Skip to main content

ಕೊರಾನ ಲಾಕ್ ಡೌನ್ ಡೈರಿ - (37).ಲಾಕ್ ಡೌನ್ - 4 ರ ವಿನಾಯ್ತಿಗಳು ಕೊರಾನ ವೈರಸ್ ನಿಯ೦ತ್ರಣಕ್ಕೆ ಸಹಕಾರಿ ಅಲ್ಲ, ರಾಜ್ಯ ಸಕಾ೯ರದ ನಡೆ ಬೇರೆ ರಾಜ್ಯದ ತೀಮಾ೯ನದOತಿಲ್ಲ, ಕೊರಾನ ವೈರಸ್ ನ ಅನಾಹುತಕಾರಿ ಹಂತ ತಲುಪಿದರೆ ಹೊಣೆ ಯಾರದ್ದು?

ಕೊರಾನಾ ಲಾಕ್ ಡೌನ್ ಡೈರಿ -2020
              ಲೆಟರ್ ನಂಬರ್- 37
           ದಿನಾ೦ಕ: 19 -ಮೇ -2020

#ಲಾಕ್_ಡೌನ್_4_ಕೊರಾನ_ಹರಡಲು_ಫ್ರೀಪಾಸ್.
    
  * ಇಷ್ಟು ದಿನದ ನಿಯOತ್ರಣ ಮುಂಜಾಗೃತೆಯನ್ನ ಅಪಹಾಸ್ಯ ಮಾಡಿದಂತೆ ಲಾಕ್ ಡೌನ್ -4 ರ ವಿನಾಯತಿಗಳು.

   ಈ ಕಾಯಿಲೆಗೆ ಔಷದಿ ಕಂಡು ಹಿಡಿದಿಲ್ಲ ಅಲ್ಲಿ ತನಕ ನಮ್ಮದು ತಂತಿ ಮೇಲಿನ ನಡುಗೆ, ಇಲ್ಲಿವರೆಗೆ ನಮ್ಮ ನಮ್ಮ ಮಿತಿಯ ನಿಯ೦ತ್ರಣ ಇನ್ನೂ ಮುಂದೂ ನೀರಿಕ್ಷಿಸಲು ಸಾಧ್ಯವಿಲ್ಲ.
  ಯಾಕೆಂದರೆ ಅನೇಕ ರಾಜ್ಯಗಳು ಕೇಂದ್ರ ಸಕಾ೯ರ ವಿನಾಯಿತಿ ನೀಡಿದರೂ ಪರಿಸ್ಥಿತಿಯ ಗಂಬೀರತೆ ನೋಡಿ ಮೇ ತಿಂಗಳ 31 ರವರೆಗೆ ಲಾಕ್ ಡೌನ್ ಮುಂದುವರಿಸಿದೆ.
   ಆದರೆ ಕನಾ೯ಟಕ ರಾಜ್ಯದಲ್ಲಿ ಮಾತ್ರ ಎಲ್ಲಾ ರೀತಿಯ ವಿನಾಯಿತಿ ನೀಡಿರುವುದು ಮಾತ್ರ ಅಪಾಯಕಾರಿ ನಡೆ ಆಗಿದೆ.
   ಇದು ಮುಂದಿನ ದಿನದಲ್ಲಿ ರಾಜ್ಯದ ಮುಖ್ಯಮ೦ತ್ರಿ ಯಡೂರಪ್ಪರವರು ಪರಿಸ್ಥಿತಿ ನಿಯ೦ತ್ರಣ ಕೈ ತಪ್ಪಿದರೆ ಹೊಣೆಗಾರರಾಗ ಬೇಕಾದರು ಆಶ್ಚಯ೯ವಿಲ್ಲ.
  ಲಾಕ್ ಡೌನ್ - 4 ನೇ ಹಂತ ಯಾವುದೇ ವಿನಾಯಿತಿ ಇಲ್ಲದೆ ಮುಂದುವರಿಸಬೇಕಾಗಿತ್ತು.
  ಈಗಾಗಲೇ ಪರಿಸ್ಥಿತಿ ಕೈ ಮೀರಿದ ಲಕ್ಷಣವಿದೆ ಇದು ವಿಕೋಪಕ್ಕೆ ಹೋಗದಂತೆ ತಡೆಯದೆ ಇರುವಂತ ಆಡಳಿತಾತ್ಮಕ ನಡೆ ವಿವಾದಕ್ಕೆ ಕಾರಣವಾಗಲಿದೆ.
   ವಾರದ 6 ದಿನ ಬಾಗಿಲು ತೆರೆದು 7 ನೇ ದಿನ ಭಾನುವಾರ ಸಂಪೂಣ೯ ಕಪ್ಯೂ೯ ಘೋಷಣೆ ಮಾಡಿದ್ದಾದರೂ ಏಕೆ? ಕೊರಾನ ವೈರಸ್ ಗೆ ಭಾನುವಾರ ರಜಾ ಇರುತ್ತಾ? ಎಂಬ ಹಾಸ್ಯಕ್ಕೆ ಕಾರಣವಾಗಿದೆ.
 ರೋಗ ನಿಯOತ್ರಣಕ್ಕೆ ಬಾರದೆ, ವ್ಯಾಕ್ಸಿನ್ ಕಂಡು ಹಿಡಿಯದೇ ಪರಿಸ್ಥಿತಿ ನಿಯ೦ತ್ರಣ ಮಾಡದೆ ಈ ರೀತಿ ಅವೈಜ್ಞಾನಿಕವಾಗಿ ದಿಡ್ಡಿ ಬಾಗಿಲು ತೆರೆಯುವುದು ಅನೇಕ ಅನಾಹುತಕ್ಕೆ ಕಾರಣವಾಗುವ ಸಾಧ್ಯತೆ ಇದೆ.
   ಎರಡು ತಿಂಗಳ ಮು೦ಜಾಗೃತೆ ಮಾಡಿದ್ದು ಲಾಕ್ ಡೌನ್ - 4ರಲ್ಲಿ ನೀಡಿದ ವಿನಾಯಿತಿಯಿ೦ದ ನೀರಲ್ಲಿ ಹೋಮ ಮಾಡಿದಂತೆ ಆಗಿದೆ.
   ಮುಖ್ಯಮ೦ತ್ರಿಗಳು ತಕ್ಷಣ ಈ ವಿನಾಯಿತಿ ತಡೆಹಿಡಿದು ಲಾಕ್ ಡೌನ್ ಕಠಿಣ ಕ್ರಮ ಮು೦ದುವರಿಸದಿದ್ದರೆ ಮುಂದಿನ ಅನಾಹುತಗಳು ಯಾರು ನಿಯ೦ತ್ರಿಸಲು ಸಾಧ್ಯವಿಲ್ಲ.
  ಬೀದಿ ವ್ಯಾಪಾರಿಗಳ ಕ್ಯಾ೦ಟೀನ್ ಗೆ ಅನುಮತಿ ನೀಡಿದ್ದಾರೆ ಆದರೆ ರೆಸ್ಟೊರೆಂಟ್ ಗೆ ಅನುಮತಿ ಇಲ್ಲ, ಸೆಲೂನ್ ಗೆ ಅನುಮತಿ ಜಿಮ್ ಗೆ ಇಲ್ಲ, ರಿಕ್ಷಾ, ಟ್ಯಾಕ್ಸಿ, ಬಸ್ ಮತ್ತು ರೈಲು ಸಂಚಾರಿಸಲು ಅನುಮತಿ ಈ ರೀತಿ ನೀಡಿದ್ದು  ಕೊರಾನ ವೈರಸ್ ನಿಯOತ್ರಣಕ್ಕೆ ಮುಂದಿನ ದಿನದಲ್ಲಿ ಸವಾಲಾಗಲಿದೆ.
  ರಾಜ್ಯ ಸಕಾ೯ರದ ತೀಮಾ೯ನವೇ ದುರಾದೃಷ್ಟ ಅಂದರೂ ತಪ್ಪಿಲ್ಲ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂ...