Skip to main content

ಭಾಗ -42, ಆನಂದಪುರಂ ಇತಿಹಾಸ, ಆನಂದಪುರ೦ನ ಒಂದು ಕಾಲದಲ್ಲಿ ಸುಮಾರು ನಾಲ್ಕು ದಶಕ ನಡೆದ ಪ್ರಖ್ಯಾತ ಪ್ರಸಿದ್ದ ಹೋಟೆಲ್ ಕೋಮಲಾ ವಿಲಾಸ್

#ಭಾಗ_42.
#ಆನಂದಪುರಂ_ಇತಿಹಾಸ

#ಆ_ಕಾಲದ_ಸುಪ್ರಸಿದ್ಧ_ಹೋಟೆಲ್_ಕೋಮಲವಿಲಾಸ್ 

#ಜಯವೀರನಾಯಕ್_ತಂದೆ_ಆನಂದನಾಯಕರಿಂದ_ಪ್ರಾರಂಭ.

#ಜಯವೀರನಾಯಕ್_ಮಾವ_ರಾಮಕಿಣಿಯಿಂದ_ಉತ್ತುಂಗಕ್ಕೆ.

#ಶುಚಿ_ರುಚಿಯ_ಅದುನಿಕ_ರೆಸ್ಟೋರೆಂಟ್.

   ಆನಂದನಾಯಕರು ಆನಂದಪುರಂಗೆ ಬಂದು ಅಯ್ಯಂಗಾರ್ ಕುಟುಂಬದ ಬಸ್ ಸ್ಟ್ಯಾಂಡ್ ಎದುರಿನ ಜಾಗದಲ್ಲಿ ವೆಜ್ ರೆಸ್ಟೋರೆಂಟ್ ಮಾಡಲು ವೆಂಕಟಾಚಲಯ್ಯಂಗಾರರಲ್ಲಿ ವಿನಂತಿಸಿದಾಗ ಅವರು ಅಭಿವೃದ್ದಿ ಹೊಂದಲಿರುವ ಆನಂದಪುರಂಗೆ ಹೋಟೆಲ್ ಅವಶ್ಯವಿರುವುದು ಅರಿತಿರುತ್ತಾರೆ.
  ಆಗಲೇ ಅವರ ತಾಯಿ ಸ್ಮರಣಾರ್ಥ ನಿರ್ಮಿಸಿದ ಕನಕಮ್ಮಾಳ್ ಆಸ್ಪತ್ರೆಗೆ ಬರುವವರಿಗಾಗಿ ಒಂದು ಸುಸಜ್ಜಿತ ರೆಸ್ಟೋರಂಟ್ ಕೊರತೆ ಇತ್ತು ಹಾಗಾಗಿ ತಮ್ಮ ತಂದೆ ರಾಮಕೃಷ್ಣ ಅಯ್ಯಂಗಾರರಿಗೆ ಮತ್ತು ಸಹೋದರ ಬದರಿನಾರಾಯಣ ಅಯ್ಯಂಗಾರರಿಗೆ ಮನ ಒಲಿಸಿ ಆನಂದಪುರಂ ಬಸ್ ಸ್ಟಾಂಡ್ ಎದುರಿನ ಮತ್ತು ತಮ್ಮ ಮನೆಯ ಹಿಂಬಾಗದ ಕೊಟ್ಟಿಗೆಯ ಎದುರಿನ ಚಿಲುಮೆ ಎದುರಿನ ಜಾಗ ಬಾಡಿಗೆಗೆ ನೀಡುತ್ತಾರೆ.
   ಅದೇ #ಕೋಮಲ_ವಿಲಾಸ್ ಆನಂದಪುರಂನ ಸುಮಾರು 40 ವರ್ಷ ಸುಪ್ರಸಿದ್ದ ಹೋಟೆಲ್ ಆಗಿ ವಿಜೃಂಬಿಸಿತು, ಕೋಮಲ ವಿಲಾಸ್ ಗೆ ಹೋಗಿ ಮಸಾಲೆ ತಿಂದು ಕಾಫಿ ಟೀ ಕುಡಿಯುವುದು ಆ ಕಾಲಕ್ಕೆ ಒ0ದು ಪ್ರತಿಷ್ಟೆಯ ವಿಚಾರ.
  ಪ್ರತಿ ದಿನ ಸಂಜೆ ಆನಂದಪುರಂ ಪೋಲಿಸ್ ಠಾಣೆಯಿಂದ ವಿಲೇಜ್ ಪಂಚಾಯತ್ ಕಛೇರಿ ತನಕ ಕೋಮಲ ವಿಲಾಸ್ ನ ಮಸಾಲೆದೋಸೆ ಸುವಾಸನೆ ಇಲ್ಲಿ ಸಾಗುತ್ತಿದ್ದ ಜನರ ಮೂಗು ಅರಳಿಸುತ್ತಿತ್ತು ಮತ್ತು ಬಾಯಿ ನೀರು ತರಿಸುತ್ತಿತ್ತು.
  ಬಸ್ ಸ್ಟಾಂಡ್‌ ಎದರು ಮುಖ್ಯ ರಸ್ತೆಯಿಂದ ಹೆಜ್ಜೆ ಎತ್ತಿಟ್ಟರೆ ಕೋಮಲ್ ವಿಲಾಸ್ ಬಾಗಿಲು, ಒಳಗೆ ಪಳ ಪಳ ಹೊಳೆಯುವ ಗಾಜಿನ ಕೌಂಟರ್ ಅಲ್ಲಿ ದೇಶದ ಪ್ರಖ್ಯಾತ ಬ್ರಾಂಡ್ ನ ಚಾಕಲೇಟ್ ಬಿಸ್ಕಿಟ್ ಗಳು, ಸಿಹಿ ತಿಂಡಿಗಳು.
  ಸದಾ ಸುವಾಸನೆಯ ಅಗರ್ ಬತ್ತಿ ಪರಿಮಳ, ಗ್ರಾಹಕರ ಬಿಲ್ ಪಡೆಯುವ ಎತ್ತರದ ಟೇಬಲ್ ಹಿಂಬಾಗದಲ್ಲಿ ಯುರೋಪಿಯನ್ ಬಿಳಿ ಬಣ್ಣದ ಹಸನ್ಮುಖಿ ಮಿತಭಾಷಿ ಜಯ ವೀರ ನಾಯಕರು ಇರುತ್ತಿದ್ದರು.
  ಆನಂದ ನಾಯಕ್ ಮತ್ತು ಶಾಂತಮ್ಮ ದಂಪತಿಗಳಿಗೆ ಜಯ ವೀರ ನಾಯಕ್ ಏಕೈಕ ಪುತ್ರ ಮತ್ತು ಲತಾ, ಸುವರ್ಣಾ, ಮುಕ್ತಾ ಮತ್ತು ಯಶೋದ ಎಂಬ ನಾಲ್ವರು ಪುತ್ರಿಯರು ಇವರ ಮನೆ ಆಸ್ಪತ್ರೆ ಎದರು ರಂಗನಾಥ ಸ್ವಾಮಿ ದೇವಾಲಯ ರಸ್ತೆಯಲ್ಲಿತ್ತು.
  ಈ ಕುಟುಂಬದ ಯಜಮಾನ ಆನಂದ ನಾಯಕರು ಅವರ  ಕೋಮಲ ವಿಲಾಸ್ ಹಿಂಬಾಗದಲ್ಲಿದ್ದ ನೀರಿನ ಚಿಲುಮೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಮಕ್ಕಳೆಲ್ಲ ಚಿಕ್ಕವರು ಆಗಲೇ ಆನಂದ ನಾಯಕರ ಪತ್ನಿ ಶಾಂತಮ್ಮ ತಮ್ಮ ಸಹೋದರ ರಾಮಕಿಣಿಯವರನ್ನು ಇಡೀ ವ್ಯವಹಾರ ನಿರ್ವಹಿಸಲು ಕುಟುಂಬ ಸಮೇತ ಕರೆಸಿಕೊಳ್ಳುತ್ತಾರೆ.
  ಒಂದು ವಿಶೇಷ ಅಂದರೆ ಆನಂದಪುರಂ ನಲ್ಲಿ ಪ್ರಾರಂಭ ಆದ ಕೋಮಲಾ ವಿಲಾಸ್ ಮತ್ತು ಸಿಂಗಾಪುರದಲ್ಲಿ ಪ್ರಾರಂಭ ಆದ ಕೋಮಲಾ ವಿಲಾಸ್ ಪ್ರಾರಂಭದ ವರ್ಷ ಒಂದೇ, ಸಿಂಗಾಪುರದ ಕೋಮಲಾ ವಿಲಾಸ್ ಈಗಲೂ ವಿಶ್ವ ವಿಖ್ಯಾತ.
    ರಾಮಕಿಣಿಯ ಮೊದಲ ಪತ್ನಿ ಶ್ರೀಮತಿ ಜಯಶೀಲರಿಗೆ ಏಕೈಕ ಪುತ್ರ ಪಾಂಡುರಂಗ, ಆ ಪತ್ನಿ ಮೃತರಾದ್ದರಿಂದ ಎರಡನೆ ವಿವಾಹ ಮೂಗುಡ್ತಿ ಶ್ಯಾಂ ರಾಯರ ಗೋಕರ್ಣದ ಸಹೋದರಿ ಸಂಬಂದಿ ಶ್ರೀಮತಿ ಸರೋಜಿನಿಯವರೊಡನೆ ಆಗುತ್ತದೆ ಇವರಿಗೆ ನಿಮ೯ಲ, ನಳಿನಿ ಮತ್ತು ನಯನ ಎಂಬ ಮೂವರು ಹೆಣ್ಣು ಮಕ್ಕಳು.
  ಕೋಮಲ ವಿಲಾಸ್ ಅತ್ಯಂತ ಲಾಭದಲ್ಲಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತದೆ ಇದೇ ಸಂದರ್ಭದಲ್ಲಿ ರಾಮಕಿಣಿಯವರು ಟಿಂಬರ್ ವ್ಯವಹಾರ ಕೂಡ ನಡೆಸಿ ಅನೇಕ ಆಸ್ತಿಗಳನ್ನು ಈ ಕುಟುಂಬಗಳು ಗಳಿಸುತ್ತದೆ ಈ ಸಂದರ್ಭದಲ್ಲೇ ದಂತ ವಿಜ್ಞಾನದ ವಿದ್ಯಾರ್ಥಿ ಆಗಿದ್ದ ಜಯವೀರನಾಯಕ್ ಕುಟುಂಬ ನಿರ್ವಹಣೆಯ ಜವಾಬ್ದಾರಿ ವಹಿಸಲು ವಿದ್ಯಾಭ್ಯಾಸ ಮೊಟಕುಗೊಳಿಸಿ ಮಾವ ರಾಮಕಿಣಿಯವರ ಜೊತೆ ಕೈ ಜೋಡಿಸುತ್ತಾರೆ.
  ಜಯವೀರ್ ನಾಯಕ್ ಮತ್ತು ಸಾವಿತ್ರಿ ದಂಪತಿಗಳಿಗೆ ಜಯಾನಂದ ಎಂಬ ಪುತ್ರ ಮತ್ತು ಜೋತ್ಸ್ನಾ ಎಂಬ ಪುತ್ರಿ ಇದರಲ್ಲಿ ಪುತ್ರ ಜಯಾನಂದ ಹೃದಯಾಘಾತದಿಂದ ಅಕಾಲ ಮೃತ್ಯುವಶ ಆಗಿದ್ದು ಈ ದಂಪತಿಗಳಿಗೆ ದೊಡ್ಡ ಆಘಾತ, ನಂತರ ಮಗಳು ಜೋತ್ಸ್ನಾ ಮತ್ತು ಅಳಿಯ ಅಮೃತ್ ಜೊತೆ ಮುಂಬಾಯಿಯಲ್ಲಿ ಜಯ ವೀರ್ ನಾಯಕ್ ದಂಪತಿ ನೆಲೆಸುತ್ತಾರೆ ಎರೆಡು ವರ್ಷದ ಹಿಂದೆ ಜಯ ವೀರ್ ನಾಯಕರು ಹೃದಯಾಘಾತದಿಂದ ನಿಧನರಾದರು.
  ಜಯ ವೀರ ನಾಯಕರ ಪತ್ನಿ ಅಕ್ಕನ ಮಗ ಪ್ರಸಿದ್ದ ಜಾದುಗಾರ್, ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದ #ಪ್ರಶಾಂತ್_ಹೆಗಡೆ_ಜಾದುಗಾರ್ ಬಾಲ್ಯದಲ್ಲಿ ಆನಂದಪುರಂಗೆ ಚಿಕ್ಕಮ್ಮನ ಮನೆಗೆ ಬರುತ್ತಿದ್ದದ್ದು ಆಗ ಚಂಪಕ ಸರಸ್ಸು, ಆನಂದಪುರಂ ಕೋಟೆ, ರೈಲು ನಿಲ್ದಾಣದ ವಾಸಣ್ಣರ ವಡೆ ಎಲ್ಲಾ ನೆನಪಿಸಿಕೊಳ್ಳುತ್ತಾರೆ.
 ರಾಮಕಿಣಿಯವರ ಸಹೋದರಿ ಸುನಂದಾರ ಪತಿ ರಿಪ್ಪನ್ ಪೇಟೆ ಸಮೀಪದ ಮೂಗುಡ್ತಿ ಶ್ಯಾಮರಾಯರು ಆ ಕಾಲದಲ್ಲಿ ಭದ್ರಾವತಿ ಪೇಪರ್ ಮಿಲ್ ಗೆ ಬೊಂಬಿನ ಸರಬರಾಜುದಾರರು ನಂತರ ಕೃಷಿ ಮಾಡುತ್ತಾರೆ, ಭೂ ಸುದಾರಣ  ಕಾಯ್ದೆ ಬಂದಾಗ ಬಡ ರೈತರಿಗೆ ತುಂಬಾ ಸಹಾಯ ಮಾಡುತ್ತಾರೆ, ಊರಿನ ವ್ಯಾಜ್ಯಗಳನ್ನು ಪಂಚಾಯಿತಿ ಮಾಡಿ ಪೋಲಿಸ್ ಸ್ಟೇಷನ್ ಗೆ ಹೋಗದಂತೆ ಬಗೆಹರಿಸುತ್ತ ಈ ಭಾಗದಲ್ಲಿ ಪ್ರಸಿದ್ಧರಾಗಿದ್ದರು.
        ಇವರ ಮಗ ರಘುನಾಥ ಶೆಣೈ
ಆನಂದಪುರಂನಲ್ಲೇ ಮಾಧ್ಯಮಿಕ ಶಾಲಾ ವಿದ್ಯಾಬ್ಯಾಸ ಮಾಡುತ್ತಾರೆ, ಮುಂದೆ ರಿಪ್ಪನ್ ಪೇಟೆಯಲ್ಲಿ ಶಾಂಭವಿ ಪೈನಾನ್ಸ್ ಮಾಡುತ್ತಾರೆ ಈಗ ಬೆಂಗಳೂರಿನ ಬುಲ್ ಟಿಂಪಲ್ ರಸ್ತೆಯಲ್ಲಿ ಟೆಂಪಲ್ ಆಪ್ ಸಕ್ಸಸ್ ಎಂಬ ಆಶ್ರಮದಲ್ಲಿ  #ರಘುನಾಥ_ಗುರೂಜಿ ಎಂದು ಪ್ರಖ್ಯಾತ ಗುರೂಜಿ ಆಗಿದ್ದಾರೆ, ಇನ್ನೊಬ್ಬ ಪುತ್ರ ರಮಾನಾಥ ಶಾನುಬೋಗ್ ಎಂಟನೆ ತರಗತಿ ಆನಂದಪುರ೦ನಲ್ಲೇ ಓದುತ್ತಾರೆ ನಂತರ ಪ್ರತಿಷ್ಟಿತ ಮಣಿಪಾಲ್ ಸಂಸ್ಥೆಯ ಪತ್ರಿಕಾ ಕ್ಷೇತ್ರದಲ್ಲಿ ಕಾಯ೯ನಿರ್ವಹಿಸಿದರು.
  1998 ರಲ್ಲಿ ವಯೋವೃದ್ದರಾದ ರಾಮಕಿಣಿ ಆನಂದಪುರಂಗೆ ನನ್ನ ಹುಡುಕಿಕೊಂಡು ಬಂದಿದ್ದರು ಅವರ ಹೆಸರಿನಲ್ಲಿ ತಾವರೇ ಹಳ್ಳಿ ಸ.ನಂ.44 ರಲ್ಲಿ ನಾಲ್ಕು ಎಕರೆ ಖುಷ್ಕಿ ಭೂಮಿ ಇವರಿಗೆ 1972 ರಲ್ಲಿ ಮಂಜುರಾಗಿತ್ತು ಆದರೆ ಅದು ಈಗ ಯಾರದೋ ವಶದಲ್ಲಿದೆ ಈಗ ರಾಮಕಿಣಿಯವರು ಇಲ್ಲ ಮಕ್ಕಳೆಲ್ಲ ಬೆಂಗಳೂರಲ್ಲಿ ನೆಲೆಸಿದ್ದಾರೆ.
  ಆನಂದಪುರಂನಲ್ಲಿದ್ದ #ಕೋಮಲ_ವಿಲಾಸ್ ಹೋಟೆಲ್ ಈ ಕಾಲದಲ್ಲೂ ನೆನಪಿಸಿಕೊಂಡರೆ ಅದು ಅತ್ಯುತ್ತಮ ರೆಸ್ಟೋರಾಂಟ್ ಈಗಲೂ ಅಂತಹ ಹೋಟೆಲ್ ನಾನು ನೋಡಿಲ್ಲ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ