Skip to main content

ರಂಗ ಪೂಜೆ ಏನಿದರ ಮಹತ್ವ? ನಮ್ಮ ಊರಿನ ಶ್ರೀ ವರ ಸಿದ್ಧಿ ವಿನಾಯ ಸ್ವಾಮಿ ದೇವರ ರಥೋತ್ಸವದ ದಿನ ನಡೆಯುವ ರಂಗ ಪೂಜೆಯ ವಿಶೇಷತೆಗಳು

#ರಂಗಪೂಜೆಯ_ಮಹತ್ವ

#Ranga_puja_for_siddivinayaka

#ಶ್ರೀವರಸಿದ್ದಿವಿನಾಯಕ_ದೇವರಿಗೆ_ರಂಗಪೂಜೆ.

#ಪ್ರತಿವರ್ಷ_ಈ_ರಂಗಪೂಜೆಯೊಂದಿಗೆ_ಜಾತ್ರೆ_ಸಂಪನ್ನವಾಗುತ್ತದೆ.

#ರ೦ಗಪೂಜೆಯ_ಮಹತ್ವ_ಇಲ್ಲಿದೆ.

ಪ್ರತಿ ವರ್ಷ ಕುಂದ ಚತುರ್ಥಿಯಲ್ಲಿ ನಮ್ಮ ಊರಿನ ಶ್ರೀ ವರಸಿದ್ಧಿ ವಿನಾಯಕ ದೇವರ ವಾರ್ಷಿಕೋತ್ಸವ,108 ಕಾಯಿಗಳ ಮಹಾ ಗಣಹೋಮ,ಬ್ರಹ್ಮ ರಥೋತ್ಸವ ಮತ್ತು ಈ ರಂಗ ಪೂಜೆ ನಿರಂತರ ನಡೆದಿದೆ.
  ಈ ವರ್ಷ 16 ನೇ ವರ್ಷಾಚಾರಣೆ ಕೋವಿಡ್ ನಿರ್ಬಂದಗಳಿದ್ದರಿಂದ ರಥಬೀದಿ ಉತ್ಸವ, ಊರ ಒಳಗೆ ಪಲ್ಲಕ್ಕಿ ಉತ್ಸವ, ರಂಗೋಲಿ ಸ್ಪರ್ದೆ, ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಪ್ರತಿ ವರ್ಷದಂತೆ ವಿಶೇಷ ಅನ್ನ ಸಂತರ್ಪಣೆ (ಹೋಳಿಗೆ ತುಪ್ಪದ ಊಟ) ಈ ವರ್ಷ ರದ್ದಾಗಿತ್ತು.
  #ದಾರ್ಮಿಕ ಕಾರ್ಯಕ್ರಮಗಳು ಮಾತ್ರ ಶ್ರದ್ದಾ ಭಕ್ತಿಯಿಂದ ನಡೆಯಿತು, ಬೆಳಿಗ್ಗೆ ಹೋಮ-ಹವನ-ಅಭಿಶೇಕ -ಬಲಿಪೂಜಿ ಮದ್ಯಾಹ್ನ ಬ್ರಹ್ಮ ರಥೋತ್ಸವ ಮತ್ತು ಸಂಜೆ ರಂಗ ಪೂಜೆಯೊಂದಿಗೆ 16ನೇ ವಾರ್ಷಿಕ ಕಾರ್ಯಕ್ರಮ ಸಂಪನ್ನಗೊಂಡಿತು.
  #ಏನಿದು_ರಂಗಪೂಜೆ?
ರಂಗ ಪೂಜೆಯ ಕಾಲಮಾನದ ಬಗ್ಗೆ ನಿಖರ ಮಾಹಿತಿ ಇಲ್ಲ ಆದರೆ ರಂಗ ಪೂಜೆಯಿಂದ ಪಾಪ ಪರಿಹಾರ, ಪುಣ್ಯ ಪ್ರಾಪ್ತನೆ, ಕೀರ್ತಿ, ಯಶಸ್ಸು, ಧನ, ಬೂತಪ್ರೇತಾದಿ ಉಪದ್ರವ ವಿವಾರಣೆ, ಪತ್ನಿ, ಪುತ್ರ, ಪೌತ್ರಾದಿಗಳನ್ನು ನೀಡುತ್ತದೆ ಈ ಪೂಜೆಯಿಂದ ಗ್ರಾಮ, ದೇಶಕ್ಕೆ ಶುಭ ಉಂಟಾಗುತ್ತದೆ ಇದರಿಂದ ಎಲ್ಲಾ ದೇವತೆಗಳೂ ಸಂತುಷ್ಟರಾಗುತ್ತಾರೆ ಶ್ರೀಹರಿಯ ಪೂರ್ಣ ಅನುಗ್ರಹ ಪ್ರಾಪ್ತಿ ಮತ್ತು ಸರ್ವ ಸಿದ್ದಿ ದೊರೆಯುತ್ತದೆ ಎಂಬ ಪ್ರತೀತಿ, ನಂಬಿಕೆ ಮತ್ತು ಆಚರಣೆ ಇದೆ ಅಂತ ರಥೋತ್ಸವ ಮತ್ತು ರಂಗ ಪೂಜೆ ಪ್ರತಿ ವರ್ಷ ನಡೆಸುವ ಸೋ೦ದ ಸ್ವರ್ಣವಲ್ಲಿ ಸ್ವಾಮೀಜಿಗಳ ಪೂವಾ೯ಶ್ರಮದ ಮನೆಯ ಪುರೋಹಿತರಾದ ಸಿರ್ಸಿಯ ತಾರಗೋಡಿನ ಶ್ರೀ ರಾಮಚಂದ್ರ ಭಟ್ಟರು ಪ್ರವಚನದಲ್ಲಿ ಹೇಳುತ್ತಾರೆ.
  ರಾತ್ರಿ ದೇವರ ಗರ್ಭಗುಡಿ ದ್ವಾರದಿಂದ ದ್ವಜ ಸ್ಥಂಭದವರೆಗೆ ಹಲಗೆಯನ್ನು ಕಟ್ಟಿ, ವಸ್ತ್ರಹಾಸಿ ಕುಡಿ ಬಾಳೆ ಎಲೆ ಜೋಡಿಸಿ ನೈವೇದ್ಯ ಲಿಂಗಾಕಾರವಾಗಿ ಇರಿಸಿ ಅದರ ಜೊತೆ ಬೆಲ್ಲ, ಬಾಳೆಹಣ್ಣು, ಅವಲಕ್ಕಿ, ಅರಳು, ವಿವಿದ ಹಣ್ಣುಗಳು, ತೆಂಗಿನಕಾಯಿ, ಮೊದಕ, ವೀಳ್ಯದ ಎಲೆ, ಅಡಿಕೆ, ಕಬ್ಬು, ಹಿಂಗಾರ ಹೂವುಗಳ ಅಲಂಕಾರ ಮಾಡಿ ಎರೆಡೂ ಪಾರ್ಶ್ವದಲ್ಲಿ ಹಣತೆಯ ದೀಪ ಬೆಳಗಿ ದೇವರಿಗೆ ಸಮರ್ಪಿಸಿ, ಸ೦ಗೀತ - ನೃತ್ಯ - ಶಂಖಾನಾದಗಳ ಸೇವೆಯೊಂದಿಗೆ ಮಂತ್ರ ಉಚ್ಚಾರದ ನಂತರ ಮಹಾಮಂಗಳಾರತಿ ಆಗುತ್ತದೆ.
  ಇಂತಹ ರಂಗ ಪೂಜೆಯಲ್ಲಿ ಭಾಗವಹಿಸಿದರೆ, ನೋಡಿದರೆ, ಸಹಕರಿಸಿದರೆ ಮತ್ತು ಸಹಾಯ ಮಾಡಿದ ಪ್ರತಿಯೊಬ್ಬರಿಗೂ ಪುಣ್ಯ ಪ್ರಾಪ್ತಿ, ವಿಘ್ನಗಳು ನಿವಾರಣೆ ಆಗುತ್ತದೆ ಎಂಬ ನಂಬಿಕೆ ಇದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...