Skip to main content

ಭಾಗ - 29, ಆನಂದಪುರಂನ ರೈಲು ನಿಲ್ದಾಣದ ಕ್ಯಾಂಟೀನ್ ಇಡೀ ದಕ್ಷಿಣ ಭಾರತೀಯ ರೈಲ್ವೇ ಇಲಾಖೆಯಲ್ಲಿ, ಚಿತ್ರ ನಟರು, ರಾಜಕಾರಣಿಗಳಂತ ಸೆಲೆಬ್ರಿಟಿಗಳಲ್ಲಿ ಪ್ರಸಿದ್ಧಿ ಪಡೆದದ್ದು ಇಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ವಾಸಣ್ಣರ ಕೈಚಳಕದ ವಡೆಯಿಂದ. ರಾಜಕುಮಾರ್ - ಲೋಕೇಶ್ - ರಾಮಕೃಷ್ಣ ಹೆಗ್ಗಡೆಯವರೂ ಕೂಡ ಇವರ ಕೈ ರುಚಿಗೆ ಮನ ಸೋತಿದ್ದರು.

#ಭಾಗ_29.

#ಆನಂದಪುರಂ_ರೈಲು_ನಿಲ್ದಾಣ_ಪ್ರಸಿದ್ದಿಗೆ_ಬಂದಿದ್ದೇ_ವಾಸಣ್ಣನ_ವಡೆಯಿಂದ.

#ಸಿನಿಮಾಕ್ಷೇತ್ರದವರು_ರಾಜಕಾರಣಿಗಳು_ಸೆಲೆಬ್ರಿಟಿಗಳು_ಅಧಿಕಾರಿಗಳು_ವಾಸಣ್ಣನ_ರೈಲ್ವೆ_ಕ್ಯಾಂಟೀನ್_ಅಭಿಮಾನಿಗಳು

#ನರಸೀಪುರಗೋವಿಂದಪ್ಪ_1971ರ_ತನಕ_ಈ_ಕ್ಯಾಂಟೀನ್_ನಡೆಸಿದ್ದರು.

#ದೇವರ_ಕಣ್ಣು_ಸಿನೆಮಾ_ರಾಜಕುಮಾರರ_ಅಕಸ್ಮಿಕ_ಸಿನೆಮಾ_ಆನಂದಪುರಂನಲ್ಲಿ_ಚಿತ್ರಿಕರಣ.

#ರಾಜಕುಮಾರ್_ಲೋಕೇಶ್_ಅನಂತನಾಗ್_ಆರತಿ_ದೀರೆಂದ್ರಗೋಪಾಲ್_ಆಗಿನ_ಮುಖ್ಯಮಂತ್ರಿ_ರಾಮಕೃಷ್ಣಹೆಗಡೆ_##ವಾಸಣ್ಣರ_ಕೈರುಚಗೆ_ಪ್ರಶಂಸಿದ್ದರು
  
   ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಮೂಲದ ಕೊಂಕಣಿ ದೈವಜ್ಞ ಬ್ರಾಹ್ಮಣ ವಾಸಣ್ಣ ಮತ್ತು ಪತ್ನಿ ರತ್ನಮ್ಮ ಆನಂದಪುರಕ್ಕೆ ಬಂದವರು 1971-72ರಿಂದ ಆನಂದಪುರಂ ರೈಲ್ವೆ ನಿಲ್ದಾಣದ ಕ್ಯಾಂಟೀನ್ ನಡೆಸಲು ಪ್ರಾರಂಬಿಸಿ ರೈಲು ಮಾರ್ಗ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಪರಿವರ್ತನೆ ಕಾಮಗಾರಿಗಾಗಿ ಈ ರೈಲು ಮಾರ್ಗ ರದ್ದಾಗುವವರೆಗೆ ವಾಸಣ್ಣರ ಕ್ಯಾಂಟೀನ್ ಚಾಲು ಇತ್ತು.
  ಆ ಕಾಲದಲ್ಲಿ ಉಗಿ ಇಂಜಿನ್ ರೈಲುಗಳಾದ್ದರಿಂದ ಈ ಮಾರ್ಗದ ಎಲ್ಲಾ ರೈಲು ಇಂಜೆನ್ ಗಳಿಗೆ ಬೇಕಾದ ನೀರು ಆನಂದಪುರಂನಲ್ಲೇ ತುಂಬಿಸಿಕೊಳ್ಳಬೇಕಾದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ವಾಸಣ್ಣನ ಕ್ಯಾಂಟೀನ್ ನಲ್ಲಿ ಸ್ವಾದಿಷ್ಟ ಇಡ್ಲಿ, ಉದ್ದಿನ ವಡೆ, ಮಸಾಲೆ ವಡೆ ಗಟ್ಟಿ ಚಟ್ನಿಯೊಂದಿಗೆ ತಿಂದು ಚಹ ಕುಡಿದು ಮುಂದಿನ ಪ್ರಯಾಣ ಮಾಡಲು ಕಾಲಾವಕಾಶ ಸಿಗುತ್ತಿತ್ತು.
  ಪ್ರಾರಂಭದಲ್ಲಿ ವಾಸಣ್ಣ ದಂಪತಿಗಳೇ ಎಲ್ಲಾ ಕೆಲಸ ಮಾಡಿ ಕೊಳ್ಳುತ್ತಿದ್ದರು, ಕೈಯಲ್ಲೇ ಅಕ್ಕಿ, ಉದ್ದಿನ ಬೇಳೆ ಕಲ್ಲಿನಲ್ಲಿ ರುಬ್ಬಿಕೊಳ್ಳುತ್ತಿದ್ದರು ನಂತರ ತಿಂಡಿ ಕೃಷ್ಣಣ್ಣನ ಸಹೋದರ ವೆಂಕಟೇಶ್ ಮತ್ತು ರಾಮಣ್ಣ ಸೇರಿಕೊಂಡರು.
  ದೇವರ ಕಣ್ಣು ಎಂಬ ಸಿನಿಮಾ ಇದೇ ನಿಲ್ದಾಣದಲ್ಲಿ ಚಿತ್ರಿಕರಣ ಆಗಿತ್ತು ಲೋಕೇಶ್, ಅನಂತನಾಗ್ ಅಂಬರೀಷ್, ಆರತಿ, ದೀರೇಂದ್ರ ಗೋಪಾಲ್, ಶಕ್ತಿ ಪ್ರಸಾದ್, NS ರಾವ್ ತಾರಾಗಣದಲ್ಲಿ ಆಗಿನ ಖ್ಯಾತ ನಿರ್ದೇಶಕರಾದ YR ಸ್ವಾಮಿ ನಿರ್ದೇಶಿಸಿದ್ದರು ಆಗ ವಾಸಣ್ಣರ ರೈಲ್ವೆ ಕ್ಯಾಂಟೀನ್ ಕೇಂದ್ರ ಬಿಂದು ಆಗಿತ್ತು.
  ಆನಂದಪುರಂ ರೈಲು ನಿಲ್ದಾಣ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕರು ತನ್ನ ರಾಣಿಯ ಸ್ಮರಣಾಥ೯ ನಿರ್ಮಿಸಿರುವ ಇಲ್ಲಿನ ಸುಂದರ #ಚಂಪಕಸರಸ್ಸು YR ಸ್ವಾಮಿ ಚೆನ್ನಾಗಿ ಬಳಸಿಕೊಂಡಿದ್ದಾರೆ.
 ನಂತರ ರಾಜ್ ಕುಮಾರ್ ಅಭಿನಯದ #ಅಕಸ್ಮಿಕ ಸಿನಿಮಾ ಕೂಡ ಇಲ್ಲಿ ಚಿತ್ರ ಕರಣ ಆಗಿತ್ತು.
  ವಾಸಣ್ಣ ನೀಳ ಕಾಯದ ಸ್ಪುರದ್ರೂಪಿ,ಯಾವಾಗಲೂ ಕೈಯಲ್ಲಿ ಸಿಗರೇಟು,ಹಾಸ್ಯದ ಹೊನಲು ಹರಿಸುವ ಚಟಾಕಿ ಹಾರಿಸುತ್ತ ಸುತ್ತಲಿನ ಪರಿಸರ ಲವಲವಿಕೆ ಉಂಟು ಮಾಡುತ್ತಿದ್ದ ಸ್ನೇಹ ಜೀವಿ ಆಗಿದ್ದರು ಅವರಿಗೆ ಅವರ ಸುಪ್ರಸಿದ್ದ ವಡೆಯ ರೆಸಿಪಿ ಬಗ್ಗೆ ಅನೇಕ ಬಾರಿ ಚರ್ಚಿಸಿದ್ದೆ ಅವರ ಪ್ರಕಾರ ಉದ್ದಿನ ಬೇಳೆ ಎಷ್ಟು ನಿದಾನವಾಗಿ ಕೈಯಲ್ಲಿ ತಿರುವುತ್ತಾ ರುಬ್ಬುತ್ತೀರೋ ಅಷ್ಟು ರುಚಿ ಬರುತ್ತದೆ ಆದರೆ ಗ್ರೈಂಡರ್ ನಲ್ಲಿ ರುಬ್ಬಿದರೆ ರುಚಿ ಮತ್ತು ವಡೆಯ ಸಂಖ್ಯೆ ಕೂಡ ಕಡಿಮೆ ಅನ್ನುತ್ತಿದ್ದರು.
  ಮಗಳು ನಾಗಲಕ್ಷ್ಮಿ ಯಡೇಹಳ್ಳಿ ಸಮೀಪದ ಗೇರ್ ಬೇಸಿನ ವೆಂಕಟೇಶ ಮೇಸ್ತ್ರಿ ಪುತ್ರ ಸತೀಶ್ ರ ಜೊತೆ ವಿವಾಹ ಆಗಿ ಸಾಗರದಲ್ಲಿ ನೆಲೆಸಿದ್ದಾರೆ, ವಾಸಣ್ಣ ದಂಪತಿ ಈಗಿಲ್ಲ ಆದರೆ ಇವರ ಕೈ ರುಚಿಯ ಉಪಹಾರ ಸೇವಿಸಿದ ಅನೇಕರು ನನ್ನ ಈ ಸರಣಿ ಲೇಖನದಲ್ಲಿ ವಾಸಣ್ಣರ ಬಗ್ಗೆ ಬರೆಯುವಂತೆ ಒತ್ತಾಯಿಸುವಂತ ಜನಪ್ರಿಯತೆ ವಾಸಣ್ಣನವರದ್ದು.
    1971 ಕ್ಕಿಂತ ಹಿಂದೆ ಆನಂದಪುರಂ ರೈಲು ನಿಲ್ದಾಣದ ಕ್ಯಾಂಟೀನ್‌ ನಡೆಸಿದವರು ನರಸೀಪುರದ ಗೋವಿಂದಪ್ಪ ಹೆಗ್ಗಡೆಯವರು ಇವರು ನರಸೀಪುರ ಖ್ಯಾತ ಆಯುರ್ವೇದ ವೈದ್ಯರಾದ ನಾರಾಯಣ ಮೂರ್ತಿ ಮತ್ತು ಶುಂಠಿ ವ್ಯಾಪಾರಿಗಳಾದ ಕೃಷ್ಣ ಮೂರ್ತಿ ಹೆಗ್ಗಡೆಯವರ ಸೋದರ ಸಂಬಂದಿಗಳು.
  ನರಸೀಪುರ ಗೋವಿಂದಪ್ಪ ಗೌರಮ್ಮ ದಂಪತಿಗೆ ಲೀಲಾವತಮ್ಮ ಎಂಬ ಪುತ್ರಿ ಮತ್ತು ಲಕ್ಷ್ಮಿನಾರಾಯಣ ಎಂಬ ಪುತ್ರ.
  ಮಗಳು ಲೀಲಾವತಮ್ಮ ಮತ್ತು ಅಳಿಯ ಮಡಸೂರು ಲಿಂಗದಳ್ಳಿಯ ವೆಂಕಟೇಶ್ ಗೆ ನಾಗರತ್ನ, ಚಂದ್ರಶೇಖರ್, ಕುಮಾರ ಸ್ವಾಮಿ, ಬದರಿನಾಥ, ಸುಬಾಷ್ ಮತ್ತು ಕೇಶವಮೂರ್ತಿ ಮಕ್ಕಳು ( ಕೇಶವ ಭಟ್ಟರು ಆನಂದಪುರಂನ ವಿಜಯವಾಣಿ ವರದಿಗಾರ & ಏಜೆಂಟ್) .
   ಮಗ ಲಕ್ಷ್ಮೀನಾರಾಯಣರು ರೈಲ್ವೆ ಇಲಾಖೆ ಉದ್ಯೋಗಿ ಆಗಿದ್ದರು ಇವರ ಪತ್ನಿ ರುಕ್ಮಿಣಿಯಮ್ಮ, ಇವರಿಗೆ NL ಗೀತಾ ಎಂಬ ಪುತ್ರಿ ಮತ್ತು NL ಅಶೋಕ (ಹಾಲಿ ಆನಂದಪುರಂ ನಲ್ಲಿ ಇಂಜಿನಿಯರ್) ಇದ್ದಾರೆ.
   ನರಸೀಪುರ ಗೋವಿಂದಪ್ಪ ಕೂಡ ಸುಮಾರು 25 ವಷ೯ ಆನಂದಪುರಂ ರೈಲ್ವೆ ಕ್ಯಾಂಟೀನ್ ನಡೆಸಿರುತ್ತಾರೆ.
  ಇವತ್ತಿಗೂ ಜನ ನೆನೆಸುವ ರೈಲ್ವೆ ಕ್ಯಾಂಟೀನ್ ವಾಸಣ್ಣ ಹಣ ಆಸ್ತಿ ಗಳಿಸಲಿಲ್ಲ ಆದರೆ ಇಡೀ ದಕ್ಷಿಣ ಭಾರತ ರೈಲ್ವೆಯಲ್ಲಿ ಪ್ರಖ್ಯಾತಿಗಳಿಸಿದ್ದರು.

(ನಾಳೆ ಭಾಗ- 30)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ