Skip to main content

ಭಾಗ - 29, ಆನಂದಪುರಂನ ರೈಲು ನಿಲ್ದಾಣದ ಕ್ಯಾಂಟೀನ್ ಇಡೀ ದಕ್ಷಿಣ ಭಾರತೀಯ ರೈಲ್ವೇ ಇಲಾಖೆಯಲ್ಲಿ, ಚಿತ್ರ ನಟರು, ರಾಜಕಾರಣಿಗಳಂತ ಸೆಲೆಬ್ರಿಟಿಗಳಲ್ಲಿ ಪ್ರಸಿದ್ಧಿ ಪಡೆದದ್ದು ಇಲ್ಲಿ ಕ್ಯಾಂಟೀನ್ ನಡೆಸುತ್ತಿದ್ದ ವಾಸಣ್ಣರ ಕೈಚಳಕದ ವಡೆಯಿಂದ. ರಾಜಕುಮಾರ್ - ಲೋಕೇಶ್ - ರಾಮಕೃಷ್ಣ ಹೆಗ್ಗಡೆಯವರೂ ಕೂಡ ಇವರ ಕೈ ರುಚಿಗೆ ಮನ ಸೋತಿದ್ದರು.

#ಭಾಗ_29.

#ಆನಂದಪುರಂ_ರೈಲು_ನಿಲ್ದಾಣ_ಪ್ರಸಿದ್ದಿಗೆ_ಬಂದಿದ್ದೇ_ವಾಸಣ್ಣನ_ವಡೆಯಿಂದ.

#ಸಿನಿಮಾಕ್ಷೇತ್ರದವರು_ರಾಜಕಾರಣಿಗಳು_ಸೆಲೆಬ್ರಿಟಿಗಳು_ಅಧಿಕಾರಿಗಳು_ವಾಸಣ್ಣನ_ರೈಲ್ವೆ_ಕ್ಯಾಂಟೀನ್_ಅಭಿಮಾನಿಗಳು

#ನರಸೀಪುರಗೋವಿಂದಪ್ಪ_1971ರ_ತನಕ_ಈ_ಕ್ಯಾಂಟೀನ್_ನಡೆಸಿದ್ದರು.

#ದೇವರ_ಕಣ್ಣು_ಸಿನೆಮಾ_ರಾಜಕುಮಾರರ_ಅಕಸ್ಮಿಕ_ಸಿನೆಮಾ_ಆನಂದಪುರಂನಲ್ಲಿ_ಚಿತ್ರಿಕರಣ.

#ರಾಜಕುಮಾರ್_ಲೋಕೇಶ್_ಅನಂತನಾಗ್_ಆರತಿ_ದೀರೆಂದ್ರಗೋಪಾಲ್_ಆಗಿನ_ಮುಖ್ಯಮಂತ್ರಿ_ರಾಮಕೃಷ್ಣಹೆಗಡೆ_##ವಾಸಣ್ಣರ_ಕೈರುಚಗೆ_ಪ್ರಶಂಸಿದ್ದರು
  
   ಕುಂದಾಪುರ ತಾಲ್ಲೂಕಿನ ಶಂಕರನಾರಾಯಣ ಮೂಲದ ಕೊಂಕಣಿ ದೈವಜ್ಞ ಬ್ರಾಹ್ಮಣ ವಾಸಣ್ಣ ಮತ್ತು ಪತ್ನಿ ರತ್ನಮ್ಮ ಆನಂದಪುರಕ್ಕೆ ಬಂದವರು 1971-72ರಿಂದ ಆನಂದಪುರಂ ರೈಲ್ವೆ ನಿಲ್ದಾಣದ ಕ್ಯಾಂಟೀನ್ ನಡೆಸಲು ಪ್ರಾರಂಬಿಸಿ ರೈಲು ಮಾರ್ಗ ಮೀಟರ್ ಗೇಜ್ ನಿಂದ ಬ್ರಾಡ್ ಗೇಜ್ ಪರಿವರ್ತನೆ ಕಾಮಗಾರಿಗಾಗಿ ಈ ರೈಲು ಮಾರ್ಗ ರದ್ದಾಗುವವರೆಗೆ ವಾಸಣ್ಣರ ಕ್ಯಾಂಟೀನ್ ಚಾಲು ಇತ್ತು.
  ಆ ಕಾಲದಲ್ಲಿ ಉಗಿ ಇಂಜಿನ್ ರೈಲುಗಳಾದ್ದರಿಂದ ಈ ಮಾರ್ಗದ ಎಲ್ಲಾ ರೈಲು ಇಂಜೆನ್ ಗಳಿಗೆ ಬೇಕಾದ ನೀರು ಆನಂದಪುರಂನಲ್ಲೇ ತುಂಬಿಸಿಕೊಳ್ಳಬೇಕಾದ್ದರಿಂದ ಪ್ರಯಾಣಿಕರು ಮತ್ತು ಸಿಬ್ಬಂದಿಗಳಿಗೆ ವಾಸಣ್ಣನ ಕ್ಯಾಂಟೀನ್ ನಲ್ಲಿ ಸ್ವಾದಿಷ್ಟ ಇಡ್ಲಿ, ಉದ್ದಿನ ವಡೆ, ಮಸಾಲೆ ವಡೆ ಗಟ್ಟಿ ಚಟ್ನಿಯೊಂದಿಗೆ ತಿಂದು ಚಹ ಕುಡಿದು ಮುಂದಿನ ಪ್ರಯಾಣ ಮಾಡಲು ಕಾಲಾವಕಾಶ ಸಿಗುತ್ತಿತ್ತು.
  ಪ್ರಾರಂಭದಲ್ಲಿ ವಾಸಣ್ಣ ದಂಪತಿಗಳೇ ಎಲ್ಲಾ ಕೆಲಸ ಮಾಡಿ ಕೊಳ್ಳುತ್ತಿದ್ದರು, ಕೈಯಲ್ಲೇ ಅಕ್ಕಿ, ಉದ್ದಿನ ಬೇಳೆ ಕಲ್ಲಿನಲ್ಲಿ ರುಬ್ಬಿಕೊಳ್ಳುತ್ತಿದ್ದರು ನಂತರ ತಿಂಡಿ ಕೃಷ್ಣಣ್ಣನ ಸಹೋದರ ವೆಂಕಟೇಶ್ ಮತ್ತು ರಾಮಣ್ಣ ಸೇರಿಕೊಂಡರು.
  ದೇವರ ಕಣ್ಣು ಎಂಬ ಸಿನಿಮಾ ಇದೇ ನಿಲ್ದಾಣದಲ್ಲಿ ಚಿತ್ರಿಕರಣ ಆಗಿತ್ತು ಲೋಕೇಶ್, ಅನಂತನಾಗ್ ಅಂಬರೀಷ್, ಆರತಿ, ದೀರೇಂದ್ರ ಗೋಪಾಲ್, ಶಕ್ತಿ ಪ್ರಸಾದ್, NS ರಾವ್ ತಾರಾಗಣದಲ್ಲಿ ಆಗಿನ ಖ್ಯಾತ ನಿರ್ದೇಶಕರಾದ YR ಸ್ವಾಮಿ ನಿರ್ದೇಶಿಸಿದ್ದರು ಆಗ ವಾಸಣ್ಣರ ರೈಲ್ವೆ ಕ್ಯಾಂಟೀನ್ ಕೇಂದ್ರ ಬಿಂದು ಆಗಿತ್ತು.
  ಆನಂದಪುರಂ ರೈಲು ನಿಲ್ದಾಣ ಮತ್ತು ಕೆಳದಿ ರಾಜ ವೆಂಕಟಪ್ಪ ನಾಯಕರು ತನ್ನ ರಾಣಿಯ ಸ್ಮರಣಾಥ೯ ನಿರ್ಮಿಸಿರುವ ಇಲ್ಲಿನ ಸುಂದರ #ಚಂಪಕಸರಸ್ಸು YR ಸ್ವಾಮಿ ಚೆನ್ನಾಗಿ ಬಳಸಿಕೊಂಡಿದ್ದಾರೆ.
 ನಂತರ ರಾಜ್ ಕುಮಾರ್ ಅಭಿನಯದ #ಅಕಸ್ಮಿಕ ಸಿನಿಮಾ ಕೂಡ ಇಲ್ಲಿ ಚಿತ್ರ ಕರಣ ಆಗಿತ್ತು.
  ವಾಸಣ್ಣ ನೀಳ ಕಾಯದ ಸ್ಪುರದ್ರೂಪಿ,ಯಾವಾಗಲೂ ಕೈಯಲ್ಲಿ ಸಿಗರೇಟು,ಹಾಸ್ಯದ ಹೊನಲು ಹರಿಸುವ ಚಟಾಕಿ ಹಾರಿಸುತ್ತ ಸುತ್ತಲಿನ ಪರಿಸರ ಲವಲವಿಕೆ ಉಂಟು ಮಾಡುತ್ತಿದ್ದ ಸ್ನೇಹ ಜೀವಿ ಆಗಿದ್ದರು ಅವರಿಗೆ ಅವರ ಸುಪ್ರಸಿದ್ದ ವಡೆಯ ರೆಸಿಪಿ ಬಗ್ಗೆ ಅನೇಕ ಬಾರಿ ಚರ್ಚಿಸಿದ್ದೆ ಅವರ ಪ್ರಕಾರ ಉದ್ದಿನ ಬೇಳೆ ಎಷ್ಟು ನಿದಾನವಾಗಿ ಕೈಯಲ್ಲಿ ತಿರುವುತ್ತಾ ರುಬ್ಬುತ್ತೀರೋ ಅಷ್ಟು ರುಚಿ ಬರುತ್ತದೆ ಆದರೆ ಗ್ರೈಂಡರ್ ನಲ್ಲಿ ರುಬ್ಬಿದರೆ ರುಚಿ ಮತ್ತು ವಡೆಯ ಸಂಖ್ಯೆ ಕೂಡ ಕಡಿಮೆ ಅನ್ನುತ್ತಿದ್ದರು.
  ಮಗಳು ನಾಗಲಕ್ಷ್ಮಿ ಯಡೇಹಳ್ಳಿ ಸಮೀಪದ ಗೇರ್ ಬೇಸಿನ ವೆಂಕಟೇಶ ಮೇಸ್ತ್ರಿ ಪುತ್ರ ಸತೀಶ್ ರ ಜೊತೆ ವಿವಾಹ ಆಗಿ ಸಾಗರದಲ್ಲಿ ನೆಲೆಸಿದ್ದಾರೆ, ವಾಸಣ್ಣ ದಂಪತಿ ಈಗಿಲ್ಲ ಆದರೆ ಇವರ ಕೈ ರುಚಿಯ ಉಪಹಾರ ಸೇವಿಸಿದ ಅನೇಕರು ನನ್ನ ಈ ಸರಣಿ ಲೇಖನದಲ್ಲಿ ವಾಸಣ್ಣರ ಬಗ್ಗೆ ಬರೆಯುವಂತೆ ಒತ್ತಾಯಿಸುವಂತ ಜನಪ್ರಿಯತೆ ವಾಸಣ್ಣನವರದ್ದು.
    1971 ಕ್ಕಿಂತ ಹಿಂದೆ ಆನಂದಪುರಂ ರೈಲು ನಿಲ್ದಾಣದ ಕ್ಯಾಂಟೀನ್‌ ನಡೆಸಿದವರು ನರಸೀಪುರದ ಗೋವಿಂದಪ್ಪ ಹೆಗ್ಗಡೆಯವರು ಇವರು ನರಸೀಪುರ ಖ್ಯಾತ ಆಯುರ್ವೇದ ವೈದ್ಯರಾದ ನಾರಾಯಣ ಮೂರ್ತಿ ಮತ್ತು ಶುಂಠಿ ವ್ಯಾಪಾರಿಗಳಾದ ಕೃಷ್ಣ ಮೂರ್ತಿ ಹೆಗ್ಗಡೆಯವರ ಸೋದರ ಸಂಬಂದಿಗಳು.
  ನರಸೀಪುರ ಗೋವಿಂದಪ್ಪ ಗೌರಮ್ಮ ದಂಪತಿಗೆ ಲೀಲಾವತಮ್ಮ ಎಂಬ ಪುತ್ರಿ ಮತ್ತು ಲಕ್ಷ್ಮಿನಾರಾಯಣ ಎಂಬ ಪುತ್ರ.
  ಮಗಳು ಲೀಲಾವತಮ್ಮ ಮತ್ತು ಅಳಿಯ ಮಡಸೂರು ಲಿಂಗದಳ್ಳಿಯ ವೆಂಕಟೇಶ್ ಗೆ ನಾಗರತ್ನ, ಚಂದ್ರಶೇಖರ್, ಕುಮಾರ ಸ್ವಾಮಿ, ಬದರಿನಾಥ, ಸುಬಾಷ್ ಮತ್ತು ಕೇಶವಮೂರ್ತಿ ಮಕ್ಕಳು ( ಕೇಶವ ಭಟ್ಟರು ಆನಂದಪುರಂನ ವಿಜಯವಾಣಿ ವರದಿಗಾರ & ಏಜೆಂಟ್) .
   ಮಗ ಲಕ್ಷ್ಮೀನಾರಾಯಣರು ರೈಲ್ವೆ ಇಲಾಖೆ ಉದ್ಯೋಗಿ ಆಗಿದ್ದರು ಇವರ ಪತ್ನಿ ರುಕ್ಮಿಣಿಯಮ್ಮ, ಇವರಿಗೆ NL ಗೀತಾ ಎಂಬ ಪುತ್ರಿ ಮತ್ತು NL ಅಶೋಕ (ಹಾಲಿ ಆನಂದಪುರಂ ನಲ್ಲಿ ಇಂಜಿನಿಯರ್) ಇದ್ದಾರೆ.
   ನರಸೀಪುರ ಗೋವಿಂದಪ್ಪ ಕೂಡ ಸುಮಾರು 25 ವಷ೯ ಆನಂದಪುರಂ ರೈಲ್ವೆ ಕ್ಯಾಂಟೀನ್ ನಡೆಸಿರುತ್ತಾರೆ.
  ಇವತ್ತಿಗೂ ಜನ ನೆನೆಸುವ ರೈಲ್ವೆ ಕ್ಯಾಂಟೀನ್ ವಾಸಣ್ಣ ಹಣ ಆಸ್ತಿ ಗಳಿಸಲಿಲ್ಲ ಆದರೆ ಇಡೀ ದಕ್ಷಿಣ ಭಾರತ ರೈಲ್ವೆಯಲ್ಲಿ ಪ್ರಖ್ಯಾತಿಗಳಿಸಿದ್ದರು.

(ನಾಳೆ ಭಾಗ- 30)

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...