ಹೋರಾಟವಾಗಿ ದಾಖಲಾಗಿದೆ.
#ಶಿಕ್ಷಣ_ಸಂಘಟನೆ_ಮತ್ತು_ಹೋರಾಟ ಎಂಬ ಅಂಬೇಡ್ಕರ್ ಅವರ ತತ್ವವನ್ನು ಕರ್ನಾಟಕದ ನೆಲದಲ್ಲಿ ಅಕ್ಷರಶಃ ಜಾರಿಗೆ ತರಲು ಶ್ರಮಿಸಿದ ಕೆಲವೇ ಕೆಲವು ನಾಯಕರಲ್ಲಿ ಬಿ. ಕೃಷ್ಣಪ್ಪನವರು ಮುಂಚೂಣಿಯಲ್ಲಿ ನಿಲ್ಲುತ್ತಾರೆ.
ಇವರನ್ನು ಇಂದಿಗೂ ದಲಿತ ಚಳವಳಿಯ ಸಾಕ್ಷಿಪ್ರಜ್ಞೆ ಎಂದು ಗೌರವಿಸಲಾಗುತ್ತದೆ.
ಇವತ್ತು ನಾಡಿನಾದ್ಯಂತ ಸಂಘ ಸಂಸ್ಥೆಗಳು ಬಿ. ಕೃಷ್ಣಪ್ಪನವರ ಹುಟ್ಟು ಹಬ್ಬ ಆಚರಿಸುತ್ತಿದ್ದಾರೆ ನಮ್ಮ ಸಾಗರ ಪಟ್ಟಣದಲ್ಲಿ ನಮ್ಮೂರಿನವರೇ ಆದ ದಲಿತ ನಾಯಕ #ಹೊಸಕೊಪ್ಪರೇವಪ್ಪ ಬಿ. ಕೃಷ್ಣಪ್ಪರ ಹುಟ್ಟುಹಬ್ಬದ ಕಾರ್ಯಕ್ರಮ ನಡೆಸಿದ ಸುದ್ದಿ ಮಾಧ್ಯಮದಲ್ಲಿ ನೋಡಿ ಸಂತೋಷ ಆಯಿತು.
#DSS #bkrishnappa #sagar #revappa #birthday #Chandragutt #devanurumahadeva #siddalingai
Comments
Post a Comment