Skip to main content

ದೀಘ೯ ಕಾಲ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಧ್ಯಕ್ಷರಾಗಿ, ದಿನಕರ ದೇಸಾಯಿಯವರ ಶೈಲಿಯಲ್ಲಿ ಚುಟುಕು ಸಾಹಿತ್ಯ ರಚಿಸಿ ಮಲೆನಾಡ ದಿನಕರ ದೇಸಾಯಿ ಎಂದೇ ಹೆಸರಾಗಿದ್ದ ಸಜ್ಜನ ಹಾ. ಸಾ. ಹಸನ್ ರು ಇನ್ನು ನೆನಪು ಮಾತ್ರ

#ಕಾರ್ಗಲ್_ಹಾ_ಸಾ_ಹಸನ್_ಸಾಹೇಬರು_ಇನ್ನು_ನೆನಪಿನಲ್ಲಿ.

#ದೀಘಾ೯ವದಿ_ಸಾಗರ_ತಾಲ್ಲೂಕ್_ಕಾಂಗ್ರೇಸ್_ಅಧ್ಯಕ್ಷರಾಗಿದ್ದರು.

#ಮಲೆನಾಡ_ದಿನಕರ_ದೇಸಾಯಿ_ಎಂಬ_ಬಿರುದು_ಇವರಿಗಿತ್ತು.

#ನನ್ನ_ಕಥಾ_ಸಂಕಲನದ_ಪುಸ್ತಕದಲ್ಲಿನ_ಒಂದು_ಕಥೆಯಲ್ಲಿ_ಹಾ_ಸಾ_ಹಸನ್_ಸಾಹೇಬರಿದ್ದಾರೆ.

   ಲಿಂಗನಮಕ್ಕಿ ಡ್ಯಾಂ ನಿರ್ಮಾಣದ ವೇಳೆ ಸಣ್ಣದಾಗಿ ಕಂಟ್ರಾಕ್ಟ್ ಕೆಲಸ ಮಾಡ್ತಾ ಇದ್ದ ಕಾಗ೯ಲ್ ನ ಹಸನ್ ಸಾಬರಿಗೆ ನಿಧಿ ಸಿಕ್ಕಿತ್ತು ಅಂತ ಜನ ಅಂತಿದ್ದರು, ಒಮ್ಮೆ ಹಸನ್ ಸಾಬರಿಗೆ ಈ ಬಗ್ಗೆ ಕೇಳಿದಾಗ ಅವರು ಹೇಳಿದ್ದು, ಮಣ್ಣು ಆಗೆಸಲಿಕ್ಕೆ ಆಂಧ್ರದಿಂದ ಕೂಲಿ ಆಳುಗಳನ್ನು ಬಿಟ್ಟಿದ್ದೆ. ಮಧ್ಯಾಹ್ನದ ಹೊತ್ತು ಬಿಸಿಲಲ್ಲಿ ಅಲ್ಲೇ ಮರದ ಕೆಳಗೆ ಕುಳಿತಿದ್ದೆ, ಆಗ ಕೆಲಸ ನಿಲ್ಲಿಸಿ ಬಂದ ಕೂಲಿಗಳು ನೆಲದಲ್ಲಿ ದೊಡ್ಡ ಕೊಪ್ಪರಿಗೆ ಇದೆ ಅಂದರು, ನಾನು ಹುಷಾರಾದೆ, ತಕ್ಷಣ ಕೆಲಸ ನಿಲ್ಲಿಸಲು ಹೇಳಿದೆ. ರಾತ್ರಿ ಅವರನ್ನೂ ಉಪಯೋಗಿಸಿಕೊಂಡು ಆ ಕೊಪ್ಪರಿಗೆ ತೆಗೆದರೆ ಅದರಲ್ಲಿ ಏನೂ ಇರಲಿಲ್ಲ, ನಂತರ ಸಣ್ಣ ಕೊಪ್ಪರಿಗೆ ನನ್ನ ಹೆರಾಲ್ಡ್ ಕಾರ್ ನ ಡಿಕ್ಕಿಯಲ್ಲಿ ಹಾಕಿಕೊಂಡು ಬಂದೆ, ಒಂದು 40 ಕೇಜಿ ಬಿರಿಯಾನಿ ಮಾಡೋ ಅಂತ ತಾಮ್ರದ ತಪ್ಪಲೆ ಅದು.
  ಜನ ನನಗೆ ನಿಧಿ ಸಿಕ್ಕಿತು ಅಂತ ಪ್ರಚಾರ ಮಾಡಿದರು, ನನ್ನ ಹೆರಾಲ್ಡ್ ಕಾರ್ ಡಿಕ್ಕಿ ಈ ತಪ್ಪಲೆ ಇಡಬೇಕಾದರೆ ಸ್ವಲ್ಪ ಜಕ್ಕಂ ಆಗಿತ್ತು ಅದನ್ನು ಸಾಕ್ಷಿ ಮಾಡಿಕೊಂಡು ಹೇಳ್ತಾ ಬಂದರು .....
  ಈ ಘಟನೆ ನನ್ನ ಕಥಾ ಸಂಕಲನದಲ್ಲಿ ದಾಖಲಾಗಿದೆ ಈ ರೀತಿ ಅದನ್ನು ದಾಖಲಿಸುವುದಾಗಿ ಅವರಿಗೆ ತಿಳಿಸಿದ್ದೆ ಕನ್ನಡ ಸಾಹಿತ್ಯಾಭಿಮಾನಿಗಳು ಸ್ವತಃ ಸಾಹಿತಿಗಳಾಗಿದ್ದ ಹಾ.ಸಾ. ಹಸನ್ ಸಾಹೇಬರು ಒಪ್ಪಿದ್ದರು ಪುಸ್ತಕ ಪ್ರಕಟವಾಗಿ ಬಿಡುಗಡೆ ಆಯಿತು, ಪುಸ್ತಕ ಅವರಿಗೆ ಮುದ್ದಾಂ ಆಗಿ ತಲುಪಿಸಲು ವಿಳಂಬ ಆಯಿತು ಕಳೆದ ವಾರದಿಂದ ವೈರಲ್ ಪೀವರ್ ಆಗಿ ಮಲಗಿಬಿಟ್ಟಿದ್ದೆ ಆಗಲೇ ಗೊತ್ತಾಗಿದ್ದು ಹಾ. ಸಾ. ಹಸನ್ ಸಾಹೇಬರು ನಮನ್ನೆಲ್ಲ ಅಗಲಿದ್ದಾರೆ ಅಂತ.
  ರಾಜಕೀಯ, ಉದ್ಯೋಗ, ಓದು-ಬರವಣಿಗೆ ಜೊತೆ ಜೊತೆಯಲ್ಲೇ ಯಶಸ್ವಿಯಾಗಿ ನಿರ್ವಹಿಸಿದರು.
  ಅವರ ಶ್ವೇತ ವರ್ಣದ ಉಡುಪು, ಕ್ಷೀನ್ ಶೇವ್ ಮಾಡಿದ ಹಸನ್ಮುಖಿ ಹಸನ್ ಸಾಹೇಬರಿದ್ದಲ್ಲಿ ಸಮಯ ಸರಿಯುವುದೇ ಗೊತ್ತಾಗುತ್ತಿರಲಿಲ್ಲ, ಆಳವಾಗಿ ಓದಿಕೊಂಡಿರುತ್ತಿ ಅವರು ಮಧ್ಯಮದ್ಯ ಹಾಸ್ಯ ಚಟಾಕಿಯೊಂದಿಗೆ ರಾಜಕೀಯ, ಪ್ರಚಲಿತ ಘಟನೆ, ಸಾಹಿತ್ಯದ ಬಗ್ಗೆ ವಿಸ್ತಾರವಾಗಿ ಮಾತಾಡುತ್ತಿದ್ದರು.
  ಇವರ ಸಹೋದರಿ ರಿಪ್ಪನ್ ಪೇಟೆಯಿಂದ (ಯೂಸೂಪ್ ಸಾಹೇಬರ ದರ್ಮ ಪತ್ನಿ) ಹೊಸನಗರ ತಾಲ್ಲೂಕನ ತಾಲ್ಲೂಕ್ ಪಂಚಾಯತ್ ಸದಸ್ಯರಾಗಿ ಉಪಾಧ್ಯಕ್ಷರೂ ಆಗಿದ್ದರು ಅವರೂ ಸಾಹಿತಿಗಳಾಗಿದ್ದರು.
  1980 ರಲ್ಲಿ ಸಾಗರದಲ್ಲಿ ತೀ.ನಾ. ಶ್ರೀನಿವಾಸರ ಸ್ಥಳಿಯ ಪತ್ರಿಕೆ #ನ್ಯಾಯದ_ತಕ್ಕಡಿ ಕಾಯಾ೯ಲಯಕ್ಕೆ ಪ್ರತಿ ದಿನ ಕಾರ್ಗಲ್ ನಿಂದ ಕಾಂಗ್ರೇಸ್ ಕಛೇರಿಗೆ ಬರುತ್ತಿದ್ದ ಹಾ. ಸಾ. ಹಸನ್ ಸಾಹೇಬರು ಸರಸರನೆ ಹತ್ತಾರು ಚುಟುಕಗಳನ್ನು (ನಾಲ್ಕು ಸಾಲಿನಲ್ಲಿ) ಬರೆದು ಕೊಟ್ಟು ಹೋಗುತ್ತಿದ್ದರು ಅದು ಮರುದಿನ ಪ್ರಕಟ ಆಗುತ್ತಿತ್ತು ಈ ಚುಟುಕುಗಳನ್ನು ನೋಡಿ ಆಸ್ವಾದಿಸಿದವರೇ ಇವರಿಗೆ ಮಲೆನಾಡ ದಿನಕರ ದೇಸಾಯಿ ಎಂಬ ಬಿರುದು ನೀಡಿದ್ದರು.
  ಇವರ ಎಲ್ಲಾ ಸಾಹಿತ್ಯಗಳು ಇವರ ಕುಟುಂಬ ಸಂಗ್ರಹಿಸಿ ಪ್ರಕಟ ಮಾಡಲಿ ಎಂದು ಆಶಿಸುತ್ತಾ ಸಜ್ಜನ ಹಿರಿಯರಾದ ಹಾ. ಸಾ. ಹಸನ್ ರ ಆತ್ಮಕ್ಕೆ ಚಿರಶಾಂತಿಗಾಗಿ ಪ್ರಾರ್ಥಿಸುತ್ತೇನೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...