Skip to main content

4047.ಘಟ್ಟಕ್ಕೆ_ಕರಾವಳಿ_ಭಾಗದ_ಜನರ_ವಲಸೆ_ಭಾಗ_5

 

ಘಟ್ಟಕ್ಕೆ_ಕರಾವಳಿ_ಭಾಗದ_ಜನರ_ವಲಸೆ_ಭಾಗ_5.

  ಈ ಸರಣಿ ಲೇಖನ ಮಾಲೆಗೆ ಅಭೂತಪೂವ೯ ವೀಕ್ಷಣೆ - ಪ್ರತಿಕ್ರಿಯೆಗಳು ಬರುತ್ತಿರುವುದು ನನಗೆ ಮತ್ತೆ ಮತ್ತೆ ಬರೆಯಲು ಹುಮ್ಮಸ್ಸು ತರುತ್ತಿದೆ.

  ವಲಸೆ ಎಂಬುದು ನಿರಂತರ ಮತ್ತು ಸರ್ವಕಾಲಿಕ ಸತ್ಯ, ಜಗತ್ತು ಇರುವವರೆಗೂ ವಲಸೆ ನಿಲ್ಲಲು ಸಾಧ್ಯವೇ ಇಲ್ಲ ಏಕೆಂದರೆ ಪ್ರಕೃತಿ ನಿಯಮ ಮತ್ತು ಮಾನವನ ಆಸೆಗಳು ನಿರಂತರವಾಗಿ ಬದಲಾಗುತ್ತಿರುತ್ತದೆ.

   ಕರಾವಳಿ ಭಾಗದ ಜನರು ವಿಶೇಷವಾಗಿ ದಕ್ಷಿಣ ಕನ್ನಡ - ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಎಲ್ಲಾ ಜಾತಿ ಧರ್ಮದ ಜನರು ಮಲೆನಾಡು ಮತ್ತು ಘಟ್ಟದ ಮೇಲಿನ ಶಿವಮೊಗ್ಗ - ಚಿಕ್ಕಮಗಳೂರು - ಕೊಡಗು ಮತ್ತು ಹಾಸನ ಜಿಲ್ಲೆಗಳಿಗೆ ನಡೆಸಿದ ವಲಸೆ ಇತಿಹಾಸದಲ್ಲಿ ಅತ್ಯಂತ ವಿಶಿಷ್ಟವಾದದ್ದು ಎಂದು ಪರಿಗಣಿಸ ಬಹುದು.

     #ಕರಾವಳಿಗರ ಘಟ್ಟದ ವಲಸೆಯನ್ನು ವಿಶ್ವದ ಮೂರು ಪ್ರಮುಖ ವಲಸೆಗಳಾದ #ಅಮೇರಿಕಾ_ಪಶ್ಚಿಮ ವಲಸೆ, #ಯುರೋಪಿನ_ಹ್ಯೂಗೆ_ನಾಟ್ಸ್ ವಲಸೆ ಮತ್ತು 1840 ರ ದಶಕದ ಕ್ಯಾಲಿಫೋರ್ನಿಯಾದ #ಚಿನ್ನದ_ಗಣಿ_ವಲಸೆ ಜೊತೆ ಸಮೀಕರಿಸಬಹುದೆಂದು #ಅಮೇರಿಕನ್_ಹಿಸ್ಟಾರಿಕಲ್_ಅಸೋಸಿಯೇಷನ್‌ ಲೇಖನದಲ್ಲಿ ಉಲ್ಲೇಖಿಸಿದೆಯಂತೆ ಆದ್ದರಿಂದ ನಮ್ಮ ಕರ್ನಾಟಕದ ಕರಾವಳಿಯ ಜನರ ಘಟ್ಟದ ವಲಸೆ ಮಹತ್ವದ ವಲಸೆ ವಿಚಾರವಾಗಿದೆ.

 ನಾನು ಕೂಡ ಈ ರೀತಿಯೇ  ಕರಾವಳಿಯಿಂದ ಘಟ್ಟಕ್ಕೆ ವಲಸೇ ಬಂದ ಕುಟುಂಬಕ್ಕೆ ಸೇರಿದವನು ಆದ್ದರಿಂದ ನನಗೆ ಕರಾವಳಿ ಜನರ ಈ ವಲಸೆ ಬಗ್ಗೆ ಸಹಜ ಕುತೂಹಲ ಯಾವತ್ತಿನಿಂದಲೂ ಇದೆ.

 ನನ್ನ ತಂದೆ ಕೃಷ್ಣಪ್ಪರ ತಾಯಿ ಅಬ್ಬಕ್ಕ  #ಕಾಪು ಮೂಲದ ತುಳುವರು ನಂತರ ಅವರ ಕುಟುಂಬ ಉಡುಪಿ ಜಿಲ್ಲೆಯ ಬಾರ್ಕೂರು ಸಮೀಪದ #ಬೆಣ್ಣೆಕುದುರಿನಲ್ಲಿ ನೆಲೆಸಿದವರು ನಂತರ  ಅವರು 1890 ರ ಸುಮಾರಿಗೆ ಘಟ್ಟ ಹತ್ತಿ ಆನಂದಪುರಂಗೆ ಬಂದವರು.

  ನನ್ನ ತಾಯಿ ಸರಸಮ್ಮ ಮತ್ತು ಅವರ ಅಕ್ಕ ನನ್ನ ದೊಡ್ಡಮ್ಮ ಅವರ ಕುಟುಂಬಗಳು ಕೂಡ ಕುಂದಾಪುರದ ಬಸ್ರೂರಿನ ಹಿರಿಕೆರೆ ಎಂಬ ಊರಿನಿಂದ ಘಟ್ಟಕ್ಕೆ ಬಿದನೂರು ನಗರದ ದೇವಗಂಗೆಗೆ
ವಲಸೆ ಬಂದವರದ್ದೇ ಆಗಿದೆ.

   ನಮ್ಮ ತಾಯಿಯ ಅಣ್ಣ ಅಂದರೆ ನನ್ನ ಮಾವ ಗಣಪ ನಾಯಕರು ಕೂಡ ಸೇರೆಗಾರರ ಜೊತೆ ಕರಾವಳಿಯಿಂದ ಘಟ್ಟಕ್ಕೆ ಬಂದು ಹಂಗಾಮಿನ ಕೆಲಸ ಮುಗಿಸಿ ವಾಪಾಸು ತೆರಳುತ್ತಿದ್ದವರ ಗುಂಪಿನಲ್ಲಿದ್ದವರು.

ನಾವೆಲ್ಲ ಈಗ ನೂರಾ ಮುವ್ವತ್ತಾರು ವರ್ಷಗಳ ಕಾಲಾವದಿಯಲ್ಲಿ ಘಟ್ಟ ವಾಸಿಗಳೇ ಆಗಿಬಿಟ್ಟಿದ್ದೇವೆ,ತಂದೆ ಕುಟುಂಬದ ಮೂಲ ಭಾಷೆ ತುಳು ಮತ್ತು ತಾಯಿ ಮೂಲದ ಕುಂದಾಪುರ ಕನ್ನಡ ಎರಡನ್ನೂ ನಾವೆಲ್ಲ ಮರೆತೇ ಬಿಟ್ಟವರಾಗಿದ್ದೇವೆ.

   ಘಟ್ಟದ ಆನಂದಪುರಂನಲ್ಲಿ ನಮ್ಮ ಅಜ್ಜಿಯ ಮೂಲ ಮನೆ ಹುಲ್ಲಿನ ಮನೆ ಮತ್ತು ಮಣ್ಣಿನ ಗೋಡೆಯದ್ದಾಗಿತ್ತು ಅದರ ಜಗಲಿ ವಿಶಾಲವಾಗಿದ್ದರಿಂದ ಅಲ್ಲಿ ಕರಾವಳಿಯಿಂದ ಸಾಗರ ತಾಲೂಕಿನ ಕಡೆ ಬರುವ ಸೇರೆಗಾರರ ತಂಡಕ್ಕೆ ಆ ಜಗುಲಿ ಆಶ್ರಯ ನೀಡುತ್ತಿತ್ತು.

  ನನ್ನ ಅಜ್ಜಿ #ಕಲ್ಲುಡ್ಕ_ವರ್ತೆ ದೈವ ಪಾತ್ರಿ ಆಗಿದ್ದು ಮತ್ತು ಕಲ್ಲುಡ್ಕ ದೇವರನ್ನ ಘಟ್ಟಕ್ಕೆ ತಂದ ಮೊದಲ ಮತ್ತು ಏಕೈಕ ಮಹಿಳೆ ಎಂಬ ಭಯ- ಭಕ್ತಿ ಮತ್ತು ಗೌರವ ನನ್ನಜ್ಜಿ ಮೇಲೆ ಕರಾವಳಿಯ ಭಾಗದ ಜನರಲ್ಲಿತ್ತು.

  ಆಗೆಲ್ಲ ನನ್ನ ಬಾಲ್ಯದಲ್ಲಿ ನನ್ನಜ್ಜಿ, ತಂದೆ, ತಾಯಿ, ಮಾವ ಮತ್ತು ಸಂಬಂದಿಕರ ಮಾತುಗಳಲ್ಲಿ ಘಟ್ಟದ ಯಾತ್ರೆ ಕಷ್ಟದ ಕಥೆಯ ಉಲ್ಲೇಖಗಳನ್ನು ನಾನು ಆಸಕ್ತಿಯಿಂದ ಕೇಳುತ್ತಿದ್ದೆ.

  ಬಾಲ್ಯದಲ್ಲಿ ನನ್ನ ಸೋದರ ಮಾವನಿಗೆ ಕಥೆ ಹೇಳಲು ದಂಬಾಲು ಬಿದ್ದಾಗೆಲ್ಲ ಅವರು ಹೇಳುತ್ತಿದ್ದ ಸೇರೆಗಾರನನ್ನ ನುಂಗಿದ ಹೆಬ್ಬಾವು ಕಥೆ ಆ ವಯಸ್ಸಲ್ಲಿ ಸತ್ಯವೆಂದೇ ಭಾವಿಸಿದ್ದೆ, ನನ್ನ ಕಥಾ ಸಂಕಲನ #ಬಿಲಾಲಿಬಿಲ್ಲಿ_ಅಭ್ಯಂಜನದಲ್ಲಿ ಅದನ್ನು ನಾನು #ಮಾವ ಹೇಳಿದ ಕಥೆ ಆಗಿ ಬರೆದು ಪ್ರಕಟಿಸಿದ್ದೇನೆ.

   ಈ ರೀತಿ ಘಟ್ಟದ ವಲಸೆ ಕಥೆಗಳು ಟಿಪ್ಪಣಿಗಳನ್ನು ಅನೇಕ ವರ್ಷಗಳಿಂದ ಸಂಗ್ರಹಿಸಿ ಇಟ್ಟುಕೊಂಡಿದ್ದೆ ಆದರೆ ಅದನ್ನ ಕ್ರಮವಾಗಿ ಬರೆಯುವ ಕಾಲ ಬಂದಿರಲಿಲ್ಲ.

   ಇತ್ತೀಚಿಗೆ ನನ್ನ ಅಜ್ಜಿ ಘಟ್ಟಕ್ಕೆ ತಂದ ಕಲ್ಲುಕುಟಿಕ ದೇವರು ತೀರ್ಥಹಳ್ಳಿಯ #ಸೊಪ್ಪುಗುಡ್ಡೆ_ರಾಮಣ್ಣಪಾತ್ರಿಗಳ ಮನೆಗೆ 75 ವರ್ಷದ ಹಿಂದೆ ನನ್ನ ಅಜ್ಜಿ ತನ್ನ ಅಕ್ಕನ ಮಗಳು ಅಳಿಯನ ಮನೆಗೆ ನೀಡಿದ್ದರು.

  ಅಲ್ಲಿನ ದೇವಸ್ಥಾನ ಪುನರ್ನಿರ್ಮಾಣ ಮತ್ತು ಪ್ರತಿಷ್ಟಾಪನೆ ಆದ ಬಗ್ಗೆ ನಾನು ಬರೆದ ಲೇಖನ ಓದಿದ ತೀರ್ಥಹಳ್ಳಿ ತಾಲ್ಲೂಕಿನ #ಕಿರಣ್_ಬೀಸು ಅವರು ಘಟ್ಟಕ್ಕೆ ಕರಾವಳಿ ಜನರ ವಲಸೆ ಬಗ್ಗೆ ವಿವರವಾದ ಲೇಖನ ಬರೆಯಲು ಹೇಳಿದ್ದು ನನಗೆ ಈ ಲೇಖನ ಸರಣಿ ಬರೆಯಲು ಕಾರಣವಾಯಿತು.

    ಈಗ ಈ ಎಲ್ಲಾ ಲೇಖನ ಪುಸ್ತಕ ಮಾಡಿ ಅದನ್ನು ಪ್ರಕಟಿಸುತ್ತೇನೆ  ಎಂದು ಬೆಹರೇನ್ ನಲ್ಲಿ ನೆಲೆಸಿರುವ ಕರಾವಳಿ ಕುಂದಾಪುರದ ದೀಪು ಶೆಟ್ಟರು ವಿನಂತಿಸಿದ್ದಾರೆ.

#coastal #kundapura #westernghats #migration #arecafarming #cofeeestate #kodagu #hassan #chikkamagalore #shovamogga

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...