ಪ್ರೆಸ್_ಕ್ಲಬ್_ಪ್ರೆಸ್_ಮೀಟ್
ಬೆಂಗಳೂರಿನ ಪ್ರತಿಷ್ಟಿತ ಪ್ರೆಸ್ ಕ್ಲಬ್ ನಲ್ಲಿ ಪ್ರಖ್ಯಾತ ನಟ ಮತ್ತು ಸಾಮಾಜಿಕ ಹೋರಾಟಗಾರ ಪ್ರಕಾಶ್ ರಾಜ್ ಪತ್ರಿಕಾಗೋಷ್ಟಿಯಲ್ಲಿ
ಮಾಧ್ಯಮದವರು ಶಿಸ್ತು ಕಾಪಾಡಿಕೊಳ್ಳದಿರುವುದು ಇಡೀ ಪತ್ರಿಕಾ ವ್ಯವಸ್ಥೆಯ ದೊಡ್ಡ ಲ್ಯಾಪ್ಸ್ ಆಗಿದೆ.
ಅತಿಥಿಗಳು ಪತ್ರಕರ್ತರ ಪ್ರಶ್ನೆಗಳಿಗೆ ಗೌರವ ನೀಡದಿದ್ದರೆ ಅದು ಪತ್ರಿಕಾ ಸ್ವಾತಂತ್ರ್ಯದ ಅವಮಾನ ಅದೇ ರೀತಿ ಪತ್ರಕರ್ತರು ವೃತ್ತಿಪರತೆ ಮರೆತು ವರ್ತಿಸಿದರೆ ಅದು ಮಾಧ್ಯಮ ರಂಗ ತನಗೆ ತಾನೇ ಮಾಡಿಕೊಳ್ಳುವ ಅವಮಾನ.
ಪತ್ರಿಕಾಗೋಷ್ಠಿಯ ಯಶಸ್ಸು ಅಡಗಿರುವುದು ಪಾರದರ್ಶಕತೆಯಲ್ಲಿ,ಸಂಘಟಕರು ಯಾವುದೇ ಮುಚ್ಚುಮರೆಯಿಲ್ಲದೆ ಮಾಹಿತಿ ನೀಡುವುದು ಮತ್ತು ಪತ್ರಕರ್ತರು ಯಾವುದೇ ಪೂರ್ವಾಗ್ರಹವಿಲ್ಲದೆ ವಸ್ತುನಿಷ್ಠವಾಗಿ ಪ್ರಶ್ನೆ ಕೇಳಿದಾಗ ಮಾತ್ರ ಪತ್ರಿಕಾಗೋಷ್ಠಿಯ ನೈಜ ಉದ್ದೇಶ ಸಫಲವಾಗುತ್ತದೆ.
ಹಾಗಾದರೆ ಆ ಪತ್ರಿಕಾಗೋಷ್ಟಿಯಲ್ಲಿ ಬೆಂಗಳೂರು ಫ್ರೆಸ್ ಕ್ಲಬ್ ನ ನಿಯಮ ಉಲ್ಲಂಘನೆ ಆಯಿತಾ...
ಇದರಿಂದ ಬೆಂಗಳೂರಿನ ಪ್ರೆಸ್ ಕ್ಲಬ್ ಈಗ ಕೈಗೊಂಡ ನಿರ್ಧಾರಗಳು ಏನು?...
ಕರ್ನಾಟಕದಲ್ಲಿ ಅಥವಾ ಯಾವುದೇ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿ ನಡೆಸಲು ಮತ್ತು ಅದರಲ್ಲಿ ಭಾಗವಹಿಸಲು ಕೆಲವು ನಿರ್ದಿಷ್ಟ ನಿಯಮಗಳು ಹಾಗೂ ಶಿಷ್ಟಾಚಾರಗಳನ್ನು ಪಾಲಿಸಬೇಕಾಗುತ್ತದೆ.
ಇವುಗಳನ್ನು ಆಯಾ ಪ್ರೆಸ್ ಕ್ಲಬ್ಗಳ ನಿಯಮಾವಳಿ ಮತ್ತು ಪತ್ರಿಕೋದ್ಯಮದ ನೈತಿಕತೆಯ ಆಧಾರದ ಮೇಲೆ ರೂಪಿಸಲಾಗಿರುತ್ತದೆ.
ಪ್ರೆಸ್ ಮೀಟ್ ಮಾಡುವವರು ಪ್ರೆಸ್ ಕ್ಲಬ್ನಲ್ಲಿ ಗೋಷ್ಠಿ ನಡೆಸಲು ಮುಂಚಿತವಾಗಿಯೇ ಅನುಮತಿ ಪಡೆದು, ನಿಗದಿತ ಶುಲ್ಕವನ್ನು ಪಾವತಿಸಿ ಸಭಾಂಗಣವನ್ನು ಕಾಯ್ದಿರಿಸಬೇಕು.
ಪತ್ರಿಕಾಗೋಷ್ಠಿಯ ಉದ್ದೇಶವೇನು ಎಂಬುದನ್ನು ಮೊದಲೇ ತಿಳಿಸಬೇಕು,ಸಮಾಜದಲ್ಲಿ ಶಾಂತಿ ಕದಡುವ, ನ್ಯಾಯಾಲಯದ ನಿಂದನೆಯಾಗುವ ಅಥವಾ ಯಾವುದೇ ಸಮುದಾಯವನ್ನು ಕೆರಳಿಸುವ ವಿಷಯಗಳಾಗಿದ್ದರೆ ಪ್ರೆಸ್ ಕ್ಲಬ್ ಅನುಮತಿ ನಿರಾಕರಿಸಬಹುದು.
ನಿಗದಿತ ಸಮಯಕ್ಕೆ ಸರಿಯಾಗಿ ಗೋಷ್ಠಿ ಆರಂಭಿಸಬೇಕು, ಪತ್ರಕರ್ತರ ಸಮಯ ಅತ್ಯಂತ ಅಮೂಲ್ಯವಾಗಿರುವುದರಿಂದ ವಿಳಂಬ ಮಾಡುವುದು ಸರಿಯಲ್ಲ.
ಆರಂಭದಲ್ಲಿ ತಮ್ಮ ಹೇಳಿಕೆ ಅಥವಾ ವಿಷಯವನ್ನು ಮಂಡಿಸಿದ ನಂತರ ಪತ್ರಕರ್ತರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಕಡ್ಡಾಯವಾಗಿ ಅವಕಾಶ ನೀಡಬೇಕು.
ಪ್ರೆಸ್ ಮೀಟ್ಗೆ ಬರುವ ಪತ್ರಕರ್ತರು ತಮ್ಮ ಮಾಧ್ಯಮ ಸಂಸ್ಥೆಯ ಮಾನ್ಯತೆ ಪಡೆದ ಗುರುತಿನ ಚೀಟಿಯನ್ನು ಹೊಂದಿರಬೇಕು.
ಗೋಷ್ಠಿಯ ಮುಖ್ಯ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಮಾತ್ರ ಕೇಳಬೇಕು,ವೈಯಕ್ತಿಕ ದಾಳಿ ಅಥವಾ ವಿಷಯಾಂತರ ಮಾಡುವ ಪ್ರಶ್ನೆಗಳನ್ನು ಸೌಜನ್ಯದ ದೃಷ್ಟಿಯಿಂದ ತಪ್ಪಿಸಬೇಕು.
ಪ್ರಶ್ನೆ ಕೇಳುವಾಗ ಗೌರವಯುತ ಭಾಷೆಯನ್ನು ಬಳಸಬೇಕು,ಗಲಾಟೆ ಮಾಡುವುದು, ಸಂಘಟಕರೊಂದಿಗೆ ವೈಯಕ್ತಿಕ ವಾಗ್ವಾದಕ್ಕೆ ಇಳಿಯುವುದು ಪತ್ರಿಕೋದ್ಯಮದ ನಿಯಮಗಳಿಗೆ ವಿರುದ್ಧವಾಗಿದೆ.
ಪ್ರೆಸ್ ಕ್ಲಬ್ ಯಾವುದೇ ರಾಜಕೀಯ ಪಕ್ಷ ಅಥವಾ ಸಿದ್ಧಾಂತಕ್ಕೆ ಸೀಮಿತವಾಗಿಲ್ಲ
ನಿಯಮಾನುಸಾರ ಬರುವ ಎಲ್ಲರಿಗೂ,ಅವಕಾಶ ವಂಚಿತರಿಗೆ, ಸಾರ್ವಜನಿಕರಿಗೆ, ರಾಜಕಾರಣಿಗಳಿಗೆ, ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವುದು ಅದರ ಕರ್ತವ್ಯ.
ಪತ್ರಿಕಾಗೋಷ್ಠಿಯ ವೇಳೆ ಯಾರಾದರೂ ಗದ್ದಲ ಎಬ್ಬಿಸಿದರೆ, ನಿಯಮ ಉಲ್ಲಂಘಿಸಿದರೆ ಅಥವಾ ಅಸಭ್ಯವಾಗಿ ವರ್ತಿಸಿದರೆ ಅವರನ್ನು ಹೊರಗೆ ಕಳುಹಿಸುವ ಅಥವಾ ಮುಂದಿನ ದಿನಗಳಲ್ಲಿ ಅವರಿಗೆ ವೇದಿಕೆ ನಿರಾಕರಿಸುವ ಹಕ್ಕು ಮಂಡಳಿಗೆ ಇರುತ್ತದೆ.
ಪ್ರೆಸ್ ಮೀಟ್ ಎಂದರೆ ಕೇವಲ ಒನ್-ವೇ ಭಾಷಣವಲ್ಲ ಅಥವಾ ಜಗಳ ಆಡುವ ಜಾಗವೂ ಅಲ್ಲ
ಅದು ಸಾರ್ವಜನಿಕರಿಗೆ ಉಪಯುಕ್ತವಾಗುವ ಮಾಹಿತಿಯನ್ನು ಹಂಚಿಕೊಳ್ಳುವ ಮತ್ತು ಪ್ರಜಾಪ್ರಭುತ್ವದ ಆಶಯದಂತೆ ಪ್ರಶ್ನೋತ್ತರ ನಡೆಸುವ ಒಂದು ಗೌರವಾನ್ವಿತ ವೇದಿಕೆ.
ನಟ ಪ್ರಕಾಶ್ ರಾಜ್ ಪ್ರೆಸ್ ಮೀಟ್ ಅವಾಂತರದ ನಂತರ ಪ್ರೆಸ್ ಕ್ಲಬ್ ಕೈಗೊಂಡ ಕೆಲವು ನಿರ್ಧಾರಗಳು ಸ್ವಾಗತಾರ್ಹವಾಗಿದೆ.
ಮುಂದಿನ ದಿನಗಳಲ್ಲಿ ವಾರ್ತಾ ಇಲಾಖೆಯ ಮಾನ್ಯತೆ ಪತ್ರ ಅಥವಾ ಅಧಿಕೃತ ದಿನಪತ್ರಿಕೆ/ಟಿವಿ ಚಾನೆಲ್ಗಳ ಗುರುತಿನ ಚೀಟಿ ಇಲ್ಲದವರ ಪ್ರೆಸ್ ಕ್ಲಬ್ ಪ್ರವೇಶವನ್ನು ಸಂಪೂರ್ಣವಾಗಿ ನಿಷೇಧಿಸಲಾಯಿತು.
ಕೇವಲ ವ್ಯೂಸ್ ಮತ್ತು ವಿವಾದ ಸೃಷ್ಟಿಸಲು ಬರುವ ಅನಧಿಕೃತ ಯೂಟ್ಯೂಬ್ ಚಾನೆಲ್ಗಳ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ.
ನಿಯಮ ಮೀರಿ ಗದ್ದಲ ಸೃಷ್ಟಿಸುವ ಅಥವಾ ಅಸಭ್ಯವಾಗಿ ವರ್ತಿಸುವ ಮಾಧ್ಯಮ ಪ್ರತಿನಿಧಿಗಳನ್ನು ಮುಂದಿನ ದಿನಗಳಲ್ಲಿ ಕ್ಲಬ್ನಿಂದ ಅಮಾನತುಗೊಳಿಸುವ ಕಪ್ಪು ಪಟ್ಟಿಗೆ ಸೇರಿಸುವ ನಿರ್ಧಾರ ಕೈಗೊಳ್ಳಲಾಗಿದೆ.
ನಟ ಪ್ರಕಾಶ್ ರಾಜ್ ಪತ್ರಿಕಾಗೋಷ್ಟಿಯಲ್ಲಿ ಎಲ್ಲಾ ಪತ್ರಕರ್ತರೂ ನಿಯಮ ಉಲ್ಲಂಘಿಸಲಿಲ್ಲ ಅಲ್ಲಿ ನೆರೆದಿದ್ದ ಬಹುಪಾಲು ವೃತ್ತಿಪರ ಪತ್ರಕರ್ತರು ನಿಯಮ ಪಾಲಿಸಿಯೇ ಇದ್ದರು ಆದರೆ ಕೆಲವು ನಿರ್ದಿಷ್ಟ ವ್ಯಕ್ತಿಗಳು ಮತ್ತು ಅನಧಿಕೃತ ಯೂಟ್ಯೂಬರ್ಗಳು ಪ್ರೆಸ್ ಕ್ಲಬ್ನ ಶಿಸ್ತು ಹಾಗೂ ಶಿಷ್ಟಾಚಾರದ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದರು ಎಂಬುದು ನಿಜ.
ಟಿಆರ್ಪಿ ಮತ್ತು ಕ್ಲಿಕ್ಬೈಟ್ ಸಂಸ್ಕೃತಿಯು ಮಾಹಿತಿ ಪಡೆಯುವ ನೈಜ ಉದ್ದೇಶಕ್ಕಿಂತ ಹೆಚ್ಚಾಗಿ ವ್ಯಕ್ತಿಯನ್ನು ಕೆರಳಿಸಿ ವಿಡಿಯೋ ವೈರಲ್ ಮಾಡಿಕೊಳ್ಳುವ ಪ್ರವೃತ್ತಿ ಇತ್ತೀಚೆಗೆ ಹೆಚ್ಚಾಗಿದೆ.
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯ ಎಂಬುದು ಸಂವಿಧಾನ ನೀಡಿರುವ ಅತ್ಯಂತ ಪವಿತ್ರವಾದ ಹಕ್ಕು ಆದರೆ ಆ ಸ್ವಾತಂತ್ರ್ಯದ ಒಳಗೆ ಜವಾಬ್ದಾರಿ ಮತ್ತು ನೈತಿಕತೆ ಅಡಗಿದೆ.
ಪತ್ರಿಕಾಗೋಷ್ಠಿ ಆಯೋಜಿಸುವುದರ ಹಿಂದೆ ಒಂದು ನಿರ್ದಿಷ್ಟ ಮತ್ತು ಸ್ಪಷ್ಟವಾದ ಉದ್ದೇಶವಿರುತ್ತದೆ ಇದು ಕೇವಲ ಒಬ್ಬ ವ್ಯಕ್ತಿ ಅಥವಾ ಸಂಸ್ಥೆ ಮಾಧ್ಯಮಗಳ ಮುಂದೆ ಬಂದು ಮಾತನಾಡುವುದಲ್ಲ ಬದಲಿಗೆ ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕರಿಗೆ ಮಹತ್ವದ ಮಾಹಿತಿಯನ್ನು ತಲುಪಿಸುವ ಒಂದು ಪ್ರಮುಖ ಸಂವಹನ ಮಾಧ್ಯಮವಾಗಿದೆ.
ಪತ್ರಿಕಾಗೋಷ್ಠಿಯ ಮುಖ್ಯ ಉದ್ದೇಶಗಳು ಸಾರ್ವಜನಿಕರಿಗೆ ಮಾಹಿತಿ ತಲುಪಿಸುವುದು,
ಮಾಧ್ಯಮಗಳ ಮೂಲಕ ಈ ಮಾಹಿತಿ ಜನಸಾಮಾನ್ಯರನ್ನು ಅತ್ಯಂತ ವೇಗವಾಗಿ ತಲುಪುತ್ತದೆ.
ಆರೋಪಗಳಿಗೆ ಸ್ಪಷ್ಟನೆ ಅಥವಾ ಪ್ರತ್ಯುತ್ತರ ನೀಡುವುದು
ವ್ಯಕ್ತಿ, ರಾಜಕಾರಣಿ, ಸೆಲೆಬ್ರಿಟಿ ಅಥವಾ ಸಂಸ್ಥೆಯೊಂದರ ಮೇಲೆ ಗಂಭೀರ ಆರೋಪಗಳು, ವಿವಾದಗಳು ಅಥವಾ ಅಪಪ್ರಚಾರಗಳು ನಡೆದಾಗ, ತಮ್ಮ ಮೇಲಿನ ಆರೋಪಗಳಿಗೆ ಕಾನೂನಾತ್ಮಕ ಅಥವಾ ನೈತಿಕ ಸ್ಪಷ್ಟನೆ ನೀಡಲು ಪತ್ರಿಕಾಗೋಷ್ಠಿ ನಡೆಸಲಾಗುತ್ತದೆ.
ತಪ್ಪು ಕಲ್ಪನೆಗಳನ್ನು ದೂರ ಮಾಡಿ, ತಮ್ಮ ಕಡೆಯ ಸತ್ಯವನ್ನು ಜನರ ಮುಂದೆ ಇಡುವುದು ಇದರ ಉದ್ದೇಶವಾಗಿರುತ್ತದೆ.
ಪತ್ರಿಕಾಗೋಷ್ಠಿಯ ಅತ್ಯಂತ ಪವಿತ್ರವಾದ ಉದ್ದೇಶವೆಂದರೆ ಪ್ರಶ್ನೋತ್ತರ ಕೇವಲ ಪ್ರಕಟಣೆ ನೀಡಿ ಹೋಗದೆ, ಪತ್ರಕರ್ತರು ಕೇಳುವ ಕಠಿಣ ಮತ್ತು ತಾಂತ್ರಿಕ ಪ್ರಶ್ನೆಗಳಿಗೆ ಮುಖಾಮುಖಿಯಾಗಿ ಉತ್ತರಿಸುವ ಮೂಲಕ ಸಾರ್ವಜನಿಕ ವ್ಯಕ್ತಿಗಳು ತಮ್ಮ ಜವಾಬ್ದಾರಿಯನ್ನು ಪ್ರದರ್ಶಿಸಬೇಕಾಗುತ್ತದೆ.
ತುರ್ತು ಸಂದರ್ಭಗಳ
ನೈಸರ್ಗಿಕ ವಿಕೋಪಗಳು, ಅಪಘಾತಗಳು, ಕಾನೂನು ಸುವ್ಯವಸ್ಥೆಯ ಸಮಸ್ಯೆಗಳು ಅಥವಾ ತುರ್ತು ಪರಿಸ್ಥಿತಿಗಳು ಎದುರಾದಾಗ ಸರ್ಕಾರ, ಪೊಲೀಸ್ ಇಲಾಖೆ ಅಥವಾ ಸಂಬಂಧಪಟ್ಟ ಅಧಿಕಾರಿಗಳು ಪ್ರಸ್ತುತ ಸ್ಥಿತಿಗತಿ ಮತ್ತು ಕೈಗೊಂಡಿರುವ ಕ್ರಮಗಳ ಬಗ್ಗೆ ಜನರಿಗೆ ಧೈರ್ಯ ತುಂಬಲು ಮತ್ತು ಗೊಂದಲಗಳನ್ನು ನಿವಾರಿಸಲು ಪ್ರೆಸ್ ಮೀಟ್ ಮಾಡುತ್ತಾರೆ.
ಪ್ರಕಾಶ್ ರಾಜ್ ಅವರ ಪತ್ರಿಕಾಗೋಷ್ಠಿಗಳಲ್ಲಿ ವಿಶೇಷವಾಗಿ ಇತ್ತೀಚೆಗೆ ಬೆಂಗಳೂರು ಪ್ರೆಸ್ ಕ್ಲಬ್ನಲ್ಲಿ ಧರ್ಮಸ್ಥಳದ ವಿಷಯ ಅಥವಾ ರಾಜಕೀಯ ವಿವಾದಗಳ ಕುರಿತು ನಡೆದ ಪ್ರೆಸ್ ಮೀಟ್ಗಳಲ್ಲಿ ಕಂಡುಬಂದ ಪ್ರಮುಖ ಲೋಪದೋಷಗಳು ಅಥವಾ ಸಂವಹನದ ವೈಫಲ್ಯಗಳನ್ನು ಎರಡು ಕಡೆಯಿಂದಲೂ ನಡೆದಿದೆ.
ಪ್ರಕಾಶ್ ರಾಜ್ ಸಂಘಟಕರ ಕಡೆಯಿಂದಾದ ಲ್ಯಾಪ್ಸ್ಗಳು
ಆಮಂತ್ರಣದ ಗೊಂದಲ ಇತ್ತೀಚಿನ ಪ್ರೆಸ್ ಮೀಟ್ ಒಂದಕ್ಕೂ ಮುನ್ನ ಪ್ರಕಾಶ್ ರಾಜ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಾಕಿದ್ದ ಪೋಸ್ಟ್ ಮತ್ತು ಆಹ್ವಾನದ ಶೈಲಿ ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಪತ್ರಿಕಾಗೋಷ್ಠಿಗೆ ಬರುವಂತೆ ನೇರವಾಗಿ ಆಹ್ವಾನಿಸುವ ಬದಲು ತಮ್ಮನ್ನು ಟೀಕಿಸುವವರನ್ನು ಗುರಿಯಾಗಿಸಿ ಪೋಸ್ಟ್ ಮಾಡಿದ್ದು ಮಾಧ್ಯಮದವರಲ್ಲಿ ಅಸಮಾಧಾನ ಮೂಡಿಸಿತ್ತು.
ನಂತರ ಅವರು ಪ್ರೆಸ್ ಮೀಟ್ನಲ್ಲೇ ಇದಕ್ಕೆ ಸ್ಪಷ್ಟನೆ ನೀಡಬೇಕಾಗಿ ಬಂತು
ಪ್ರಕಾಶ್ ರಾಜ್ ಅವರು ಪ್ರಬುದ್ಧ ನಟ ಮತ್ತು ಸಾಮಾಜಿಕ ಹೋರಾಟಗಾರರಾಗಿದ್ದರೂ ಕೆಲವು ಕಠಿಣ ಅಥವಾ ಪೂರ್ವಾಗ್ರಹ ಪೀಡಿತ ಪ್ರಶ್ನೆಗಳು ಎದುರಾದಾಗ ತಕ್ಷಣವೇ ಸಿಟ್ಟಿಗೆ ಏಳುವುದು, ಏಕವಚನ ಬಳಸುವುದು ಅಥವಾ ಪತ್ರಕರ್ತರನ್ನು ಅಣಕಿಸುವಂತೆ ವರ್ತಿಸುವುದು ಕಂಡುಬಂದಿದೆ.
ಕೆಲವು ಗಂಭೀರ ಆರೋಪಗಳು ಅಥವಾ ಲಿಖಿತ ದೂರುಗಳ ಬಗ್ಗೆ ಪತ್ರಕರ್ತರು ತಾಂತ್ರಿಕ ಪ್ರಶ್ನೆಗಳನ್ನು ಕೇಳಿದಾಗ ಅದಕ್ಕೆ ಕಾನೂನಾತ್ಮಕವಾಗಿ ನೇರ ಉತ್ತರ ಕೊಡುವ ಬದಲು ಸಿದ್ಧಾಂತದ ಮಾತುಗಳನ್ನಾಡಿ ಅಥವಾ ವಿಷಯಾಂತರ ಮಾಡಿ ನುಣುಚಿಕೊಳ್ಳಲು ಯತ್ನಿಸುತ್ತಾರೆ ಎಂಬುದು ಅವರ ಮೇಲಿರುವ ದೊಡ್ಡ ವಿಮರ್ಶೆ.
ಬೆಂಗಳೂರು ಪ್ರೆಸ್ ಕ್ಲಬ್ ನಿರ್ವಹಣೆ ಅತಿ ದೊಡ್ಡ ಲೋಪವಾಗಿತ್ತು ಪ್ರಕಾಶ್ ರಾಜ್ ಅವರಂತಹ ಹೈ-ಪ್ರೊಫೈಲ್ ವ್ಯಕ್ತಿಗಳು ಬರುವಾಗ ಕೇವಲ ವಾರ್ತಾ ಇಲಾಖೆಯ ಮಾನ್ಯತೆ ಪಡೆದ ಪತ್ರಕರ್ತರನ್ನಷ್ಟೇ ಬಿಡಬೇಕಿತ್ತು ಆದರೆ ಯಾವುದೇ ಅಧಿಕೃತ ಐಡಿ ಇಲ್ಲದ ಯೂಟ್ಯೂಬರ್ಗಳು ಮತ್ತು ಸೋಶಿಯಲ್ ಮೀಡಿಯಾ ಪೇಜ್ಗಳ ಪ್ರತಿನಿಧಿಗಳು ಒಳಗೆ ನುಗ್ಗಲು ಬಿಟ್ಟಿದ್ದು ಪ್ರಮುಖ ಲ್ಯಾಪ್ಸ್.
ಪ್ರಶ್ನೆ ಕೇಳುವುದು ಪತ್ರಕರ್ತರ ಹಕ್ಕು ಆದರೆ ಪ್ರಕಾಶ್ ರಾಜ್ ಪ್ರೆಸ್ ಮೀಟ್ನಲ್ಲಿ ಕೆಲವು ಮಾಧ್ಯಮದವರು ತಾವೇ ನ್ಯಾಯಾಧೀಶರಂತೆ ವರ್ತಿಸಿ ಅವರು ಉತ್ತರಿಸುವ ಮುನ್ನವೇ ಮಧ್ಯಪ್ರವೇಶಿಸಿ ಕೂಗಾಡುವುದು, ಮೈಕ್ ಕಸಿಯಲು ಯತ್ನಿಸುವುದು ಮತ್ತು ಒಟ್ಟಿಗೇ ಕಿರುಚಾಡಿ ಗದ್ದಲದ ವಾತಾವರಣ ನಿರ್ಮಿಸಿದ್ದು ಪತ್ರಿಕೋದ್ಯಮದ ಶಿಷ್ಟಾಚಾರದ ಮಿತಿ ಮೀರಿದ ನಡವಳಿಕೆಯಾಗಿತ್ತು.
ಪ್ರಕಾಶ್ ರಾಜ್ ಅವರನ್ನು ಹೇಗೆಯಾದರೂ ಸಿಲುಕಿಸಬೇಕು ಅಥವಾ ಅವರನ್ನು ಕೆರಳಿಸಿ ವಿಡಿಯೋ ಕ್ಲಿಪ್' ವೈರಲ್ ಮಾಡಬೇಕು ಎಂಬ ಉದ್ದೇಶದಿಂದಲೇ ಕೆಲವು ಪ್ರತಿನಿಧಿಗಳು ವೈಯಕ್ತಿಕ ದಾಳಿ ಮಾಡುವಂತಹ ಪ್ರಶ್ನೆಗಳನ್ನು ಕೇಳಿದ್ದು ಮಾಧ್ಯಮದ ಕಡೆಯಿಂದಾದ ವೃತ್ತಿಪರ ಲೋಪ.
ಈ ಸೂಕ್ಷ್ಮ ವಿಷಯದಲ್ಲಿ ನಿಮ್ಮ ವೈಯಕ್ತಿಕ ಅನಿಸಿಕೆ ಏನು?... ಮಾಧ್ಯಮಗಳು ತಮ್ಮ ಮಿತಿಯನ್ನು ಮೀರುತ್ತಿವೆಯೇ ಅಥವಾ ಅತಿಥಿಗಳು ಪ್ರಶ್ನೆಗಳನ್ನು ಎದುರಿಸಲು ಹಿಂಜರಿಯುತ್ತಿದ್ದಾರೆಯೇ?...
#bangalore #pressclub #pressmeet #prakashraj #acter #activist #darmasthala #highcourt #chinnia
Comments
Post a Comment