ನೂತನ_ಮುಖ್ಯಮಂತ್ರಿ_ಡಿ_ಕೆ_ಶಿವಕುಮಾರ್_ಸರ್ಕಾರದಲ್ಲಿ_ಶಿವಮೊಗ್ಗ_ಜಿಲ್ಲೆಯ_ರಾಜಕಾರಣ.
ಆರ್. ಎಂ. ಮಂಜುನಾಥ ಗೌಡರು, ಎಂ.ಶ್ರೀಕಾಂತ್ ಮತ್ತು ಗೋಣಿಮಾಲತೇಶರಿಗೆ ಸೂಕ್ತ ಸ್ಥಾನಮಾನ ಲಭಿಸೀತೆ? ...
#ಯಡ್ಯೂರಪ್ಪ ಅವರ ಸರ್ಕಾರ ಇದ್ದಾಗ ಶಿವಮೊಗ್ಗ ಜಿಲ್ಲೆಯಲ್ಲಿ ಅವರ ಪಕ್ಷದ ಹೆಚ್ಚಿನ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನ ಕಲ್ಪಿಸಿದ್ದರು.
ಕಾಂಗ್ರೇಸ್ ಪಕ್ಷದಲ್ಲಿ ಅವರ ಪಕ್ಷ ಅಧಿಕಾರಕ್ಕೆ ಬಂದಾಗೆಲ್ಲ ಒಬ್ಬರ ಕಾಲು ಒಬ್ಬರು ಎಳೆದು ಸರ್ಕಾರದಲ್ಲಿ ಯಾರೂ ಸೂಕ್ತ ಸ್ಥಾನಮಾನ ಪಡೆಯದಂತೆ ತಪ್ಪಿಸಲು ಹೋರಾಟಗಳೇ ನಡೆಯುತ್ತದೆ ಇದರಿಂದ ಪಕ್ಷದ ಸಂಘಟನೆಗೆ ಹೆಚ್ಚು ನಷ್ಟ ಉಂಟಾಗುತ್ತದೆ.
ಉಪಮುಖ್ಯಮಂತ್ರಿ ಆಗಿದ್ದ ಡಿ.ಕೆ.ಶಿವಕುಮಾರ್ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ ಈಗ ಶಿವಮೊಗ್ಗ ಜಿಲ್ಲೆಯ ರಾಜಕಾರಣದಲ್ಲಿ ಏನೆಲ್ಲ ಬದಲಾಗ ಬಹುದು ಎಂಬ ಕುತೂಹಲ ಇದೆ.
ಮೊದಲಿನಿಂದಲೂ ಡಿ.ಕೆ. ಶಿವಕುಮಾರ್ ಅವರ ಆಪ್ತರಾಗಿರುವ #ಆರ್_ಎಂ_ಮಂಜುನಾಥಗೌಡರು DCC ಬ್ಯಾಂಕ್ ಅಧ್ಯಕ್ಷರು ಮತ್ತು ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದಾರೆ.
ಮುಂದೆ ಅವರು ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಬೇಕು ಮತ್ತು ವಿಧಾನ ಪರಿಷತ್ ಸದಸ್ಯರಾಗಿ ಅವರನ್ನ ನೇಮಕ ಮಾಡ ಬೇಕು ಎಂದು ಅವರ ಅಭಿಮಾನಿಗಳು ಬಹಿರಂಗವಾಗಿ ಒತ್ತಾಯಿಸುತ್ತಿದ್ದಾರೆ.
ಜಾತ್ಯಾತೀತ ಜನತಾದಳದ ಜಿಲ್ಲಾ ಅಧ್ಯಕ್ಷರಾಗಿ ಪಕ್ಷ ಸಂಘಟನೆ ಮಾಡಿ ಜಿಲ್ಲಾ ಪಂಚಾಯತ್, ಶಿವಮೊಗ್ಗ ನಗರ ಸಭೆಗಳಲ್ಲಿ ಪಕ್ಷಕ್ಕೆ ಅಧಿಕಾರ ದೊರೆಯುವಂತೆ ಮಾಡಿದ್ದ #ಎಂ_ಶ್ರೀಕಾಂತ್ ರನ್ನ ನಿಗಮ ಮಂಡಳಿಗೆ ಅಧ್ಯಕ್ಷರಾಗಿ ನೇಮಕ ಮಾಡುವ ಆಶ್ವಾಸನೆ ಮೇಲೆ ಕಾಂಗ್ರೇಸ್ ಪಕ್ಷಕ್ಕೆ ಸೇರಿಸಿಕೊಂಡು ಮೂರು ವರ್ಷ ಆಯಿತು.
ಎಂ . ಶ್ರೀಕಾಂತರಿಗೆ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡ ಬೇಕು ಮತ್ತು ಅವರ ಸಂಘಟನಾ ಚತುರತೆಗಾಗಿ ಅವರಿಗೆ ವಿದಾನ ಪರಿಷತ್ ಗೆ ನಾಮಕರಣ ಮಾಡಬೇಕೆಂಬ ಒತ್ತಾಯಕ್ಕೆ ಈ ಬಾರಿ ಫಲ ಸಿಗಬಹುದು ಎನ್ನುವ ನಂಬಿಕೆ ಅವರ ಅಭಿಮಾನಿಗಳಿದ್ದು.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ವಿಧಾನಸಭಾ ಕ್ಷೇತ್ರದಲ್ಲಿ ಯಡ್ಯೂರಪ್ಪರ ಅಧಿಕಾರ-ತಂತ್ರಗಾರಿಕೆಯ ರಾಜಕಾರಣದ ವಿರುದ್ಧ ಕಾಂಗ್ರೇಸ್ ಪಕ್ಷದ ಸಂಘಟನೆ ಉಳಿಸಿಕೊಳ್ಳುವುದೇ ದೊಡ್ಡ ಸವಾಲು ಆದರೆ ಬಂಗಾರಪ್ಪನವರು ಅವರ ಖಾಸಾ ಶಿಷ್ಯ #ಗೋಣಿಮಾಲತೇಶರಿಂದ ಅದನ್ನು ಸಾದಿಸಿದ್ದರು.
2018ರಲ್ಲಿ ಯಡ್ಯೂರಪ್ಪರ ವಿರುದ್ಧ ಶಿಕಾರಿಪುರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆಗಿ ಗಣನೀಯ ಮತ ಪಡೆದವರು ಗೋಣಿ ಮಾಲತೇಶರು .
2023ರಲ್ಲಿ ಶಿಕಾರಿಪುರದಿಂದ ಬಿಜೆಪಿಯಿಂದ ಸ್ಪರ್ಧೆ ಮಾಡಿದವರು ಯಡೂರಪ್ಪರ ಪುತ್ರ ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಆಗಲೂ ಕಾಂಗ್ರೇಸ್ ಅಭ್ಯರ್ಥಿ ಗೋಣಿ ಮಾಲತೇಶರು ಇವರಿಗೆ ನಿಗಮ ಮಂಡಳಿ ಅಧ್ಯಕ್ಷರಾಗಿ ಅಥವ ವಿಧಾನ ಪರಿಷತ್ ಸದಸ್ಯರಾಗಿ ನೇಮಿಸಿ ಯಡ್ಯೂರಪ್ಪರ ಕ್ಷೇತ್ರದಲ್ಲಿ ಕಾಂಗ್ರೇಸ್ ಪಕ್ಷದ ಸಂಘಟನೆ ಬಲ ಪಡಿಸ ಬೇಕೆಂಬ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರ ಆಸೆ ಈವರೆಗೆ ಈಡೇರಿಲ್ಲ ಈ ಬಾರಿ ಡಿಕೆ ಶಿವಕುಮಾರ್ ಶಿಕಾರಿಪುರದ ಕಾಂಗ್ರೇಸ್ ಕಾರ್ಯಕರ್ತರ ಆಸೆ ಈಡೇರಿಸುತ್ತಾರಾ ಎಂದು ಕಾದು ನೋಡಬೇಕು.
#CongressParty #DKShivakumar #DKSuresh
#shikaripura #shivamogga #thirthahalli
Comments
Post a Comment