ಕೆಳದಿ_ಗುಂಡಾ_ಜೋಯಿಸರ_ಸ್ಮರಣೆ_ಭಾಗ_1.
#ನನ್ನ_ಮತ್ತು_ಅವರ_ನಡುವೆ_1995_ರಿಂದ_2020ರವರೆಗೆ_ಪತ್ರ_ಸಂಪರ್ಕ_ಇತ್ತು.
#ಮೊದಲ_ಅಂಚೆ_ಕಾರ್ಡ್_ದಿನಾಂಕ_29_ಡಿಸೆಂಬರ್_1995
#ಕೊನೆಯ_ಪತ್ರ_22_ನವೆಂಬರ್_2020
#ಏನೇನು_ನಾವಿಬ್ಬರು_ಚರ್ಚಿಸಿದ್ದೆವು_ಅದೆಲ್ಲ_ನೆನಪಿನ_ದಾಖಲೆ
#ಚಂಪಕ_ಸರಸ್ಸುವಿನ_ವಿಚಾರ
#ಬೆಸ್ತರ_ರಾಣಿ_ಚಂಪಕ
#ಕೆ_ಎನ್_ಗಣೇಶಯ್ಯರ_ಬಳ್ಳಿಕಾಳ_ಬೆಳ್ಳಿ_ಕಾದಂಬರಿಯಲ್ಲಿ_ಕೆಳದಿ_ಗುಂಡಾಜೋಯಿಸರ_ಹೆಸರು
#ಖಳ_ನಾಯಕರಾಗಿ_ಬಿಂಬಿಸಿದ_ಬಗ್ಗೆ
#ಕೆಳದಿ_ಮ್ಯೂಸಿಯಂ_ಸ್ಥಾಪನೆಗೆ_ಸಹಕರಿಸಿದವರ_ಹೆಸರಲ್ಲಿ_S_R_ರಾವ್_ಉಚ್ಚರಿಸದ_ಬಗ್ಗೆ
#ವಿದ್ಯಾರಣ್ಯರ_ಹೆಸರಲ್ಲಿ_ನಕಲಿ_ತಾಮ್ರಪತ್ರದ_ಬಗ್ಗೆ_ಹೀಗೆ_ನೂರಾರು_ವಿಷಯ
ಕೆಳದಿ ಗುಂಡಾ ಜೋಯಿಸರು ಅಪ್ರತಿಮ ಇತಿಹಾಸ ಸಂಶೋಧಕರು ಅವರು ಕೆಳದಿ ಸಾಮ್ರಾಜ್ಯದ ಇತಿಹಾಸ ಸಂಸ್ಕೃತಿ ಮುಂದಿನ ತಲೆಮಾರಿಗೆ ಪ್ರಸರಿಸಲು ತುಂಬಾ ಶ್ರಮ ವಹಿಸಿದ್ದಾರೆ.
ಅವರಿಂದಲೇ ಕೆಳದಿ ಮ್ಯೂಸಿಯಂ ಸ್ಥಾಪನೆ ಆಯಿತು ಅವರು ತಮ್ಮ 92ನೆ ವಯಸ್ಸಿನಲ್ಲೂ ಆನಂದಪುರಂನಲ್ಲಿ ಕೆಳದಿ ರಾಜ ವೆಂಕಟಪ್ಪ ನಾಯಕ ತನ್ನ ಬೆಸ್ತರ ರಾಣಿ ಚಂಪಾಕಾಳಿಗಾಗಿ ನಿರ್ಮಿಸಿದ ಸ್ಮಾರಕ #ಚಂಪಕ_ಸರಸ್ಸು ಸಂದರ್ಶಿಸಿದ್ದರು.
2020ರಲ್ಲಿ ನಾನು ಬರೆದ ಕಾದಂಬರಿ #ಬೆಸ್ತರ_ರಾಣಿ_ಚಂಪಕ ಓದಿ 90ನೇ ವಯಸ್ಸಿನಲ್ಲಿ ಪತ್ರಿಸಿ " ಬೆಸ್ತರ ರಾಣಿ ಚಂಪಕಾ ಕೃತಿಯನ್ನು ಕೆಳದಿ ಇತಿಹಾಸದ ಅಭಿಮಾನಿಯಾಗಿ ಕುತೂಹಲಾಸಕ್ತಿಯಿಂದ ಅವಲೋಕಿಸಿದೆನು ಸೊಗಸಾಗಿ ನಿರೂಪಿಸಿದ್ದೀರಿ ಅಭಿನಂದನೆಗಳು" ಎಂದು ಬರೆದಿದ್ದಾರೆ.
ಇನ್ನೊಂದು ಪತ್ರದಲ್ಲಿ " ಕಿರಿಯ ಬಸವಪ್ಪ ನಾಯಕನ ಕುರಿತ #ಸೇವಂತಿಕಾ_ಪರಿಣಯ (ಕೇರಳ) ನಿಮ್ಮ ಕೃತಿ ನೆನಪಿಸುತ್ತದೆ" ಎಂದು ಬರೆದಿದ್ದಾರೆ.
1995ರಲ್ಲಿ ನಾನು ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಗುಂಡಾಜೋಯಿಸರಿಗೆ 64 ರ ಪ್ರಾಯ ಆಗಲೂ ಅವರು ಬರೆದ ಅಂಚೆ ಕಾರ್ಡಗಳು ನಮ್ಮ ಊರಿನ ಕೆಳದಿ ರಾಜ ವೆಂಕಟಪ್ಪ ನಾಯಕರು ನಿರ್ಮಿಸಿದ ಸ್ಮಾರಕ ಚಂಪಕ ಸರಸ್ಸು ದುರಸ್ತಿಗೆ ಕಾರಣವಾಯಿತು ಅವರ ಪ್ರೇರಣೆಯೇ ನನಗೆ ಬೆಸ್ತರ ರಾಣಿ ಚಂಪಕಾ ಕಾದಂಬರಿ ಬರೆಯಲು ಕಾರಣವಾಯಿತು.
(ನಾಳೆ ಭಾಗ 2 ರಲ್ಲಿ ಮುಂದಿನ ಸ್ಮರಣೆ)
Comments
Post a Comment