Skip to main content

4048.ಲೋಕರಾಜ_ಜೈನ್_ಸಾಳ್ವಕುಲ_ನಗಿರೆಸುತ.#ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ_ಸಿನಿಮಾ_ಚಿತ್ರಕಥಾ_ಲೇಖಕರು.


ಲೋಕರಾಜ_ಜೈನ್_ಸಾಳ್ವಕುಲ_ನಗಿರೆಸುತ.

#ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ_ಸಿನಿಮಾ_ಚಿತ್ರಕಥಾ_ಲೇಖಕರು.

  ನಾಡಿನ ಪ್ರಖ್ಯಾತ ಶ್ರೀಮತಿ #ನಂದಿನಿ ಮತ್ತು #ಆಕರ್ಷ ಅವರ #ಡಿಜಿಟಲ್_ಮಾಧ್ಯಮದಲ್ಲಿ  ಪ್ರಸಾರವಾದ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಎಪಿಸೋಡುಗಳನ್ನ ಯಶಸ್ವಿಯಾಗಿ ನಡೆಸಿಕೊಟ್ಟವರು ಲೋಕರಾಜ್ ಜೈನ್.

   #ರಾಜೇಂದ್ರ_ಸಿಂಗ್_ಬಾಬು ಅವರ ನಿರ್ದೇಶನದಲ್ಲಿ ಗೇರುಸೊಪ್ಪೆಯ ಜೈನ ರಾಣಿ ಚೆನ್ನ ಬೈರಾದೇವಿಯ ಸಿನಿಮಾ ನಿರ್ಮಾಣದ ಚಿತ್ರಿಕರಣ ಪೂರ್ವದ ಕೆಲಸಗಳು ನಡೆಯುತ್ತಿದೆ.

   ದರ್ಮಸ್ಥಳದ ಧರ್ಮಾಧಿಕಾರಿಗಳಾದ #ಡಾ_ವಿರೇಂದ್ರಹೆಗ್ಗಡೆ ಅರ್ಪಿಸುವ #ಮಹಾಮಂಡಲೇಶ್ವರಿ_ಚೆನ್ನಬೈರಾದೇವಿ ಸಿನಿಮಾದ ಚಿತ್ರಕಥೆ ದಿವಂಗತ ನಾಡೋಜ ಕಮಲ ಹಂಪನಾ, ನಾಡೋಜ ನಾಗರಾಜ ಹಂಪನಾ ಮತ್ತು ಸಾಗರದ ಲೋಕರಾಜ್ ಜೈನ್ ಜಂಟಿಯಾಗಿ ಬರೆದಿದ್ದಾರೆ.

 ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಜೋಗ್ ಜಲಪಾತದ #ಹೆನ್ನೆ ಊರಿನ ಲೋಕರಾಜ್ ಜೈನ್ 
ವೃತ್ತಿಯಲ್ಲಿ ಉಪನ್ಯಾಸಕರು ಪ್ರವೃತ್ತಿಯಲ್ಲಿ ಇತಿಹಾಸ ಸಂಶೋದಕರು.

  ಇವರು ರಾಣಿ ಚೆನ್ನ ಬೈರಾದೇವಿ ವಂಶಸ್ಥರೂ ಹೌದು, ಗೇರುಸೊಪ್ಪೆಯ ಸಾಳ್ವ ವಂಶದ ಇತಿಹಾಸದ ಸಂಶೋಧನೆ ಕೆಲಸದಲ್ಲಿ ಅನೇಕ ದಶಕದಿಂದ ಯಾವುದೇ ಪ್ರತಿಪಲಾಪೇಕ್ಷೆ ಇಲ್ಲದೆ ತೊಡಗಿಕೊಂಡವರು.

  ನನ್ನ ಇವರ ಪರಿಚಯ ಆಗಿದ್ದು ತುಮರಿ ಸಮೀಪದ #ಹಾಳಸಸಿಯ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ #ಚಂದ್ರಕುಮಾರರಿಂದ.

  ಇವರ ಬಗ್ಗೆ ಪೇಸ್ ಬುಕ್ ನಲ್ಲಿ ಪರಿಚಯ ಲೇಖನ ಆಗ ಬರೆದಿದ್ದೆ ನಂತರ ಶಿವಮೊಗ್ಗ ಜಿಲ್ಲೆಯ ಇತಿಹಾಸದ ಬಗ್ಗೆ ಬೆಳಕು ಚೆಲ್ಲುವ ಕೆಲಸಕ್ಕಾಗಿ ಕನ್ನಡದ ಖ್ಯಾತ ಯೂ ಟ್ಯಾಬ್ ಚಾನಲ್ #ಡಿಜಿಟಲ್_ಮಾಧ್ಯಮದ  ಶ್ರೀಮತಿ ನಂದಿನಿ ಮತ್ತು ಆಕರ್ಷ ನನ್ನ ಅತಿಥಿ ಆಗಿ ಬಂದಾಗ ಅವರಿಗೆ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಇತಿಹಾಸ ಹೇಳುವ ಮಾರ್ಗದರ್ಶಿ ಆಗಿ ಲೋಕರಾಜ್ ಜೈನರನ್ನ ಪರಿಚಯಿಸಿದ್ದೆ.

  ನಾಚಿಕೆ ಸ್ವಭಾವದ, ಪ್ರಚಾರ ಪ್ರಿಯರಲ್ಲದ ಲೋಕರಾಜ್ ಪ್ರಾರಂಭದಲ್ಲಿ ಒಪ್ಪಲಿಲ್ಲ ನನ್ನ ಒತ್ತಾಯಕ್ಕೆ ಒಪ್ಪಿದರು ನಂತರ ಈ ಎಲ್ಲಾ ಎಪಿಸೋಡುಗಳು ಲೋಕ ವಿಖ್ಯಾತಿಯಾಗಿ ಪ್ರತಿ ಎಪಿಸೋಡು ಕೋಟಿಗಿಂತ ಹೆಚ್ಚು ವೀಕ್ಷಣೆ ಆಗಿತ್ತು.

  ಇವರ ಈ ಕಾರ್ಯಕ್ರಮದ ವೀಕ್ಷಕ ವಿವರಣೆ ನೋಡಿದ ಚಿತ್ರ ನಟ #ದೊಡ್ಡಣ್ಣ ನನಗೆ ಫೋನ್ ಮಾಡಿ ಇವರನ್ನ ಹೊಗಳಿದ್ದರು ಮತ್ತು ಲೋಕರಾಜ್ ಜೈನರ ಫೋನ್ ನಂಬರ್ ಪಡೆದು ಅವರಿಗೆ ತಮ್ಮ ಅಭಿನಂದನೆ ತಿಳಿಸಿದ್ದರು.

  ಅಷ್ಟು ಚೆನ್ನಾಗಿ 400 ವರ್ಷಗಳ ಹಿಂದೆ ಆಡಳಿತ ನಡೆಸಿದ ರಾಣಿ ಚೆನ್ನ ಬೈರಾದೇವಿ ಇತಿಹಾಸವನ್ನ ಗೇರುಸೊಪ್ಪೆಯ ವಂಶಸ್ಥರ ಕೋಟೆ, ಕೊತ್ತಳ, ಅವರು ನಿರ್ಮಿಸಿದ ಬಸದಿ - ದೇವಸ್ಥಾನ, ಕಾಳು ಮೆಣಸಿನ ಸಂಸ್ಕರಣದ ಬಾವಿಗಳು, ಕುಚಲಕ್ಕಿಕಣಗಳು, ಶರಾವತಿ ನದಿಯ ದಂಡೆಯಲ್ಲಿ ಆ ಕಾಲದಲ್ಲಿ ದೊಣಿಗೆ ಕಾಳು ಮೆಣಸಿನ ಚೀಲಗಳನ್ನ ತುಂಬಲು ನಿರ್ಮಿಸಿದ ಕಟ್ಟೆಗಳು, ಅವರ ಸಂಸ್ಥಾನದಲ್ಲಿ ಎತ್ತಿನ ಮೇಲೆ ಸಾಮಗ್ರಿ ಸಾಗಾಟ ಮಾಡುತ್ತಿದ್ದ ಹೇರು ಮಾರ್ಗಗಳಲ್ಲಿ ಮತ್ತು ನಿಧಿ ಚೋರರು ಬುಡ ಮೇಲು ಮಾಡಿದ ಅವಶೇಷದ ಸ್ಥಳಗಳಿರುವ ಅತ್ಯಂತ ದುರ್ಗಮ ದಟ್ಟ ಅರಣ್ಯ ಪ್ರದೇಶಗಳಿಗೆ ಡಿಜಿಟಲ್ ಮಾಧ್ಯಮದ ಚಾನಲ್ ನವರನ್ನ ಕರೆದೊಯ್ದು ರಾಣಿ ಚೆನ್ನ ಬೈರಾದೇವಿ ಕಥೆ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಿದವರು ಈ ಲೋಕರಾಜ್ ಜೈನ್.

   ಈಗ ಇವರಿಗೆ ಸಿನಿಮಾ ಜಗತ್ತಿಗೆ ಚೆನ್ನ ಬೈರಾದೇವಿ ಚಿತ್ರಕಥೆ ಬರೆಯುವ ಅವಕಾಶ ನಾಡೋಜ ನಾಗರಾಜ ಹಂಪನಾರ ಜೊತೆ ಸಿಕ್ಕಿರುವುದು ವಿಶೇಷ ಮತ್ತು ನಮಗೆಲ್ಲ ಹೆಮ್ಮೆಯ ವಿಷಯ ಕೂಡ.

  ಈ ಸಿನಿಮಾ ಯಶಸ್ವಿ ಆಗಲಿ ನಮ್ಮ ಸಾಗರ ತಾಲೂಕಿನ ಇತಿಹಾಸ ಸಂಶೋಧಕ ಲೋಕರಾಜ ಜೈನರಿಗೆ ಖ್ಯಾತಿ ಮತ್ತು ಕೀರ್ತಿಗಳು ದೊರೆಯಲಿ ಎಂದು ಹಾರೈಸುತ್ತೇನೆ.

#darmasthala #veerendraheggade
#lokarajjain #gerusoppe #rajendrasingbabu #kannadacinema #chennabyradevi #digitalmadyama #nandini

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...