Skip to main content

4046. ಮಹಾಮಂಡಲೇಶ್ವರಿ ಚೆನ್ನ ಬೈರಾದೇವಿ ಸಿನಿಮಾ ಆಗಲಿದೆ

ಗೇರುಸೊಪ್ಪೆಯ_ಕಾಳುಮೆಣಸಿನರಾಣಿ
ಚೆನ್ನಬೈರಾದೇವಿ_ಸಿನಿಮಾ_ಆಗಲಿದೆ.

#Pepper_Queen_Raina_de_Pimenta.

    ಈ ಸಿನಿಮಾ ನಿರ್ಮಾಪಕ ಮತ್ತು ನಿರ್ದೇಶಕರು ಯಾರು ಗೊತ್ತಾ? ....

   ದೊಡ್ಡ ಬಜೆಟ್ ಸಿನಿಮಾಗೆ ಯಾರು ಯಾರು ಹಣ ಹಾಕಲಿದ್ದಾರೆ?.....

    ಗೇರುಸೊಪ್ತೆಯ ಜೈನ ರಾಣಿ ಚೆನ್ನ ಬೈರಾದೇವಿ ಆಡಳಿತಾವಧಿ ಕ್ರಿ.ಶ. 1552 ರಿಂದ 1606.

 ಗೇರುಸೊಪ್ಪೆ ಮತ್ತು ಉತ್ತರ ಕನ್ನಡದ ಮಲೆನಾಡು ಭಾಗದಲ್ಲಿ ಜಗತ್ತಿನಲ್ಲೇ ಅತ್ಯುತ್ತಮ ಗುಣಮಟ್ಟದ #ಕಾಳುಮೆಣಸನ್ನು Black Pepper ಬೆಳೆಯಲಾಗುತ್ತಿತ್ತು.

   ಇದನ್ನು ಯುರೋಪಿಯನ್ ರಾಷ್ಟ್ರಗಳಿಗೆ ರಾಣಿ ಚೆನ್ನ ಬೈರಾದೇವಿ ರಫ್ತು ಮಾಡುತ್ತಿದ್ದಾಗ ಆ ಕಾಳು ಮೆಣಸಿನ ವ್ಯಾಪಾರದ ಮೇಲಿನ ಅವರ ಏಕಸ್ವಾಮ್ಯ ಮತ್ತು ನಿಯಂತ್ರಣವನ್ನು ನೋಡಿ ಬ್ರಿಟಿಷರು ಮತ್ತು ಪೋರ್ಚುಗೀಸರು ಗೇರುಸೊಪ್ಪೆಯ ರಾಣಿ ಚೆನ್ನಬೈರಾದೇವಿಯವರಿಗೆ ಗೌರವದಿಂದ #ರೈನಾ_ಡಿ_ಪಿಮೆಂಟಾ Raina de Pimenta ಅಂದರೆ " ಕಾಳು ಮೆಣಸಿನ ರಾಣಿ" ಎಂದು ಬಿರುದು ನೀಡಿ ಕರೆದರು.

  ಶರಾವತಿ ನದಿ ದಂಡೆಯ ಜೈನ ರಾಣಿ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಚೆನ್ನ ಬೈರಾದೇವಿ ರಾಜ್ಯವನ್ನ ವರದಾ ನದಿ ದಂಡೆಯ #ಕೆಳದಿ_ರಾಜ_ವೆಂಕಟಪ್ಪನಾಯಕ ವಶಪಡಿಸಿಕೊಳ್ಳುತ್ತಾರೆ ಆ ಸಂದರ್ಭದಲ್ಲಿ ರಾಣಿ ಚೆನ್ನ ಬೈರಾದೇವಿಯನ್ನು #ಆನಂದಪುರಂ ಕೋಟೆಯಲ್ಲಿ ಬಂದಿಸಿಡುತ್ತಾರೆ.

   ನಂತರ ಸಾಗರದ ಇಕ್ಕೇರಿ ಕೋಟೆಯಲ್ಲಿ ಬಂದನ ಮುಂದುವರಿಸುತ್ತಾರೆ ಆದರೆ ರಾಣಿ ಚೆನ್ನ ಬೈರಾದೇವಿ ತನ್ನ ಜೈನ ಧರ್ಮದ #ಸಲ್ಲೇಖನ_ವೃತ ಕೈಗೊಂಡು ಜಿನೈಕಳಾಗುತ್ತಾರೆ.

   ಇವರ ಸಮಾದಿ ಸಮೀಪದ ಅವಿನಹಳ್ಳಿಯಲ್ಲಿ ಮಾಡಿದ್ದಾರೆ ಅಲ್ಲಿ ನಿಷದಿ ಶಾಸ್ತ್ರದ ಪ್ರಕಾರ ಜೈನ ಸಮಾದಿ ಮುಂದಿರವನ್ನು ಕೆಳದಿ ರಾಜ ವೆಂಕಟಪ್ಪ ನಾಯಕರು ತನ್ನ ಸಮಕಾಲಿನ ರಾಣಿಗೆ ಗೌರವ ಪೂರ್ವಕವಾಗಿ ನಿರ್ಮಿಸಿದ್ದಾರೆ.

   ಖ್ಯಾತ ಇತಿಹಾಸಕಾರ #ಕರ್ನಲ್_ಕಾಲಿನ್_ಮೆಕೆಂಜಿ 1806 ರಲ್ಲಿ ಅಂದರೆ ರಾಣಿ ಸಮಾದಿಯಾಗಿ 200 ವರ್ಷದ ನಂತರ ಆವಿನಹಳ್ಳಿಗೆ ಬೇಟಿ ನೀಡಿ ಈ ನಿಷಧಿ ಸಮಾದಿ ಮಂದಿರ ದಾಖಲಿಸಿದ್ದಾರೆ.

    ಆ ನಂತರ ಅಂದರೆ 215 ವರ್ಷಗಳ ನಂತರ ಶಿವಮೊಗ್ಗದ ಇತಿಹಾಸ ಸಂಶೋದಕ #ದೀಪಕ್_ನಾಡಿಗ್ ಕರ್ನಲ್ ಕಾಲಿನ್ ಮೆಕೆಂಜೆ  ದಾಖಲೆಸಿದ ಮಾರ್ಗದಲ್ಲೇ ಸಂಶೋದನೆ ಮಾಡಿ ಸಂಚರಿಸಿ #ಆವಿನಹಳ್ಳಿಯ ರಾಣಿ ಚೆನ್ನ ಬೈರಾದೇವಿ ಸಮಾದಿ ಸ್ಥಳ ತಲುಪಿದ್ದನ್ನ ದಾಖಲಿಸಿದ್ದಾರೆ.

   ಕಾಲಾಂತರದಲ್ಲಿ ಸ್ಥಳೀಯರು ಈ ಜೈನ ರಾಣಿ ಸಮಾದಿ ಸ್ಥಳವನ್ನ ಈಶ್ವರ ದೇವಾಲಯವಾಗಿ ಪರಿವರ್ತಿಸಿಕೊಂಡು ಪೂಜಿಸುತ್ತಿದ್ದಾರೆ.

  ಇದನ್ನು ಕೇಂದ್ರ ಸರ್ಕಾರದ ಪುರಾತತ್ವ ಇಲಾಖೆ ರಾಷ್ಟ್ರೀಯ ಸ್ಮಾರಕವಾಗಿ ಮಾಡಬೇಕು ಮತ್ತು ಸ್ಥಳೀಯರಿಗೆ ಪ್ರತ್ಯೇಕ ದೇವಾಲಯವನ್ನ ಜೈನ ಧರ್ಮದ #ಹೊಂಬುಜ ಮಠ, #ಕಾರ್ಕಳದ ಸಾವಿರ ಬಸದಿ ಜೈನ ಮಠ, #ಶ್ರವಣಬೆಳಗೋಳದ ಜೈನ ಮಠ ಮತ್ತು #ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ನಿರ್ಮಿಸಿ ಕೊಡಲು ಮುಂದೆ ಬರಬೇಕಾಗಿದೆ.

  ಖ್ಯಾತ ನಿರ್ದೇಶಕ ಬಂದನ ಸಿನಿಮಾ ಖ್ಯಾತಿಯ #ರಾಜೇಂದ್ರ_ಸಿಂಗ್_ಬಾಬು ಅವರು ಈಗ #ರಾಣಿ_ಚೆನ್ನಭೈರಾದೇವಿ' ಚಲನಚಿತ್ರ ನಿರ್ದೇಶಲಿದ್ದಾರೆ ಎಂಬ ಸುದ್ದಿ ಬಂದಿದೆ.

 ​ಈ ಬಿಗ್ ಬಜೆಟ್ ಸಿನಿಮಾವನ್ನು ಎ.ಆರ್. ಪ್ರೊಡಕ್ಷನ್ಸ್ ಬಾಬಾಸ್ ಬ್ಲೆಸ್ಸಿಂಗ್ಸ್ #A_R_Productions_Baba's_Blessing's ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲು ಯೋಜಿಸಲಾಗಿದೆ.

​   ಇದೇ ಬ್ಯಾನರಡಿಯಲ್ಲಿ ರಾಜೇಂದ್ರ ಸಿಂಗ್ ಬಾಬು ಕರಾವಳಿ ಸಂಸ್ಕೃತಿಯ ಚಿತ್ರವಾದ #ವೀರ_ಕಂಬಳ ಸಿನಿಮಾ ನಿರ್ದೇಶಿಸಿದ್ದರು.

   ಈಗ ಮೆಣಸಿನ ರಾಣಿ ಚೆನ್ನಭೈರಾದೇವಿ ಕಥೆಯನ್ನು ಅದ್ದೂರಿ ವೆಚ್ಚದಲ್ಲಿ ದೊಡ್ಡ ಪರದೆಗೆ ತರಲು ಈ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ.

   ​#ಡಾ_ಗಜಾನನ_ಶರ್ಮ ಅವರ ಪ್ರಸಿದ್ಧ ಕಾದಂಬರಿಯನ್ನು ಆಧಾರವಾಗಿಟ್ಟುಕೊಂಡು ಈ ಚಿತ್ರದ ಚಿತ್ರಕಥೆ ಸಿದ್ಧವಾಗುತ್ತಿದ್ದು, ಚಿತ್ರಕ್ಕೆ ಹಣ ಹೂಡಲು ಪ್ರಮುಖ ಕಾರ್ಪೊರೇಟ್ ಸಂಸ್ಥೆಗಳು ಹಾಗೂ ಉದ್ಯಮಿಗಳು ಕೂಡ ಆಸಕ್ತಿ ತೋರಿಸುತ್ತಿದ್ದಾರೆ ಎಂದು ತಿಳಿದುಬಂದಿತ್ತು ಆದರೆ ಈಗ ತಿಳಿದ ಮಾಹಿತಿ ಈ ಸಿನಿಮಾ ಗಜಾನನ ಶರ್ಮರ ಚೆನ್ನ ಬೈರಾದೇವಿ ಕಾದಂಬರಿ ಆಧಾರಿತ ಅಲ್ಲ ಎಂದು ಇದು ದಿವಂಗತ ನಾಡೋಜ #ಕಮಲಹಂಪನಾ,ನಾಡೋಜ #ಹಂಪನಾನಾಗರಾಜಯ್ಯ ಮತ್ತು ಸಾಗರ ತಾಲೂಕಿನವರೇ ಆದ ಇತಿಹಾಸ ಸಂಶೋಧಕ #ಲೋಕರಾಜ್_ಜೈನ್ ಕಥೆ ಆದರಿಸಿ ರಾಜೇಂದ್ರ ಸಿಂಗ್ ಬಾಬು ಸಿನಿಮಾ ಚಿತ್ರಕಥೆ ತಯಾರಿಸಿದ್ದಾರೆ ಎಂದು ಸ್ವತಃ ಸಾಗರದ ಲೋಕರಾಜ್ ಜೈನ್ ತಿಳಿಸಿದ್ದಾರೆ.
 
   ಚಿತ್ರರಂಗದ ಮೂಲಗಳು ಮತ್ತು ಲಭ್ಯವಿರುವ ಮಾಹಿತಿಯ ಪ್ರಕಾರ ಈ ಚಿತ್ರ​ಭಾರಿ ವೆಚ್ಚದ ಐತಿಹಾಸಿಕ ಸಿನಿಮಾ ಆಗಲಿದೆ.

  ಇದು 16ನೇ ಶತಮಾನದ ಗೇರುಸೊಪ್ಪೆಯ ವೈಭವ, ಪೋರ್ಚುಗೀಸರ ವಿರುದ್ಧದ ನೌಕಾ ಮತ್ತು ಭೂ ಯುದ್ಧಗಳು ಹಾಗೂ ಅರಮನೆಯ ಸೆಟ್‌ಗಳನ್ನು ಮರುಸೃಷ್ಟಿಸಬೇಕಾದ ಕಥೆಯಾಗಿದೆ ಹಾಗಾಗಿ ಇದು ಕನ್ನಡ ಚಿತ್ರರಂಗದಲ್ಲಿ ಅತಿ ದೊಡ್ಡ ಬಜೆಟ್‌ನ  ಚಿತ್ರಗಳಲ್ಲಿ ಒಂದಾಗಲಿದೆ.

  ಧರ್ಮಸ್ಥಳದ ಧರ್ಮಾಧಿಕಾರಿಗಳಾದ #ಡಾ_ಡಿ_ವೀರೇಂದ್ರ_ಹೆಗ್ಗಡೆಯವರ ಆಶಯದಂತೆ ಮೂಡಿಬರುತ್ತಿರುವ ಈ ಚಿತ್ರಕ್ಕೆ ಭಾರಿ ಬಂಡವಾಳದ ಅಗತ್ಯವಿರುವುದರಿಂದ ದೊಡ್ಡ ಪ್ರೊಡಕ್ಷನ್ ಹೌಸ್‌ಗಳು ಹಾಗೂ ಕಾರ್ಪೊರೇಟ್ ಸಂಸ್ಥೆಗಳು ಜಂಟಿಯಾಗಿ ಹಣ ಹೂಡಲು ಮಾತುಕತೆ ನಡೆಸುತ್ತಿವೆ.

​ಸಿನಿಮಾದ ಪ್ರಿ-ಪ್ರೊಡಕ್ಷನ್ ಕೆಲಸಗಳು ಸಂಪೂರ್ಣವಾಗಿ ಮುಗಿದು, ತಾರಾಗಣ ಮುಖ್ಯವಾಗಿ ರಮ್ಯಾ ಅವರ ಆಯ್ಕೆ ಅಂತಿಮಗೊಂಡು ಚಿತ್ರೀಕರಣದ ಮುಹೂರ್ತ ನಿಗದಿಯಾದಾಗ ನಿರ್ಮಾಪಕರು ಅಧಿಕೃತ ಬಜೆಟ್ ಮೊತ್ತವನ್ನು ಪ್ರಕಟಿಸುವ ಸಾಧ್ಯತೆ ಇದೆ.

   ​ರಾಜೇಂದ್ರ ಸಿಂಗ್ ಬಾಬು ಅವರು ನಿರ್ದೇಶಿಸುತ್ತಿರುವ ಈ ಚಿತ್ರಕ್ಕಾಗಿ 'ರಾಣಿ ಚೆನ್ನಭೈರಾದೇವಿ' ಅಥವಾ 'ಗೇರುಸೊಪ್ಪೆಯ ರಾಣಿ ಚೆನ್ನಭೈರಾದೇವಿ' ಎಂಬ ಹೆಸರನ್ನು 'ಎ ಆರ್ ಪ್ರೊಡಕ್ಷನ್ಸ್' ಸಂಸ್ಥೆಯು ಈಗಾಗಲೇ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ  ಅಧಿಕೃತವಾಗಿ ಕಾಯ್ದಿರಿಸಿದೆ ಎಂದು ವರದಿಯಾಗಿದೆ.

    ರಾಣಿ ಚೆನ್ನಭೈರಾದೇವಿ' ಸಿನಿಮಾವನ್ನು ನಿರ್ಮಿಸುತ್ತಿರುವ ಎ ಆರ್ ಪ್ರೊಡಕ್ಷನ್ಸ್ ಬಾಬಾಸ್ ಬ್ಲೆಸ್ಸಿಂಗ್ಸ್ ಸಂಸ್ಥೆಯ ಮುಖ್ಯ ಮಾಲೀಕರು ಮತ್ತು ನಿರ್ಮಾಪಕರು 
#ಅರುಣ್_ರೈ_ತೋಡಾರ್ ಮತ್ತು
#ಡಾ_ವಿನಿತಾವಿಜಯಕುಮಾರ್_ರೆಡ್ಡಿ ​ಈ ಇಬ್ಬರು ಪ್ರಮುಖ ನಿರ್ಮಾಪಕರು ಈ ಸಂಸ್ಥೆಯ ಅಡಿಯಲ್ಲಿ ಚಿತ್ರಗಳಿಗೆ ಬಂಡವಾಳ ಹೂಡುತ್ತಿದ್ದಾರೆ.

​ ಇತ್ತೀಚೆಗೆ ರಾಜೇಂದ್ರ ಸಿಂಗ್ ಬಾಬು ಅವರ ನಿರ್ದೇಶನದಲ್ಲೇ ಕರಾವಳಿಯ ಜಾನಪದ ಕ್ರೀಡೆಯನ್ನು ಆಧಾರವಾಗಿಟ್ಟುಕೊಂಡು ವೀರ ಕಂಬಳ ಸಿನಿಮಾವನ್ನು ಕೂಡ ಇದೇ ಸಂಸ್ಥೆ ಅದ್ದೂರಿಯಾಗಿ ನಿರ್ಮಿಸಿದ್ದರು ಆ ಚಿತ್ರ ಯಶಸ್ವಿಯಾದ ಬೆನ್ನಲ್ಲೇ ಅದೇ ಉತ್ಸಾಹದಲ್ಲಿ ಈಗ ರಾಣಿ ಚೆನ್ನಭೈರಾದೇವಿ ಅವರ ಐತಿಹಾಸಿಕ ಕಥೆಯನ್ನು ದೊಡ್ಡ ಮಟ್ಟದಲ್ಲಿ ತೆರೆಗೆ ತರಲು ಈ ಮಾಲೀಕರು ಸಜ್ಜಾಗುತ್ತಿದ್ದಾರೆ.

​ ರಾಣಿ ಚೆನ್ನಭೈರಾದೇವಿ ಸಿನಿಮಾಗಳನ್ನು ನಿರ್ಮಿಸುತ್ತಿರುವ ' ಎ ಆರ್ ಪ್ರೊಡಕ್ಷನ್ಸ್' ಸಂಸ್ಥೆಯ ಮುಖ್ಯ ನಿರ್ಮಾಪಕ ಅರುಣ್ ರೈ ತೋಡಾರ್  ಇವರು ಮೂಲತಃ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಹತ್ತಿರದ ತೋಡಾರ್ ಎನ್ನುವ ಗ್ರಾಮದವರು.

​  ಇವರು ಕರಾವಳಿಯ ಸಂಸ್ಕೃತಿ, ಕಲೆ ಹಾಗೂ ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ'ದೊಂದಿಗೆ ಆಳವಾದ ಒಡನಾಟ ಹೊಂದಿರುವವರು.

 ಇದೇ ಕಾರಣಕ್ಕೆ ಇವರು ರಾಜೇಂದ್ರ ಸಿಂಗ್ ಬಾಬು ಅವರ ಜೊತೆಗೂಡಿ ಮೊದಲು #ವೀರ_ಕಂಬಳ ಸಿನಿಮಾ ನಿರ್ಮಿಸಿದರು. 

 ಈಗ ಕರಾವಳಿಯದ್ದೇ ಇತಿಹಾಸವಾಗಿರುವ ಗೇರುಸೊಪ್ಪೆಯ ಕಾಳು ಮೆಣಸಿನ ರಾಣಿ ಚೆನ್ನಭೈರಾದೇವಿ ಅವರ ಕಥೆಯನ್ನು ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ.

​  ಡಾ. ವಿನಿತಾ ವಿಜಯಕುಮಾರ್ ರೆಡ್ಡಿ ಇವರು ಮೂಲತಃ ಕರ್ನಾಟಕದ ಗಡಿಭಾಗದ ಹಾಗೂ ನೆರೆರಾಜ್ಯದ ಹಿನ್ನೆಲೆಯುಳ್ಳವರಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

​  ಉದ್ಯಮಿಯಾಗಿ, ಶಿಕ್ಷಣ ತಜ್ಞೆಯಾಗಿ ಗುರುತಿಸಿಕೊಂಡಿರುವ ಇವರು ಕಲೆ ಮತ್ತು ಚಲನಚಿತ್ರ ರಂಗದ ಮೇಲಿನ ಆಸಕ್ತಿಯಿಂದಾಗಿ ಅರುಣ್ ರೈ ಅವರ ಜೊತೆ ಸೇರಿ ಈ ದೊಡ್ಡ ಬಜೆಟ್‌ನ ಐತಿಹಾಸಿಕ ಸಿನಿಮಾಗಳಿಗೆ ಬಂಡವಾಳ ಹೂಡುತ್ತಿದ್ದಾರೆ.

    ಈ ಹೊಸ ರಾಣಿ ಚೆನ್ನಭೈರಾದೇವಿ ಐತಿಹಾಸಿಕ ಸಿನಿಮಾ ಸದ್ಯ ಪ್ರಿ-ಪ್ರೊಡಕ್ಷನ್ ಚಿತ್ರೀಕರಣದ ಪೂರ್ವ ತಯಾರಿ ಹಂತದಲ್ಲಿದೆ ಹಾಗಾಗಿ ಅಧಿಕೃತ ಚಿತ್ರೀಕರಣ ಇನ್ನು ಆರಂಭವಾಗದ ಕಾರಣ ನಿರ್ದಿಷ್ಟ ಲೊಕೇಶನ್‌ಗಳ ಸಂಪೂರ್ಣ ಪಟ್ಟಿಯನ್ನು ಚಿತ್ರತಂಡ ಇನ್ನು ಬಿಟ್ಟುಕೊಟ್ಟಿಲ್ಲ.

​  ಕಥೆಯ ಹಿನ್ನೆಲೆ ಮತ್ತು ನಿರ್ದೇಶಕರ ಯೋಜನೆಗಳ ಪ್ರಕಾರ ಸಾಧ್ಯವಿರುವ ಪ್ರಮುಖ ಶೂಟಿಂಗ್ ಲೊಕೇಶನ್‌ಗಳು ರಾಣಿ ಚೆನ್ನಭೈರಾದೇವಿ ಆಳಿದ ಸಾಮ್ರಾಜ್ಯದ ನೈಜ ಚಿತ್ರಣವನ್ನು ನೀಡಲು ಕರಾವಳಿಯ ನೈಜ ತಾಣಗಳಲ್ಲೇ ಶೂಟಿಂಗ್ ಮಾಡಲು ಚಿತ್ರತಂಡ ಯೋಜಿಸುತ್ತಿದೆ.

 ​ಗೇರುಸೊಪ್ಪೆ ಮತ್ತು ಹೊನ್ನಾವರ  ಇದು ರಾಣಿಯ ರಾಜಧಾನಿಯಾಗಿದ್ದರಿಂದ ಇಲ್ಲಿನ ಶರಾವತಿ ನದಿ ತೀರ ಮತ್ತು ಐತಿಹಾಸಿಕ ಜೈನ ಬಸದಿಗಳ ಸುತ್ತಮುತ್ತ ಪ್ರಮುಖ ದೃಶ್ಯಗಳನ್ನು ಸೆರೆಹಿಡಿಯುವ ಸಾಧ್ಯತೆ ಇದೆ.

​  ರಾಣಿ ಚೆನ್ನಭೈರಾದೇವಿ ಭದ್ರಪಡಿಸಿದ ಮತ್ತು ಆಕೆಯ ಆಡಳಿತದ ಪ್ರಮುಖ ಕೇಂದ್ರವಾಗಿದ್ದ ಕುಮಟಾ ಬಳಿಯ ಮಿರ್ಜಾನ್ ಕೋಟೆಯಲ್ಲಿ ಪ್ರಮುಖ ಐತಿಹಾಸಿಕ ದೃಶ್ಯಗಳ ಚಿತ್ರೀಕರಣ ನಡೆಯುವ ಸಾಧ್ಯತೆ ದಟ್ಟವಾಗಿದೆ.

​ ಪೋರ್ಚುಗೀಸರ ವಿರುದ್ಧ ನಡೆದ ಸಮುದ್ರದ ಯುದ್ಧಗಳು ಮತ್ತು ಮೆಣಸಿನ ವ್ಯಾಪಾರದ ಬಂದರುಗಳ ದೃಶ್ಯಗಳಿಗಾಗಿ ಉತ್ತರ ಕನ್ನಡದ ಕಡಲತೀರಗಳನ್ನು ಬಳಸಿಕೊಳ್ಳುವ ಸಾಧ್ಯತೆ ಇದೆ.

16ನೇ ಶತಮಾನದ ವೈಭವದ ಗೇರುಸೊಪ್ಪೆ ಅರಮನೆ ಮತ್ತು ಯುದ್ಧದ ಕೋಟೆಗಳನ್ನು ಮರುಸೃಷ್ಟಿಸಲು ಬೆಂಗಳೂರಿನ ಪ್ರಮುಖ ಸ್ಟುಡಿಯೋಗಳಲ್ಲಿ ಕಂಠೀರವ ಸ್ಟುಡಿಯೋ ಅಥವಾ ಇನ್ನಿತರ ದೊಡ್ಡ ಫಿಲ್ಮ್ ಸಿಟಿಗಳಲ್ಲಿ ಭಾರಿ ವೆಚ್ಚದ ಸೆಟ್‌ಗಳನ್ನು ಹಾಕಲು ನಿರ್ಮಾಣ ಸಂಸ್ಥೆಯಾದ 'ಎ ಆರ್ ಪ್ರೊಡಕ್ಷನ್ಸ್' ಉದ್ದೇಶಿಸಿದೆ.

#gerusoppe #gajananasharma #chennabyradevi #dharmasthala #veerendrahegde #rajendrasingbabu #arproduction

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...