Skip to main content

ಭಾಗ - 43, ಆನಂದಪುರಂ ಇತಿಹಾಸ, ನಾರ್ಥ ಈಸ್ಟ್ ನ ಮಿಜೋರಾಂ ನಲ್ಲಿ ಹುಟ್ಟಿ ಕರ್ನಾಟಕದ ಕೇಡರ್ ಆಗಿ ಪ್ರಸಿದ್ದ ರಾಗಿದ್ದ ಹೆಚ್.ಟಿ.ಸಾಂಗ್ಲಿಯಾನರ ಆನಂದಪುರಂ ನಿಕಟ ಸಂಬಂದಗಳು

#ಭಾಗ_43.
#ಆನಂದಪುರಂ_ಇತಿಹಾಸ.

#ನಾಥ೯_ಈಸ್ಟ್_ಮಿಜೋರಾಂ_ರಾಜ್ಯದ_ಸಾಂಗ್ಲಿಯಾನರ_ಆನಂದಪುರಂ_ಸಂಬಂದ 

#ಸಾಗರದಲ್ಲಿ_ಎಎಸ್ಪಿ_ಆಗಿ_ಸೇವೆಗೆ_ನಂತರ_ಶಿವಮೊಗ್ಗ_ಎಸ್ಪಿ.

#ಆನಂದಪುರಂನ_ಎಸ್ಸಾರ್ಕೆ_ಮಾಸ್ತರ_ಗೆಳೆತನ.

#ಆನಂದಪುರಂನಲ್ಲಿ_ನಡೆಯುತ್ತಿದ್ದ_ಶಾಲಾ_ಪ್ರಭಾತ್_ಪೇರಿಯಲ್ಲಿ_ಭಾಗವಹಿಸಿ_ಅವರು_ವಿದ್ಯಾರ್ಥಿಗಳಿಗೆ_ಹುರಿದುಂಬಿಸುತ್ತಿದ್ದರು.

  ಹೆಚ್.ಟಿ.ಸಾಂಗ್ಲಿಯಾನ ಅಂದರೆ ಎಲ್ಲರಿಗೂ ನೆನಪಾಗುವುದು ಕನ್ನಡ ಚಲನ ಚಿತ್ರರಂಗದಲ್ಲಿ ಇವರ ಹೆಸರಲ್ಲಿ ಬಂದ ಮೂರು ಹಿಟ್ ಸಿನಿಮಾಗಳು ಆದರೆ ಆನಂದಪುರಂ ಜನತೆಗೆ ಸಾಂಗ್ಲಿಯಾನರ ಪರಿಚಯವೇ ಬೇರೆ ಕೋನದಲ್ಲಿದೆ.
 1 ಜುಲ್ಯೆ 1943ರಲ್ಲಿ ಈಗಿನ ಮಿಜೋರಾಂ ರಾಜಧಾನಿ ಅಜ್ವಾಲ್ ನಲ್ಲಿ ಜನಿಸಿ ಮೇಘಾಲಯದ ಸೆಂಟ್ ಎಡ್ಮಂಡ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದು ಐಪಿಎಸ್ ಉತ್ತೀರ್ಣರಾಗಿ 1968 ರಲ್ಲಿ ಕರ್ನಾಟಕ ಕೇಡರ್ ಆಗಿ ರಾಜ್ಯದ ಕರಾವಳಿಯ ವಿವಿದ ಠಾಣೆಗಳಲ್ಲಿ ಪ್ರೊಬೆಷನರಿ ಹುದ್ದೆ ನಿರ್ವಹಿಸಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಡಿವೈಎಸ್ಪಿ (ASP) ಪ್ರಥಮ ಹುದ್ದೆ ಸ್ವೀಕರಿಸಿದ್ದು ಇತಿಹಾಸ, ಆಗ ಸಾಗರ ಡಿವೈಎಸ್ಪಿ ವ್ಯಾಪ್ತಿ ಶಿವಮೊಗ್ಗದ ಅರ್ಧ ಜಿಲ್ಲೆ ಅಂದರೆ ಶಿಕಾರಿಪುರ, ಸೊರಬ, ಸಾಗರ, ಹೊಸನಗರ ಮತ್ತು ತೀಥ೯ಹಳ್ಳಿ ತಾಲ್ಲೂಕ್ ಸೇರಿತ್ತು.
 1978ರಲ್ಲಿ ಇಂದಿರಾ ಗಾಂಧಿ ಚಿಕ್ಕಮಗಳೂರು ಲೋಕಸಭೆ ಉಪ ಚುನಾವಣೆಗೆ ಸ್ಪರ್ದಿಸಿದಾಗ ಅಲ್ಲಿನ ಜಿಲ್ಲಾ ರಕ್ಷಣಾಧಿಕಾರಿಯಾಗಿ ಸಾಂಗ್ಲಿಯಾನ ಇದ್ದರು.
  1972-73ರಲ್ಲಿ ಪೋಲಿಸ್ ಜೀಪೊಂದು ಆನಂದಪುರದ ಎರೆಡೂ ಕೆರೆ ದಂಡೆ ಮೇಲೆ ನಿಲ್ಲುತ್ತಿತ್ತು ಜೀಪಲ್ಲಿ ಕುಳಿತಿದ್ದೇ ತರುಣ ಪೋಲಿಸ್ ಸಮವಸ್ತ್ರದಾರಿ ತನ್ನ ರೈಪಲ್ಲಿನಿಂದ ಕೆರೆ ಮಧ್ಯದಲ್ಲಿರುತ್ತಿದ್ದ ಕಡು ನೀಲಿ ಮೈಬಣ್ಣದ ಕೆಂಪು ಕುಕ್ಕಿನ ನೀರ ಕೋಳಿ (ರಾಮ ಕೋಳಿ) ಗೆ ಗುರಿ ಇಟ್ಟು ತನ್ನ ರೈಪಲ್ಲಿನಿಂದ ಹತ್ತಾರು ಹಕ್ಕಿ ಹೊಡೆಯುತ್ತಿದ್ದರು ಇದನ್ನು ನೋಡಲು ನೆರೆಯುತ್ತಿದ್ದ ಸ್ಥಳಿಯರು ಶಿಕಾರಿ ಮಾಡಿದ ಹಕ್ಕಿ ಕೆರೆಗೆ ಇಳಿದು ತೆಗೆದು ತಂದು ಕೊಡುತ್ತಿದ್ದರು ಅದರಲ್ಲಿ ನಾಕಾರು ಮಾತ್ರ ತೆಗೆದುಕೊಂಡು ಉಳಿದದ್ದು ತಂದವನಿಗೆ ಕೊಡುತ್ತಿದ್ದರು ಮತ್ತು ಅವನ ಶ್ರಮಕ್ಕೆ ಆ ಕಾಲದಲ್ಲಿ ಭಕ್ಷೀಸು ಬೇರೆ.
  ಆಗೆಲ್ಲ ಇವರು ನಡೆಸುತ್ತಿದ್ದ ತನಿಖೆ ಎಂದರೆ ಕಳ್ಳತನ ಮಾಡಿದ ಕಳ್ಳ, ಕೊಲೆಗಾರ ತಕ್ಷಣ ಇವರ ಬಂದನಕ್ಕೆ ಒಳಗಾಗುವಂತ ಚಾಕ ಚಕ್ಯತೆ ಇವರದ್ದು ಹಾಗಾಗಿ ಇವರ ವ್ಯಾಪ್ತಿಯಲ್ಲಿ ಇವರ ಅವದಿಯಲ್ಲಿ ಕಳ್ಳತನ ಮತ್ತು ಕೊಲೆ ಪ್ರಕರಣಗಳು ಅತ್ಯಂತ ಕಡಿಮೆ ಆಗಿತ್ತು.
  ಮಲೆನಾಡಿನ ಟಿಂಬರ್ ಮಾಪಿಯಾದ ಲಾರಿಗಳನ್ನು ಇವರು ಪೋಲಿಸ್ ಜೀಪಿನಲ್ಲಿ ಚೇಸ್ ಮಾಡಿದ್ದು ಆನಂದಪುರಂ ಆಸ್ಪತ್ರೆ ಎದರು ಟಿಂಬರ್ ಲಾರಿ ಟೈರ್ ಗೆ ಶೂಟ್ ಮಾಡಿ ಹಿಡಿದಿದ್ದು ಒ0ದು ರೀತಿ ಜೇಮ್ಸ್ ಬಾಂಡ್ ಸಿನಿಮಾದಂತೆ ಇತ್ತು.
  ಆಗ ಆನಂದಪುರಂನಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಆಗಿನ ಶಿಸ್ತಿನ ದೈಹಿಕ ಶಿಕ್ಷಕರಾದ ಸೇವಾದಳದ ಎಸ್.ಆರ್.ಕೃಷ್ಣಪ್ಪರ ಪ್ರಭಾತ್ ಪೇರಿಗಳು ಸಾಂಗ್ಲಿಯಾನರ ಮೆಚ್ಚುಗೆಗೆ ಕಾರಣ ಆಗಿತ್ತು,  ರಾಷ್ಟ್ರೀಯ ಹಬ್ಬದ ಪ್ರಬಾತ್ ಪೇರಿ ನಂತರದ ಗಾರ್ಡ್ ಆಪ್ ಹಾನರ್ ಸ್ವೀಕರಿಸಿ ರಾಷ್ಟ್ರ ಧ್ವಜಾರೋಹಣ ಸಾಂಗ್ಲಿಯಾನರು ನೆರವೇರಿಸಿ ನಂತರ ಭಾಗವಹಿಸುವ ವಿದ್ಯಾರ್ಥಿ ವೃಂದ ಮತ್ತು ಈ ಅದ್ದೂರಿ ಪ್ರಬಾತ್ ಪೇರಿ ಮತ್ತು ಸಾಂಗ್ಲಿಯಾನರನ್ನು ನೋಡಲು ನೆರೆಯುತ್ತಿದ್ದ ಸಾವಿರಾರು ಆನಂದಪುರಂ ನಿವಾಸಿಗಳನ್ನು ಉದ್ದೇಶಿಸಿ ಸಾಂಗ್ಲಿಯಾನರು ಮಾಡುತ್ತಿದ್ದ ಭಾಷಣ ಅದನ್ನು ಯಥಾ ಅನುವಾದಿಸುತ್ತಿದ್ದ ಎಸ್ ಆರ್ ಕೆ ಅವರ ಕಂಚಿನ ಕಂಠ ಈಗಲೂ ನೆನಸಿಕೊಂಡರೆ ರೋಮಾಂಚನವೇ ಹಾಗಾಗಿ ಆನಂದಪುರಂ ಜನತೆಗೆ ಸಾಂಗ್ಲಿಯಾನ ಅಂದರೆ ಪ್ರೀತಿ ಮತ್ತ ಸಾಂಗ್ಗಿಯಾನರಿಗೂ ಈಗಲೂ ಆನಂದಪುರಂನವರೆಂದು ಪರಿಚಯ ಮಾಡಿಕೊಂಡರೆ ಆಷ್ಟೇ ಅಭಿಮಾನ.
  ಆಗೆಲ್ಲ ಬಿಡಾಡಿ ದನಗಳು ಜಿಲ್ಲಾ ಕೇಂದ್ರ ತಾಲ್ಲೂಕ್ ಕೇಂದ್ರದಲ್ಲಿ ಬೀದಿ ತುಂಬಾ ಓಡಾಡಿಕೊಂಡಿರುತ್ತಿದ್ದವು ಇದರಿಂದ ಅಪಘಾತ ನಡೆಯುತ್ತಿದ್ದರೂ ಇದನ್ನು ನಿಯಂತ್ರಿಸುವುದು ಅಸಾಧ್ಯ ಅಂತ ತೀಮಾ೯ನವಾಗಿದ್ದ ಕಾಲದಲ್ಲಿ ಸಾಂಗ್ಲಿಯಾನ ಸ್ವತಃ ಬಿಡಾಡಿ ದನಗಳನ್ನು ಹಿಡಿದು ದೊಡ್ಡಿಗೆ ಸೇರಿಸಿದಾಗ ಬಿಡಿಸಿಕೊಳ್ಳಲು ಬಂದ ಮಾಲಿಕರಿಗೆ ಕಡಕ್ ವಾರ್ನಿಂಗ್ ಮಾಡಿ ಬಿಡಾಡಿ ದನದ ಸಮಸ್ಯೆ ಬಗೆಹರಿಸಿದ್ದರು.
  ಬೆಂಗಳೂರು ಪೋಲಿಸ್ ಕಮಿಷನರ್, ಡೈರೆಕ್ಟರ್ ಜನರಲ್ ಆಫ್ ಪೋಲಿಸ್ ಆಗಿ ನಿವೃತ್ತರಾಗಿ ಬೆಂಗಳೂರಲ್ಲಿ ನೆಲೆಸಿದ್ದಾರೆ.
  ಸಾಂಗ್ಲಿಯಾನ ಇವರ ಪತ್ನಿ ಹೆಸರು ಸಿ. ರೋದನ್ ಪುಯಿ ಈ ದಂಪತಿಗಳಿಗೆ ನಾಲ್ಕು ಪುತ್ರಿಯರು ಸಾರಾ, ರೆಬೆಕಾ, ಎಲಿಜಾಬೆತ್ ಮತ್ತು ರಚೆಲ್ .
  14ನೇ ಲೋಕಸಭೆಗೆ ಬಿಜೆಪಿಯಿಂದ ಬೆಂಗಳೂರಿಂದ ಆಯ್ಕೆ ಆಗಿದ್ದರು, ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾದ್ಯಕ್ಷರೂ ಆಗಿದ್ದರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ