Skip to main content

ದೇಶದಾದ್ಯಂತ ಕಳೆದ ವರ್ಷ ಕೊರಾನಾ ಪ್ರಾರಂಭ ಆದಾಗ ದಿಡೀರ್ ಲಾಕ್ ಡೌನ್ ನಿಂದ ಕಾಮಿ೯ಕರು ಊರು ಸೇರಲು ಪಟ್ಟಿರುವ ಕಷ್ಟ ಈಗ ಕೋವಿಡ್ ಎರಡನೇ ಅಲೆ ಸಂದಭ೯ದಲ್ಲಿ ನೆನಪು

#ಶಿವಮೊಗ್ಗದಿಂದ_ರಾಜಸ್ಥಾನದ_ಗಂಗಾನಗರ_ಜಿಲ್ಲೆ_ತನಕ
#ಒಂದೂವರೆ_ಸಾವಿರ_ಕೀಲೋ_ಮೀಟರ್_ಟಾಪ೯ಲ್
#ಮುಚ್ಚಿದ_ಲಾರಿಯಲ್ಲಿ_ಕಳೆದ_ವರ್ಷ_ಕೊರೋನೊ
#ಬೀತಿಯಿಂದ_ಕಷ್ಟಪಟ್ಟು_ಊರು_ಸೇರಿದವರ_ನಿಜಕಥೆ
  ಇವರೆಲ್ಲ ನಮ್ಮ ಲಾಡ್ಜ್ ಕಟ್ಟಡದಲ್ಲಿ ಗ್ರಾನೈಟ್ ಕೆಲಸ ಮಾಡಲು ಬಂದವರು, ಈ ಕೆಲಸದ ಗುತ್ತಿಗೆ ಹಿಡಿದ ಮೊಹರ್ ಸಿಂಗ್ ಮಾರ್ಚ್ ನಲ್ಲಿ ಲಾಕ್ ಡೌನ್ ಆದಾಗ ಭಯ ಪಟ್ಟಾಗ ನಾನು ದೈಯ೯ ಹೇಳಿದ್ದೆ, ಹುಷಾರಾಗಿರಿ ಆರೋಗ್ಯ ಕಾಪಾಡಿಕೊಳ್ಳಿ ಅಂತ.
  ಆದರೆ ಇವರ ಊರುಗಳಿಂದ ಹೇಗಾದರೂ ಮಾಡಿ ಊರು ತಲುಪಿ ಅಂತ ರೋದಿಸುತ್ತಿದ್ದ ಕುಟುಂಬದವರ ಒತ್ತಾಯದಿಂದ ಕೆಲವರು ಲಾರಿಗಳಲ್ಲಿ ಹೋಗಿ ಅರ್ಧ ದಾರಿಯಲ್ಲಿ ಸಿಕ್ಕು ಬಿದ್ದು ಕೊರಾ೦ಟೈಯಿನ್ ಆಗಿದ್ದ ಉದಾಹರಣೆ ಇತ್ತು.
  ಕಳೆದ ವರ್ಷ ಏಪ್ರಿಲ್ 6ಕ್ಕೆ ಮೊಹಾರ್ ಸಿಂಗ್ ತನ್ನ ಕೆಲಸದ ಲೆಖ್ಖ ಮಾಡಿಸಿ ಬಾಕಿ 20 ಸಾವಿರ ಅವತ್ತೇ ಬೇಕು ಅಂತ ಅವಸರಿಸಿದ ಯಾಕೆಂದು ಕೇಳಿದಾಗ ಕೆಲಸದ ಹುಡುಗರು ಇವತ್ತು ಊರಿಗೆ ಹೋಗುತ್ತಾರೆಂದು ಗುಟ್ಟಾಗಿ ಹೇಳಿದ! ಅರೆ ಈಗ ರೈಲಿಲ್ಲ ಬಸ್ಸು ಇಲ್ಲ ಹೇಗೆ ಸಾಧ್ಯ? ಅಂದೆ ಅದಕ್ಕೆ ತಮ್ಮ ಊರಿನ ಲಾರಿ ಒಂದು ಶಿವಮೊಗ್ಗದಿಂದ ರಾತ್ರಿ ಹೊರಡುತ್ತೆ ತಲಾ ನಾಲ್ಕು ಸಾವಿರದಂತೆ ಪಾವತಿ ಮಾಡಿದ ಸುಮಾರು 80 ಜನ ಹೋಗುತ್ತಾರೆ ಅಂದ, ನಾನು ಹಣ ನೀಡಿ "ನೀನು ಮಾತ್ರ ಹೋಗಬೇಡ " ಅಂದೆ ಇಲ್ಲ ತಾನು ಹೋಗುವುದಿಲ್ಲ ಉಳಿದ ಕೆಲಸ ಮುಗಿಸಿಯೇ ಹೋಗುತ್ತೇನೆ ಅಂದಿದ್ದ.
  ನಂತರ 15 ದಿನ ಮೊಹರ್ ಸಿಂಗ್ ಬರಲೂ ಇಲ್ಲ, ಪೋನಿಗೂ ಸಿಗಲಿಲ್ಲ ನಂತರ ಒ0ದು ದಿನ ಮೊಹರ್ ಸಿಂಗ್ ಪೋನ್ ಮಾಡಿದಾಗ ಯಾಕೆ ಕೆಲಸಕ್ಕೆ ಬಂದಿಲ್ಲ ಅಂದಾಗ ಸಿಂಗ್ ಹೇಳಿದ್ದು ತಾವೆಲ್ಲರೂ 80 ಜನ ಲಾರಿಯಲ್ಲಿ ಊರು ಮುಟ್ಟಿದ್ದೇವೆ ಅಂದಾಗಲೇ ಗೊತ್ತಾಯಿತು ಗ್ರಾನೈಟ್ ಗುತ್ತಿಗೆದಾರನೂ ಕೆಲಸಗಾರರ ಜೊತೆ ಲಾರಿಯಲ್ಲಿ ಊರಿಗೆ ತಲುಪಿದ್ದು.
  ಈಗೆಲ್ಲ ಬಂದಿದ್ದಾರೆ ಕೆಲಸ ಪ್ರಾರಂಬಿಸಿದ್ದಾರೆ ಪುನಃ ಎರಡನೇ ಕೊವಿಡ್ ಅಲೆ ಪ್ರಾರಂಭ ಆಗಿದೆ ಆದರೆ ಅವತ್ತಿನ ಭಯ ಆತಂಕ ಇಲ್ಲ.
  ಸುಮಾರು 36 ಗಂಟೆ ಬಿರು ಬೇಸಿಗೆಯ ದಿನದಲ್ಲಿ ಲಾರಿಯಲ್ಲಿ 80 ಜನ ಟಾಪ್೯ಲ್ ಮುಚ್ಚಿಕೊಂಡು ಮೊಬೈಲ್ ಗಳನ್ನು ಆಫ್ ಮಾಡಿಕೊಂಡು ಕತ್ತಲೆಯಲ್ಲಿ ಕುಳಿತುಕೊಂಡೇ ಕಷ್ಟ ಪಟ್ಟು ಊರು ಮುಟ್ಟಿದ ಇವರ ಕಥೆ ನಿಜಕ್ಕೂ ಆತಂಕಕಾರಿ ಆಗಿತ್ತು ಅಂತ ಈ ಲಾರಿಯಲ್ಲಿ ಪ್ರಯಾಣಿಸಿದ ಕೆಲಸಗಾರ ಖರೆ ವಿವರಿಸಿದಾಗ ಬೇಸರ ಆಶ್ಚಯ೯ ಎರೆಡೂ ಆಯಿತು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...