Skip to main content

ಕೊರಾನಾ ಲಾಕ್ ಡೌನ್ ಡೈರಿ 33. ಕೊರೆಂಟೈನ್ ಗೆ ಅವಕಾಶ ನೀಡದ ಸ್ಥಳಿಯರು, ರೋಗ ಪೀಡಿತರನ್ನ ಗುಜರಾತಿನಿಂದ ಶಿವಮೊಗ್ಗಕ್ಕೆ ಕರೆತಂದ ಬಸ್ ಡ್ರೈವರ್ ವಾಪಾಸ್ ಕಳಿಸಿದ್ದರಿಂದ ಗುಜರಾತಿನವರೆಗೆ ರೋಗ ಹರಡುವ ಸಂಭವ!?

ಕೊರಾನಾ ಲಾಕ್ ಡೌನ್ ಡೈರಿ -2020
              ಲೆಟರ್ ನಂಬರ್- 33
           ದಿನಾ೦ಕ: 12 -ಮೇ -2020

#ಕೊರೆ೦ಟೈನ್_ಜಾಗನಿರಾಕರಿಸುವ_ಜನತೆ.
#ಗುಜರಾತಿನಿಂದ_ಕೊರಾನಾ_ಪಾಸಿಟಿವ್_ಇದ್ದವರನ್ನ_ಶಿವಮೊಗ್ಗಕ್ಕೆ_ಬಸ್ನಲ್ಲಿ_ಕರೆತಂದ_ಡ್ರೈವರ್_ಪರೀಕ್ಷೆ_ಮಾಡದೆ_ಕಳಿಸಿದ್ದಾರೆ!?.
     "ಆದರೆ ರೋಗದ ಸೋ೦ಕಿತರೆಲ್ಲರನ್ನ ಕರೆತಂದ ಚಾಲಕನಿಗೆ ರೋಗ ತಲುಪದೆ ಇರಲು ಸಾಧ್ಯವಿಲ್ಲ ಈಗ ಆತ ಶಿವಮೊಗ್ಗದಿಂದ ಗುಜರಾತಿನವರೆಗೆ ರೋಗ ಹರಡುತ್ತಾನೆಂಬ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಕಳಿಸಿರುವುದು ಮಾತ್ರ ದೊಡ್ಡ ದುರ೦ತ"

    ಮಾರಣಾ೦ತಿಕ ವೈರಸ್ ನಿಯ೦ತ್ರಣಕ್ಕೆ ಸಕಾ೯ರದ ಎಲ್ಲಾ ಅಧೀನ ಇಲಾಖೆ ಶಕ್ತಿ ಮೀರಿ ಕೆಲಸ ಮಾಡುತ್ತಿದೆ.
    ಮುಂಬೈನಲ್ಲಿ ಸಮುದಾಯ ಪ್ರಸರಣದ ಹಂತ ತಲುಪಿರುವ ವದಂತಿ ಇದೆ.
   3ನೇ ಹಂತದ ಲಾಕ್ ಡೌನ್ ನಿಯಂತ್ರಣ ಸಡಲೀಕರಣ ಮಾಡಿದ ನಂತರ ಅಂತರ್ ಜಿಲ್ಲೆ ಮತ್ತು ಅಂತರ್ ರಾಜ್ಯ ಪ್ರಯಾಣಕ್ಕೆ ಅನುಮತಿ, ಸರಕು ಸಾಗಾಣಿಕೆಗೆ ಅವಕಾಶ ನೀಡಿದ್ದರಿಂದ ಅನೇಕರನ್ನ ವೈರಸ್ ಶಂಕೆಯಿ೦ದ ಕೊರಂಟೈನ್ನಲ್ಲಿ ಕೆಲದಿನ ನಿರೀಕ್ಷಣೆಗೆ ಒಳಪಡಿಸಲೇ ಬೇಕಾಗಿದೆ ಇದಕ್ಕಾಗಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಕಾ೯ರದ ವಿದ್ಯಾಥಿ೯ ನಿಲಯಗಳನ್ನ ಬಳಸುತ್ತಿದ್ದಾರೆ.
   ಆದರೆ ಇತ್ತೀಚಿಗೆ ಸ್ಥಳಿಯರು ಕೊರಾ೦ಟೈನ್ ಗೆ ತಮ್ಮ ಊರಿನ ಸಕಾ೯ರಿ ಕಟ್ಟಡಗನ್ನ ಬಳಸಲು ಅಡ್ಡಿಪಡಿಸುತ್ತಿದ್ದಾರೆ ಇದು ಈಗ ಎಲ್ಲಾ ಕಡೆಯೂ ಸಾ೦ಕ್ರಮಿಕವಾಗಿ ಸ್ಥಳಿಯರ ವಿರೋದ ಜಾಸ್ತಿ ಆಗಿದೆ.
  ಇದು ತಪ್ಪು, ಕೊರOಟೈನ್ ಪೀಡಿತರಿಗೆ ಜನರಿಂದ ದೂರವಾಗಿ ಕೆಲ ದಿನ ಇಟ್ಟು ಪುನಃ ಪರೀಕ್ಷೆ ಮಾಡಿ ವೈರಸ್ ಸೋoಕು ಇಲ್ಲದವರಿಗೆ ಸಮುದಾಯದ ಜೊತೆ ಇರಲು ನೀಡುವ ಒಂದು ಸುರಕ್ಷ ವಿಧಾನ ಇದರಿಂದ ಈ ರೋಗ ನಿಯಂತ್ರಣ ಸಾಧ್ಯ ಎಂಬುದು ಜನತೆಗೆ ಜಾಗೃತಿ ಮಾಡಲು ನಾವು ಎಡವಿದ್ದೇವೆ.
    ಜನತೆಗೆ ಸದ್ಯ ಇರುವ ಭಯ ಕೊರOಟೈನ್ ಅಂದರೆ ಎಲ್ಲರಿಗೂ ಸೋ೦ಕು ಇರುತ್ತೆ ಮತ್ತು ಸುತ್ತಲಿನ ಪ್ರದೇಶಕ್ಕೆ ಹರುಡುತ್ತದೆ ಎಂಬ ತಪ್ಪು ಕಲ್ಪನೆ ಉoಟಾಗಿದೆ.
  ಇದನ್ನ ಕಾನೂನು ಚಲಾಯಿಸಿ ಜನರನ್ನ ವಿರೋದಿಸದಂತೆ ಮಾಡಲು ಪ್ರಯತ್ನಿಸುವುದರಿಂದ ಸಾವ೯ಜನಿಕರ ಸಹಕಾರ ಕಳೆದುಕೊಳ್ಳುವ ಸಂಭವ ಜಾಸ್ತಿ ಹಾಗಾಗಿ ಸ್ಥಳಿಯರನ್ನ ವಿಶ್ವಾಸಕ್ಕೆ ಪಡೆದು ಕೊರಂಟೈನ್ ವಿರೋದಿಸದಂತೆ ಮನ ಒಲಿಸ ಬೇಕು.
   ಶಿವಮೊಗ್ಗದಲ್ಲಿ ಅಧಿಕಾರಿ ಒಬ್ಬರು ಕೊರOಟೈನ್ ವಿರೋದಿಸಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಬೆದರಿಕೆಯOತ ಹೇಳಿಕೆ ನೀಡಿದ್ದು ಮುಖ್ಯಮ೦ತ್ರಿ ಜಿಲ್ಲೆಯಲ್ಲಿ ಸಾವ೯ಜನಿಕರು ಮತ್ತು ಸಕಾ೯ರದ ಮದ್ಯ ಕಂದಕ ಏಪ೯ಟ್ಟಿದ್ದರಿಂದ ತಕ್ಷಣ ಆ ಅಧಿಕಾರಿಯನ್ನ ವಗಾ೯ಯಿಸಿ ಮುಖ್ಯಮಂತ್ರಿಗಳು ವಾತಾವರಣ ತಿಳಿಗೊಳಿಸಿದರು.
  ಅಧಿಕಾರಿ ಮಣಿವಣ್ ನ್ ಸಮಥ೯ರು ಆದರೆ ಅವರ ಹೇಳಿಕೆ ಹಾಟ್ ಹೆಡ್ಡೆಡ್ ಆದ್ದರಿಂದ ಯಡೂರಪ್ಪರಿಗೆ ಅನಿವಾಯ೯ ಆಗಿರ ಬೇಕು.
   ಇನ್ನು ಗುಜರಾತಿನಿಂದ ಶಿವಮೊಗ್ಗಕ್ಕೆ ಬಂದ ಬಸ್ ನಲ್ಲಿ ಎಲ್ಲರೂ ಸೋ೦ಕಿತರೇ ಹಾಗಾಗಿ ಅವರನ್ನ ಶಿವಮೊಗ್ಗದ ಮೆಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಿದ್ದಾರೆ ಆದರೆ ಗುಜರಾತಿನ ಬಸ್ ಮತ್ತು ಡ್ರೈವರ್ ನ್ನ ಯಾವುದೇ ಪರೀಕ್ಷೆ ಮಾಡದೆ ವಾಪಾಸ್ ಕಳಿಸಿದ್ದಾರೆ.
  ಇದಕ್ಕೆ ಅಧಿಕಾರಿಗಳು ಹೇಳುವುದು ಹಿಂದಿರುಗುವ ಪಾಸ್ ಅವನಲ್ಲಿ ಇತ್ತು ಅಂತ!?
  ಆದರೆ ರೋಗದ ಸೋ೦ಕಿತರೆಲ್ಲರನ್ನ ಕರೆತಂದ ಚಾಲಕನಿಗೆ ರೋಗ ತಲುಪದೆ ಇರಲು ಸಾಧ್ಯವಿಲ್ಲ ಈಗ ಆತ ಶಿವಮೊಗ್ಗದಿಂದ ಗುಜರಾತಿನವರೆಗೆ ರೋಗ ಹರಡುತ್ತಾನೆಂಬ ಮುನ್ನೆಚ್ಚರಿಕೆ ತೆಗೆದುಕೊಳ್ಳದೆ ಕಳಿಸಿರುವುದು ಮಾತ್ರ ದೊಡ್ಡ ದುರ೦ತ.
  ಬಸ್ ನ್ನ ಸಂಪೂಣ೯ ಸ್ಯಾನಿಟೇಶನ್ ಮಾಡಲಾಗಿದೆಯೋ?ಗೊತ್ತಿಲ್ಲ!?

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ