Skip to main content

ನಮ್ಮೂರ ಮೊದಲ ಸೈಕಲ್ ಶಾಪ್, 1960 ರಿಂದ 1990ರ ವರೆಗೆ ಸೈಕಲ್ ಯುಗದ ವಿಜೃಂಬಣೆ, ಸೈಕಲ್ ಶಾಪ್ ಮಾಲಿಕರಾಗಿ ಆನಂದಪುರಂ ಗ್ರಾಮ ಪಂಚಾಯಿತಿ ಸದಸ್ಯರೂ ಆದ ಸಿರಿಲ್ ಡಿಕಾಸ್ಟ್ ಜನ ಪ್ರೀತಿಯಿಂದ ಇವರನ್ನು ಕರೆಯುವುದು ಸಿರಿಲಣ್ಣ ಅಂತ

#ಆನಂದಪುರಂನ_ಮೊದಲ_ಸೈಕಲ್_ಶಾಪ್.

# ಭದ್ರಾವತಿಯ_ಹನುಮಯ್ಯನವರದ್ದು

#ಸೈಕಲ್_ಶಾಪ್_ಪ್ರಾರಂಭ_1960ರಿಂದ

#ಜಮ೯ನ್_ದೇಶದ_ಕಾರ್ಲ್_ವೋನ್_ಡ್ರೇಯಸ್_ಸೈಕಲ್_ಸಂಶೋದಿಸಿದ್ದು.

#ಆನಂದಪುರಂನ_ಸಿರಿಲ್_ಡಿಕಾಸ್ಟ್_ಸೈಕಲ್_ಶಾಪ್_ಮಾಲಿಕರಲ್ಲಿ_ಪ್ರಸಿದ್ಧರು.

https://youtu.be/wYh8ftFQzi0

  1817ರಲ್ಲಿ ಸೈಕಲ್ ಸಂಶೋದನೆ ಆಯಿತು, ಅದು ಜರ್ಮನ್ ದೇಶದಲ್ಲಿ.
   ಕಾರ್ಲ್ ವೋನ್ ಡ್ರೇಯಸ್ ಸೈಕಲ್ ಜನಕ ಆದರೆ ಸೈಕಲ್ ಗಳು ಪ್ರಸಿದ್ದಿ ಪಡೆದದ್ದು ಮತ್ತು ಬಳಕೆಗೆ ಬಂದದ್ದು 19 ನೇ ಶತಮಾನದಲ್ಲಿ.
  ಭಾರತದಲ್ಲಿ ಮೊದಲ ಸೈಕಲ್ ತಯಾರಕ ಸಂಘ 1943 ರಲ್ಲಿ ಅಸ್ತಿತ್ವಕ್ಕೆ ಬಂತು.
  1956ರಲ್ಲಿ ಲೂದಿಯಾನದಲ್ಲಿ ಹಿರೋ ಸೈಕಲ್ ಉತ್ಪಾದನೆ ಪ್ರಾರಂಬಿಸಿತು, 1951ರಲ್ಲಿ ಅಟ್ಲಾಸ್‌ ಮತ್ತು ಏವನ್ ಪ್ರಾರಂಭ ಆದರೆ 1949 ರಲ್ಲಿ ಹರ್ಕುಲಿಸ್ ತಯಾರಿಕೆ ಪ್ರಾರಂಭ ಆಯಿತು.
  ಅದಕ್ಕೂ ಮೊದಲು ಸೈಕಲ್ ಗಳು ಇಂಗ್ಲೇಂಡ್ ದೇಶದಿಂದ ಆಮದಾಗುತ್ತಿತ್ತು.
  ಆನಂದಪುರಂನಲ್ಲಿ ಮೊದಲ ಸೈಕಲ್ ಶಾಪ್ ಪ್ರಾರಂಬಿಸಿದವರು ಭದ್ರಾವತಿಯ ಹನುಮಯ್ಯನವರು, ಎರಡನೆ ಸೈಕಲ್ ಶಾಪ್ ಸಿರಿಲಣ್ಣನವರದ್ದು, ಮೂರನೆಯದು ದಾಸಕೊಪ್ಪದ ರುದ್ರಪ್ಪನವರಂತೆ ನಂತರದ ಎರಡನೆ ಸೈಕಲ್ ಶಾಪ್ ಹನುಮಯ್ಯರದ್ದು 
   ನಂತರ ಭಾಷಾ ಸಾಹೇಬರು ಅವರ ನಂತರ ಲಾರೆನ್ಸ್ ನಂತರ ಆರೀಪ್ ಸೈಕಲ್ ಶಾಪ್ ಪ್ರಾರಂಬಿಸಿದರು.
 ಸಿರಿಲ್ ಡಿಕಾಸ್ಟ್ ರ ಸೈಕಲ್ ಶಾಪ್ ಈಗಿನ ಡಾಕ್ಟರ್ ಪ್ರಭುರವರ ಕ್ಲಿನಿಕ್ ಎದರು ಇತ್ತು, 1960ರಿಂದ 1995 ರ ವರೆಗೆ ಸುಮಾರು 35 ವರ್ಷ ಇವರ ಸೈಕಲ್ ಶಾಪ್ ಉತ್ತುಂಗದಲ್ಲಿತ್ತು ಮತ್ತು ಇವರ ಜನ ಬಳಕೆ ಹಾಗೂ ವಿಶ್ವಾಸ ಇವರನ್ನು ಆನಂದಪುರಂನ ಗ್ರಾಮ ಪಂಚಾಯತ್ ಸದಸ್ಯರನ್ನಾಗಿ ಆಯ್ಕೆ ಆಗುವಂತೆ ಮಾಡಿತ್ತು.
  ಈಗ ಸುಮಾರು 80 ವರ್ಷದ ವೃದ್ದಾಪ್ಯದಲ್ಲಿ ಕೃಷಿ, ಪಶು ಸಂಗೋಪನೆಯ ಜೊತೆಗೆ ನಿವೃತ್ತ ಜೀವನ ನಡೆಸುವ ಸಿರಿಲಣ್ಣ ಮೊನ್ನೆ ಸಿಕ್ಕಾಗ ಸೈಕಲ್ ಶಾಪ್ ಗಳ ನೆನಪು ಪುನಾರಾವರ್ತನೆ ಆಯಿತು.
  ಆ ಕಾಲದಲ್ಲಿ ಬಸ್ ಸೌಕರ್ಯ, ರಸ್ತೆ ವ್ಯವಸ್ಥೆ ಇರಲಿಲ್ಲ ಆನಂದಪುರ೦ ಸುತ್ತಮುತ್ತದ 20 ಕಿ.ಮಿ. ವ್ಯಾಪ್ತಿಯಲ್ಲಿ ಹೆಚ್ಚು ಜನ ಬಾಡಿಗೆ ಸೈಕಲ್ ನ್ನೇ ಅವಲಂಬಿಸುತ್ತಿದ್ದರಂತೆ.
  ಆಗ ಸೈಕಲ್ ಕಳ್ಳರು ಜಾಸ್ತಿ ಅಂತೆ.
  ಸೈಕಲ್ ಶಾಪ್ ಗಳಲ್ಲಿ ಬಾಡಿಗೆ ಸೈಕಲ್ ನೀಡುವ ವ್ಯವಸ್ಥೆ ಜೊತೆ ಸೈಕಲ್ ಪಂಚರ್ ಹಾಕುವುದು, ಒವರ್ ಆಯಿಲ್ ಮಾಡುವುದು, ವೀಲ್ ಬೆಂಡ್ ತೆಗೆಯುವುದು, ಚೈನ್ ಟೈಟ್ ಮಾಡುವುದು ಇತ್ಯಾದಿ ಸೈಕಲ್ ದುರಸ್ತಿ ಕೆಲಸ ಸೈಕಲ್ ಶಾಪ್ ಮಾಲಿಕರ ಆದಾಯಕ್ಕೆ ದಾರಿ ಆಗಿತ್ತಂತೆ.
   1990 ಕ್ಕೆಲ್ಲ ಮೊಪೆಡ್ ಉತ್ಪಾದನೆ ಬಳಕೆ ಜಾಸ್ತಿ ಆದಂತೆ ಸೈಕಲ್ ಶಾಪ್ ಗಳು ಕಣ್ಮರೆ ಆಗಲು ಪ್ರಾರಂಭವಾಗಿ 2000ನೆ ಇಸವಿಗೆ ಸೈಕಲ್ ಶಾಪ್ ಗಳೇ ಇಲ್ಲವಾಗಿದೆ.
  ಭಾರತದಲ್ಲಿ 1960 ರಿಂದ 1990 ಸೈಕಲ್ ಶಾಪ್ ಗಳ ಉತ್ತುಂಗ ಕಾಲ ಅನ್ನಬಹುದು, ಆಗ ಸೈಕಲ್ ಇದ್ದವ ಶ್ರೀಮಂತ ಮಾತ್ರ ಮತ್ತು ಮನೋರಂಜನೆಗಾಗಿ ಸೈಕಲ್ ರೇಸ್, ಸ್ಲೋ ಸೈಕಲ್ ರೇಸ್ ಕೂಡ ಆಯೋಜಿಸುತ್ತಿದ್ದ ಕಾಲ.
   ಒಂಟಿ ಹ್ಯಾಂಡಲ್ ನ ಡಕೋಟ ಸೈಕಲ್ ನಲ್ಲಿ ಹೆಗ್ಗೋಡು ಸಮೀಪದ ಪುರಪ್ಪೆಮನೆಯ ನೀಳ ಗಡ್ಡದ ಬರೀ ಮೈಯ ಸೊಂಟಕ್ಕೊಂದು ವಸ್ತ್ರ ಧರಿಸಿದ್ದ ಒಂದನೇ ನಂಬರ್ ಕಳ್ಳ ಎಂದು ಸ್ಲೇಟನ್ನು ಸೈಕಲ್ ಗೆ ಸಿಕ್ಕಿಸಿಕೊ೦ಡ ಒಬ್ಬರು ಆಗಾಗ ಸಂಚಾರಕ್ಕೆ ಬರುತ್ತಿದ್ದರು ಆಗ ಹಳ್ಳಿಯ ಮಕ್ಕಳೆಲ್ಲ ಅವರನ್ನು ಮುತ್ತಿಕೊಳ್ಳುತ್ತಿದ್ದ ನೆನಪೂ ಮಾಡಿಕೊಂಡೆವು.
  ಈಗ ಪುನಃ ಜನ ಆರೋಗ್ಯಕ್ಕಾಗಿ ಸೈಕ್ಲಿಂಗ್ ಶುರು ಮಾಡುತ್ತಿದ್ದಾರೆ ಈಗ ಸೈಕಲ್ ಬೆಲೆ ಕನಿಷ್ಟ 8 ಸಾವಿರದಿಂದ ಲಕ್ಷ ರೂಪಾಯಿ ತನಕ ಇದೆ. 

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...