Skip to main content

ಭಾಗ -33, ಆನಂದಪುರಂ ಇತಿಹಾಸ, ಪ್ರಖ್ಯಾತ ದಕ್ಷಿಣ ಭಾರತದ ನರಭಕ್ಷಕ ಹುಲಿ ಶಿಕಾರಿದಾರ ಕೆನತ್ ಆಂಡರ್ಸನ್ ಈ ಭಾಗದ ಎರೆಡು ನರಭಕ್ಷಕ ಹುಲಿ ಕೊಲ್ಲುತ್ತಾರೆ.

#ಭಾಗ_33.
#ಆನಂದಪುರಂ_ಇತಿಹಾಸ

#ನರಭಕ್ಷಕ_ಹುಲಿ_ಶಿಕಾರಿದಾರ_ಕೆನೆತ್_ಅಂಡರಸನ್_ಆನಂದಪುರಂನಲ್ಲಿ.

#ಪೂರ್ಣಚಂದ್ರ_ತೇಜಸ್ಸಿ_ಕಾಡಿನಕಥೆಗಳಲ್ಲಿ_ಆನಂದಪುರಂ_ಸುತ್ತಲಿನ_ಪರಿಸರದ_ಬಗ್ಗೆ_ಕೆನೆತ್_ಅನುಭವಗಳಿದೆ.

#ಬೆಳಂದೂರಿನ_ನರಭಕ್ಷಕ_ಮತ್ತು_ಬಾಳೆಕೊಪ್ಪದ_ಪಟ್ಟಿಹುಲಿಗಳು_ನರಭಕ್ಷಕವಾಗಿ_ಈ_ಭಾಗದಲ್ಲಿ_ಅನೇಕರನ್ನು_ತಿಂದಿತ್ತು.

   ಆ ಕಾಲದಲ್ಲಿ ಅಂದರೆ ನೂರು ವರ್ಷದ ಹಿಂದೆ ಆನಂದಪುರಂ ದಟ್ಟ ಕಾಡು ಪ್ರದೇಶವಾಗಿತ್ತು, ಕಾಡು ಪ್ರಾಣಿಗಳ ಹಾವಳಿ ಕೂಡ ಅಷ್ಟೇ ಇತ್ತು.
  ಇಂತಹ ದಿನದಲ್ಲಿ ಈ ಭಾಗದ ಹುಲಿಯೊಂದು ನರಭಕ್ಷಕನಾಗಿ ಈ ಭಾಗದ ಜನರಲ್ಲಿ ಭಯ ಮತ್ತು ಆತಂಕಕ್ಕೆ ಕಾರಣ ಆಗಿತ್ತು. 
   ಈ ನರಭಕ್ಷಕನ ಕಾರ್ಯ ಕ್ಷೇತ್ರ ಕುಂಸಿಯ ಬಾಳೆಕೊಪ್ಪದಿಂದ ಚೊರಡಿ,ಆನಂದಪುರಂ, ಅಡೂರು, ಗೌತಮಪುರದಿಂದ ಅಂಬ್ಲಿಗೋಳದ ತನಕವಿತ್ತು, ಈ ಹುಲಿಗೆ ಸಿಂಹಕ್ಕೆ ಇರುವಂತೆ ಕುತ್ತಿಗೆಯಲ್ಲಿ ನೀಳ ಕೇಶವಿದೆ ಅದನ್ನು ನೋಡಿದವರು ಹೇಳಿದ್ದರಿಂದ ಮತ್ತು ಅದು ಮನುಷ್ಯರನ್ನು ತಿಂದ ಪ್ರದೇಶದಲ್ಲಿ ಈ ಕಾರಣದಿಂದ ಸುಲಭವಾಗಿ ಗುರುತಿಸಲಾಗಿದ್ದರಿಂದ ಈ ಹುಲಿಗೆ ಬಾಳೆಕೊಪ್ಪದ ಪಟ್ಟಿ ಹುಲಿ, ಕೇಸರಿ ಪಟ್ಟೆ ನರಭಕ್ಷಕ ಅಂತ ಜನ ಕರೆಯುತ್ತಿರುತ್ತಾರೆ. ಆನಂದಪುರಂ ಸಮೀಪದ ಹೆಬ್ಬೋಡಿಯಲ್ಲಿ ಎರೆಡು ಜನರನ್ನು ತಿಂದಿತ್ತಂತೆ, ಇದರ ವಿಸ್ತಾರಕಾಯ೯ ಕ್ಷೇತ್ರದಲ್ಲಿ ಅನೇಕರನ್ನು ತಿಂದಿದ್ದರಿಂದ ಬ್ರಿಟೀಷ್ ಸರ್ಕಾರ ಆಗಿನ ಪ್ರಖ್ಯಾತ ನರಭಕ್ಷಕ ಹುಲಿ ಶಿಕಾರಿದಾರ ಕೆನೆತ್ ಅಂಡರ್ಸನ್ ಗೆ ಆಹ್ವಾನಿಸುತ್ತದೆ ಆಗ ಆಗಮಿಸುವ ಅವರು ಆನಂದಪುರಂನ ಪ್ರವಾಸಿ ಮಂದಿರದಲ್ಲಿ
ಅನೇಕ ದಿನ ತಂಗಿರುತ್ತಾರೆ ಅಂತೂ ಕೊನೆಗೆ ಅಂಬ್ಲಿಗೋಳದ ಅರಣ್ಯ ಇಲಾಖೆ ವಿಶ್ರಾಂತಿ ಗೃಹದ ಹಿಂಭಾಗದ ಹಳ್ಳದ ಕೋವಿನಲ್ಲಿ ಈ ನರಭಕ್ಷಕನನ್ನು ಕೊಲ್ಲುತ್ತಾರೆ ಆ ಹುಲಿಯ ಕುತ್ತಿಗೆಯಲ್ಲಿ ಸಿಂಹದಂತೆ ಕೇಶವಿದ್ದದ್ದನ್ನು ಕೆನೆತ್ ಅಂಡರ್ಸ್ನ್ ಇಂಗ್ಲೀಷ್ ಭಾಷೆಯಲ್ಲಿ ಪುಸ್ತಕ ಬರೆದಿದ್ದಾರೆ ಅದನ್ನು ತೇಜಸ್ವಿಯವರ ಕಾಡಿನ ಕಥೆ ಪುಸ್ತಕ ಭಾಗ 1 - 2 - 3 - 4 ರಲ್ಲಿ  ಸುಂದರವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ.
  ಇದೇ ರೀತಿ ಇನ್ನೊಂದು ನರಭಕ್ಷಕ ತ್ಯಾಗರ್ತಿ ಸಮೀಪದಲ್ಲಿ ಅನೇಕರನ್ನು ತಿನ್ನುತ್ತಿತ್ತು ಇದಕ್ಕೆ ಬೆಳ್ಳಂದೂರಿನ ನರಭಕ್ಷಕನೆಂದೆ ಹೆಸರಾಗಿತ್ತು ಇದನ್ನು ಕೆನೆತ್ ಅಂಡರ್ಸಸ್ ಕೊಲ್ಲುತ್ತಾರೆ (ಬೆಳಂದೂರಿನ ನರಭಕ್ಷಕ )
   ಕೆನತ್ ಆಂಡರ್ಸನ್ ಪೂರ್ಣ ಹೆಸರು ಕೆನತ್ ಡಗ್ಲಾಸ್ ಸ್ಟೀವರ್ಡ್ ಅಂಡರ್ಸನ್, ಭಾರತದಲ್ಲಿ ಜನಿಸಿದ ಬ್ರಿಟೀಷ್.
ಇವರ ಜನನ 8- ಮಾರ್ಚ್ - 1910 ಬೆಂಗಳೂರು ಮರಣ 30 - ಆಗಸ್ಟ್ - 1974.
   ಇವರು ವಿಶೇಷವಾಗಿ ದಕ್ಷಿಣ ಭಾರತದ ಅನೇಕ ನರಭಕ್ಷಕ ಹುಲಿಗಳನ್ನು ಸಂಹರಿಸಿ ಜನರ ಕಷ್ಟ ಪರಿಹರಿಸುತ್ತಾರೆ ಆ ಕಾಲದಲ್ಲಿ ಸ್ಟಡಿ ಬೇಕರ್ ಕಾರು ಹೊಂದಿದ್ದರು ಮತ್ತು ಶಿಕಾರಿಗೆ 405 ವಿಂಚೆಸ್ಟರ್ ಮಾಡೆಲ್ (1895) ರೈಪಲ್ ಬಳುಸುತ್ತಿರುತ್ತಾರೆ.
   ಇವರು ತಾವು ಕೊಂದಿದ್ದ ನರಭಕ್ಷಕ ಹುಲಿಗಳ ಶಿಕಾರಿಯ ರೋಚಕ ಅನುಭವಗಳನ್ನು ಇಂಗ್ಲೀಷ್ ಭಾಷೆಯಲ್ಲಿ ಬರೆದು ಪ್ರಕಟಿಸಿದ್ದರಿಂದ ಇವರ ಶಿಕಾರಿ ಪುಸ್ತಕಗಳು ಯೂರೋಪಿನಲ್ಲಿ ತುಂಬಾ ಪ್ರಸಿದ್ದಿ ಆಗುತ್ತದೆ ಈ ಪುಸ್ತಕದಲ್ಲಿ ಆನಂದಪುರಂ ಭಾಗದ ಎರೆಡು ನರಭಕ್ಷಕ ಕೊಂದಿದ ವೃತ್ತಾಂತ, ಆನಂದಪುರಂನಲ್ಲಿನ ಪ್ರವಾಸಿ ಮಂದಿರದಲ್ಲಿ ತಂಗಿದ್ದ ಘಟನೆಗಳ ವಿವರ ಪೂರ್ಣಚಂದ್ರ ತೇಜಸ್ವಿಯವರು ಇವರ ಪುಸ್ತಕ ಇಂಗ್ಲೀಷ್ ನಿಂದ ಕನ್ನಡಕ್ಕೆ ಅನುವಾದಿಸಿ ಪ್ರಕಟಿಸುವ ತನಕ ಆನಂದಪುರಂ ಭಾಗದವರಿಗೆ ಮರೆತು ಹೋದ ಘಟನೆ ಆಗಿತ್ತು.
   ಆಗಿನ ದಟ್ಟ ಕಾಡು, ಕಾಡುಪ್ರಾಣಿಗಳು, ನರಭಕ್ಷಕ ಆಗಿದ್ದ ಹುಲಿ ಶಿಕಾರಿಗೆ ಬ್ರಿಟೀಷ್ ಸರ್ಕಾರ ಆಗಿನ ಪ್ರಖ್ಯಾತ ಶಿಕಾರಿದಾರ ಕೆನತ್ ಆಂಡರ್ಸನ್ ಕಳಿಸುವುದು ಅವರು ಅದನ್ನು ಸಂಹರಿಸಿದ್ದು ಎಲ್ಲಾ ಈಗ ನಂಬಲಾಗದ ಇತಿಹಾಸ ಕಾರಣ ಈಗ ಆನಂದಪುರಂ ಭೌಗೋಳಿಕವಾಗಿ ತನ್ನ ದಟ್ಟ ಅರಣ್ಯದಿಂದ ಬಯಲು ನಾಡಾಗಿ ಬದಲಾಗಿದೆ.
(ನಾಳೆ ಭಾಗ- 34)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...