Skip to main content

4051. ರಾಣಿ ಚೆನ್ನ ಬೈರಾದೇವಿ ನಿಶಿಧಿ ಶಾಸನ ರೇಖಾ ಚಿತ್ರ

 

 ಕಾಳುಮೆಣಸಿನ_ರಾಣಿ_ಚೆನ್ನಭೈರಾದೇವಿ
ನಿಶಿದಿ_ಸ್ಮಾರಕ_ಶಾಸನ_ಮಾಹಿತಿ
ಇತಿಹಾಸ_ಆಸಕ್ತರಿಗೆ_ಮತ್ತು_ಸಂಶೋದಕರಿಗೆ.

  ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಳ್ಳಿಯಲ್ಲಿ ಸಾಳ್ವ ವಂಶದ ಜೈನರಾಣಿ ಚೆನ್ನ ಬೈರಾದೇವಿ ಸಮಾದಿ ಇದೆ.

  ಈ ಸ್ಥಳದ ಬಗ್ಗೆ ನಿಮಗೆ ಮಾಹಿತಿ ಇದಿಯಾ?....

ರಾಣಿ ಚೆನ್ನ ಬೈರಾದೇವಿ ಸಮಾದಿ ಸ್ಥಳದ ನಿಶಿದಿ ಶಾಸನ ಹೇಗಿತ್ತು ಗೊತ್ತಾ...

  #ಡಿಜಿಟಲ್_ಮಾಧ್ಯಮ ಎಂಬ ಖ್ಯಾತ ಕನ್ನಡದ ಯು ಟ್ಯೂಬ್ ಚಾನಲ್ ನಲ್ಲಿ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ದಾರಾವಾಹಿ ಆಗಿ ಬಂದ ನಂತರ ರಾಣಿ ಚೆನ್ನ ಬೈರಾದೇವಿ ಇತಿಹಾಸದ ಬಗ್ಗೆ ಜನಮಾನಸದಲ್ಲಿ ಹೆಚ್ಚಿನ ಆಸಕ್ತಿ ಉಂಟಾಯಿತು ಕೋಟ್ಯಾಂತರ ವೀಕ್ಷಣೆ ಆಯಿತು.

   ಡಿಜಿಟಲ್ ಮಾಧ್ಯಮದ ಶ್ರೀಮತಿ #ನಂದಿನಿ ಆಕರ್ಷ ದಂಪತಿಗಳು ಗೇರುಸೊಪ್ಪೆ ಕಾಳುಮೆಣಸಿನ ರಾಣಿ, #ಕೆಳದಿ ಸಂಸ್ಥಾನ, #ಕುವೆಂಪು, #ನೀನಾಸಂ, ಶಿವಮೊಗ್ಗದ #ಸಿಂಹದಾಮ ಮತ್ತು ಸಕ್ಕರೆಬೈಲಿನ #ಆನೆಕ್ಯಾಂಪ್ ಎಪಿಸೋಡು ಅತ್ಯಂತ ಆಕರ್ಷವಾಗಿ ನಿರ್ಮಿಸಿದ್ದಾರೆ ಈ ಎಪಿಸೋಡುಗಳ ಚಿತ್ರಿಕರಣ ಮತ್ತು ಎಡಿಟಿಂಗ್ ಮಾಡುವಾಗ ಅವರಿಗೆ ನಾನು ನಮ್ಮ ಹೊಂಬುಜ ರೆಸಿಡೆನ್ಸಿ ಲಾಡ್ಜ್ ಮೂಲಕ ಅತಿಥೇಯರಾಗಿದ್ದು ನಮಗೆ ಹೆಮ್ಮೆಗೆ ಕಾರಣ ಆಯಿತು, ನಮ್ಮ ಜಿಲ್ಲೆಯ ಇತಿಹಾಸದ ಕಥೆ ಡಿಜಲೀಕರಣದ ಕೆಲಸಕ್ಕೆ ಇದು ನನ್ನ ಸಣ್ಣ ಸಹಾಯ ಕೂಡ.

  ಇದರ ಜೊತೆ ನಮ್ಮ ತಾಲ್ಲೂಕಿನ ಖ್ಯಾತ ಸಾಹಿತಿ #ಗಜಾನನಶರ್ಮರು ಬರೆದ ಕಾಳುಮೆಣಸಿನ ರಾಣಿ ಬೃಹತ್ ಕಾದಂಬರಿ ಮತ್ತು ಖ್ಯಾತ ಪಿಕ್ಷನ್ ಕಾದಂಬರಿಕಾರ #ಗಣೇಶಯ್ಯ ಬರೆದ ಬೆಳ್ಳಿ ಕಾಳು ಕಾದಂಬರಿಗಳು ಕೂಡ ಓದುಗರನ್ನ ಬಡಿದೆಬ್ಬಿಸಿತು.

   2013ರಲ್ಲಿ ರಾಣಿ ಚೆನ್ನ ಬೈರಾದೇವಿ ಸಿನಿಮಾ ಚಿತ್ರಿಕರಣ ಪ್ರಾರಂಭವಾಗಿ ಕಾರಣಾಂತರದಿಂದ ನಿಂತು ಹೋಯಿತು ಈಗ ಖ್ಯಾತ ನಿರ್ದೇಶಕ #ರಾಜೇಂದ್ರ_ಸಿಂಗ್_ಬಾಬು ಮಹಾ ಮಂಡಲೇಶ್ವರಿ ರಾಣಿ ಚೆನ್ನ ಬೈರಾದೇವಿ ಎಂಬ ಸಿನಿಮಾ ತಯಾರಿ ನಡೆಸಿದ್ದಾರೆ.

   ಇದೆಲ್ಲ ಬೆಳವಣಿಗೆಗಳು ಅನೇಕ ಸ್ಥಳೀಯ ಇತಿಹಾಸ ಆಸಕ್ತರಿಗೆ ಚೆನ್ನ ಬೈರಾದೇವಿ ಸಮಾದಿ ಸ್ಥಳ ಹುಡುಕುವ ಆಸಕ್ತಿಗೆ ಕಾರಣವಾಗಿದೆ ಮತ್ತು ಅವರುಗಳು ಸಾಮಾಜಿಕ ಜಾಲತಾಣದಲ್ಲಿ ಅಲ್ಲಿನ ಕೆಲವು ವೀರಕಲ್ಲುಗಳನ್ನ ಇದು ಚೆನ್ನ ಬೈರಾದೇವಿ ಸಮಾಧಿಯ ಶಾಸನಗಳಾ? .. ಎಂದು ಕೇಳುತ್ತಿದ್ದಾರೆ, ಅವರ ಇತಿಹಾಸ ಆಸಕ್ತಿ ಪ್ರಶಂಸನೀಯ ಅವರಿಗೆ ಅಭಿನಂದಿಸುತ್ತೇನೆ.

   226 ವರ್ಷಗಳ ಹಿಂದೆ ಬ್ರಿಟಿಷ್ ಇತಿಹಾಸ ತಜ್ಞ ಭಾರತದ ಮೊದಲ ಸರ್ವೆಯರ್ ಜನರಲ್ #ಕರ್ನಲ್_ಕಾಲಿನ್_ಮೆಕೆಂಜೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆವಿನಹಳ್ಳಿಯಲ್ಲಿರುವ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ಸಮಾಧಿ ಮತ್ತು ಅಲ್ಲಿದ್ದ ನಿಶದಿ ಶಾಸನ ದಾಖಲಿಸಿದ್ದಾರೆ ಮತ್ತು ಅದರ ರೇಖಾ ಚಿತ್ರ ಬರೆಸಿದ್ದಾರೆ ಈಗ ಅದು ಬ್ರಿಟನ್ ದೇಶದ ಬ್ರಿಟೀಷ್ ಮ್ಯೂಸಿಯಂನಲ್ಲಿದೆ.

   ಆ ರೇಖಾ ಚಿತ್ರ ಮತ್ತು ಮೆಕೆಂಜೆ ದಾಖಲಿಸಿದ ಮಾಹಿತಿ ಈ ಲೇಖನದ ಜೊತೆ ಪ್ರಕಟಿಸಲಾಗಿದೆ ಸ್ಥಳೀಯ ಆಸಕ್ತ ಯುವ ಸಂಶೋಧಕರು ಅಲ್ಲೆಲ್ಲ ಸಂಶೋದನೆ ಮಾಡಿದರೆ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ನಿಶಿದಿ ಶಾಸನ ಸಿಗುವ ಸಾಧ್ಯತೆ ಇದೆ.

   ಈ ಸ್ಥಳ ರಾಷ್ಟ್ರೀಯ ಸ್ಮಾರಕ ಮಾಡಬೇಕು ಮತ್ತು ಪುರಾತತ್ವ ಇಲಾಖೆ ಈ ಸ್ಥಳ ಸಂರಕ್ಷಿಸಬೇಕು.

     ಇವತ್ತಿಗೆ 226 ವರ್ಷದ ಹಿಂದೆ ಕರ್ನಲ್ ಕಾಲಿನ್ ಮೆಕೆಂಜೆ ಮತ್ತು ಅವರ ಪ್ರಮುಖ ಸಹಾಯಕ ರೇಖಾಚಿತ್ರಕಾರರಾದ #ಕಾವಲಿ_ವೆಂಕಟ_ಬೋರಯ್ಯ ಅವರು ಆವಿನಹಳ್ಳಿಯ ರಾಣಿ ಚೆನ್ನಭೈರಾದೇವಿ ನಿಶಿದ್ಧಿ (ಸಮಾಧಿ) ಶಾಸನವನ್ನು ವೀಕ್ಷಿಸಿ ದಾಖಲಿಸಿದ ನಿಖರವಾದ ದಿನಾಂಕ ಸೆಪ್ಟೆಂಬರ್ 1801 (September 1801).

  ​ಬ್ರಿಟಿಷ್ ಮ್ಯೂಸಿಯಂನಲ್ಲಿರುವ ಮೆಕೆಂಜೆ ಕಲೆಕ್ಷನ್‌ನ (Mackenzie Collection) ಅಧಿಕೃತ ದಾಖಲೆಗಳ ಪ್ರಕಾರ ಮೈಸೂರು ಸರ್ವೆಯ (Mysore Survey) ಭಾಗವಾಗಿ ಉತ್ತರ ಕನ್ನಡ ಮತ್ತು ಮಲೆನಾಡು ಭಾಗದಲ್ಲಿ ಸಂಚರಿಸುತ್ತಿದ್ದಾಗ 1801ರ ಸೆಪ್ಟೆಂಬರ್ ತಿಂಗಳಿನಲ್ಲಿ ಈ ಶಾಸನದ ಪ್ರತಿ ಹಾಗೂ ರೇಖಾಚಿತ್ರವನ್ನು ಸಿದ್ಧಪಡಿಸಲಾಯಿತು.

 ​ಮೆಕೆಂಜೆಯವರ ಹಸ್ತಪ್ರತಿಗಳ ವಿವರಣೆಯ ಪ್ರಕಾರ ಆವಿನಹಳ್ಳಿಯ ನಿಶಿದ್ಧಿ ಕಲ್ಲಿನ ರೇಖಾಚಿತ್ರವು ಜೈನ ಸ್ಮಾರಕ ಕಲೆಗೆ ಅನುಗುಣವಾಗಿ ಮೂರು ಪ್ರಮುಖ ವಿಭಾಗಗಳನ್ನು ಒಳಗೊಂಡಿದೆ.

 ​ ರಾಣಿ ಚೆನ್ನಭೈರಾದೇವಿಯವರು ತಮ್ಮ ಜೈನ ಗುರುಗಳ ಮುಂದೆ ವಿನಯದಿಂದ ಕುಳಿತು, ಜಪಮಾಲೆ ಹಿಡಿದು ಸಲ್ಲೇಖನ ವ್ರತದ ಉಪದೇಶ ಪಡೆಯುತ್ತಿರುವ ರೇಖಾಚಿತ್ರ ಇಲ್ಲಿದೆ. 

​  ರಾಣಿಯ ಆತ್ಮವನ್ನು ದೇವದೂತರು ಅಥವಾ ಗಂಧರ್ವರು ಪಲ್ಲಕ್ಕಿ ಅಥವಾ ವಿಮಾನದಲ್ಲಿ ಕೂರಿಸಿ ಮೇಲಕ್ಕೆ ಕರೆದೊಯ್ಯುತ್ತಿರುವ ದೃಶ್ಯವಿದೆ.

 ಪಕ್ಕದಲ್ಲಿ ಚಾಮರ ಬೀಸುವ ಆಕೃತಿಗಳನ್ನು ಮೆಕೆಂಜೆ ತಂಡದ ಕಲಾವಿದರು ವಿವರವಾಗಿ ಬಿಡಿಸಿದ್ದಾರೆ.

​  ಕಲ್ಲಿನ ತುತ್ತತುದಿಯಲ್ಲಿ ಜೈನ ತೀರ್ಥಂಕರರು ಹೆಚ್ಚಾಗಿ ಪಾರ್ಶ್ವನಾಥ ಸ್ವಾಮಿ ಪ್ರಭಾವಳಿಯೊಂದಿಗೆ ಪದ್ಮಾಸನ ಭಂಗಿಯಲ್ಲಿ ಕುಳಿತಿದ್ದಾರೆ. ಇದು ರಾಣಿಯ ಆತ್ಮಕ್ಕೆ ಸಿದ್ಧಶಿಲೆ ಅಥವಾ ಮೋಕ್ಷ ದೊರೆತಿದ್ದರ ಸಂಕೇತವಾಗಿದೆ.

  ​ ಕಾಲದ ಹೊಡೆತಕ್ಕೆ ಸಿಲುಕಿ ಆವಿನಹಳ್ಳಿಯ ಸಾಳ್ವ ಮೂಲದ ರಾಣಿ ಚೆನ್ನ ಬೈರಾದೇವಿ ನಿಶದಿ ಸ್ಮಾರಕವು ಸವೆದುಹೋಗಿರ ಬಹುದು ಅಥವ ಅಲ್ಲೇಲ್ಲೋ ಮಣ್ಣಾಗಿರಬಹುದು ಅದರ ಸಂಪೂರ್ಣ ರೂಪ ಮತ್ತು ಇತಿಹಾಸವನ್ನು ಇಂದಿನ ಪೀಳಿಗೆಗೆ ತಲುಪಿಸುವಲ್ಲಿ ಮೆಕೆಂಜೆಯವರ ಈ ರೇಖಾಚಿತ್ರದ ದಾಖಲಾತಿಯು ಅತ್ಯಂತ ಪ್ರಮುಖ ಆಧಾರವಾಗಿದೆ.

#gerusoppe #chennabyradevi #salvadinesty
#avinahalli #NishiDi #jainism #gajananasharma 
#ganeshaia #rajendrasingbabu #cinema

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...