Skip to main content

ದೀಘ೯ ಕಾಲ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಅಧ್ಯಕ್ಷರಾಗಿ, ದಿನಕರ ದೇಸಾಯಿಯವರ ಶೈಲಿಯಲ್ಲಿ ಚುಟುಕು ಸಾಹಿತ್ಯ ರಚಿಸಿ ಮಲೆನಾಡ ದಿನಕರ ದೇಸಾಯಿ ಎಂದೇ ಹೆಸರಾಗಿದ್ದ ಸಜ್ಜನ ಹಾ. ಸಾ. ಹಸನ್ ರು ಇನ್ನು ನೆನಪು ಮಾತ್ರ

#ಕಾರ್ಗಲ್_ಹಾ_ಸಾ_ಹಸನ್_ಸಾಹೇಬರು_ಇನ್ನು_ನೆನಪಿನಲ್ಲಿ.

#ದೀಘಾ೯ವದಿ_ಸಾಗರ_ತಾಲ್ಲೂಕ್_ಕಾಂಗ್ರೇಸ್_ಅಧ್ಯಕ್ಷರಾಗಿದ್ದರು.

#ಮಲೆನಾಡ_ದಿನಕರ_ದೇಸಾಯಿ_ಎಂಬ_ಬಿರುದು_ಇವರಿಗಿತ್ತು.

#ನನ್ನ_ಕಥಾ_ಸಂಕಲನದ_ಪುಸ್ತಕದಲ್ಲಿನ_ಒಂದು_ಕಥೆಯಲ್ಲಿ_ಹಾ_ಸಾ_ಹಸನ್_ಸಾಹೇಬರಿದ್ದಾರೆ.

   ಲಿಂಗನಮಕ್ಕಿ ಡ್ಯಾಂ ನಿರ್ಮಾಣದ ವೇಳೆ ಸಣ್ಣದಾಗಿ ಕಂಟ್ರಾಕ್ಟ್ ಕೆಲಸ ಮಾಡ್ತಾ ಇದ್ದ ಕಾಗ೯ಲ್ ನ ಹಸನ್ ಸಾಬರಿಗೆ ನಿಧಿ ಸಿಕ್ಕಿತ್ತು ಅಂತ ಜನ ಅಂತಿದ್ದರು, ಒಮ್ಮೆ ಹಸನ್ ಸಾಬರಿಗೆ ಈ ಬಗ್ಗೆ ಕೇಳಿದಾಗ ಅವರು ಹೇಳಿದ್ದು, ಮಣ್ಣು ಆಗೆಸಲಿಕ್ಕೆ ಆಂಧ್ರದಿಂದ ಕೂಲಿ ಆಳುಗಳನ್ನು ಬಿಟ್ಟಿದ್ದೆ. ಮಧ್ಯಾಹ್ನದ ಹೊತ್ತು ಬಿಸಿಲಲ್ಲಿ ಅಲ್ಲೇ ಮರದ ಕೆಳಗೆ ಕುಳಿತಿದ್ದೆ, ಆಗ ಕೆಲಸ ನಿಲ್ಲಿಸಿ ಬಂದ ಕೂಲಿಗಳು ನೆಲದಲ್ಲಿ ದೊಡ್ಡ ಕೊಪ್ಪರಿಗೆ ಇದೆ ಅಂದರು, ನಾನು ಹುಷಾರಾದೆ, ತಕ್ಷಣ ಕೆಲಸ ನಿಲ್ಲಿಸಲು ಹೇಳಿದೆ. ರಾತ್ರಿ ಅವರನ್ನೂ ಉಪಯೋಗಿಸಿಕೊಂಡು ಆ ಕೊಪ್ಪರಿಗೆ ತೆಗೆದರೆ ಅದರಲ್ಲಿ ಏನೂ ಇರಲಿಲ್ಲ, ನಂತರ ಸಣ್ಣ ಕೊಪ್ಪರಿಗೆ ನನ್ನ ಹೆರಾಲ್ಡ್ ಕಾರ್ ನ ಡಿಕ್ಕಿಯಲ್ಲಿ ಹಾಕಿಕೊಂಡು ಬಂದೆ, ಒಂದು 40 ಕೇಜಿ ಬಿರಿಯಾನಿ ಮಾಡೋ ಅಂತ ತಾಮ್ರದ ತಪ್ಪಲೆ ಅದು.
  ಜನ ನನಗೆ ನಿಧಿ ಸಿಕ್ಕಿತು ಅಂತ ಪ್ರಚಾರ ಮಾಡಿದರು, ನನ್ನ ಹೆರಾಲ್ಡ್ ಕಾರ್ ಡಿಕ್ಕಿ ಈ ತಪ್ಪಲೆ ಇಡಬೇಕಾದರೆ ಸ್ವಲ್ಪ ಜಕ್ಕಂ ಆಗಿತ್ತು ಅದನ್ನು ಸಾಕ್ಷಿ ಮಾಡಿಕೊಂಡು ಹೇಳ್ತಾ ಬಂದರು .....
  ಈ ಘಟನೆ ನನ್ನ ಕಥಾ ಸಂಕಲನದಲ್ಲಿ ದಾಖಲಾಗಿದೆ ಈ ರೀತಿ ಅದನ್ನು ದಾಖಲಿಸುವುದಾಗಿ ಅವರಿಗೆ ತಿಳಿಸಿದ್ದೆ ಕನ್ನಡ ಸಾಹಿತ್ಯಾಭಿಮಾನಿಗಳು ಸ್ವತಃ ಸಾಹಿತಿಗಳಾಗಿದ್ದ ಹಾ.ಸಾ. ಹಸನ್ ಸಾಹೇಬರು ಒಪ್ಪಿದ್ದರು ಪುಸ್ತಕ ಪ್ರಕಟವಾಗಿ ಬಿಡುಗಡೆ ಆಯಿತು, ಪುಸ್ತಕ ಅವರಿಗೆ ಮುದ್ದಾಂ ಆಗಿ ತಲುಪಿಸಲು ವಿಳಂಬ ಆಯಿತು ಕಳೆದ ವಾರದಿಂದ ವೈರಲ್ ಪೀವರ್ ಆಗಿ ಮಲಗಿಬಿಟ್ಟಿದ್ದೆ ಆಗಲೇ ಗೊತ್ತಾಗಿದ್ದು ಹಾ. ಸಾ. ಹಸನ್ ಸಾಹೇಬರು ನಮನ್ನೆಲ್ಲ ಅಗಲಿದ್ದಾರೆ ಅಂತ.
  ರಾಜಕೀಯ, ಉದ್ಯೋಗ, ಓದು-ಬರವಣಿಗೆ ಜೊತೆ ಜೊತೆಯಲ್ಲೇ ಯಶಸ್ವಿಯಾಗಿ ನಿರ್ವಹಿಸಿದರು.
  ಅವರ ಶ್ವೇತ ವರ್ಣದ ಉಡುಪು, ಕ್ಷೀನ್ ಶೇವ್ ಮಾಡಿದ ಹಸನ್ಮುಖಿ ಹಸನ್ ಸಾಹೇಬರಿದ್ದಲ್ಲಿ ಸಮಯ ಸರಿಯುವುದೇ ಗೊತ್ತಾಗುತ್ತಿರಲಿಲ್ಲ, ಆಳವಾಗಿ ಓದಿಕೊಂಡಿರುತ್ತಿ ಅವರು ಮಧ್ಯಮದ್ಯ ಹಾಸ್ಯ ಚಟಾಕಿಯೊಂದಿಗೆ ರಾಜಕೀಯ, ಪ್ರಚಲಿತ ಘಟನೆ, ಸಾಹಿತ್ಯದ ಬಗ್ಗೆ ವಿಸ್ತಾರವಾಗಿ ಮಾತಾಡುತ್ತಿದ್ದರು.
  ಇವರ ಸಹೋದರಿ ರಿಪ್ಪನ್ ಪೇಟೆಯಿಂದ (ಯೂಸೂಪ್ ಸಾಹೇಬರ ದರ್ಮ ಪತ್ನಿ) ಹೊಸನಗರ ತಾಲ್ಲೂಕನ ತಾಲ್ಲೂಕ್ ಪಂಚಾಯತ್ ಸದಸ್ಯರಾಗಿ ಉಪಾಧ್ಯಕ್ಷರೂ ಆಗಿದ್ದರು ಅವರೂ ಸಾಹಿತಿಗಳಾಗಿದ್ದರು.
  1980 ರಲ್ಲಿ ಸಾಗರದಲ್ಲಿ ತೀ.ನಾ. ಶ್ರೀನಿವಾಸರ ಸ್ಥಳಿಯ ಪತ್ರಿಕೆ #ನ್ಯಾಯದ_ತಕ್ಕಡಿ ಕಾಯಾ೯ಲಯಕ್ಕೆ ಪ್ರತಿ ದಿನ ಕಾರ್ಗಲ್ ನಿಂದ ಕಾಂಗ್ರೇಸ್ ಕಛೇರಿಗೆ ಬರುತ್ತಿದ್ದ ಹಾ. ಸಾ. ಹಸನ್ ಸಾಹೇಬರು ಸರಸರನೆ ಹತ್ತಾರು ಚುಟುಕಗಳನ್ನು (ನಾಲ್ಕು ಸಾಲಿನಲ್ಲಿ) ಬರೆದು ಕೊಟ್ಟು ಹೋಗುತ್ತಿದ್ದರು ಅದು ಮರುದಿನ ಪ್ರಕಟ ಆಗುತ್ತಿತ್ತು ಈ ಚುಟುಕುಗಳನ್ನು ನೋಡಿ ಆಸ್ವಾದಿಸಿದವರೇ ಇವರಿಗೆ ಮಲೆನಾಡ ದಿನಕರ ದೇಸಾಯಿ ಎಂಬ ಬಿರುದು ನೀಡಿದ್ದರು.
  ಇವರ ಎಲ್ಲಾ ಸಾಹಿತ್ಯಗಳು ಇವರ ಕುಟುಂಬ ಸಂಗ್ರಹಿಸಿ ಪ್ರಕಟ ಮಾಡಲಿ ಎಂದು ಆಶಿಸುತ್ತಾ ಸಜ್ಜನ ಹಿರಿಯರಾದ ಹಾ. ಸಾ. ಹಸನ್ ರ ಆತ್ಮಕ್ಕೆ ಚಿರಶಾಂತಿಗಾಗಿ ಪ್ರಾರ್ಥಿಸುತ್ತೇನೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ