ಹೀಗೂ ಉಂಟೇ... ಇಷ್ಟು ಕಡಿಮೆ ಬೆಲೆಯಲ್ಲಿ ಅಡಿಕೆ ಸಸಿ ಸಿಗುತ್ತಾ? ...
#ಮಲೆನಾಡಿನಲ್ಲಿ_ಕೇವಲ_20_ರೂಪಾಯಿಗೆ_ಅಡಿಕೆ_ಸಸಿ_ಲಭ್ಯವಿದೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೋಡೂರು ಸಮೀಪದ ಶಾಂತಪುರದಲ್ಲಿ ( ರಿಪ್ಪನಪೇಟೆ ಹೊಸನಗರ ಮುಖ್ಯ ರಸ್ತೆಯಲ್ಲಿ) #ಮಂಜುಶ್ರೀ_ನರ್ಸರಿ ಇದೆ.
ಇದು ನನ್ನ ಆಪ್ತ ಗೆಳೆಯರಾದ ಮಂಜುನಾಥ ಭಟ್ಟರದ್ದು ಇವತ್ತು ಅವರು ತಮ್ಮ ಪೇಸ್ ಬುಕ್ ಪೋಸ್ಟ್ ನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ ಅವರಲ್ಲಿ #ಅಡಿಕೆ_ಸಸಿಗಳು_ಲಭ್ಯವಿದೆ_ಬೆಲೆ_20ರೂಪಾಯಿ.
ಇದು ಕೇಳಿದವರು ಆಶ್ಚರ್ಯ ಪಡುತ್ತಾರೆ ಯಾಕೆಂದರೆ ಇತ್ತೀಚಿನ ದಿನಗಳಲ್ಲಿ ಅಡಿಕೆ ಕೃಷಿ ಹೆಚ್ಚಾಗುತ್ತಿದೆ ಇದರಿಂದ ಅಡಿಕೆ ಸಸಿಗಳಿಗೆ ವಿಪರೀತ ಬೇಡಿಕೆ ಇದೆ ಆದರೆ ಅಡಿಕೆ ಸಸಿ ಬೆಲೆ ಒಂದಕ್ಕೆ 100 ರಿಂದ 150 ರ ತನಕ ಆಗಿದೆ.
ಹಾಗಂತ ಇವರು ನರ್ಸರಿ ಕ್ಷೇತ್ರಕ್ಕೆ ಹೊಸಬರಲ್ಲ 1985 ರಿಂದ ಇವರು ಈ ಕ್ಷೇತ್ರದಲ್ಲಿದ್ದಾರೆ ಸುಮಾರು 40 ವರ್ಷದ ಅನುಭವ ಇವರದ್ದು ಇವರ ನರ್ಸರಿಯ ಯಾವುದೇ ಸಸಿ ಕೂಡ ಉತ್ಕೃಷ್ಟ ದರ್ಜೆಯದ್ದೇ ಆಗಿದೆ.
#ಜೇನಿಮಂಜುನಾಥಭಟ್ಟರ ಜೀವನ ಶೈಲಿಯೇ ಬೇರೆ ಅವರಿಗೆ ಆಸೆ ಇಲ್ಲವೇ ಇಲ್ಲ ಅಲ್ಲಿ ದುರಾಸೆ ಎಲ್ಲಿ ಬರಬೇಕು? ... ಕಳೆದ ವರ್ಷ ಇವರಲ್ಲಿ ಅಡಿಕೆ ಸಸಿ ಬೆಲೆ ಕೇವಲ 12 ಇತ್ತು.
ಅವರ ಕಂಡೀಷನ್ ಏನೆಂದರೆ ನೇರವಾಗಿ ರೈತರಿಗೆ ಮಾತ್ರ ಅಡಿಕೆ ಸಸಿ ಮಾರಾಟ ಮಾಡುತ್ತಾರೆ ದಲ್ಲಾಳಿಗಳಿಗೆ ವ್ಯಾಪಾರಸ್ಥರಿಗೆ ಅವರು ಮಾರಾಟ ಮಾಡುವುದಿಲ್ಲ.
ಇಷ್ಟು ಕಡಿಮೆ ಬೆಲೆಗೆ ಅಡಿಕೆ ಸಸಿ ಮಾರಾಟ ಮಾಡುವ ಇವರಿಗೆ ಹೀಗೇಕೆ ಅಂದರೆ ಅವರು ಹೇಳುವುದು "ನಾನು ನಷ್ಟ ಮಾಡಿಕೊಂಡು ಅಡಿಕೆ ಸಸಿ ಮಾರುತ್ತಿಲ್ಲ ಇದರಲ್ಲಿ ನನ್ನ ಶ್ರಮಕ್ಕೆ ತಕ್ಕ ಲಾಭ ಇದ್ದೇ ಇದೆ ಆದರೆ ಅಡಿಕೆ ಸಸಿಗೆ ಬೇಡಿಕೆ ಇದೆ ಅಂತ ದುರಾಸೆಯಿಂದ ಐದಾರು ಪಟ್ಟು ಬೆಲೆ ಹೆಚ್ಚು ಮಾಡುವುದು ಸರಿಯಲ್ಲ" ಎನ್ನುತ್ತಾರೆ.
ನರ್ಸರಿಯಿಂದ ಕೋಟ್ಯಾಂತರ ರೂಪಾಯಿ ವಹಿವಾಟು ಮಾಡುವ ಇವರೂ ಸುಖಿ ಇವರ ಕೆಲಸಗಾರರ ಕುಟುಂಬಗಳು ಸುಖವಾಗಿದ್ದಾರೆ, ಇವರಲ್ಲಿನ ಖಾಯಂ ಪ್ರಾಮಾಣಿಕ ಕೆಲಸಗಾರರ ಮಕ್ಕಳು ಉನ್ನತ ವ್ಯಾಸಂಗ ಮಾಡಲು ಅವರಿಗೆ ಭಟ್ಟರ ಸಹಾಯ ಮಾಡುತ್ತಾರೆ.
ಭಟ್ಟರೇ ತಮ್ಮ ಸ್ವಂತ ದುಡಿಮೆಯ ಲಾಭದಲ್ಲಿ ಕೆಲಸದವರಿಗೆ ಹತ್ತಾರು ಲಕ್ಷದ ಮೌಲ್ಡ್ ಮನೆ ಕಟ್ಟಿ ಕೊಟ್ಟಿದ್ದಾರೆ.
ಇನ್ನೊಂದು ವಿಶೇಷ ಏನೆಂದರೆ ಊರಿನ ಎಲ್ಲರ ತೋಟಗಳಲ್ಲಿ ಉಪಟಳ ನೀಡುವ ಮಂಗಗಳು ಇವರ ತೋಟದಲ್ಲಿ ಮಾತ್ರ ತೊಂದರೆ ಕೊಡುವುದಿಲ್ಲ ಯಾಕೆ ಅಂತ ನೀವು ಅವರಲ್ಲಿಗೆ ಹೋದಾಗ ವಿಚಾರಿಸಿ.
ಮಂಜುನಾಥ ಭಟ್ಟರ ಮನೆಯಲ್ಲಿ ಎಲ್ಲಾ ಜಾತಿಯವರಿಗೂ ಪ್ರವೇಶ ಇದೆ ಮತ್ತು ಅವರೆಲ್ಲರ ಒಟ್ಟಿಗೇ ಕುಳಿತು ಊಟ ಮಾಡುತ್ತಾರೆ.
ಮಂಜುಶ್ರೀ ನರ್ಸರಿಯ ಜೇನಿ ಮಂಜುನಾಥ ಭಟ್ಟರ ಸಂಪರ್ಕ ಮಾಹಿತಿ ಲಿಂಕ್ #ಕಾಮೆಂಟ್_ಬಾಕ್ಸ್ ನಲ್ಲಿದೆ ನೋಡಿ.
#jeni #kodur #𝐌𝐚𝐧𝐣𝐮𝐬𝐡𝐫𝐞𝐞 #nursery #hosanagara
#shivamogga #arecaplant #arecapalm #arecanut
Comments
Post a Comment