ರಾಣಿ_ಚೆನ್ನಬೈರಾದೇವಿ_ಮೊದಲ_ಸಿನಿಮಾ
2013 ರಲ್ಲಿ ಚಿತ್ರಿಕರಣ ಪ್ರಾರಂಭವಾಗಿ ಅರ್ದಕ್ಕೆ ನಿಂತು ಹೋಗಿತ್ತು,ಆ ಸಿನಿಮಾದಲ್ಲಿ ರಾಣಿ ಚೆನ್ನ ಬೈರಾದೇವಿ ಪಾತ್ರ ನಟಿ #ಶೃತಿ ಆಯ್ಕೆ ಆಗಿದ್ದರು.
ಆಗ ನಮ್ಮ ಗೇರುಸೊಪ್ಪೆಯ ರಾಣಿ ತೆರೆಗೆ ಬರುತ್ತಾರೆಂದು ನಾವೆಲ್ಲ ಆಸೆ ಪಟ್ಟಿದ್ದೆವು ಆದರೆ ಚಿತ್ರಿಕರಣ ಅರ್ಧದಲ್ಲೇ ನಿಂತು ಹೋಯಿತು ಇದು ಇತಿಹಾಸ ಆಸಕ್ತರಿಗೆ ತುಂಬಾ ನಿರಾಸೆ ಮಾಡಿತ್ತು.
ಈಗ 13 ವರ್ಷಗಳ ನಂತರ #ಬಂದನ ಸಿನಿಮಾ ಖ್ಯಾತಿಯ #ರಾಜೇಂದ್ರಸಿಂಗ್_ಬಾಬು ನಟಿ #ರಮ್ಯಾರನ್ನ ರಾಣಿ ಚೆನ್ನ ಬೈರಾದೇವಿ ಪಾತ್ರಕ್ಕೆ ಆಯ್ಕೆ ಮಾಡಿ ಸಿನಿಮಾ ಮಾಡಲಿದ್ದಾರೆ.
ರಾಣಿ ಚೆನ್ನ ಬೈರಾದೇವಿಯ ಎರಡನೆ ಸಿನಿಮಾ ಯಾವುದೇ ಅಡೆ ತಡೆ ಇಲ್ಲದೆ ಚಿತ್ರಿಕರಣ ಮುಗಿಸಿ ತೆರೆಯ ಮೇಲೆ ಬರಲಿ ಎಂದು ಹಾರೈಸೋಣ.
ಕನ್ನಡ ಚಿತ್ರರಂಗದಲ್ಲಿ ಸಾಹಸ ಸಿಂಹ #ವಿಷ್ಣುವರ್ಧನ್ ಅವರ ಆಪ್ತರಾಗಿದ್ದ ಖ್ಯಾತ ನಿರ್ದೇಶಕ #ಬಿ_ರಾಮಮೂರ್ತಿ ಅವರು 2013 ರಲ್ಲಿ #ರಾಣಿ_ಚೆನ್ನಭೈರಾದೇವಿ' ಎಂಬ ಐತಿಹಾಸಿಕ ಸಿನಿಮಾವನ್ನು ನಿರ್ದೇಶಿಸಲು ಯೋಜನೆ ರೂಪಿಸಿದ್ದರು.
ಕನ್ನಡದ ಹಿರಿಯ ನಟಿ ಶ್ರುತಿ ಅವರು ಈ ಚಿತ್ರದಲ್ಲಿ ರಾಣಿ ಚೆನ್ನಭೈರಾದೇವಿಯ ಪ್ರಧಾನ ಪಾತ್ರದಲ್ಲಿ ನಟಿಸಲು ಆಯ್ಕೆಯಾಗಿದ್ದರು.
ಗೇರುಸೊಪ್ಪೆಯ ರಾಣಿಯಾಗಿದ್ದ ಚೆನ್ನಭೈರಾದೇವಿ ಕರಾವಳಿ ಕರ್ನಾಟಕವನ್ನು ಬರೋಬ್ಬರಿ 54 ವರ್ಷಗಳ ಕಾಲ ಆಳಿದ ಧೀರ ಮಹಿಳೆ.
ಪೋರ್ಚುಗೀಸರ ವಿರುದ್ಧ ಹೋರಾಡಿ, ಜಾಗತಿಕ ಮಟ್ಟದಲ್ಲಿ ಕಾಳು ಮೆಣಸು ವ್ಯಾಪಾರವನ್ನು ನಿಯಂತ್ರಿಸುತ್ತಿದ್ದ ಕಾರಣ ಆಕೆಗೆ
#ಕಾಳು_ಮೆಣಸಿನ_ರಾಣಿ Pepper Queen ಎಂಬ ಹೆಸರಿತ್ತು.
ಈಕೆಯ ವೀರತ್ವ ಮತ್ತು ಸಾಮ್ರಾಜ್ಯದ ವೈಭವವನ್ನು ರಾಮಮೂರ್ತಿ ತಮ್ಮ ಸಿನಿಮಾದಲ್ಲಿ ಕಲಾತ್ಮಕವಾಗಿ ತೋರಿಸಲು ಯೋಚಿಸಿ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರು.
ಈ ಚಿತ್ರದ ಮುಹೂರ್ತ ಅದ್ಧೂರಿಯಾಗಿ ನಡೆದು ಕೆಲವು ದಿನಗಳ ಕಾಲ ಚಿತ್ರೀಕರಣ ಕೂಡ ನಡೆದಿತ್ತು ಆದರೆ ದುರದೃಷ್ಟವಶಾತ್ ಬಜೆಟ್ ಸಮಸ್ಯೆಗಳು, ತಾಂತ್ರಿಕ ಕಾರಣಗಳು ಅಥವಾ ನಿರ್ಮಾಣದ ಅಡಚಣೆಗಳಿಂದಾಗಿ ಈ ಸಿನಿಮಾ ಅರ್ಧಕ್ಕೆ ನಿಂತುಹೋಯಿತು.
ಬಿ. ರಾಮಮೂರ್ತಿ ನಿರ್ದೇಶನದಲ್ಲಿ ನಟಿ ಶ್ರುತಿ ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಬೇಕಾಗಿದ್ದ ಈ 'ರಾಣಿ ಚೆನ್ನಭೈರಾದೇವಿ' ಸಿನಿಮಾ ಆರಂಭವಾಗಿದ್ದು 2013-2014 ಅವಧಿಯಲ್ಲಿ.
ಆ ಸಮಯದಲ್ಲಿ ಚಿತ್ರದ ಮುಹೂರ್ತ ನಡೆದು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ದೊಡ್ಡ ಮಟ್ಟದ ಸೆಟ್ ಹಾಕಿ ಕೆಲವು ದಿನಗಳ ಕಾಲ ಶೂಟಿಂಗ್ ಕೂಡ ಮಾಡಲಾಗಿತ್ತು.
ಆದರೆ ಅದೇ ವರ್ಷದಲ್ಲಿ ಆರ್ಥಿಕ ಕಾರಣಗಳಿಂದಾಗಿ ಚಿತ್ರೀಕರಣವು ಅರ್ಧಕ್ಕೆ ಸ್ಥಗಿತಗೊಂಡಿತು.
2013-2014 ರಲ್ಲಿ ಆರಂಭವಾಗಿದ್ದ ರಾಣಿ ಚೆನ್ನಭೈರಾದೇವಿ ಅವರ ಮೊದಲ ಸಿನಿಮಾಗೆ ಸಂಬಂಧಿಸಿದಂತೆ ಬಜೆಟ್, ತಾರಾಗಣ ಮತ್ತು ನಿರ್ಮಾಪಕರ ವಿವರಗಳು ಇಲ್ಲಿವೆ ...
ಈ ಚಿತ್ರವನ್ನು ತಮಿಳುನಾಡು ಮೂಲದ #ಕೆ_ಆರ್_ಪ್ರೊಡಕ್ಷನ್ಸ್ ಸಂಸ್ಥೆಯ ಅಡಿಯಲ್ಲಿ #ಜಿ_ನಾಗರಾಜ್ ಮತ್ತು #ಪಿ_ಕುಮಾರ್ ಎಂಬುವವರು ಜಂಟಿಯಾಗಿ ನಿರ್ಮಿಸಲು ಮುಂದೆ ಬಂದಿದ್ದರು.
ಐತಿಹಾಸಿಕ ಕಥೆಯಾದ್ದರಿಂದ ನಿರ್ದೇಶಕರು ಮತ್ತು ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡಲು ಯೋಜಿಸಿದ್ದರು.
ರಾಣಿ ಚೆನ್ನಭೈರಾದೇವಿ ಪಾತ್ರ #ಶ್ರುತಿ ಮುಖ್ಯ ಭೂಮಿಕೆಯಲ್ಲಿ,
ಚಿತ್ರದ ಆರಂಭಿಕ ಹಂತದಲ್ಲಿ ಸ್ಯಾಂಡಲ್ವುಡ್ನ ಹಿರಿಯ ಪೋಷಕ ನಟರಾದ #ಶ್ರೀನಿವಾಸಮೂರ್ತಿ, #ರಮೇಶ್_ಭಟ್ ಮತ್ತು ಕೆಲವು ಹೊಸ ಕಲಾವಿದರನ್ನು ಇತರ ಪ್ರಮುಖ ಪಾತ್ರಗಳಿಗೆ ಆಯ್ಕೆ ಮಾಡಿಕೊಳ್ಳಲಾಗಿತ್ತು.
ಪೋರ್ಚುಗೀಸ್ ಅಧಿಕಾರಿಗಳ ಪಾತ್ರಕ್ಕಾಗಿ ಕೆಲವರನ್ನು ಅಂತಿಮಗೊಳಿಸುವ ಪ್ರಕ್ರಿಯೆಯೂ ನಡೆದಿತ್ತು.
ಆ ಸಮಯದಲ್ಲಿ ಈ ಚಿತ್ರಕ್ಕೆ ಅಂದಾಜು 10 ರಿಂದ 12 ಕೋಟಿ ರೂಪಾಯಿ ಬಜೆಟ್ ನಿಗದಿಪಡಿಸಲಾಗಿತ್ತು.
ಇಂದಿನ ಮಾರುಕಟ್ಟೆಗೆ ಹೋಲಿಸಿದರೆ ಇದು ಸಣ್ಣ ಮೊತ್ತದಂತೆ ಕಾಣಬಹುದು ಆದರೆ ಆ ಕಾಲದ ಕನ್ನಡ ಚಿತ್ರರಂಗದ ಮಟ್ಟಿಗೆ ಇದೊಂದು ದೊಡ್ಡ ಬಜೆಟ್ನ ಐತಿಹಾಸಿಕ ಪ್ರಯತ್ನವಾಗಿತ್ತು.
ರಾಣಿ ಚೆನ್ನ ಬೈರಾದೇವಿಯ ಮೊದಲ ಸಿನಿಮಾ ಅರ್ಧಕ್ಕೆ ನಿಂತುಹೋದರೂ ಇತ್ತೀಚೆಗೆ ಖ್ಯಾತ ನಟ ವಿಷ್ಣುವರ್ಧನ್ ಅವರ ಇನ್ನೊಬ್ಬ ಆಪ್ತ ಕನ್ನಡದ ಖ್ಯಾತ ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು #ನಾಡೊಜ_ಹಂಪನಾಗರಾಜಯ್ಯ
ಮತ್ತು ಇತಿಹಾಸ ಸಂಶೋಧಕ ಸಾಗರದ ಲೋಕರಾಜ ಜೈನ್ ಸಾಳ್ವಕುಲಜ ನಗಿರೆಸುತ ಇವರಿಂದ ಬರೆಸಿದ ಚಿತ್ರಕಥೆ ಆದರಿಸಿ
#ಮಹಾಮಂಡಳೇಶ್ವರಿ_ರಾಣಿ_ಚೆನ್ನಬೈರಾದೇವಿ
ಹೊಸ ಸಿನಿಮಾ ಚಿತ್ರೀಕರಣ ಆಗಲಿದೆ ಎಂಬ ಸಂತೋಷದ ಸುದ್ದಿ ಹರಿದಾಡುತ್ತಿದೆ.
ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆಯವರು ಕೂಡ ಈ ಕಥೆ ದೊಡ್ಡ ಪರದೆಗೆ ಬರುವುದರ ಬಗ್ಗೆ ಆಸಕ್ತಿ ಹೊಂದಿದ್ದಾರೆ ಎಂಬ ಸುದ್ದಿ ಹಬ್ಬಿದೆ.
#kannadacinema #ranichennabyradevi #gerusoppe #sharavathiriver #mahamandaleshwari #jainreligion #kannadacinema #bramamurthi
#ramya #shruthi #rajendrasingbabu
Comments
Post a Comment