Skip to main content

ಸಜ್ಜನ ಸಂಪನ್ನರಾದ ಸಾಗರದ ಆಹ್ಮದ್ ಆಲೀ ಖಾನ್ ಸಾಹೇಬರು 92 ವರ್ಷಗಳ ಸಂತೃಪ್ತ ಜೀವನ ನಡೆಸಿ ಇಹಲೋಕ ತ್ಯಜಿಸಿದ್ದಾರೆ (1930 ರಲ್ಲಿ ಹೊನ್ನಾಳಿಯಲ್ಲಿ ಜನಿಸಿದ್ದರು)

#ನಮ್ಮ_ಪ್ರೀತಿಯ_ಆಹ್ಮದ್_ಆಲೀ_ಖಾನ್_ಸಾಹೇಬರು

#ಸಜ್ಜನ_ಸಂಪನ್ನ_ವ್ಯಕ್ತಿತ್ವದವರು.

#ಪಠಾಣರಾದ_ಆಹ್ಮದ್_ಆಲೀ_ಖಾನ್_ಸಾಹೇಬರ_92_ವರ್ಷಗಳ_ಸಂತೃಪ್ತ_ಜೀವನ.

https://youtu.be/aOQjyYyh23o

   ಇವತ್ತು ಬೆಳಿಗ್ಗೆ ಹಾಸಿಗೆಯಿಂದ ಏಳುವಾಗಲೇ ಸಾಗರದ ಮಾಜಿ ನಗರ ಸಭಾ ಸದಸ್ಯರಾದ ದಿನೇಶ್ ಖಾನ್ ಸಾಹೇಬರು ಅಲ್ಲಾರ ಪಾದ ಸೇರಿದರು ಎಂಬ ಸುದ್ದಿ ವಾಟ್ಸಪ್ ಮಾಡಿದ್ದರು.
   ಖಾನ್ ಸಾಹೇಬರ ಆತ್ಮಕ್ಕೆ ದೇವರು ಸದ್ಗತಿ - ಸ್ವರ್ಗ ಪ್ರಾಪ್ತಿ ನೀಡಲಿ ಅಂತ ಪ್ರಾಥಿ೯ಸುತ್ತಾ ಅವರಿಗೆ ಶ್ರದ್ದಾಂಜಲಿ ಆಗಿ ಬೇರೆ ಬೇರೆ ಸಂದಭ೯ದಲ್ಲಿ ಖಾನ್ ಸಾಹೇಬರ ಬಗ್ಗೆ ಬರೆದ ಲೇಖನ ಪುನಃ ಖಾನ್ ಸಾಹೇಬರ ಅಭಿಮಾನಿಗಳಿಗೆ ಪ್ರಕಟಿಸಿದ್ದೇನೆ.

#ಹಿರಿಯ_ಕಾಂಗ್ರೇಸ್ಸಿಗರು_ಅಳ್ನಾವರ_ಅಡಿಕೆ_ಕಂಪನಿ_ಅಧ್ಯಕ್ಷರಾಗಿದ್ದ_ತುಂಬೆಸುಬ್ರಾಯರ_ಒಡನಾಟದಲ್ಲಿ.
ಸಾಗರದಿಂದ ಎಲ್ಲಿಗೆ ಹೋಗಲೂ ಆಗ ಟ್ಯಾಕ್ಸಿ ಮಹಬಲರಾವ್ ಕಾರಿನಲ್ಲೇ ಹೋಗುತ್ತಿದ್ದರು ಅಂತ ತುಂಬೆ ಸುಬ್ರಾಯರ ಕಿರಿಯ ಮತ್ತು ಆತ್ಮೀಯ ಗೆಳೆಯರಾಗಿದ್ದ ಅಹ್ಮದ್ ಅಲೀ ಖಾನ್ ಸಾಹೇಬರು ನೆನಪು ಮಾಡಿಕೊಳ್ಳುತ್ತಾರೆ.
   1952 ರಲ್ಲಿ ಹೊನ್ನಾಳಿ ಮೂಲದ ಆಹ್ಮದ್ ಅಲೀ ಖಾನ್ ಸಾಹೇಬರು ಅವರ ಬಾವ ವಾಸಿಂ ಖಾನ್ ಸಾಹೇಬರು (ಅಕ್ಕನ ಗಂಡ)ಸಾಗರದಲ್ಲಿ ಕಂಟ್ರಾಕ್ಟ್ ಆಗಿದ್ದಾಗ ಅವರ ಮುಖಾಂತರ ಸಾಗರದಲ್ಲಿ ಗುತ್ತಿಗೆದಾರರಾಗಿ ಚಿಕ್ಕ ವಯಸಲ್ಲಿಯೇ (ಹುಟ್ಟಿದ್ದು 1930) ಹೆಸರುವಾಸಿ ಆಗಿರುತ್ತಾರೆ ಹಾಗಾಗಿ ತುಂಬೆ ರಸ್ತೆ,ಮೋರಿ ಇತ್ಯಾದಿ ಖಾನ್ ಸಾಹೇಬರೇ ಮಾಡಬೇಕೆಂಬ ಶಿಪಾರಸ್ಸು ತುಂಬೆ ಸುಬ್ರಾಯರದ್ದು ಇದಕ್ಕೆ ಮುಖ್ಯ ಕಾರಣ ಮತ್ತಿಕೊಪ್ಪ ಹರನಾಥ ರಾಯರ ದೊಡ್ಡಪ್ಪರಾಗಿದ್ದ ಅಳ್ನಾವರ ಅಡಿಕೆ ಕಂಪನಿಯ ನಿರ್ಧೇಶಕರು ಆಗಿದ್ದ ಮತ್ತಿಕೊಪ್ಪ ಲಕ್ಷ್ಮೀನಾರಾಯಣರು ಮತ್ತು ಖಾನ್ ಸಾಹೇಬರ ಆತ್ಮೀಯತೆ ಕೂಡ.
   ಹಾಗಾಗಿ ತುಂಬೆ ಸುಬ್ರಾಯರು ಎಲ್ಲೇ ಹೋಗುವುದಾದರೂ ಖಾನ್ ಸಾಹೇಬರು ಜೊತೆ ಕರೆದೊಯ್ಯುತ್ತಿದ್ದರು ಆದ್ದರಿಂದ ಬದರಿನಾರಾಯಣ ಅಯ್ಯಂಗಾರರ ಬೇಟಿಗೆ ತುಂಬೆ ಸುಬ್ರಾಯರ ಜೊತೆ ಖಾನ್ ಸಾಹೇಬರು ಯಾವಾಗಲೂ ಆನಂದಪುರಂಗೆ ಬರುತ್ತಿದ್ದನ್ನು ನೆನಪು ಮಾಡಿಕೊಳ್ಳುತ್ತಾರೆ, ಈ ಸಂದರ್ಭದಲ್ಲೇ ತುಂಬೇ ಸುಬ್ರಾಯರು, ಬದರಿನಾರಾಯಣ ಅಯ್ಯಂಗಾರರು ಆನ೦ದಪುರಂನ ಎರೆಡು ಕೆರೆ ಕೆಳಗಿನ ನೀರಾವರಿ ಜಮೀನು ಅಂತಿಮ ಬೆಲೆ ಎಕರೆಗೆ 3000 ಸಾವಿರದಂತೆ ವ್ಯಾಪಾರ ಆಗುತ್ತದೆ ಆದರೆ ಆಗಲೇ ಇವರ ಅಕ್ಕಿ ಗಿರಣಿಗಳನ್ನು ಖರೀದಿಸಿ ಯಶಸ್ವಿ ಉದ್ದಿಮೆದಾರರಾಗಿದ್ದ ಸುಬ್ಬಣ್ಣ ನಾಯಕರು ಈ ಜಮೀನು ತನಗೆ ಬೇಕೆಂದು ಬದರಿನಾರಾಯಣ ಅಯ್ಯಂಗಾರರ ಅಣ್ಣ ವೆಂಕಟಚಲಾಯಂಗಾರ್ ರಿಂದ ಒತ್ತಡ ತಂದಿದ್ದರಿಂದ ಈ ವ್ಯವಹಾರ ಮುರಿದು ಬಿತ್ತಂತೆ.
  1964 ರಲ್ಲಿ ಲಕ್ಷ್ಮೀಕಾಂತಪ್ಪನವರು ಶಾಸಕರು, ಮಲ್ಕೋಡು ಗೋವಿಂದಪ್ಪನವರು ( ಪುತ್ತೂರಾಯರ ತಂದೆ) ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದರು ಇವರೆಲ್ಲ ತುಂಬೆ ಸುಬ್ರಾಯರ ಮಾತು ಮೀರುತ್ತಿರಲಿಲ್ಲ ಅಂತಹ ವ್ಯಕ್ತಿತ್ವ ಅವರದ್ದೆಂದು ಖಾನ್ ಸಾಹೇಬರು ನೆನಪಿಸಿ ಕೊಳ್ಳುತ್ತಾರೆ.
  ಆಗ ಸಾಗರದಲ್ಲಿ ತಾಲ್ಲೂಕ್‌ ಕಾಂಗ್ರೇಸ್ ಪಾರ್ಟಿ ಕಛೇರಿ ಸೂರಬ ರಸ್ತೆಯ ಯು.ಜಿ.ಮಲ್ಲಿಕಾರ್ಜುನರ ಕಟ್ಟಡದಲ್ಲಿ ನಡೆಯುತ್ತಿತ್ತು ನಂತರ ಸಾಗರದಲ್ಲಿ ಗಾಂಧಿ ಮಂದಿರ ನಿರ್ಮಿಸುವ ತೀಮಾ೯ನ ಆಗುತ್ತದೆ ಇದಕ್ಕೆ ಬದರೀನಾರಾಯಣ ಆಯ್ಯಂಗಾರರು, ತುಂಬೆ ಸುಬ್ರಾಯರು, ಹುಣಾಲು ಮಡಕೆ ಸ್ವಾಮಿ ಗೌಡರು (ಹುಣಾಲು ಮಡಕೆ ಬಸವರಾಜ್ ಗೌಡರ ತಂದೆ), ಖಾನ್ ಸಾಹೇಬರು ಮತ್ತು ಅನೇಕರು ದೇಣಿಗೆ ನೀಡುತ್ತಾರೆ ಆಗ ಸಾಗರ ತಾಲ್ಲೂಕ್ ಕಾಂಗ್ರೇಸ್ ಅಧ್ಯಕ್ಷರು ಮದೂರು ರುದ್ರಪ್ಪ ಗೌಡರು ಮತ್ತು ಕಾರ್ಯದಶಿ೯ ಆಗಿ ಎಲ್ ಟಿ.ತಿಮ್ಮಪ್ಪ ಹೆಗಡೆ ಇರುತ್ತಾರೆ.
  ಖಾನ್ ಸಾಹೇಬರು ತುಕಾರಾಂ ಶೆಟ್ಟರು ಆಗ ಕಾಂಗ್ರೇಸ್ ಪಕ್ಷದ ಯುವ ಮುಖಂಡರು.
  ಬೆಂಗಳೂರಲ್ಲಿ ಬದರಿನಾರಾಯಣ್ ಆಯ್ಯಂಗಾರರು ಇಹ ಲೋಕ ತ್ಯಜಿಸಿದಾಗ ಅಹ್ಮದ್ ಅಲೀ ಖಾನ್ ಸಾಹೇಬರು ಅಂತಿಮ ದರ್ಶನಕ್ಕೆ ಹೋಗಿದ್ದು ಅವರಿಗೆ ಬದರೀನಾರಾಯಣ ಅಯ್ಯಂಗಾರ್ ಮೇಲಿದ್ದ ಪ್ರೀತಿ ಮತ್ತು ಆ ಲಾಗಯಿತಿನಿಂದ ಅವರಿಗೆ ಕಾಂಗ್ರೇಸ್ ಪಕ್ಷದ ಮೇಲೆ ಇರುವ ನಿಷ್ಟೆ ತೋರಿಸುತ್ತದೆ.
  ನಮ್ಮ ತಂದೆ ನನಗೆ ಸಾಗರದ ಕಾಗೋಡು ತಿಮ್ಮಪ್ಪರ ಸಂಜಯ ಮೆಮೋರಿಯಲ್ ಪಾಲಿಟೆಕ್ನಿಕ್ ನಲ್ಲಿ ವ್ಯಾಸಂಗ ಮಾಡಲು 1982ರಲ್ಲಿ ಬದರೀನಾರಾಯಣ ಅಯ್ಯಂಗಾರರಿಂದ ಆಗ ಪಾಲಿಟೆಕ್ನಿಕ್ ಕಾಲೇಜ್ ನ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾಯರು ಮತ್ತು ಸಮಿತಿ ಸದಸ್ಯರಾಗಿದ್ದ ಖಾನ್ ಸಾಹೇಬರಿಗೆ ಹೇಳಿಸಿದ್ದರು ಅವತ್ತು ಸಾಗರದ ಆಸ್ಪತ್ರೆ ಎದುರಿನ ಪುತ್ತೂರಾಯರ ಕಟ್ಟಡದಲ್ಲಿ ಪಾಲಿಟೆಕ್ನಿಕ್ ಕಛೇರಿಯಲ್ಲಿ ನಾನು ಇವರ ಸಂದರ್ಶನದಲ್ಲಿ ಭಾಗವಹಿಸಿದ್ದೆ ಅವತ್ತೆ ಮೊದಲ ಬಾರಿ ತುಂಬೆ ಸುಬ್ರಾಯರನ್ನು ಮತ್ತು ಖಾನ್ ಸಾಹೇಬರನ್ನು ನೋಡಿದ್ದು, ನನ್ನ ಅರ್ಜಿ ನೋಡಿದ ಕೂಡಲೆ ಖಾನ್ ಸಾಹೇಬರು ಸಮಿತಿ ಸದಸ್ಯರಿಗೆ ಬದರಿ ಕ್ಯಾಂಡಿಡೇಟ್ ಅಂದ ಕೂಡಲೆ ಅಧ್ಯಕ್ಷರಾಗಿದ್ದ ತುಂಬೆ ಸುಬ್ರಾಯರು ಆಯ್ತು ಉಚಿತ ಸೀಟು ನೀಡಿ ಬಿಡಿ ಅಂದಿದ್ದು ನನಗೆ ಮರೆಯಲಾರದ ನೆನಪು.
 ಕಾಗೋಡು ತಿಮ್ಮಪ್ಪ ಹಿಂದುಳಿದ ಜನಾಂಗದಿಂದ ವಕೀಲರಾಗಲು ಮತ್ತು ವಕೀಲ ವೃತ್ತಿ ಮಾಡಲು ತುಂಬೆ ಸುಬ್ರಾಯರ ಹೆಚ್ಚಿನ ಬೆಂಬಲವಿತ್ತಂತೆ ಆ ಕಾರಣದಿಂದ ಕಾಗೋಡು ತಿಮ್ಮಪ್ಪನವರು ಪಕ್ಷ ಬೇದ ಮರೆತು ತುಂಬೆ ಸುಬ್ರಾಯರಲ್ಲಿ ಗೌರವ ಹೊಂದಿದ್ದರೆಂದು ಖಾನ್ ಸಾಹೇಬರು ಹೇಳುತ್ತಿದ್ದರು.
 

 #ನಮ್ಮ_ಹೊಸ_ಕಚೇರಿಗೆ_ಆಗಮಿಸಿದ_ನನ್ನ_ನೆಚ್ಚಿನ_ನಾಯಕರಾದ_ಆಹಮದ್_ಆಲೀ_ಖಾನ್_ಸಾಹೇಬರು(28- ಅಕ್ಟೋಬರ್-2019)
 ಮೊನ್ನೆ 28 ಅಕ್ಟೋಬರ್ ರಂದು ಸಂಜೆ ಖಾನ್ ಸಾಹೇಬರು ಅವರ ಮಗ ಮತ್ತು ನನ್ನ ಕ್ಲಾಸ್ ಮೇಟ್ ಮೋಹಿಸಿನ್ ಆಲೀ ಖಾನ್ ಮತ್ತು ಅವರ ಮೊಮ್ಮಗ ಬಂದಿದ್ದರು.
   ಸಾಗರದ ಆಹಮದ್ ಆಲೀ ಖಾನ್ ಸಾಹೇಬರ ಜೀವನದ ಬಗ್ಗೆ ಬರೆದರೆ ಒಂದು ಸ್ವಾರಸ್ಯಕರವಾದ ಗ್ರ೦ಥವೇ ಆದೀತು, 1978-79ರಲ್ಲಿ ಸಾಗರದ ನಿಮ೯ಲ ಹೈಸ್ಕೂಲ್ ಎದರು ಜನತಾ ಪಕ್ಷದ ಸಾಗರದ ಮಾಜಿ ಶಾಸಕರಾದ ಕಾಗೋಡು ತಿಮ್ಮಪ್ಪ ಜನತಾ ಪಕ್ಷ ತೊರೆದು ಕಾ೦ಗ್ರೇಸ್ ಸೇರುವ ಸಭೆ ಇದೆ ಅಂತ ಸಾವ೯ಜನಿಕ ಪ್ರಕಟನೆ ಕೇಳಿ ಮುನ್ಸಿಪಲ್ ಹೈಸ್ಕೂಲ್ ನ 8ನೇ ತರಗತಿಗೆ ಚಕ್ಕರ್ ಹೊಡೆದು ಈ ಸಭೆ ನೋಡಲು ಹೋಗಿದ್ದೆ, ಅಲ್ಲಿ ಕಾಗೋಡು ಜನತಾ ಪಕ್ಷದವರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಅಂತ ಭಾಷಣ ಮಾಡಿದ್ದು ಮತ್ತು ಖಾನ್ ಸಾಹೇಬರು ಅವರನ್ನ ಕಾಂಗ್ರೇಸ್ ಗೆ ಸೇರಿಸಿಕೊಂಡ ಕ್ಷಣ ಜನರ ಚಪ್ಪಾಳೆ ಅಭೂತ ಪೂವ೯ ಬೆಂಬಲದ ಕ್ಷಣ ಅವತ್ತು 15 ವಷ೯ ಪ್ರಾಯದ ನನ್ನ ಮೆದುಳಲ್ಲಿ ಅಚ್ಚಳಿಯದೆ ಉಳಿದಿದೆ.
  ಆಗ ದೇಶದ ಪ್ರದಾನಿ ಇಂದಿರಾ ಗಾಂಧಿ ನನ್ನ ಮೂರನೆ ಮಗ ಎನ್ನುತ್ತಿದ್ದ ಮಡಿಕೆರೆಯ ಎಪ್.ಎಂ.ಖಾನ್ ಮತ್ತು ಸಾಗರದ  ಆಹಮದಾಲಿ ಖಾನ್ ಖಾಸಾ ಖಾಸಾ, ಗುಂಡುರಾವ್ ರನ್ನ ಮುಖ್ಯಮಂತ್ರಿ ಮಾಡಿದ್ದರಿಂದ ಸೊರಬದ ಬಂಗಾರಪ್ಪ ದೂರ ಆಗಿದ್ದರು ಆಗ ಸಾಗರದ ಶಾಸಕರು ಕಾ೦ಗ್ರೇಸ್ ನ ಎಲ್.ಟಿ. ತಿಮ್ಮಪ್ಪ ಹೆಗ್ಗಡೆ ಚುನಾವಣೆಯಲ್ಲಿ ಜನತಾ ಪಕ್ಷದ ಕಾಗೋಡು ತಿಮ್ಮಪ್ಪರನ್ನ ಸೋಲಿಸಿದ್ದರು.
  ಬಂಗಾರಪ್ಪರನ್ನ ಕೌ೦ಟರ್ ಮಾಡಲೆಂದೇ  ಕಾಗೋಡರನ್ನ ಕಾಂಗ್ರೆಸ್ ಗೆ ಸೇರಿಸಿ, ವಿಧಾನ ಪರಿಷತ್ ಸದಸ್ಯರನ್ನ ಮಾಡಿ PWD ಮಂತ್ರಿ ಮಾಡುವ ಮೂಲಕ ರಾಜಕಾರಣದ ಗಾಡ್ ಪಾದರ್ ಈ ಆಹಮದ್ ಆಲೀ ಖಾನ್ ಸಾಹೇಬರು ಮತ್ತು ಅವತ್ತಿನ ಸಭೆಯ ಉದ್ದೇಶ ಮತ್ತು ಅದರ ರೂವಾರಿ ಖಾನ್ ಸಾಹೇಬರು.
  ಇದರಿಂದ ಕಾಗೋಡರ ರಾಜಕೀಯ ಜೀವನ, ಶಾಂತವೇರಿ ಗೋಪಾಲ ಗೌಡರ ಸಮಾಜ ವಾದದ ಮೂಸೆಯಿಂದ ಬಂದ ಕಾಗೋಡು ಬಂಗಾರಪ್ಪ ಬದ್ದ ಶತ್ರುಗಳಾಗಿದ್ದು ಇತಿಹಾಸ.
  ಈ ಎಲ್ಲಾ ಕಾರಣದಿಂದ ಖಾನ್ ಸಾಹೇಬರು ವಿದಾನ ಪರಿಷತ್ ಸದಸ್ಯರಾಗಿ ಮಂತ್ರಿಗಳಾಗುವ ಅಹ೯ತೆ ಇದ್ದರೂ ಸಕಾ೯ರದಲ್ಲಿ ನಿಗಮದ ಅಧ್ಯಕ್ಷರೂ ಆಗಿ ಮಾಡದಿದ್ದು ದುರಂತ.
   ಈ ಇಳಿ ವಯಸ್ಸಿನಲ್ಲಿ ಶಿವಮೊಗ್ಗದಿಂದ ಸಾಗರ ತೆರಳುವ ಮಾಗ೯ ಮಧ್ಯದಲ್ಲಿ ಬ೦ದವರನ್ನ ಒತ್ತಾಯದಿಂದ ನನ್ನ ಕುಚಿ೯ಯಲ್ಲಿ ಕೂರಿಸಿ ಶಾಲು ಹೊದಿಸಿ ಸನ್ಮಾನ ಮಾಡಿ ನಾವೆಲ್ಲ ಸಂತೋಷಪಟ್ಟಿವು, ನಿಜಕ್ಕೂ ಈ ಅವಕಾಶ ಪಡೆದ ನಾವು ದನ್ಯರು ನಮ್ಮ ನೂತನ ಉದ್ದಿಮೆಗೆ ಶುಭ ಹಾರೈಸಿದರು.

#ಸಾಗರದ_ಗಾಂಧೀಮಂದಿರ_ನಿಮಾ೯ಣದಿಂದ_ಇವತ್ತಿನವರೆಗೆ_ಕಾಂಗ್ರೇಸ್_ಪಕ್ಷದಲ್ಲೇ_ಇರುವ_ನಿಷ್ಟಾವಂತ_ಖಾನ್_ಸಾಹೇಬರು .
  ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ನವರು ಲೋಕಸಭೆಗೆ ಕಾಂಗ್ರೇಸ್ ವಿರುದ್ಧ ಸ್ಪದಿ೯ಸಿದಾಗ ಹೇಳುತ್ತಿದ್ದರು ಯಾರಾದರೂ ಬದಲಾಗಿ ಬೇರೆ ಪಕ್ಷಕ್ಕೆ ಓಟು ನೀಡ ಬಹುದು ಆದರೆ ಆ ಸಾಗರದ ಖಾನ್ ಮತ್ತು ಪೈ (ಪುತ್ತೂರಾಯರ ಬಗ್ಗೆ) ಮಾತ್ರ ಕೈ ಬಿಟ್ಟು ಬರೊಲ್ಲ ಅಂತ.
  ಅದಕ್ಕೆ ಕಾರಣವೂ ಇದೆ, ಗುಂಡೂರಾಯರ ಕಾಲದಲ್ಲಿ ಬಂಗಾರಪ್ಪರನ್ನ ಹಣಿಯಲು ಜನತಾ ಪಕ್ಷದಿಂದ ಕಾಗೋಡರನ್ನ ತಂದು ವಿದಾನ ಪರಿಷತ್ ಸದಸ್ಯರನ್ನಾಗಿಸಿ ಮಂತ್ರಿ ಮಾಡಿದ ಕಾಯ೯ದಲ್ಲಿ ಆಹಮದ್ ಆಲೀ ಖಾನ್ ಸಾಹೇಬರ  ಕೆಲಸ ದೊಡ್ಡದು.
  ಸ್ವಾತಂತ್ರ್ಯ ನಂತರದ 1952 ರಿಂದ ಪ್ರಾರಂಭವಾದ ಚುನಾವಣೆಯಿಂದ ಈ ವರೆಗಿನ ಚುನಾವಣೆ ವರೆಗೆ ನೇರ ನೋಡಿದವರು, ರಾಜಕಾರಣ ಮಾಡಿದವರು ಇವರು, ಸಾಗರ ತಾಲ್ಲೂಕಿನ ಕಾಂಗ್ರೇಸ್ ಅಧ್ಯಕ್ಷರಾಗಿ ಪಕ್ಷ ಸಂಘಟಿಸಿದವರು, ಪುರಸಭಾ ಅಧ್ಯಕ್ಷರೂ ಆದವರು.
  1989ರಲ್ಲಿ ಸಾಗರ ವಿಧಾನ ಸಭೆಗೆ ಕಾಗೋರಡರನ್ನ ಪುನಃ ಕರೆ ತಂದವರು ಆಗಲೇ ನಮ್ಮಂತವರನ್ನೆಲ್ಲ ಹಿಡಿದು ತಂದು ಕಾಂಗ್ರೇಸ್ಗೆ ಸೇರಿಸಿ ಕೊಂಡವರು, ಇವರ ಮಾಗ೯ದಶ೯ನದಿಂದಲೇ ನಾನು ಗ್ರಾ.ಪಂ., ಜಿ.ಪಂ ಗೂ ಹೋಗುವ೦ತಾಯಿತು, ಸಾಗರ ತಾಲ್ಲೂಕಿನಲ್ಲಿ ಇವರ ಗರಡಿಯಲ್ಲಿ ತಯಾರಾದ ನಾಯಕರು ನೂರಾರು.
  ಈಗ 86 ರ ವಯೋಮಾನದ ಇವರು ನಿವೃತ್ತ ಜೀವನ ಮಾಡುತ್ತಿದ್ದಾರೆ, ಯೋಗ್ಯರಾದ ಮಕ್ಕಳು, ಮೊಮ್ಮಕ್ಕಳು ಮತ್ತು ಮರಿ ಮಕ್ಕಳ ಒಂದಿಗೆ ಸಂತೃಪ್ತ ಜೀವನ ಅವರದ್ದು.
ಇತ್ತೀಚಿಗೆ ಅನಾರೋಗ್ಯದಿಂದ ಮಣಿಪಾಲದಲ್ಲಿ 15 ದಿನ ಚಿಕಿತ್ಸೆ ಪಡೆದು ಬಂದಿದ್ದಾರೆಂದು ತಿಳಿದು ಮೊನ್ನೆ ಸಂಜೆ ಇವರನ್ನ ಬೇಟಿ ಮಾಡಲು ಸಾಗರಕ್ಕೆ ಹೋಗಿದ್ದೆ, ಈ ಇಳಿ ವಯಸ್ಸಿನಲ್ಲೂ ಬಂದವರ ಆತಿಥ್ಯ ಮರೆಯದೆ ನಮಗೆ ಬ್ಲಾಕ್ ಟೀ ಮತ್ತು ಬಿಸ್ಕತ್ ನೀಡಿದರು, ಅವತ್ತೆ ಬೆಳಿಗ್ಗೆ ಕಾಗೋಡು ತಿಮ್ಮಪ್ಪನವರು ಬಂದು ಹೋಗಿದ್ದರು.
  ಇವರ ಸಣ್ಣ ಮಗ ಮೊಹಿಸಿನ್ ಖಾನ್ ಜೊತೆ ಇದ್ದಾರೆ, ಮೊಹಿಸಿನ್ ನನ್ನ ಕ್ಲಾಸ್ ಮೇಟ್ ಕೂಡ ಈಗ ಅವರು ಶುಂಠಿ ಮತ್ತು ಅಡಕೆ ವ್ಯಾಪಾರಿಗಳು, ದೊಡ್ಡ ಮಗ ಮನ್ಜೂರ್ ಖಾನ್  ನಗರಸಭಾ ಸದಸ್ಯರು, ಇನ್ನಿಬ್ಬರು ಮತೀನ್ ಖಾನ್ ಮತ್ತು ಮೆಹರ್ ಖಾನ್.
  #ಸಾಗರದ_ಕಾಂಗ್ರೇಸ್_ಕಚೇರಿ_ಗಾಂಧಿ_ಮಂದಿರದಲ್ಲಿ_ಮೊದಲ_ಚುನಾವಣೆಯಿಂದ_ಈವರೆಗೂ_ಪಕ್ಷಾಂತರ_ಮಾಡದ_ಏಕೈಕ_ವ್ಯಕ್ತಿ_ಇವರೊಬ್ಬರೇ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ