Skip to main content

ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಈ ಸಂದರ್ಭದಲ್ಲಿ ನಮ್ಮ ಸಮೀಪದ ಚೆನ್ನಗಿರಿಯ ಹೊದಿಗೆರೆಯಲ್ಲಿರುವ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ ಸಮಾದಿ, ಹೊಸನಗರ ತಾಲ್ಲೂಕಿನ ಬಿದನೂರು ನಗರದ ಅರಮನೆಕೊಪ್ಪದಲ್ಲಿ ಶಿವಾಜಿ ಮಹಾರಾಜರ ಪುತ್ರ ಛತ್ರಪತಿ ರಾಜಾರಾಮರಿಗೆ ಕೆಳದಿ ರಾಣಿ ಚಿನ್ನಮ್ಮ ಆಶ್ರಯ ನೀಡಿದ್ದ ರಹಸ್ಯ ಅರಮನೆ, ನಗರದಲ್ಲಿ ರಾಜಾರಾಮರು ನಿರ್ಮಿಸಿರುವ ಪಾರ್ವತಿ ಮತ್ತು ಸುಬ್ರಮಣ್ಯ ದೇವಾಲಯ ಇತಿಹಾಸ ಆಸಕ್ತರಿಗೆ ಕೈ ಬೀಸಿ ಕರೆಯುತ್ತಿದೆ.

#ಇವತ್ತು_ಛತ್ರಪತಿ_ಶಿವಾಜಿ_ಮಹಾರಾಜರ_ಜನ್ಮ_ದಿನ.

#ಶಿವಮೊಗ್ಗ_ಜಿಲ್ಲೆಗೂ_ಶಿವಾಜಿ_ವಂಶಸ್ಥರಿಗೂ_ಇದೆ_ಸಂಬಂಧ.

#ಶಿವಾಜಿ_ಮಹಾರಾಜರ_ತಂದೆ_ಸಮಾದಿ_ಹೊದಿಗೆರೆಯಲ್ಲಿದೆ.

#ಶಿವಾಜಿ_ಮಹಾರಾಜರ_ಮಗ_ಛತ್ರಪತಿ_ರಾಜಾರಾಮರು_ಆಶ್ರಯ_ಪಡೆದ_ರಹಸ್ಯ_ಅರಮನೆ_ಬಿದನೂರಿನ_ಅರಮನೆಕೊಪ್ಪದಲ್ಲಿದೆ.

#ಛತ್ರಪತಿ_ರಾಜಾರಾಮರು_ಬಿದನೂರು_ನಗರದಲ್ಲಿ_ನಿರ್ಮಿಸಿರುವ_ಪಾರ್ವತಿ_ಮತ್ತು_ಸುಬ್ರಮಣ್ಯ_ದೇವಾಲಯ

  19- ಪೆಬ್ರುವರಿ-1630 ಛತ್ರಪತಿ ಶಿವಾಜಿ ಮಹಾರಾಜರ ಜನ್ಮ ದಿನಾಚಾರಣೆ ದೇಶದಾದ್ಯಂತ ವಿಜೃ೦ಬಣೆಯಿಂದ ನಡೆಯುತ್ತಿದೆ.
  ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯ ಈಗ ಜಿಲ್ಲಾ ಪುನರ್ ವಿಂಗಡನೆಯಲ್ಲಿ ದಾವಣಗೆರೆ ಜಿಲ್ಲೆಯ ಚೆನ್ನಗಿರಿ ತಾಲ್ಲೂಕಿನ ಹೊದಿಗೆರೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ತಂದೆ ಛತ್ರಪತಿ ಷಹಾಜಿ ಮಹಾರಾಜರ ಸಮಾದಿ ಇದೆ.
  ಇದು ಈಗ ರಾಷ್ಟ್ರೀಯ ಸ್ಮಾರಕ, ಇಲ್ಲಿಗೆ ಮಹಾರಾಷ್ಟ್ರದ ಬಾಳಾ ಠಾಕ್ರೆ, ಶರದ್ ಪವಾರ್ ಅಂತವರೆಲ್ಲ ಬೇಟಿ ನೀಡಿದ್ದಾರೆ, ಮರಾಠರಿಗೆ ಇದು ತುಂಬಾ ಪುಣ್ಯ ಸ್ಥಳ ಆಗಿದೆ.
  ಷಹಾಜಿ ರಾಜೆ ಬೊಸಲೆ ಅವರ ಮೂಲ ಹೆಸರು ಅವರು ಇಲ್ಲಿ ಶಿಕಾರಿಗೆ ಹೋದಾಗ ಕುದುರೆಯಿಂದ ಜಾರಿ ಬಿದ್ದು ದಿನಾಂಕ 23- ಜನವರಿ -1664 ರಲ್ಲಿ ಮೃತರಾದರೆಂದು ಹೊದಿಗೆರೆಯ ಸಮಾದಿಯಲ್ಲಿ ನಿರ್ಮಿಸಿದ್ದಾರೆ, ಈ ಸಮಾದಿ ನಿರ್ವಹಣೆಗೆ ಆದಿಲ್ ಷಹಾ ಎರೆಡು ಹಳ್ಳಿಗಳನ್ನು ಉಂಬಳೆ ನೀಡಿದ ಇತಿಹಾಸ ಇದೆ.
  ಸ್ಥಳಿಯ ಜನಪದದಲ್ಲಿ ಬೇರೆಯ ಕಥೆಯೂ ಇದೆ ಅವರಿಗೆ ಇಲ್ಲಿ ಒಬ್ಬಳು ಪ್ರಿಯತಮೆ ಇದ್ದಳು ಹಾಗಾಗಿ ಆಗಾಗ್ಗೆ ಅವರು ಇಲ್ಲಿ ಬಂದು ತಂಗುತ್ತಿದ್ದರು ಆಗ ಮೋಸದಿಂದ ಅವರ ಹತ್ಯೆ ಆಯಿತು ಅವರ ಪ್ರಿಯತಮೆಯ ವಂಶಸ್ಥರು ಈಗಲೂ ಅತ್ಯಂತ ಶ್ರೀಮಂತರು ಅನ್ನುತ್ತದೆ ಆ ಕಥೆ.
  ಷಹಾಜಿ ಮಹಾರಾಜರ ಎರಡನೆ ಪುತ್ರ ಶಿವಾಜಿ ಮಹಾರಾಜರು, ಶಿವಾಜಿ ಮಹಾರಾಜರ ಎರಡನೆ ಪುತ್ರ ಛತ್ರಪತಿ ರಾಜರಾಮ ಮಹಾರಾಜರು ಔರಂಗಜೇಬರಿಂದ ತಪ್ಪಿಸಿಕೊಂಡು ಕೆಳದಿ ರಾಣಿ ಚೆನ್ನಮ್ಮರ ಆಶ್ರಯ ಪಡೆಯುತ್ತಾರೆ. ಇದರಿಂದ ಔರಂಗ ಜೇಬರು ತಮ್ಮ ಪುತ್ರ ಅಜ್ಮತ್ ಆಗಾನ ನೇತೃತ್ವದಲ್ಲಿ ಕೆಳದಿ ಮೇಲೆ ದಂಡೆತ್ತಿ ಬರುತ್ತಾರೆ ಆದರೂ ರಾಣಿ ಚೆನ್ನಮ್ಮ ರಾಜರಾಮರನ್ನು ಸಂರಕ್ಷಿಸುತ್ತಾಳೆ.
  ಸುಮಾರು ಎರೆಡು ವರ್ಷ ಛತ್ರಪತಿ ರಾಮರಾಜ ಮಹಾರಾಜರು ಬಿದನೂರಿನಿಂದ ಸುಮಾರ 10 ಕಿ.ಮಿ. ದೂರದಲ್ಲಿರುವ ಶರಾವತಿ ನದಿ ತಟದ ಅರಮನೆಕೊಪ್ಪದಲ್ಲಿನ ರಹಸ್ಯ ಅರಮನೆಯಲ್ಲಿ ಗುಪ್ತವಾಗಿ ಇರಿಸಿರುತ್ತಾರೆ.
  ಈ ಸಂದರ್ಭದಲ್ಲಿ ಬಿದನೂರು ನಗರದಲ್ಲಿ ಛತ್ರಪತಿ ರಾಮ ರಾಜರು ಪಾವ೯ತಿ ದೇವಸ್ಥಾನ ಮತ್ತು ಸುಬ್ರಮಣ್ಯ ದೇವಸ್ಥಾನ ಕಟ್ಟುತ್ತಾರೆ.
  ಈಗ ಅರಮನೆಕೊಪ್ಪದ ರಹಸ್ಯ ಅರಮನೆ ಸ್ಥಳಿಯ ಕೃಷಿಕರಾದ ಮಂಜುನಾಥ ಭಟ್ಟರ ಸುಪರ್ದಿಯಲ್ಲಿದೆ ಈ ಬಗ್ಗೆ ಕಳೆದ ವರ್ಷ ಪ್ರಖ್ಯಾತ ಮರಾಠಿ ಚಾನಲ್ ABP MARARATI MAJHA ಒಂದು ಸೀರಿಯಲ್ ಮಾಡಿತ್ತು ಇದಕ್ಕೆ ಸ್ಥಳಿಯ ಇತಿಹಾಸ ಸಂಶೋದಕರಾದ ಅಂಬ್ರಯ್ಯ ಮಠರ ಸಹಕಾರವೂ ಪಡೆದಿದ್ದರು ಇದನ್ನು ಈ ಕೆಳಕಂಡ ಲಿಂಕ್ ನಲ್ಲಿ ನೋಡ ಬಹುದು
https://youtu.be/H0f1pW_z_vk
  ಈ ಐತಿಹಾಸಿಕ ಶಿವಾಜಿ ಮಹಾರಾಜರ ಮಗನಿಗೆ ಆಶ್ರಯ ನೀಡಿದ ರಹಸ್ಯ ಅರಮನೆ ಶಿಥಿಲವಾಗುತ್ತಿದೆ, ಕರ್ನಾಟಕ ಸರ್ಕಾರ ಸೂಕ್ತ ಪರಿಹಾರ ನೀಡಿ ಹಾಲಿ ಮಾಲಿಕರಿಂದ ಪಡೆದು ಈ ಸ್ಮಾರಕ ಸಂರಕ್ಷಿಸಿ ಪ್ರವಾಸಿಗರಿಗೆ ಮತ್ತು ಸಂಶೋದಕರಿಗೆ ಮುಕ್ತ ಮಾಡಬೇಕು.  ಶಿವಾಜಿ ಮಹಾರಾಜರ ಕರಳ ಕುಡಿಯ ರಕ್ಷಣೆಗಾಗಿ ಬಲಾಡ್ಯ ಔರಂಗಜೇಬನನ್ನು ಎದುರು ಹಾಕಿಕೊಂಡ ಕೆಳದಿ ವೀರರಾಣಿ ಚೆನ್ನಮ್ಮರ ಶೌರ್ಯ ಕೂಡ ಮರೆಯುವಂತಿಲ್ಲ.
  ಶಿವಾಜಿ ಮಹಾರಾಜರ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಚೆನ್ನಗಿರಿಯ ಹೊದಿಗೆರೆಯಲ್ಲಿರುವ ಶಿವಾಜಿ ಮಹಾರಾಜರ ತಂದೆ ಷಹಾಜಿ ಮಹಾರಾಜರ ಸಮಾದಿಗೆ ಮತ್ತು ಹೊಸನಗರ ತಾಲ್ಲೂಕಿನ ಬಿದನೂರು ನಗರದ ಸಮೀಪದ ಅರಮನೆಕೊಪ್ಪದಲ್ಲಿರುವ ಶಿವಾಜಿ ಮಹರಾಜರ ಪುತ್ರ ಛತ್ರಪತಿ ರಾಮರಾಜರನ್ನು ರಹಸ್ಯವಾಗಿಟ್ಟ ಗುಪ್ತ ಅರಮನೆ ಮತ್ತು ನಗರದಲ್ಲಿ ರಾಮ ರಾಜರು ನಿರ್ಮಿಸಿರುವ ಪಾರ್ವತಿ ಮತ್ತು ಸುಬ್ರಮಣ್ಯ ದೇವಾಲಯ ವೀಕ್ಷಿಸಲು ಮರೆಯಬಾರದು

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...