ನಾಗತಿಹಳ್ಳಿ_ಚಂದ್ರಶೇಖರ್_ಸಿನಿಮಾದಲ್ಲಿ_ನನ್ನ_ಬಸ್ಸು.
ಅವರ ನಿರ್ಧೇಶನದ ಮೊದಲ ಸಿನಿಮಾ #ಉಂಡೂ_ಹೋದ_ಕೊಂಡೂ_ಹೋದ_ಸಿನಿಮಾದಲ್ಲಿ ಬೆಳ್ಳೂರು - ರಿಪ್ಪನಪೇಟೆ - ಆನಂದಪುರಂ- ಸಾಗರ ಸಂಚಾರದ ನನ್ನ ಗ್ರಾಮಾಂತರ ಸಾರಿಗೆ ಬಸ್ಸು ಪ್ರಶಾಂತ್ ಅವರ ಸಿನಿಮಾದಲ್ಲಿ #ರಾಜದಾನಿ_ಎಕ್ಸ್_ಪ್ರೆಸ್ ಆಗಿದೆ.
ಎಷ್ಟೋ ವರ್ಷದ ನಂತರ ಚಲನ ಚಿತ್ರ ನಟ ದೊಡ್ಡಣ್ಣ ಜೊತೆ
ಬೆಂಗಳೂರು ಕಾನಿಷ್ಕಾ ಹೋಟೆಲಲ್ಲಿ ಬೇಟಿ ಆದ ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್ ಜೊತೆ ಪುನಃ ಈ ಘಟನೆ ನೆನಪಿಸಿಕೊಂಡ ಸವಿನೆನಪುಗಳು ಇಲ್ಲದೆ ಓದಿ.
90 ರ ದಶಕದಲ್ಲಿ #ರಿಪ್ಪನಪೇಟೆಯ ಮೆಡಿಕಲ್ ಶಾಪ್ ಮಾಲಿಕರಾದ #ಸ್ವಾಮಿಯವರು ಆ ಕಾಲದಲ್ಲಿ ನಾಗತೀಹಳ್ಳಿ ಚOದ್ರಶೇಖರ್ ನಿದೇ೯ಶನದಲ್ಲಿ #ಅನಂತನಾಗ್ #ತಾರಾ ಮುಂತಾದ ಖ್ಯಾತ ಚಿತ್ರ ನಟರನ್ನ ಹಾಕಿ ಕೊ೦ಡು ''ಉ೦ಡೂ ಹೋದ ಕೊಂಡೂ ಹೋದ " ಎಂಬ ಕಾಮಿಡಿ ಸಿನಿಮಾ ನಿಮಾ೯ಣ ಮಾಡಿದ್ದರು.
ಇದು ಸಣ್ಣ ಸಾಹಸವಲ್ಲ!... ಚಿತ್ರಕಥೆ ನಾಗತಿ ಅವರದ್ದೇ ಮು೦ದೆ ಈ ಸಿನಿಮಾ ಪ್ರಸಿದ್ಧ ಚಿತ್ರ ಆಗಿ ನಾಗತಿಹಳ್ಳಿಯವರಿಗೆ ಉತ್ತಮ ಅಡಿಪಾಯ ಆಯಿತು.
ಈ ಸಿನೆಮಾ ಚಿತ್ರಿಕರಣ ಸ್ವಾಮಿಯವರು ತಮ್ಮ ಊರು ರಿಪ್ಪನಪೇಟೆಯ ಸುತ್ತ ಮುತ್ತಾ ಚಿತ್ರಿಕರಣ ಮಾಡಿದ್ದರು.
ಆಗ ನನ್ನ ಪ್ರಶಾ೦ತ್ ಹೆಸರಿನ ಗ್ರಾಮಾಂತರ ಸಾರಿಗೆ ಬಸ್ಸು ರಿಪ್ಪನ್ ಪೇಟೆ ಸಮೀಪದ ಬೆಳ್ಳೂರಿನಿಂದ ಸಾಗರಕ್ಕೆ ಓಡುತ್ತಿತ್ತು ಈ ಗ್ರಾಮಾಂತರ ಸಾರಿಗೆ ಕಲ್ಪನೆ ಆಗಿನ ಜಿಲ್ಲಾಧಿಕಾರಿ ವಿಜಯ ಕುಮಾರ್ ಕನಸಾಗಿತ್ತು.
ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿ ನನ್ನ ಅವರೇ ಆಯ್ಕೆ ಮಾಡಿದ್ದರು ಅದರ ಉದ್ಘಾಟನೆ ಶಿವಮೊಗ್ಗದ ನೆಹರೂ ಸ್ಟೇಡಿಯoನಲ್ಲಿ ಆಗಿನ ಮುಖ್ಯಮಂತ್ರಿ #ವಿರೇ೦ದ್ರಪಾಟೀಲರಿಂದ ನೆರವೇರಿತ್ತು.
ಅವತ್ತು ಶಿವಮೊಗ್ಗದ ಇಡೀ ನೆಹರೂ ಸ್ಟೇಡಿಯO ಹಸಿರು ಬಣ್ಣದ ಗ್ರಾಮಾoತರ ಸಾರಿಗೆಯ ನೂರಾರು ಬಸ್ಸುಗಳಿಂದ ಕಂಗೊಳಿಸುತ್ತಿತ್ತು.
ಮುಖ್ಯಮಂತ್ರಿಗಳಾದ ವಿರೇಂದ್ರ ಪಾಟೀಲರು ಉಪಸ್ಥಿತರಿದ್ದ ಆ ಸಭೆಯಲ್ಲಿ ಪ್ರಸ್ತಾವನಾ ಭಾಷಣ ಶಿವಮೊಗ್ಗ ಜಿಲ್ಲಾ ಗ್ರಾಮಾಂತರ ಸಾರಿಗೆ ಬಸ್ ಮಾಲಿಕರ ಸಂಘದ ಅಧ್ಯಕ್ಷನಾಗಿದ್ದ ನನ್ನದಾಗಿತ್ತು.
ಉಂಡೂ ಹೋದ ಕೊಂಡೂ ಹೋದ ಸಿನಿಮಾ ನಿರ್ಮಾಪಕ ರಿಪ್ಪನ್ ಪೇಟೆ ಸ್ವಾಮಿಯವರು ತಮ್ಮ ಸಿನಿಮಾದಲ್ಲಿ ನನ್ನ ಬಸ್ಸನ್ನ ಬಳಸಿಕೊಂಡಿದ್ದರು ಆ ಸಿನಿಮಾದಲ್ಲಿ ನನ್ನ ಬಸ್ಸು # ರಾಜಧಾನಿ_ಎಕ್ಸ್_ಪ್ರೆಸ್ ಆಗಿತ್ತು.
ಇದಾಗಿ ಸುಮಾರು ವಷ೯ದ ನಂತರ ಒಮ್ಮೆ ಬೆಂಗಳೂರಲ್ಲಿ #ಕಾನಿಷ್ಕಾ_ಹೋಟೆಲ್ ನಲ್ಲಿ ಖ್ಯಾತ ಚಿತ್ರ ನಟ #ದೊಡ್ಡಣ್ಣ ನಾಗತೀಹಳ್ಳಿ ಚಂದ್ರಶೇಖರ್ ಗೆ ಪರಿಚಯ ಮಾಡಿ ಕೊಟ್ಟಾಗ ನಾನು ಅವರ ಮೊದಲ ಸಿನಿಮಾದ ನನ್ನ ಬಸ್ಸಿನ ನೆನಪು ಮಾಡಿದೆ.
ಇದರಿಂದ ತಕ್ಷಣ ನಾಗತೀಹಳ್ಳಿಯವರು ನನ್ನ ಕೈ ಒತ್ತಿ ಹಿಡಿದು "ನಿಮ್ಮ ಬಸ್ ಮೂಲಕ ನನ್ನ ಚಿತ್ರರಂಗದ ಪ್ರಯಾಣದ ಆರಂಭವಾಯಿತು" ಅಂತ ಹೇಳಿದರು.
ನಂತರ ಆ ಸಿನಿಮಾ ರಿಲೀಸ್ ತನಕ ಅನುಭವಿಸಿದ ಯಾತನೆ ನೆನಪಿಸಿಕೊಂಡರು.
ಪ್ರಶಾಂತ್ ಹೆಸರಿನ ನನ್ನ ಬಸ್ಸು ನಾಗತಿಹಳ್ಳಿ ಅವರ ಉಂಡೂ ಹೋದ ಕೊಂಡೂ ಹೋದ ಸಿನಿಮಾದಲ್ಲಿ ರಾಜದಾನಿ ಎಕ್ಸ್ ಪ್ರೆಸ್ ಈ ಬಸ್ಸಿನಲ್ಲೇ ಕೌ ಇನ್ಸ್ಪೆಕ್ಟರ್ ಅನಂತನಾಗ್ ಆ ಹಳ್ಳಿಗೆ ಬಂದು ಇಳಿಯುವುದು.
ಈ ಬಸ್ಸು ಕೇರಳದ ಕಾಸರಗೋಡಿನಿಂದ ತಂದ ನೆನಪಿನ ಕಥೆ ಕೂಡ ನೆನಪಾಯಿತು ಅದು ಇನ್ನೊ೦ದು ದಿನ ಬರೆಯಬೇಕು.
#bus #transportationservices #cinema
#director #nagathihalli #chandrashekar
#ananthanag #tara #unduhodakonduhoda
#Doddanna #Ripponpete
Comments
Post a Comment