Skip to main content

ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಸಮೀಪದ ಚೆನ್ನಗಿರಿಯ ಹೊದಿಗೆರೆಯಲ್ಲಿರುವ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ ಸಮಾದಿ, ಹೊಸನಗರ ತಾಲ್ಲೂಕಿನ ಬಿದನೂರು ನಗರದ ಅರಮನೆಕೊಪ್ಪದಲ್ಲಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ರಾಜಾರಾಮರಿಗೆ ಕೆಳದಿ ರಾಣಿ ಚಿನ್ನಮ್ಮ ಆಶ್ರಯ ನೀಡಿದ್ದ ರಹಸ್ಯ ಅರಮನೆ, ನಗರದಲ್ಲಿ ರಾಜಾರಾಮರು ನಿರ್ಮಿಸಿರುವ ಪಾರ್ವತಿ ಮತ್ತು ಸುಬ್ರಮಣ್ಯ ದೇವಾಲಯ ಇತಿಹಾಸ ಆಸಕ್ತರಿಗೆ ಕೈ ಬೀಸಿ ಕರೆಯುತ್ತಿದೆ.

#ಇವತ್ತು_ಛತ್ರಪತಿ_ಶಿವಾಜಿ_ಮಹಾರಾಜರ_ಜನ್ಮ_ದಿನ.

#ಶಿವಮೊಗ್ಗ_ಜಿಲ್ಲೆಗೂ_ಶಿವಾಜಿ_ವಂಶಸ್ಥರಿಗೂ_ಇದೆ_ಸಂಬಂಧ.

#ಶಿವಾಜಿ_ಮಹಾರಾಜರ_ತಂದೆ_ಸಮಾದಿ_ಹೊದಿಗೆರೆಯಲ್ಲಿದೆ.

#ಶಿವಾಜಿ_ಮಹಾರಾಜರ_ಮಗ_ಛತ್ರಪತಿ_ರಾಜಾರಾಮರು_ಆಶ್ರಯ_ಪಡೆದ_ರಹಸ್ಯ_ಅರಮನೆ_ಬಿದನೂರಿನ_ಅರಮನೆಕೊಪ್ಪದಲ್ಲಿದೆ.

#ಛತ್ರಪತಿ_ರಾಜಾರಾಮರು_ಬಿದನೂರು_ನಗರದಲ್ಲಿ_ನಿರ್ಮಿಸಿರುವ_ಪಾರ್ವತಿ_ಮತ್ತು_ಸುಬ್ರಮಣ್ಯ_ದೇವಾಲಯ

  19- ಪೆಬ್ರುವರಿ-1630 ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚಾರಣೆ ದೇಶದಾದ್ಯಂತ ವಿಜೃ೦ಬಣೆಯಿಂದ ನಡೆಯುತ್ತಿದೆ.
  ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಈಗ ಜಿಲ್ಲಾ ಪುನರ್ ವಿಂಗಡನೆಯಲ್ಲಿ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಇದೆ.
  ಇದು ಈಗ ರಾಷ್ಟ್ರೀಯ ಸ್ಮಾರಕ, ಇಲ್ಲಿಗೆ ಮಹಾರಾಷ್ಟ್ರದ ಬಾಳಾ ಠಾಕ್ರೆ, ಶರದ್ ಪವಾರ್ ಅಂತವರೆಲ್ಲ ಬೇಟಿ ನೀಡಿದ್ದಾರೆ, ಮರಾಠರಿಗೆ ಇದು ತುಂಬಾ ಪುಣ್ಯ ಸ್ಥಳ ಆಗಿದೆ.
  ಷಹಾಜಿ ರಾಜೆ ಬೊಸಲೆ ಅವರ ಮೂಲ ಹೆಸರು ಅವರು ಇಲ್ಲಿ ಶಿಕಾರಿಗೆ ಹೋದಾಗ ಕುದುರೆಯಿಂದ ಜಾರಿ ಬಿದ್ದು ದಿನಾಂಕ 23- ಜನವರಿ -1664 ರಲ್ಲಿ ಮೃತರಾದರೆಂದು ಹೊದಿಗೆರೆಯ ಸಮಾದಿಯಲ್ಲಿ ನಿರ್ಮಿಸಿದ್ದಾರೆ, ಈ ಸಮಾದಿ ನಿರ್ವಹಣೆಗೆ ಆದಿಲ್ ಷಹಾ ಎರೆಡು ಹಳ್ಳಿಗಳನ್ನು ಉಂಬಳೆ ನೀಡಿದ ಇತಿಹಾಸ ಇದೆ.
  ಸ್ಥಳಿಯ ಜನಪದದಲ್ಲಿ ಬೇರೆಯ ಕಥೆಯೂ ಇದೆ ಅವರಿಗೆ ಇಲ್ಲಿ ಒಬ್ಬಳು ಪ್ರಿಯತಮೆ ಇದ್ದಳು ಹಾಗಾಗಿ ಆಗಾಗ್ಗೆ ಅವರು ಇಲ್ಲಿ ಬಂದು ತಂಗುತ್ತಿದ್ದರು ಆಗ ಮೋಸದಿಂದ ಅವರ ಹತ್ಯೆ ಆಯಿತು ಅವರ ಪ್ರಿಯತಮೆಯ ವಂಶಸ್ಥರು ಈಗಲೂ ಅತ್ಯಂತ ಶ್ರೀಮಂತರು ಅನ್ನುತ್ತದೆ ಆ ಕಥೆ.
  ಷಹಾಜಿ ಮಹಾರಾಜರ ಎರಡನೆ ಪುತ್ರ ಶಿವಾಜಿ ಮಹಾರಾಜರು, ಶಿವಾಜಿ ಮಹಾರಾಜರ ಎರಡನೆ ಪುತ್ರ ಛತ್ರಪತಿ ರಾಜರಾಮ ಮಹಾರಾಜರು ಔರಂಗಜೇಬರಿಂದ ತಪ್ಪಿಸಿಕೊಂಡು ಕೆಳದಿ ರಾಣಿ ಚೆನ್ನಮ್ಮರ ಆಶ್ರಯ ಪಡೆಯುತ್ತಾರೆ. ಇದರಿಂದ ಔರಂಗ ಜೇಬರು ತಮ್ಮ ಪುತ್ರ ಅಜ್ಮತ್ ಆಗಾನ ನೇತೃತ್ವದಲ್ಲಿ ಕೆಳದಿ ಮೇಲೆ ದಂಡೆತ್ತಿ ಬರುತ್ತಾರೆ ಆದರೂ ರಾಣಿ ಚೆನ್ನಮ್ಮ ರಾಜರಾಮರನ್ನು ಸಂರಕ್ಷಿಸುತ್ತಾಳೆ.
  ಸುಮಾರು ಎರೆಡು ವರ್ಷ ಛತ್ರಪತಿ ರಾಮರಾಜ ಮಹಾರಾಜರು ಬಿದನೂರಿನಿಂದ ಸುಮಾರ 10 ಕಿ.ಮಿ. ದೂರದಲ್ಲಿರುವ ಶರಾವತಿ ನದಿ ತಟದ ಅರಮನೆಕೊಪ್ಪದಲ್ಲಿನ ರಹಸ್ಯ ಅರಮನೆಯಲ್ಲಿ ಗುಪ್ತವಾಗಿ ಇರಿಸಿರುತ್ತಾರೆ.
  ಈ ಸಂದರ್ಭದಲ್ಲಿ ಬಿದನೂರು ನಗರದಲ್ಲಿ ಛತ್ರಪತಿ ರಾಮ ರಾಜರು ಪಾವ೯ತಿ ದೇವಸ್ಥಾನ ಮತ್ತು ಸುಬ್ರಮಣ್ಯ ದೇವಸ್ಥಾನ ಕಟ್ಟುತ್ತಾರೆ.
  ಈಗ ಅರಮನೆಕೊಪ್ಪದ ರಹಸ್ಯ ಅರಮನೆ ಸ್ಥಳಿಯ ಕೃಷಿಕರಾದ ಮಂಜುನಾಥ ಭಟ್ಟರ ಸುಪರ್ದಿಯಲ್ಲಿದೆ ಈ ಬಗ್ಗೆ ಕಳೆದ ವರ್ಷ ಪ್ರಖ್ಯಾತ ಮರಾಠಿ ಚಾನಲ್ ABP MARARATI MAJHA ಒಂದು ಸೀರಿಯಲ್ ಮಾಡಿತ್ತು ಇದಕ್ಕೆ ಸ್ಥಳಿಯ ಇತಿಹಾಸ ಸಂಶೋದಕರಾದ ಅಂಬ್ರಯ್ಯ ಮಠರ ಸಹಕಾರವೂ ಪಡೆದಿದ್ದರು ಇದನ್ನು ಈ ಕೆಳಕಂಡ ಲಿಂಕ್ ನಲ್ಲಿ ನೋಡ ಬಹುದು
https://youtu.be/H0f1pW_z_vk
  ಈ ಐತಿಹಾಸಿಕ ಶಿವಾಜಿ ಮಹಾರಾಜರ ಮಗನಿಗೆ ಆಶ್ರಯ ನೀಡಿದ ರಹಸ್ಯ ಅರಮನೆ ಶಿಥಿಲವಾಗುತ್ತಿದೆ, ಕರ್ನಾಟಕ ಸರ್ಕಾರ ಸೂಕ್ತ ಪರಿಹಾರ ನೀಡಿ ಹಾಲಿ ಮಾಲಿಕರಿಂದ ಪಡೆದು ಈ ಸ್ಮಾರಕ ಸಂರಕ್ಷಿಸಿ ಪ್ರವಾಸಿಗರಿಗೆ ಮತ್ತು ಸಂಶೋದಕರಿಗೆ ಮುಕ್ತ ಮಾಡಬೇಕು.  ಶಿವಾಜಿ ಮಹಾರಾಜರ ಕರಳ ಕುಡಿಯ ರಕ್ಷಣೆಗಾಗಿ ಬಲಾಡ್ಯ ಔರಂಗಜೇಬನನ್ನು ಎದುರು ಹಾಕಿಕೊಂಡ ಕೆಳದಿ ವೀರರಾಣಿ ಚೆನ್ನಮ್ಮರ ಶೌರ್ಯ ಕೂಡ ಮರೆಯುವಂತಿಲ್ಲ.
  ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಚೆನ್ನಗಿರಿಯ ಹೊದಿಗೆರೆಯಲ್ಲಿರುವ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ ಸಮಾದಿಗೆ ಮತ್ತು ಹೊಸನಗರ ತಾಲ್ಲೂಕಿನ ಬಿದನೂರು ನಗರದ ಸಮೀಪದ ಅರಮನೆಕೊಪ್ಪದಲ್ಲಿರುವ ಶಿವಾಜಿ ಮಹರಾಜರ ಪುತ್ರ ಛತ್ರಪತಿ ರಾಮರಾಜರನ್ನು ರಹಸ್ಯವಾಗಿಟ್ಟ ಗುಪ್ತ ಅರಮನೆ ಮತ್ತು ನಗರದಲ್ಲಿ ರಾಮ ರಾಜರು ನಿರ್ಮಿಸಿರುವ ಪಾರ್ವತಿ ಮತ್ತು ಸುಬ್ರಮಣ್ಯ ದೇವಾಲಯ ವೀಕ್ಷಿಸಲು ಮರೆಯಬಾರದು

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ