Skip to main content

ನನ್ನ ಕೃಷಿ ಇಲಾಖಾ ಬ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ 7 ಕೃಷಿ ಅಧಿಕಾರಿಗಳು ಜೈಲಿಗೆ ಕಳಿಸಲು ಮುಖ್ಯ ಕಾರಣರಾದ ಆರ್.ಟಿ.ವಿಠಲ ಮೂತಿ೯ .

#ನಾಡಿನ_ಖ್ಯಾತ_ರಾಜಕೀಯ_ಅಂಕಣ_ಬರಹಗಾರ_ಪತ್ರಕತ೯_ನಮ್ಮ_ಸಾಗರ_ತಾಲ್ಲೂಕಿನ_ಕೀತಿ೯_ಪತ್ರಿಕೋದ್ಯಮದಲ್ಲಿ
#ರಾಜ್ಯಮಟ್ಟದಲ್ಲಿ_ಪಸರಿಸಿದ_ಆರ್_ಟಿ_ವಿಠಲಮೂತಿ೯_ಕಳೆದ_ವರ್ಷ_ಅವರ_ಮುಖಪುಟದಲ್ಲಿ_ಬರೆದದ್ದು_ಪುನಃ_ನೆನಪಾಗಿ

#ನನ್ನ_ರಾಜಕೀಯವಾದ_ಹೋರಾಟ_ತಾಕಿ೯ಕ_ಅಂತ್ಯ_ಕಾಣಲು_ಕಾರಣರಾದ_ವಿಠಲ್_ಮೂತಿ೯_ತಾಳುಗುಪ್ಪ_ಸಲೀಂ_ಮತ್ತು #ಆಗಿನ_ಕೃಷಿ_ಸಚಿವರಾದ_ಬೈರೇಗೌಡರು_ಅಭಿನ೦ದನಾಹ೯ರು.

ಇದೊಂಥರಾ ಆತ್ಮಕಥೆಯ       ಹಿಂದೆ 
ಅದೆಷ್ಟು ಕಥೆಗಳ ಸಾಲು?

ಮಳೆ ನಿಂತರೂ ಮಳೆ ಹನಿ ನಿಲ್ಲಲಿಲ್ಲ ಎನ್ನುವ ಹಾಗೆ ಇದೊಂಥರಾ ಆತ್ಮಕಥೆ ಪುಸ್ತಕ ಮನಸ್ಸೆಂಬ ನೆಲಕ್ಕೆ ಸದಾ ತಂಪೆರೆಯುತ್ತಿದೆ.
ಕಳೆದ ಅಕ್ಟೋಬರ್ ತಿಂಗಳಲ್ಲಿ ಬಿಡುಗಡೆಯಾದ ಪುಸ್ತಕ ಈಗಲೂ ರಾಜ್ಯದ ಜನರ ಒಪ್ಪುಗೆ,ಅಪ್ಪುಗೆಗೆ ಪಾತ್ರ.
ಬರಹಗಾರರಿಗೆ ಇದಕ್ಕಿಂತ ದೊಡ್ಡ ಸರ್ಟಿಫಿಕೆಟ್ ಯಾವುದು?ಮೊನ್ನೆ ಅತ್ಯಾಪ್ತರಾದ ಅರುಣ್ ಪ್ರಸಾದ್ ಅವರು ಒಂದು ವಿಡಿಯೋ ಕಳಿಸಿದ್ದರು.
ನಮ್ಮೂರು ಸಾಗರ ತಾಲ್ಲೂಕಿನ ಆನಂದಪುರದ ಅರುಣ್ ಪ್ರಸಾದ್ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದವರು.ವ್ಯವಸ್ಥೆಯಲ್ಲಿನ ಭ್ರಷ್ಟಾಚಾರದ ವಿರುದ್ಧ ಸೆಣಸಿದವರು.ಯುವಕನಾಗಿದ್ದ ದಿನಗಳಲ್ಲಿ ನನ್ನ ಅಚ್ಚರಿಗೆ,ವಿಸ್ಮಯಕ್ಕೆ,ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಹಪಹಪಿಗೆ ಕಾರಣರಾದವರಲ್ಲಿ ಅರುಣ್ ಪ್ರಸಾದ್ ಕೂಡಾ ಮುಖ್ಯರಾದವರು.
ಈಗ ಅನಂದಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಅರುಣ್ ಪ್ರಸಾದ್ ಸದಾ ಕಾಲ ಚಟುವಟಿಕೆಯ ಆಗರ.ತಮ್ಮ ಕೆಲಸಗಳ ಮಧ್ಯೆ ಈಗಲೂ ಜನರಿಗಾಗಿ ಬಡಿದಾಡುತ್ತಾರೆ.ಅವರ ನೋವುಗಳಿಗೆ ಸ್ಪಂದಿಸುತ್ತಾರೆ.ಇತ್ತೀಚಿನ ದಿನಗಳಲ್ಲಿ ಚಂದದ ಬರವಣಿಗೆ ಅವರ ಕೈ ಹಿಡಿದಿದೆ.
ನಮಗೆ ಗೊತ್ತಿಲ್ಲದ ಎಷ್ಡೋ ಸಂಗತಿಗಳನ್ನು ಬರೆಯುತ್ತಾ,ಹಳೆಯ ನೆನಪುಗಳನ್ನು ಕೆದಕುತ್ತಾ ಅವರು ಬರೆಯುವ ರೀತಿ ನನಗೆ ಬಹಳ ಇಷ್ಟ.
ಇಪ್ಪತ್ತೈದು ವರ್ಷಗಳ ಹಿಂದೆ ಅವರು ಜಿಲ್ಲಾ ಪಂಚಾಯ್ತಿ ಸದಸ್ಯರಾಗಿದ್ದಾಗ ನಾನು ನಾಡಿನ ಹಿರಿಯ ಪತ್ರಕರ್ತ ಬಿ.ವಿ.ವೈಕುಂಠರಾಜು ಅವರ ಕೈಯ್ಯಲ್ಲಿದ್ದ ಮಣ್ಣಿನ ಮುದ್ದೆ.
ತಮ್ಮ ಸಂಪಾದಕತ್ವದಲ್ಲಿ ಹೊರಬರುತ್ತಿದ್ದ ವಾರಪತ್ರಿಕೆಯಲ್ಲಿ ಅವರು ನನ್ನನ್ನು ರಾಜಕೀಯ ವರದಿಗಾರನನ್ನಾಗಿ ರೂಪಿಸುತ್ತಿದ್ದರು.
ಅದೇ ಸಂದರ್ಭದಲ್ಲಿ ಒಂದು ದಿನ ಅರುಣ್ ಪ್ರಸಾದ್ ಅವರ ಹೋರಾಟಗಳ ಬಗ್ಗೆ ನನಗೆ ವಿವರಿಸಿದವರು ಸ್ನೇಹಿತರಾದ ಸಲೀಂ.ಇವತ್ತು ಕಾಂಗ್ರೆಸ್ ನಾಯಕರಾಗಿ ಬೆಳೆದಿರುವ ಸಲೀಂ ಅವರು:ಆನಂದಪುರದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ರೈತರಿಗೆ ಕೃಷಿಹೊಂಡ ತೋಡಿಕೊಡುವ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ನುಂಗಿ ಹಾಕಿದ್ದಾರೆ.ಅದರ ವಿರುದ್ಧ ಅರುಣ್ ಪ್ರಸಾದ್ ಹೋರಾಟ ಮಾಡುತ್ತಿದ್ದಾರೆ.ಜನ ಏನು ಅಂತ ನಿನಗ್ಗೊತ್ತಲ್ಲ?ತಪ್ಪು ಮಾಡಿದವರ ರಕ್ಷಣೆಗೇ ನಿಂತಿದ್ದಾರೆ.ಒಂದು ಸಲ ಸ್ಪಾಟ್ ಗೆ ಹೋದರೆ ಗೊತ್ತಾಗುತ್ತದೆ ಎಂದರು.
ನಾನು ಸೀದಾ ಆನಂದಪುರಕ್ಕೆ ಹೋದೆ. ಕೃಷಿ ಹೊಂಡ ತೋಡಿದ್ದಾರೆ ಎನ್ನಲಾದ ಜಾಗಕ್ಕೆ ಅರುಣ್ ಪ್ರಸಾದ್ ಅವರೇ ನನ್ನನ್ನು ಕರೆದುಕೊಂಡು ಹೋದರು.ಎಲ್ಲಿತ್ತು ಕೃಷಿ ಹೊಂಡ?ಆದರೆ ತೋಡಿದ ಹೆಸರಿನಲ್ಲಿ ಸರ್ಕಾರದ ಖಜಾನೆಯನ್ನೇ ತೋಡಿ ಲಕ್ಷಾಂತರ ರೂಪಾಯಿಗಳನ್ನು ಅಧಿಕಾರಿಗಳು ನುಂಗಿ ಹಾಕಿದ್ದರು.ಇದೆಲ್ಲವನ್ನು ಕಣ್ಣಾರೆ ನೋಡಿದವನು ವಾಪಸ್ಸು ಬಂದು ವಾರಪತ್ರಿಕೆಯಲ್ಲಿ ಬರೆದೆ.
ಇದಾದ ಮರುದಿನವೇ ವಿಧಾನಸೌಧದಲ್ಲಿ ಕೃಷಿ ಸಚಿವ ಸಿ.ಭೈರೇಗೌಡರ ಸುದ್ದಿಗೋಷ್ಡಿ.ಈ
ಗೋಷ್ಟಿ ಮುಗಿಯಬೇಕು.ಅಷ್ಟರಲ್ಲಿ ನಾನು  ಏರಿದ ಧ್ವನಿಯಲ್ಲಿ ಅಧಿಕಾರಿಗಳ ಹಗಲು ದರೋಡೆಯ ಬಗ್ಗೆ ಹೇಳಿದೆ.
ಒಂದು ಕ್ಷಣ ಮೌನಿಯಾದ ಭೈರೇಗೌಡರು:ನೀವು ಬರೆದಿದ್ದು ನನ್ನ ಗಮನಕ್ಕೆ ಬಂದಿದೆ ವಿಠ್ಠಲಮೂರ್ತಿ. ಮೂರು ದಿನ ಟೈಮು ಕೊಡಿ.ಮಾತನಾಡುತ್ತೇನೆ ಎಂದರು.
ಮರುದಿನವೇ ಆನಂದಪುರಕ್ಕೆ ದೌಡಾಯಿಸಿದ ಭೈರೇಗೌಡರು ಸ್ಪಾಟ್ ಇನ್ಸ್ ಪೆಕ್ಷನ್ ಮಾಡಿದರು.ವಿಷಯದ ಅರಿವಾಗುತ್ತಿದ್ದಂತೆಯೇ ಕೆಂಡಾಮಂಡಲಗೊಂಡು ಅರ್ಧ ಡಜನ್ ಗೂ ಹೆಚ್ಚು ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿ,ಜೈಲಿಗಟ್ಟಿದರು.ಅಷ್ಟೇ ಅಲ್ಲ.ಜನರ ದುಡ್ಡು ತಿಂದ ಅಧಿಕಾರಿಗಳು ಹಗಲಿರುಳು ಪರದಾಡುವ ಸ್ಥಿತಿ ತಂದರು.
ಅರುಣ್ ಪ್ರಸಾದ್ ಅವರ ಹೋರಾಟ ಫಲ ಕೊಟ್ಟಿತ್ತು.ಅಂದ ಹಾಗೆ ಇಂತಹ ಹಲ ಹೋರಾಟಗಳನ್ನು ಅವರು ಮಾಡುತ್ತಲೇ ಬಂದಿದ್ದಾರೆ.ಅವರ ಹೋರಾಟದ ಹಾದಿಯಲ್ಲಿ ನಾನೂ ಒಮ್ಮೆ ಪಂಜು ಹಿಡಿದ ಕತೆ ಇದು.
ಅಂತಹ ಅರುಣ್ ಪ್ರಸಾದ್ ಈಗ ಆನಂದಪುರದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದಾರೆ.ಯಾರೇ ಆತ್ಮೀಯರು ಬರಲಿ.ಅವರನ್ನು ಸ್ವಾಗತಿಸಿ  ನೆನಪಿನ ಕಾಣಿಕೆಯಾಗಿ ಪುಸ್ತಕ ಕೊಡುತ್ತಾರೆ.ನಾನು ಬರೆದ ಇದೊಂಥರಾ ಆತ್ಮಕಥೆ ಕೃತಿಯ ಐವತ್ತು ಕೃತಿಯನ್ನು ಖರೀದಿಸಿ ಬಂದ ಆತ್ಮೀಯರಿಗೆ ಕೊಡುತ್ತಾ;ಇದು ನಮ್ಮ ಆರ್.ಟಿ.ವಿಠ್ಠಲಮೂರ್ತಿ ಬರೆದಿದ್ದು ಅಂತ ಪ್ರೀತಿಯಿಂದ ಹೇಳುತ್ತಾರೆ.
ನನ್ನದು ಅಂತಲ್ಲ.ಹಲವರ ಪುಸ್ತಕಗಳನ್ನು ತಾವೇ ಖರೀದಿಸಿಟ್ಟುಕೊಂಡು ಪುಸ್ತಕ ಪ್ರೀತಿಯನ್ನು ಹಂಚುತ್ತಾರೆ.
ಅವರ ಈ ಪುಸ್ತಕ ಪ್ರೀತಿ ನಿಜಕ್ಕೂ ದೊಡ್ಡದು.ಅವರಿಗೆ ನನ್ನ ಧನ್ಯವಾದಗಳು ಸಲ್ಲುತ್ತವೆ.ಹಾಗೆಯೇ ಇದೊಂಥರಾ ಆತ್ಮಕಥೆ ಪುಸ್ತಕದ ಹಿಂದಿರುವ ಅಸಂಖ್ಯಾತ ಕತೆಗಳು ನೆನಪಿಗೆ ಬಂದು ಮನಸ್ಸು ಚಕಚಕಿತಗೊಳ್ಳುತ್ತದೆ.

ಧನ್ಯವಾದಗಳು."ಇದೊಂಥರಾ ಆತ್ಮಕಥೆ" ಪುಸ್ತಕ ಖರೀದಿಸಲು ಈ ಲಿಂಕ್ ಬಳಸಿ.
https://bahuroopi.in/product/idonthara-atmakathe/
Phone: 7019182729

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ