ಶಿವಮೊಗ್ಗ_ಬೆಂಗಳೂರು_ವಿಮಾನ_ಸಂಚಾರ_ರದ್ದು_ಏಕೆ?...
ಶಿವಮೊಗ್ಗ ಬೆಂಗಳೂರು ವಿಮಾನ ಮಾರ್ಗದಲ್ಲಿ ಪ್ರಯಣಿಕರ ಸಂಖ್ಯೆ ಉತ್ತಮವಾಗೇ ಇತ್ತು ಸುಮಾರು ಶೇಕಡಾ 80% ಸೀಟುಗಳು ಭರ್ತಿ ಆಗುತ್ತಿತ್ತು ಆದರೂ ವಿಮಾನಗಳ ಸಂಚಾರ ಸ್ಥಗಿತಗೊಳಿಸಲು ಕಾರಣ ಏನು?...
ತಿಂಗಳಿಗೆ ಸರಾಸರಿ 10 ರಿಂದ 13 ಸಾವಿರ ಜನ ವಿಮಾನದಲ್ಲಿ ಈ ಮಾರ್ಗದಲ್ಲಿ ಸಂಚರಿಸಿದರೂ ವಿಮಾನ ಸಂಚಾರ ನಿಲ್ಲಿಸಿದ್ದು ಏಕೆ?...
ಶಿವಮೊಗ್ಗ ಬೆಂಗಳೂರಿಗೆ #ಉಡಾನ್ ಯೋಜನೆ ಇನ್ನೂ ಪ್ರಾರಂಭವಾಗಿಲ್ಲ ಏಕೆ?..
ಶಿವಮೊಗ್ಗದಲ್ಲಿ ಪ್ರಧಾನ ಮಂತ್ರಿ ಮೋದೀಜಿ ಅವರಿಂದ ಉದ್ಘಾಟನೆಗೊಂಡ #ಕುವೆಂಪು_ ವಿಮಾನ ನಿಲ್ದಾಣದಲ್ಲಿ ಸಾಲು ಸಾಲಾಗಿ ವಿಮಾನ ಸಂಚಾರವನ್ನು ಸ್ಥಗಿತಗೊಳಿಸುತ್ತಿರುವ ವಿಮಾನ ಸಂಸ್ಥೆಗಳ ನಿರ್ಧಾರದಿಂದ ಮೇಲಿನ ಈ ರೀತಿಯ ಪ್ರಶ್ನೆಗಳು ಏಳುತ್ತಿದೆ.
ಪ್ರಸ್ತುತ #ಶಿವಮೊಗ್ಗದಿಂದ_ಬೆಂಗಳೂರಿಗೆ_ಯಾವುದೇ_ನೇರ_ವಿಮಾನ_ಸೌಲಭ್ಯ_ಲಭ್ಯವಿಲ್ಲ.
ಈ ಹಿಂದೆ ಇಂಡಿಗೋ (IndiGo) ಸಂಸ್ಥೆಯು ಶಿವಮೊಗ್ಗ - ಬೆಂಗಳೂರು ನಡುವೆ ನೇರ ವಿಮಾನ ಸೇವೆ ನಡೆಸುತ್ತಿತ್ತಾದರೂ, ಕಾರ್ಯಾಚರಣೆಯ ಕಾರಣಗಳಿಂದಾಗಿ ಅದನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ.
ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣವು ಆಗಸ್ಟ್ 31, 2023 ರಂದು ತನ್ನ ವಾಣಿಜ್ಯ ಕಾರ್ಯಾಚರಣೆಯನ್ನು ಪ್ರಾರಂಭಿಸಿತು.
ಭಾರತೀಯ ವಿಮಾನಯಾನ ಪ್ರಾಧಿಕಾರ (AAI) ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯದ (DGCA) ಅಧಿಕೃತ ಅಂಕಿ-ಅಂಶಗಳ ಪ್ರಕಾರ ಪ್ರಾರಂಭದಿಂದ ಈವರೆಗಿನ ಪ್ರಯಾಣಿಕರ ಹರಿವಿನ ವಿವರ ಹೀಗಿದೆ, ಮೊದಲ 6 ತಿಂಗಳುಗಳಲ್ಲಿ (ಆಗಸ್ಟ್ 2023 - ಜನವರಿ 2024) ಸುಮಾರು 26,086 ಪ್ರಯಾಣಿಕರು ಪ್ರಯಾಣಿಸಿದ್ದರು.
ಮೊದಲ ಆರ್ಥಿಕ ವರ್ಷದಲ್ಲಿ (ಏಪ್ರಿಲ್ 2023 - ಮಾರ್ಚ್ 2024) ಒಟ್ಟು 39,040 ಪ್ರಯಾಣಿಕರ ಸಂಚಾರ ದಾಖಲಾಗಿತ್ತು.
ಮೊದಲ ಎರಡು ವರ್ಷಗಳಲ್ಲಿ (ಆಗಸ್ಟ್ 2023 ರಿಂದ ಆಗಸ್ಟ್ 2025ರ ವರೆಗೆ) ನಿಲ್ದಾಣವು ಒಟ್ಟು 1,00,000 (1 ಲಕ್ಷ) ಕ್ಕೂ ಅಧಿಕ ಪ್ರಯಾಣಿಕರನ್ನು ಹಾಗೂ ಸುಮಾರು 2,400 ವಿಮಾನಗಳ ಸಂಚಾರವನ್ನು ಯಶಸ್ವಿಯಾಗಿ ನಿರ್ವಹಿಸಿದೆ.
ಇತ್ತೀಚಿನ (2025-2026ರ ಸಾಲಿನ) ಮಾಸಿಕ ಅಂಕಿ-ಅಂಶಗಳನ್ನು ಗಮನಿಸಿದರೆ ಬೆಂಗಳೂರು ಮಾರ್ಗದಲ್ಲಿ ವಿಮಾನ ರದ್ದಾಗುವ ಮುನ್ನ ತಿಂಗಳಿಗೆ ಸರಾಸರಿ 10,000 ದಿಂದ 13,000 ಪ್ರಯಾಣಿಕರು ಈ ನಿಲ್ದಾಣದ ಮೂಲಕ ಪ್ರಯಾಣಿಸುತ್ತಿದ್ದರು.
ಶಿವಮೊಗ್ಗದಿಂದ ಚೆನ್ನೈ ಮತ್ತು ಹೈದರಾಬಾದ್ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಸ್ಪೈಸ್ಜೆಟ್ ವಿಮಾನ ಸೇವೆಗಳನ್ನು ಜೂನ್ 2 ರಿಂದ ಸೆಪ್ಟೆಂಬರ್ 30 ರವರೆಗೆ ತಾಂತ್ರಿಕ ಮತ್ತು ಆಂತರಿಕ ಕಾರಣಗಳಿಂದಾಗಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇಂಡಿಗೋ ಸೇವೆ ಸ್ಥಗಿತ
ಇದಕ್ಕೂ ಮುನ್ನ ಅತಿ ಹೆಚ್ಚು ಬೇಡಿಕೆಯಿದ್ದ ಶಿವಮೊಗ್ಗ - ಬೆಂಗಳೂರು ನಡುವಿನ ಇಂಡಿಗೋ ವಿಮಾನ ಸೇವೆಯನ್ನು ಮೇ 1 ರಿಂದಲೇ ಸ್ಥಗಿತಗೊಳಿಸಲಾಯಿತು,
ನಾಗರಿಕ ವಿಮಾನಯಾನ ನಿರ್ದೇಶನಾಲಯದ (DGCA) ಮಾರ್ಗಸೂಚಿಗಳ ಅನ್ವಯ ಕಾರ್ಯಾಚರಣೆ ಹಾಗೂ ಪೈಲಟ್ಗಳ ಕೊರತೆಯ ಕಾರಣವನ್ನು ಇದಕ್ಕೆ ನೀಡಲಾಗಿತ್ತು.
ಮಳೆಗಾಲ ಮತ್ತು ಚಳಿಗಾಲದಲ್ಲಿ ಮಂಜು ಹಾಗೂ ಮೋಡ ಕವಿದ ವಾತಾವರಣ ಇದ್ದಾಗ ರನ್ವೇ ಸರಿಯಾಗಿ ಕಾಣಿಸದೆ (Low Visibility) ವಿಮಾನಗಳು ಲ್ಯಾಂಡಿಂಗ್ ಆಗಲು ತೊಂದರೆಯಾಗುತ್ತಿತ್ತು
ಈ ಸಮಸ್ಯೆಯನ್ನು ನಿವಾರಿಸಲು ವಿಮಾನ ನಿಲ್ದಾಣದಲ್ಲಿ DVOR (ದಿಕ್ಸೂಚಿ ಯಾಂತ್ರಿಕ ವ್ಯವಸ್ಥೆ) ಮತ್ತು ನೈಟ್ ಲ್ಯಾಂಡಿಂಗ್ ಉಪಕರಣಗಳ ಅಳವಡಿಕೆ ಕಾಮಗಾರಿ ಇತ್ತೀಚೆಗೆ ಚಾಲನೆ ಪಡೆದುಕೊಂಡಿದೆ ಇದು ಪೂರ್ಣಗೊಂಡರೆ ಹವಾಮಾನ ವೈಪರೀತ್ಯದ ಸಮಯದಲ್ಲೂ ವಿಮಾನಗಳು ಸುಲಭವಾಗಿ ಇಳಿಯಲು ಸಾಧ್ಯವಾಗುತ್ತದೆ.
ಬೆಂಗಳೂರು ಮಾರ್ಗದ ವಿಮಾನ ಸೇವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದರೂ ಶಿವಮೊಗ್ಗದ ರಾಷ್ಟ್ರಕವಿ ಕುವೆಂಪು ವಿಮಾನ ನಿಲ್ದಾಣದಿಂದ (ಸೋಗಾನೆ) ಪ್ರಸ್ತುತ ಇತರ ಪ್ರಮುಖ ನಗರಗಳಿಗೆ ನೇರ ವಿಮಾನ ಸಂಪರ್ಕ ಲಭ್ಯವಿದೆ.
ಶಿವಮೊಗ್ಗದಿಂದ ಹೈದರಾಬಾದ್ಗೆ ಅತ್ಯುತ್ತಮ ಸಂಪರ್ಕವಿದ್ದು, ಸ್ಟಾರ್ ಏರ್ (Star Air) ಮತ್ತು ಸ್ಪೈಸ್ಜೆಟ್ (SpiceJet) ಸಂಸ್ಥೆಗಳು ನೇರ ವಿಮಾನ ಸೇವೆಗಳನ್ನು ಒದಗಿಸುತ್ತಿವೆ.
ಪ್ರವಾಸಿಗರಿಗೆ ಅನುಕೂಲವಾಗುವಂತೆ ಗೋವಾದ ಹೊಸ ಮನೋಹರ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಮೋಪಾ) ಸ್ಟಾರ್ ಏರ್ (Star Air) ನೇರ ವಿಮಾನವನ್ನು ಮುನ್ನಡೆಸುತ್ತಿದೆ.
ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಪತಿಗೆ ಭೇಟಿ ನೀಡುವವರಿಗಾಗಿ ಸ್ಟಾರ್ ಏರ್ (Star Air) ವತಿಯಿಂದ ನೇರ ವಿಮಾನ ಸೌಲಭ್ಯವಿದೆ.
ತಮಿಳುನಾಡಿನ ರಾಜಧಾನಿ ಚೆನ್ನೈಗೆ ಸ್ಪೈಸ್ಜೆಟ್ (SpiceJet) ಸಂಸ್ಥೆಯು ನೇರ ವಿಮಾನ ಸಂಪರ್ಕವನ್ನು ಕಲ್ಪಿಸಿದೆ.
ಈ ಮಾರ್ಗದಲ್ಲಿನ ವಿಮಾನದಲ್ಲಿ ಗೋವಾ - ಹೈದ್ರಾಬಾದ್ - ಚೆನೈ ತಲುಪಿ ಬೆಂಗಳೂರು ಸೇರುವ ಲಿಂಕ್ ಪ್ಲೈಯಿಟ್ ಗಳಿದೆ ಇದಕ್ಕೆ ಹೆಚ್ಚು ಸಮಯ ಮತ್ತು ಹೆಚ್ಚು ಹಣ ಬೇಕು.
ಉಡಾನ್ ಅಂದರೆ ಇದರ ಪ್ರಮುಖ ಧ್ಯೇಯವಾಕ್ಯ #ಉಡೇ_ದೇಶ್_ಕಾ_ಆಮ್_ನಾಗರಿಕ್ (ದೇಶದ ಸಾಮಾನ್ಯ ನಾಗರಿಕನೂ ವಿಮಾನಯಾನ ಮಾಡಲಿ) ಎಂಬುದಾಗಿದೆ.
ದೇಶದ ಸಣ್ಣ ಸಣ್ಣ ನಗರಗಳಿಗೂ ವಿಮಾನ ಸಂಪರ್ಕ ಕಲ್ಪಿಸುವುದು ಮತ್ತು ಸಾಮಾನ್ಯ ಜನರಿಗೂ ಕೈಗೆಟುಕುವ ದರದಲ್ಲಿ ವಿಮಾನ ಪ್ರಯಾಣವನ್ನು ಒದಗಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.
ಈ ಯೋಜನೆಯ ಮುಖ್ಯ ಉದ್ದೇಶಗಳು ಪ್ರಾದೇಶಿಕ ಸಂಪರ್ಕ ಈವರೆಗೆ ವಿಮಾನ ಸೌಲಭ್ಯವಿಲ್ಲದ ಅಥವಾ ಕಡಿಮೆ ವಿಮಾನ ಸೌಲಭ್ಯವಿರುವ ಸಣ್ಣ ನಗರಗಳು ಮತ್ತು ಪಟ್ಟಣಗಳಿಗೆ ವಿಮಾನ ಸಂಪರ್ಕ ಕಲ್ಪಿಸುವುದು.
ಸಾಮಾನ್ಯ ಮಧ್ಯಮ ವರ್ಗದ ಜನರಿಗೂ ವಿಮಾನ ಪ್ರಯಾಣ ಸಾಧ್ಯವಾಗಿಸುವಂತೆ ಟಿಕೆಟ್ ದರಗಳನ್ನು ನಿಯಂತ್ರಿಸುವುದು.
ಈ ಯೋಜನೆಯಡಿ ಸುಮಾರು 500 ಕಿಲೋಮೀಟರ್ (ಅಥವಾ 1 ಗಂಟೆಯ ಪ್ರಯಾಣ) ದೂರದ ಪ್ರಯಾಣಕ್ಕೆ ಟಿಕೆಟ್ ದರವನ್ನು ಗರಿಷ್ಠ ರೂ 2,500 ಗೆ ನಿಗದಿಪಡಿಸಲಾಗಿದೆ,ವಿಮಾನದ ಒಟ್ಟು ಸೀಟುಗಳಲ್ಲಿ ಕನಿಷ್ಠ ಶೇ. 50 ರಷ್ಟು ಸೀಟುಗಳನ್ನು ಈ ರಿಯಾಯಿತಿ ದರದಲ್ಲಿ ನೀಡಬೇಕಾಗುತ್ತದೆ.
ಇದರಿಂದ ವಿಮಾನಯಾನ ಸಂಸ್ಥೆಗಳಿಗೆ ಆಗುವ ನಷ್ಟವನ್ನು ತುಂಬಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೇರಿ ವಿಜಿಎಫ್ (Viability Gap Funding - ಆರ್ಥಿಕ ನೆರವು) ಸಬ್ಸಿಡಿಯನ್ನು ನೀಡುತ್ತವೆ.
ಶಿವಮೊಗ್ಗಕ್ಕೆ ಉಡಾನ್ ಕೊಡುಗೆ
ಶಿವಮೊಗ್ಗದ ಕುವೆಂಪು ವಿಮಾನ ನಿಲ್ದಾಣದ ಯಶಸ್ಸಿನಲ್ಲೂ ಉಡಾನ್ ಯೋಜನೆ ಪ್ರಮುಖ ಪಾತ್ರ ವಹಿಸಿದೆ ಇತ್ತೀಚೆಗೆ ಶಿವಮೊಗ್ಗದಿಂದ ಆರಂಭವಾಗಿರುವ ಹೈದರಾಬಾದ್, ಗೋವಾ, ತಿರುಪತಿ ಮತ್ತು ಚೆನ್ನೈ ವಿಮಾನ ಮಾರ್ಗಗಳು ಕೇಂದ್ರ ಸರ್ಕಾರದ 'ಉಡಾನ್ 5.2' (UDAN 5.2) ಹಂತದ ಯೋಜನೆಯಡಿಯೇ ಕಾರ್ಯನಿರ್ವಹಿಸುತ್ತಿವೆ.
ಇದರಿಂದಾಗಿಯೇ ಮಲೆನಾಡಿನ ಜನರಿಗೆ ಪ್ರಮುಖ ನಗರಗಳಿಗೆ ಕಡಿಮೆ ದರದಲ್ಲಿ ಪ್ರಯಾಣಿಸಲು ಸಾಧ್ಯವಾಗಿದೆ.
ಯೋಜನೆಯ ಅವಧಿ
ಈ ಯೋಜನೆಯನ್ನು ಆರಂಭದಲ್ಲಿ 10 ವರ್ಷಗಳ ಅವಧಿಗೆ ಜಾರಿಗೆ ತರಲಾಗಿದ್ದು ಇದು ದೇಶಾದ್ಯಂತ ನೂರಾರು ಹೊಸ ವಿಮಾನ ನಿಲ್ದಾಣಗಳ ಉದ್ಘಾಟನೆಗೆ ಹಾಗೂ ಪ್ರಾದೇಶಿಕ ಆರ್ಥಿಕ ಬೆಳವಣಿಗೆಗೆ ಕಾರಣವಾಗಿದೆ.
ಆದ್ದರಿಂದ ಶಿವಮೊಗ್ಗ ಬೆಂಗಳೂರಿಗೆ #ಉಡಾನ್ ಯೋಜನೆಯ ವಿಮಾನಗಳು ತಕ್ಷಣ ಕಾಯ೯ನಿರ್ವಹಿಸಲು ಕೇಂದ್ರ ಸರ್ಕಾರ ಮುಂದಾಗಬೇಕು.
ಈ ಮೂಲಕ ಸ್ಥಗಿತಗೊಂಡಿರುವ ಶಿವಮೊಗ್ಗ ಬೆಂಗಳೂರು ವಿಮಾನ ಸಂಚಾರ ಪುನಾರಂಭ ಆಗಲಿ.
#airport #UDAN #shivamogga #bangalore
#flight #kuvempuairport #PrimeMinisterOfIndia
#modi
Comments
Post a Comment