Skip to main content

ಭಾಗ -33, ಆನಂದಪುರಂ ಇತಿಹಾಸ, ಪ್ರಖ್ಯಾತ ದಕ್ಷಿಣ ಭಾರತದ ನರಭಕ್ಷಕ ಹುಲಿ ಶಿಕಾರಿದಾರ ಕೆನತ್ ಆಂಡರ್ಸನ್ ಈ ಭಾಗದ ಎರೆಡು ನರಭಕ್ಷಕ ಹುಲಿ ಕೊಲ್ಲುತ್ತಾರೆ.

#ಭಾಗ_33.
#ಆನಂದಪುರಂ_ಇತಿಹಾಸ

#ನರಭಕ್ಷಕ_ಹುಲಿ_ಶಿಕಾರಿದಾರ_ಕೆನೆತ್_ಅಂಡರಸನ್_ಆನಂದಪುರಂನಲ್ಲಿ.

#ಪೂರ್ಣಚಂದ್ರ_ತೇಜಸ್ಸಿ_ಕಾಡಿನಕಥೆಗಳಲ್ಲಿ_ಆನಂದಪುರಂ_ಸುತ್ತಲಿನ_ಪರಿಸರದ_ಬಗ್ಗೆ_ಕೆನೆತ್_ಅನುಭವಗಳಿದೆ.

#ಬೆಳಂದೂರಿನ_ನರಭಕ್ಷಕ_ಮತ್ತು_ಬಾಳೆಕೊಪ್ಪದ_ಪಟ್ಟಿಹುಲಿಗಳು_ನರಭಕ್ಷಕವಾಗಿ_ಈ_ಭಾಗದಲ್ಲಿ_ಅನೇಕರನ್ನು_ತಿಂದಿತ್ತು.

   ಆ ಕಾಲದಲ್ಲಿ ಅಂದರೆ ನೂರು ವರ್ಷದ ಹಿಂದೆ ಆನಂದಪುರಂ ದಟ್ಟ ಕಾಡು ಪ್ರದೇಶವಾಗಿತ್ತು, ಕಾಡು ಪ್ರಾಣಿಗಳ ಹಾವಳಿ ಕೂಡ ಅಷ್ಟೇ ಇತ್ತು.
  ಇಂತಹ ದಿನದಲ್ಲಿ ಈ ಭಾಗದ ಹುಲಿಯೊಂದು ನರಭಕ್ಷಕನಾಗಿ ಈ ಭಾಗದ ಜನರಲ್ಲಿ ಭಯ ಮತ್ತು ಆತಂಕಕ್ಕೆ ಕಾರಣ ಆಗಿತ್ತು. 
   ಈ ನರಭಕ್ಷಕನ ಕಾರ್ಯ ಕ್ಷೇತ್ರ ಕುಂಸಿಯ ಬಾಳೆಕೊಪ್ಪದಿಂದ ಚೊರಡಿ,ಆನಂದಪುರಂ, ಅಡೂರು, ಗೌತಮಪುರದಿಂದ ಅಂಬ್ಲಿಗೋಳದ ತನಕವಿತ್ತು, ಈ ಹುಲಿಗೆ ಸಿಂಹಕ್ಕೆ ಇರುವಂತೆ ಕುತ್ತಿಗೆಯಲ್ಲಿ ನೀಳ ಕೇಶವಿದೆ ಅದನ್ನು ನೋಡಿದವರು ಹೇಳಿದ್ದರಿಂದ ಮತ್ತು ಅದು ಮನುಷ್ಯರನ್ನು ತಿಂದ ಪ್ರದೇಶದಲ್ಲಿ ಈ ಕಾರಣದಿಂದ ಸುಲಭವಾಗಿ ಗುರುತಿಸಲಾಗಿದ್ದರಿಂದ ಈ ಹುಲಿಗೆ ಬಾಳೆಕೊಪ್ಪದ ಪಟ್ಟಿ ಹುಲಿ, ಕೇಸರಿ ಪಟ್ಟೆ ನರಭಕ್ಷಕ ಅಂತ ಜನ ಕರೆಯುತ್ತಿರುತ್ತಾರೆ. ಆನಂದಪುರಂ ಸಮೀಪದ ಹೆಬ್ಬೋಡಿಯಲ್ಲಿ ಎರೆಡು ಜನರನ್ನು ತಿಂದಿತ್ತಂತೆ, ಇದರ ವಿಸ್ತಾರಕಾಯ೯ ಕ್ಷೇತ್ರದಲ್ಲಿ ಅನೇಕರನ್ನು ತಿಂದಿದ್ದರಿಂದ ಬ್ರಿಟೀಷ್ ಸರ್ಕಾರ ಆಗಿನ ಪ್ರಖ್ಯಾತ ನರಭಕ್ಷಕ ಹುಲಿ ಶಿಕಾರಿದಾರ ಕೆನೆತ್ ಅಂಡರ್ಸನ್ ಗೆ ಆಹ್ವಾನಿಸುತ್ತದೆ ಆಗ ಆಗಮಿಸುವ ಅವರು ಆನಂದಪುರಂನ ಪ್ರವಾಸಿ ಮಂದಿರದಲ್ಲಿ
ಅನೇಕ ದಿನ ತಂಗಿರುತ್ತಾರೆ ಅಂತೂ ಕೊನೆಗೆ ಅಂಬ್ಲಿಗೋಳದ ಅರಣ್ಯ ಇಲಾಖೆ ವಿಶ್ರಾಂತಿ ಗೃಹದ ಹಿಂಭಾಗದ ಹಳ್ಳದ ಕೋವಿನಲ್ಲಿ ಈ ನರಭಕ್ಷಕನನ್ನು ಕೊಲ್ಲುತ್ತಾರೆ ಆ ಹುಲಿಯ ಕುತ್ತಿಗೆಯಲ್ಲಿ ಸಿಂಹದಂತೆ ಕೇಶವಿದ್ದದ್ದನ್ನು ಕೆನೆತ್ ಅಂಡರ್ಸ್ನ್ ಇಂಗ್ಲೀಷ್ ಭಾಷೆಯಲ್ಲಿ ಪುಸ್ತಕ ಬರೆದಿದ್ದಾರೆ ಅದನ್ನು ತೇಜಸ್ವಿಯವರ ಕಾಡಿನ ಕಥೆ ಪುಸ್ತಕ ಭಾಗ 1 - 2 - 3 - 4 ರಲ್ಲಿ  ಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
  ಇದೇ ರೀತಿ ಇನ್ನೊಂದು ನರಭಕ್ಷಕ ತ್ಯಾಗರ್ತಿ ಸಮೀಪದಲ್ಲಿ ಅನೇಕರನ್ನು ತಿನ್ನುತ್ತಿತ್ತು ಇದಕ್ಕೆ ಬೆಳ್ಳಂದೂರಿನ ನರಭಕ್ಷಕನೆಂದೆ ಹೆಸರಾಗಿತ್ತು ಇದನ್ನು ಕೆನೆತ್ ಅಂಡರ್ಸಸ್ ಕೊಲ್ಲುತ್ತಾರೆ (ಬೆಳಂದೂರಿನ ನರಭಕ್ಷಕ )
   ಕೆನತ್ ಆಂಡರ್ಸನ್ ಪೂರ್ಣ ಹೆಸರು ಕೆನತ್ ಡಗ್ಲಾಸ್ ಸ್ಟೀವರ್ಡ್ ಅಂಡರ್ಸನ್, ಭಾರತದಲ್ಲಿ ಜನಿಸಿದ ಬ್ರಿಟೀಷ್.
ಇವರ ಜನನ 8- ಮಾರ್ಚ್ - 1910 ಬೆಂಗಳೂರು ಮರಣ 30 - ಆಗಸ್ಟ್ - 1974.
   ಇವರು ವಿಶೇಷವಾಗಿ ದಕ್ಷಿಣ ಭಾರತದ ಅನೇಕ ನರಭಕ್ಷಕ ಹುಲಿಗಳನ್ನು ಸಂಹರಿಸಿ ಜನರ ಕಷ್ಟ ಪರಿಹರಿಸುತ್ತಾರೆ ಆ ಕಾಲದಲ್ಲಿ ಸ್ಟಡಿ ಬೇಕರ್ ಕಾರು ಹೊಂದಿದ್ದರು ಮತ್ತು ಶಿಕಾರಿಗೆ 405 ವಿಂಚೆಸ್ಟರ್ ಮಾಡೆಲ್ (1895) ರೈಪಲ್ ಬಳುಸುತ್ತಿರುತ್ತಾರೆ.
   ಇವರು ತಾವು ಕೊಂದಿದ್ದ ನರಭಕ್ಷಕ ಹುಲಿಗಳ ಶಿಕಾರಿಯ ರೋಚಕ ಅನುಭವಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಬರೆದು ಪ್ರಕಟಿಸಿದ್ದರಿಂದ ಇವರ ಶಿಕಾರಿ ಪುಸ್ತಕಗಳು ಯೂರೋಪಿನಲ್ಲಿ ತುಂಬಾ ಪ್ರಸಿದ್ದಿ ಆಗುತ್ತದೆ ಈ ಪುಸ್ತಕದಲ್ಲಿ ಆನಂದಪುರಂ ಭಾಗದ ಎರೆಡು ನರಭಕ್ಷಕ ಕೊಂದಿದ ವೃತ್ತಾಂತ, ಆನಂದಪುರಂನಲ್ಲಿನ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಘಟನೆಗಳ ವಿವರ ಪೂರ್ಣಚಂದ್ರ ತೇಜಸ್ವಿಯವರು ಇವರ ಪುಸ್ತಕ ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ತನಕ ಆನಂದಪುರಂ ಭಾಗದವರಿಗೆ ಮರೆತು ಹೋದ ಘಟನೆ ಆಗಿತ್ತು.
   ಆಗಿನ ದಟ್ಟ ಕಾಡು, ಕಾಡುಪ್ರಾಣಿಗಳು, ನರಭಕ್ಷಕ ಆಗಿದ್ದ ಹುಲಿ ಶಿಕಾರಿಗೆ ಬ್ರಿಟೀಷ್ ಸರ್ಕಾರ ಆಗಿನ ಪ್ರಖ್ಯಾತ ಶಿಕಾರಿದಾರ ಕೆನತ್ ಆಂಡರ್ಸನ್ ಕಳಿಸುವುದು ಅವರು ಅದನ್ನು ಸಂಹರಿಸಿದ್ದು ಎಲ್ಲಾ ಈಗ ನಂಬಲಾಗದ ಇತಿಹಾಸ ಕಾರಣ ಈಗ ಆನಂದಪುರಂ ಭೌಗೋಳಿಕವಾಗಿ ತನ್ನ ದಟ್ಟ ಅರಣ್ಯದಿಂದ ಬಯಲು ನಾಡಾಗಿ ಬದಲಾಗಿದೆ.
(ನಾಳೆ ಭಾಗ- 34)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ