Skip to main content

ಕೊರಾನಾ ಲಾಕ್ ಡೌನ್ ಡೈರಿ 41. ''ಜೀವ ಇದ್ದರೆ ಬೇಡಿ ತಿನ್ನೋಣ ಆದಷ್ಟು ಬೇಗ ಹೇಗಾದರೂ ಊರು ಸೇರೋಣ" ಎಂಬ ದೃಡ ನಿದಾ೯ರ ದುಡಿಮೆಗಾಗಿ ಊರು ಬಿಟ್ಟ ಎಲ್ಲರ ತೀಮಾ೯ನ, ಇದಕ್ಕಾಗಿ ಅಪಾಯಕಾರಿ ಮಾಗ೯ ಹಿಡಿದವರ ಬಗ್ಗೆ ವಿಷಾದವಿದೆ.

ಕೊರಾನಾ ಲಾಕ್ ಡೌನ್ ಡೈರಿ -2020
 ಲೆಟರ್ ನಂಬರ್- 41.
   ದಿನಾ೦ಕ: 27-ಮೇ -2020

#ಕೊರಾನಾ_ಬರಲಿ_ಬಿಡಲಿ
#ಸತ್ತರೂ_ಚಿOತೆಯಿಲ್ಲ_ಊರು_ಮುಟ್ಟಬೇಕು.

    ಇದು ಹೊಟ್ಟೆಪಾಡಿಗಾಗಿ ಹುಟ್ಟೂರಿನಿ೦ದ ದೂರ ದೂರ ಹೋದ ಕಾಮಿ೯ಕರ ಮನಸ್ಸಲ್ಲಿ ದೃಡವಾಗಿರುವ ನಿಧಾ೯ರ.
   Homesickness ಯಾವ ರೀತಿ ಮನುಷ್ಯನನ್ನ ಮಾಡುತ್ತದೆ ಎಂಬುದಕ್ಕೆ ಮನಶಾಸ್ತ್ರದಲ್ಲಿ ಹೆಚ್ಚಿನ ವಿವರ ಇರಬಹುದು.
   ಎಲ್ಲಾ ವ್ಯವಸ್ಥೆ ಇದ್ದಾಗ ಈ ಭಯ ಇದ್ದಿರಲಿಲ್ಲ, ವಷ೯ಕೋಮ್ಮೆ ಊರಿಗೆ ಹೋಗಿ ಬಂದರಾಯಿತೆಂಬ ಉದಾಸೀನ ಎಲ್ಲರಿಗೂ.
  ಪ್ರತಿ ತಿಂಗಳ ದುಡಿಮೆ ಊರಿನಲ್ಲಿನ ಕುಟುಂಬಕ್ಕೆ ಈಗಿನ ಬ್ಯಾ೦ಕ್ ವ್ಯವಸ್ಥೆಯಲ್ಲಿ ಕೆಲ ನಿಮಿಷದಲ್ಲಿ ವಗಾ೯ಯಿಸಿ ವಿಡಿಯೋ ಕಾಲ್ ನಲ್ಲಿ ಪರಸ್ಪರ ಸ೦ಬಾಷಣೆ ನಡೆಸುವುದರಿಂದ ಅಂತಹ ಪದೇ ಪದೇ ಊರಿಗೆ ಹೋಗ ಬೇಕೆನ್ನುವ ತುಡಿತ ಇರುವುದಿಲ್ಲ.
  ಆದರೆ ಕೊರಾನಾದ ಪ್ರಾರಂಭದ ದಿನಗಳಲ್ಲಿ ಟಿವಿ ಮಾಧ್ಯಮ ಉoಟು ಮಾಡಿದ ಭಯದ ಸಂಚಲನ ಎಲ್ಲಾ ರಾಜ್ಯದ ಎಲ್ಲಾ ಬಾಷೆಯಲ್ಲಿ ಒಂದೇ ತರ ಆಗಿತ್ತು.
  ಉದ್ಯೋಗ ನಿಮಿತ್ತ ಬೇರೆ ಊರಲ್ಲಿದ್ದವರಿಗೆ ಊರಲ್ಲಿದ್ದ ಕುಟುಂಬದ ರಕ್ಷಣೆ ಬಗ್ಗೆ ಭಯ ಉoಟಾದರೆ, ಊರಲ್ಲಿರುವವರಿಗೆ ತಮಗಾಗಿ ದುಡಿಯಲು ದೂರ ಹೋದವರ ಆರೋಗ್ಯದ ಬಗ್ಗೆ ಆತಂಕ.
   ಜೀವ ಇದ್ದರೆ ಬೇಡಿ ತಿನ್ನ ಬಹುದು ಆದಷ್ಟು ಬೇಗ ಊರು ಸೇರಿ ಜೀವ ಉಳಿಸಿಕೊಳ್ಳಬೇಕು ಎಂಬ ತುಡಿತ ಹೆಚ್ಚಾಯಿತು, ಇದೇ ಸಂದಭ೯ದಲ್ಲಿ ರೈಲು, ಬಸ್ ಸಂಚಾರ ರದ್ದು, ಲಾಕ್ ಡೌನ್, 144 ಕಪ್ಯೂ೯, ಕೆಲಸ ಇಲ್ಲ, ಊಟಕ್ಕಿಲ್ಲ, ಕೊರಾ೦ಟೈನ್ ಗಳು ಮನೆಯಿಂದ ದೂರ ಇರುವವರಿಗೆ ಅಸಹನೆ ಹೆಚ್ಚಾಗಲು ಕಾರಣ ಆಯಿತು.
  ಸ್ವಲ್ಪ ದಿನದಲ್ಲಿ ಪರಿಸ್ಥಿತಿ ನಿಯOತ್ರಣಕ್ಕೆ ಬರುತ್ತದೆ, ಸಕಾ೯ರ ಊರು ಮುಟ್ಟಿಸಲು ವ್ಯವಸ್ಥೆ ಮಾಡುತ್ತದೆ ಎಂದರೆ ನಂಬುವ ಸ್ಥಿತಿ ಯಾರಿಗೂ ಇರಲಿಲ್ಲ.
  ನಡೆದವರು, ಸೈಕಲ್ / ಬೈಕ್ ನಲ್ಲಿ ಪ್ರಯಾಣಿಸಿದವರು, ಸರಕು ಸಾಗಿಸುವ ಲಾರಿಯಲ್ಲಿ ಕದ್ದು ಪ್ರಯಾಣಿಸಿದವರು ಲಕ್ಷಾ೦ತರ ಜನ.
 ನಮ್ಮ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಒಬ್ಬ ಯಾರಿಗೂ ತಿಳಿಯದಂತೆ ಅವನ ಊರಾದ ಹೊಳೆ ಹೊನ್ನೂರಿಗೆ ನಡೆದೇ ಬಿಟ್ಟ ಮಾಗ೯ ಮದ್ಯದಲ್ಲಿ ಪೋಲಿಸರು ಹಿಡಿದಾಗಲೇ ಗೊತ್ತಾಗಿದ್ದು.
  ನಮ್ಮ ಕಟ್ಟಡದಲ್ಲಿ ಗ್ರಾನೈಟ್ ಕೆಲಸದ ರಾಜಸ್ಥಾನದ ಕೆಲಸಗಾರರು ಕೆಲಸಕ್ಕೆ ಬಂದಿಲ್ಲ ಅಂತ ಇವತ್ತು ಪೋನ್ ಮಾಡಿದರೆ ಅವರೆಲ್ಲ ಊರು ತಲುಪಿದ್ದಾರೆ! ಹೇಗೆ ಪ್ರಯಾಣ ಅಂದರೆ ಲಾರಿಯಲ್ಲಿ ಒಟ್ಟು 82 ಜನ 3 ದಿನದ ಅತಿ ಪ್ರಾಯಾಸದ ಪ್ರಯಣದಿಂದ ಮನೆ ಮುಟ್ಟಿದ್ದಾರೆ.
  ಕೊರಾ೦ಟೈನ್ ಎಲ್ಲಾ ಅವರು ತಪ್ಪಿಸಿ ಕೊ೦ಡಿದ್ದಾರೆ ಯಾರಿಗಾದರೂ ಸೋ೦ಕು ಇದ್ದರೆ!? ಅದು ಗೊತ್ತಿಲ್ಲ.
   ಇನ್ನೊ೦ದು ತಿಂಗಳಲ್ಲಿ ಮತ್ತೆ ದುಡಿಮೆಗೆ ಬರುವ ಮನಸ್ಸು ಅವರದ್ದು, ಕೊರಾನಾ ಲಾಕ್ ಡೌನ್ ಡೈರಿ -2020
 ಲೆಟರ್ ನಂಬರ್- 41.
   ದಿನಾ೦ಕ: 27-ಮೇ -2020

#ಕೊರಾನಾ_ಬರಲಿ_ಬಿಡಲಿ
#ಸತ್ತರೂ_ಚಿOತೆಯಿಲ್ಲ_ಊರು_ಮುಟ್ಟಬೇಕು.

    ಇದು ಹೊಟ್ಟೆಪಾಡಿಗಾಗಿ ಹುಟ್ಟೂರಿನಿ೦ದ ದೂರ ದೂರ ಹೋದ ಕಾಮಿ೯ಕರ ಮನಸ್ಸಲ್ಲಿ ದೃಡವಾಗಿರುವ ನಿಧಾ೯ರ.
   Homesickness ಯಾವ ರೀತಿ ಮನುಷ್ಯನನ್ನ ಮಾಡುತ್ತದೆ ಎಂಬುದಕ್ಕೆ ಮನಶಾಸ್ತ್ರದಲ್ಲಿ ಹೆಚ್ಚಿನ ವಿವರ ಇರಬಹುದು.
   ಎಲ್ಲಾ ವ್ಯವಸ್ಥೆ ಇದ್ದಾಗ ಈ ಭಯ ಇದ್ದಿರಲಿಲ್ಲ, ವಷ೯ಕೋಮ್ಮೆ ಊರಿಗೆ ಹೋಗಿ ಬಂದರಾಯಿತೆಂಬ ಉದಾಸೀನ ಎಲ್ಲರಿಗೂ.
  ಪ್ರತಿ ತಿಂಗಳ ದುಡಿಮೆ ಊರಿನಲ್ಲಿನ ಕುಟುಂಬಕ್ಕೆ ಈಗಿನ ಬ್ಯಾ೦ಕ್ ವ್ಯವಸ್ಥೆಯಲ್ಲಿ ಕೆಲ ನಿಮಿಷದಲ್ಲಿ ವಗಾ೯ಯಿಸಿ ವಿಡಿಯೋ ಕಾಲ್ ನಲ್ಲಿ ಪರಸ್ಪರ ಸ೦ಬಾಷಣೆ ನಡೆಸುವುದರಿಂದ ಅಂತಹ ಪದೇ ಪದೇ ಊರಿಗೆ ಹೋಗ ಬೇಕೆನ್ನುವ ತುಡಿತ ಇರುವುದಿಲ್ಲ.
  ಆದರೆ ಕೊರಾನಾದ ಪ್ರಾರಂಭದ ದಿನಗಳಲ್ಲಿ ಟಿವಿ ಮಾಧ್ಯಮ ಉoಟು ಮಾಡಿದ ಭಯದ ಸಂಚಲನ ಎಲ್ಲಾ ರಾಜ್ಯದ ಎಲ್ಲಾ ಬಾಷೆಯಲ್ಲಿ ಒಂದೇ ತರ ಆಗಿತ್ತು.
  ಉದ್ಯೋಗ ನಿಮಿತ್ತ ಬೇರೆ ಊರಲ್ಲಿದ್ದವರಿಗೆ ಊರಲ್ಲಿದ್ದ ಕುಟುಂಬದ ರಕ್ಷಣೆ ಬಗ್ಗೆ ಭಯ ಉoಟಾದರೆ, ಊರಲ್ಲಿರುವವರಿಗೆ ತಮಗಾಗಿ ದುಡಿಯಲು ದೂರ ಹೋದವರ ಆರೋಗ್ಯದ ಬಗ್ಗೆ ಆತಂಕ.
   ಜೀವ ಇದ್ದರೆ ಬೇಡಿ ತಿನ್ನ ಬಹುದು ಆದಷ್ಟು ಬೇಗ ಊರು ಸೇರಿ ಜೀವ ಉಳಿಸಿಕೊಳ್ಳಬೇಕು ಎಂಬ ತುಡಿತ ಹೆಚ್ಚಾಯಿತು, ಇದೇ ಸಂದಭ೯ದಲ್ಲಿ ರೈಲು, ಬಸ್ ಸಂಚಾರ ರದ್ದು, ಲಾಕ್ ಡೌನ್, 144 ಕಪ್ಯೂ೯, ಕೆಲಸ ಇಲ್ಲ, ಊಟಕ್ಕಿಲ್ಲ, ಕೊರಾ೦ಟೈನ್ ಗಳು ಮನೆಯಿಂದ ದೂರ ಇರುವವರಿಗೆ ಅಸಹನೆ ಹೆಚ್ಚಾಗಲು ಕಾರಣ ಆಯಿತು.
  ಸ್ವಲ್ಪ ದಿನದಲ್ಲಿ ಪರಿಸ್ಥಿತಿ ನಿಯOತ್ರಣಕ್ಕೆ ಬರುತ್ತದೆ, ಸಕಾ೯ರ ಊರು ಮುಟ್ಟಿಸಲು ವ್ಯವಸ್ಥೆ ಮಾಡುತ್ತದೆ ಎಂದರೆ ನಂಬುವ ಸ್ಥಿತಿ ಯಾರಿಗೂ ಇರಲಿಲ್ಲ.
  ನಡೆದವರು, ಸೈಕಲ್ / ಬೈಕ್ ನಲ್ಲಿ ಪ್ರಯಾಣಿಸಿದವರು, ಸರಕು ಸಾಗಿಸುವ ಲಾರಿಯಲ್ಲಿ ಕದ್ದು ಪ್ರಯಾಣಿಸಿದವರು ಲಕ್ಷಾ೦ತರ ಜನ.
 ನಮ್ಮ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುವ ಒಬ್ಬ ಯಾರಿಗೂ ತಿಳಿಯದಂತೆ ಅವನ ಊರಾದ ಹೊಳೆ ಹೊನ್ನೂರಿಗೆ ನಡೆದೇ ಬಿಟ್ಟ ಮಾಗ೯ ಮದ್ಯದಲ್ಲಿ ಪೋಲಿಸರು ಹಿಡಿದಾಗಲೇ ಗೊತ್ತಾಗಿದ್ದು.
  ನಮ್ಮ ಕಟ್ಟಡದಲ್ಲಿ ಗ್ರಾನೈಟ್ ಕೆಲಸದ ರಾಜಸ್ಥಾನದ ಕೆಲಸಗಾರರು ಕೆಲಸಕ್ಕೆ ಬಂದಿಲ್ಲ ಅಂತ ಇವತ್ತು ಪೋನ್ ಮಾಡಿದರೆ ಅವರೆಲ್ಲ ಊರು ತಲುಪಿದ್ದಾರೆ! ಹೇಗೆ ಪ್ರಯಾಣ ಅಂದರೆ ಲಾರಿಯಲ್ಲಿ ಒಟ್ಟು 82 ಜನ 3 ದಿನದ ಅತಿ ಪ್ರಾಯಾಸದ ಪ್ರಯಣದಿಂದ ಮನೆ ಮುಟ್ಟಿದ್ದಾರೆ.
  ಕೊರಾ೦ಟೈನ್ ಎಲ್ಲಾ ಅವರು ತಪ್ಪಿಸಿ ಕೊ೦ಡಿದ್ದಾರೆ ಯಾರಿಗಾದರೂ ಸೋ೦ಕು ಇದ್ದರೆ!? ಅದು ಗೊತ್ತಿಲ್ಲ.
   ಇನ್ನೊ೦ದು ತಿಂಗಳಲ್ಲಿ ಮತ್ತೆ ದುಡಿಮೆಗೆ ಬರುವ ಮನಸ್ಸು ಅವರದ್ದು, ಕೊರಾನಾ ಜೊತೆಗೆ ಜೀವನ ಮಾಡುವ ದೈಯ೯ ಅವರ ಮಾತಿನಲ್ಲಿದೆ.
  3 ದಿನ ಒಂದು ಲಾರಿಯಲ್ಲಿ ಗುಪ್ತವಾಗಿ ಪ್ರಯಾಣಿಸುವಾಗ ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲ ದೇವರೇ ಕಾಪಾಡಬೇಕು.
  ಮನೆ ಸೇರಿ ನಿರಾಳರಾದವರ ಮಾತಲ್ಲಿ ಸ್ವಗ೯ ಸೇರಿದ ಸಂತೃಪ್ತಿ ಕೇಳಿಸಿತು.
  ಮುಂದೆ ಮತ್ತೆ ಕರೋನ ಬಂದರೆ ಈಗಿನ ಭಯ ಆತಂಕಗಳು ಈ ರೀತಿ ಮರುಕಳಿಸಲಾರದು ಆದರೂ ಅವರೆಲ್ಲ ಅಪಾಯಕಾರಿ ಮಾಗ೯ ಆಯ್ಕೆ ಮಾಡಿಕೊಂಡು ಊರು ಮುಟ್ಟಿದ್ದನ್ನ ನೆನಪಿಸಿಕೊಂಡರೆ ವಿಷಾದ ಎನ್ನಿಸುತ್ತೆ. ಜೊತೆಗೆ ಜೀವನ ಮಾಡುವ ದೈಯ೯ ಅವರ ಮಾತಿನಲ್ಲಿದೆ.
  3 ದಿನ ಒಂದು ಲಾರಿಯಲ್ಲಿ ಗುಪ್ತವಾಗಿ ಪ್ರಯಾಣಿಸುವಾಗ ಸಾಮಾಜಿಕ ಅಂತರ, ಮಾಸ್ಕ್ ಯಾವುದೂ ಇಲ್ಲ ದೇವರೇ ಕಾಪಾಡಬೇಕು.
  ಮನೆ ಸೇರಿ ನಿರಾಳರಾದವರ ಮಾತಲ್ಲಿ ಸ್ವಗ೯ ಸೇರಿದ ಸಂತೃಪ್ತಿ ಕೇಳಿಸಿತು.
  ಮುಂದೆ ಮತ್ತೆ ಕರೋನ ಬಂದರೆ ಈಗಿನ ಭಯ ಆತಂಕಗಳು ಈ ರೀತಿ ಮರುಕಳಿಸಲಾರದು ಆದರೂ ಅವರೆಲ್ಲ ಅಪಾಯಕಾರಿ ಮಾಗ೯ ಆಯ್ಕೆ ಮಾಡಿಕೊಂಡು ಊರು ಮುಟ್ಟಿದ್ದನ್ನ ನೆನಪಿಸಿಕೊಂಡರೆ ವಿಷಾದ ಎನ್ನಿಸುತ್ತೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...