Skip to main content

ಭಾಗ -30, ಈಗ ಮುಂಡಗೋಡಿನಲ್ಲಿರುವ ಟಿಬೆಟ್ ಕ್ಯಾಂಪ್ ಮೊದಲಿಗೆ ಮಂಜೂರಾಗಿದ್ದು ಆನಂದಪುರಂನ ಕೆಂಜಿಗಾಪುರಕ್ಕೆ ಇದು ಮುಂಡಗೋಡಿಗೆ ಹೋಗಲು ಕಾರಣ ಕಾಗೋಡು ಹೋರಾಟದ ರೂವಾರಿ ಗಣಪತಿಯಪ್ಪರ ಹೋರಾಟ ಮತ್ತು ಆಗಿನ ಮುಖ್ಯಮಂತ್ರಿ ಕಡಿದಾಳು ಮಂಜಪ್ಪರ ಕೃಪೆ.

#ಭಾಗ_30.

#ಆನ೦ದಪುರಂನ_ಕೆಂಜಿಗಾಪುರ_ಟಿಬೆಟ್_ನಿರಾಶ್ರಿತರ_ಕೇಂದ್ರವಾಗಿ_ರಾಜ್ಯಸಕಾ೯ರ_ಘೋಷಿಸಿತ್ತು.

#ಇದನ್ನು_ಇಲ್ಲಿಂದ_ಮುಂಡಗೋಡಿಗೆ_ಬದಲಾಯಿಸಲು_ಕಾರಣ_ಕತ೯ರು_ಆಗಿನ_ಮುಖ್ಯಮಂತ್ರಿ_ಕಡಿದಾಳು_ಮಂಜಪ್ಪನವರು

#ಇದರ_ಬಗ್ಗೆ_ಆಗಿನ_ಮುಖ್ಯಮಂತ್ರಿ_ಕಡಿದಾಳು_ಮಂಜಪ್ಪರನ್ನು_ಮನವೊಲಿಸಿದ್ದು_ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ.

#ಕೆಂಜಿಗಾಪುರ_ಕೇಂದ್ರವಾಗಿ_ಯಡೇಹಳ್ಳಿ_ಇರುವಕ್ಕಿ__ಹೆಬ್ಬೋಡಿ_ಅಡೂರು_ತಾವರೇಹಳ್ಳಿಯ
#ಸುಮಾರು_5000_ಎಕರೆ_ಅರಣ್ಯ_ಭೂಮಿ_ಟಿಬೆಟ್_ನಿರಾಶ್ರಿತರಿಗೆ_ಗುರುತು_ಮಾಡಲಾಗಿತ್ತು.

#ಈ_ಕಾರಣದಿಂದ_ಯಡೇಹಳ್ಳಿ_ಶಾಲಾವರಣದ_ರಂಗಮಂದಿರಕ್ಕೆ
#ಕಾಗೋಡು_ಹೋರಾಟದ_ನೇತಾರ_ಗಣಪತಿಯಪ್ಪ_ರಂಗಮಂದಿರ_ಎಂದು_ನಾಮಕರಣ_ಮಾಡಲಾಗಿದೆ.

  ಆನಂದಪುರಂ ಸಮೀಪದ ಕೆಂಜಿಗಾಪುರ ವೀರಭದ್ರೇಶ್ವರ ದೇವಸ್ಥಾನ ಪುರಾತನ ಶಿಲಾಮಯ ದೇವಸ್ಧಾನ ಇದನ್ನು ವಿಜಯನಗರದ ಅರಸು ಪ್ರೌಡ ಪ್ರತಾಪ ರಾಯರು ಕ್ರಿ.ಶ.1419ರಲ್ಲಿ ನಿರ್ಮಿಸಿದ ಶಾಸನವಿದೆ, ಈ ವೀರಭದ್ರ ದೇವರ ಭಕ್ತರು ಅಸಂಖ್ಯ, ಪ್ರತಿ ವರ್ಷ ಹೋಳಿ ಹುಣ್ಣಿಮೆಯ ರಥೋತ್ಸವಕ್ಕೆ ಬಂದು ಸೇರುವ ಮತ್ತು ಕಾಣಿಕೆ ಸಲ್ಲಿಸುವ ಆಚರಣೆ ಇದೆ.
  ಇತ್ತೀಚಿಗೆ ಈ ದೇವಾಲಯ ಸಂಪೂರ್ಣ ನವೀಕರಣ ಆಗಿದೆ ಮತ್ತು ನೂತನ ಕಲ್ಯಾಣ ಮಂಟಪ ಕೂಡ ನಿರ್ಮಾಣ ಆಗುತ್ತಿದೆ ಇದಕ್ಕೆ ಮುಖ್ಯ ಕಾರಣ ಈ ದೇವರ ಭಕ್ತರೇ ಆದ ಸಮೀಪದ ತುಮರಿಕೊಪ್ಪದ ಬಂಗಾರಪ್ಪ ಗೌಡರ ಸೋದರರ ಪುತ್ರ ಮೇಘರಾಜ್ ಭಾರತೀಯ ಜನತಾ ಪಕ್ಷದಲ್ಲಿ ಮುಖ್ಯಮಂತ್ರಿ ಯಡೂರಪ್ಪರಿಗೆ ನಿಕಟವರ್ತಿ ಆಗಿರುವುದರಿಂದ ಯಡೂರಪ್ಪರಿಂದ ಕೋಟ್ಯಾಂತರ ರೂಪಾಯಿ ಅನುದಾನ ತರಲು ಸಾಧ್ಯವಾಯಿತು,ಈಗ ಮೇಘರಾಜ್‌ ಜಿಲ್ಲಾ ಬಾರತೀಯ ಜನತಾ ಪಕ್ಷದ ಜಿಲ್ಲಾ ಅಧ್ಯಕ್ಷರಾಗಿದ್ದಾರೆ.
  ಚೀನಾ ದೇಶದ ಅಕ್ರಮಣದಿಂದ ಟಿಬೆಟ್ ದೇಶದ ನಿರಾಶ್ರಿತ ಬೌದ್ದರು ದಲಾಯಿ ಲಾಮ ನೇತೃತ್ವದಲ್ಲಿ ಭಾರತದಲ್ಲಿ ಆಶ್ರಯ ಕೇಳಿದಾಗ ಆಗ ಕೇಂದ್ರ ಸರ್ಕಾರ ಇವರಿಗೆ ಆಶ್ರಯ ನೀಡಿ ಕೇಂದ್ರ ಟಿಬೆಟಿಯನ್ ಆಡಳಿತ ಮಂಡಳಿ ರಚಿಸಿ (CTA) ಟಿಬೆಟಿಯನ್ನರಿಗೆ ಹಿಮಾಚಲ ಪ್ರದೇಶದ ದರ್ಮಶಾಲ, ಮೈಸೂರಿನ ಬೈಲುಗುಪ್ಪೆ ಮತ್ತು ಕಾರವಾರದ ಮುಂಡಗೋಡುನಲ್ಲಿ ಅವರಿಗೆ ಅವಕಾಶ ಮಾಡಿದೆ.
  ಕಾರವಾರದ ಮುಂಡಗೋಡಿನಲ್ಲಿ 1960 ರಲ್ಲಿ CTA ಮನವಿ ಮೇರೆಗೆ ರಾಜ್ಯ ಸರ್ಕಾರ 4045 ಎಕರೆ ಅರಣ್ಯ ಭೂಮಿ ಮಂಜೂರು ಮಾಡಿದೆ ಅಲ್ಲಿ 1966 ರಲ್ಲಿ ಟಿಬೇಟ್ ಕ್ಯಾಂಪ್ ಪ್ರಾರಂಭ ಆಗಿ ಈಗ ಅಲ್ಲಿ ಶಾಲೆ, ಕಾಲೇಜು ಮತ್ತು ಆಸ್ಪತ್ರೆ ಹಾಗೂ ಬುದ್ದ ವಿಹಾರ ನಿರ್ಮಿಸಿದ್ದಾರೆ.
   ಮುಂಡಗೋಡಿಗಿಂತ ಮುಂಚೆ ಇವರಿಗೆ ಸುಮಾರು 5000 ಎಕರೆ ಅರಣ್ಯ ಭೂಮಿ ಆನಂದಪುರಂ ಕೆಂಜಿಗಾಪುರ ಕೇಂದ್ರವಾಗಿಸಿ ಯಡೇಹಳ್ಳಿ, ಇರುವಕ್ಕಿ, ಅಡೂರು, ಹೆಬೋಡಿ ಮತ್ತು ತಾವರೇಹಳ್ಳಿಗಳ ಪ್ರದೇಶ ಗುರುತು ಮಾಡಲಾಗಿತ್ತು.
  ಈ ಸಂದರ್ಭದಲ್ಲೇ ಸಾಗರ ತಾಲ್ಲೂಕಿನ ಶರಾವತಿ ಮುಳುಗಡೆ ಸಂತ್ರಸ್ಥರಿಗೆ ಪುನರ್ವಸತಿ ಮಾಡದೆ ರಾಜ್ಯ ಸರ್ಕಾರ ವಿಳಂಭ ಮಾಡುತ್ತಿದ್ದರಿಂದ ರಾಜ್ಯ ಸರ್ಕಾರದ ಗಮನ ಸೆಳೆಯಲು ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪನವರು ಕೆಂಜಿಗಾಪುರ ಭೂಮಿ ಹೋರಾಟ ಮಾಡುತ್ತಾರೆ, ಅವರು ಟಿಬೆಟ್ ನಿರಾಶ್ರಿತರ ಪುನರ್ ವಸತಿಗೆ ವಿರೋದಿಸುವುದಿಲ್ಲ ಆದರೆ ಈ ವಿಚಾರದ ಮೂಲಕ ಸರ್ಕಾರದ ಗಮನ ಸೆಳೆಯುವುದು ಗಣಪತಿಯಪ್ಪರ ಉದ್ದೇಶ ಆಗಿರುತ್ತದೆ.
   ಆಗ ಮುಖ್ಯಮಂತ್ರಿಗಳಾಗಿದ್ದ ಕಡಿದಾಳು ಮಂಜಪ್ಪರಿಗೆ ಶಿಷ್ಠ ಗಣಪತಿಯಪ್ಪರ ಮೇಲಿನ ಅಭಿಮಾನದಿಂದ ಕೆಂಜಿಗಾಪುರ ಟಿಬೆಟ್ ಕ್ಯಾಂಪ್ ಪ್ರಸ್ತಾವನೆ ರದ್ದು ಮಾಡಿ ಈಗಿನ ಮುಂಡಗೋಡಿಗೆ ವರ್ಗಾಯಿಸುತ್ತಾರೆ ಇದರಿಂದ ಕೆಂಜಿಗಾಪುರದ ದೇವಾಲಯದ ಕೆರೆ ಕೆಳಗಿನ ಜಮೀನುಗಳು ಶರಾವತಿ ಮುಳುಗಡೆ ಸಂತ್ರಸ್ಥರ ಜೊತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಜಮೀನು ಮಂಜೂರು ಆಯಿತು ಸುಮಾರು ಐದು ಸಾವಿರ ಎಕರೆ ಅರಣ್ಯ ಭೂಮಿ ಹಾಗೆಯೇ ಉಳಿಯಿತು.
  ಈ ಎಲ್ಲಾ ಕಾರಣದಿಂದ 1999 - 2000 ರಲ್ಲಿ ಯಡೇಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಅವರಣದಲ್ಲಿ ಬಯಲು ರಂಗಮಂದಿರ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನಿರ್ಮಿಸಿ ಕಾಗೋಡು ಹೋರಾಟದ ನೇತಾರ ಗಣಪತಿಯಪ್ಪರ ನಾಮಕರಣ ಮಾಡಿದೆವು ಆಗ ಈ ಶಾಲೆಯ ಮುಖ್ಯೋಪಾದ್ಯಾಯರಾಗಿದ್ದ ಮಹೇಶ್ ಎಲಿಗಾರ್ ಮತ್ತು ಆಗಿನ ಗ್ರಾ.ಪಂ.ಅಧ್ಯಕ್ಷರಾಗಿದ್ದ ಗಣಪತಿ ಹೆಚ್ಚಿನ ಸಹಕಾರ ನೀಡಿದ್ದರು, ಅವತ್ತಿನ ಕಾರ್ಯಕ್ರಮದಲ್ಲಿ ಸಮಾಜವಾದಿ ಲೇಖಕ ಕೋಣಂದೂರು ವೆಂಕಪ್ಪ ಗೌಡರು, ಮಾಜಿ ವಿದಾನ ಪರಿಷತ್ ಸದಸ್ಯರಾಗಿದ್ದ ಜಿ.ಮಾದಪ್ಪನವರು ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು ಗನ್ನಿ ಸಾಹೇಬರ ಅಧ್ಯಕ್ಷತೆಯಲ್ಲಿ ಗಣಪತಿಯಪ್ಪರಿಗೆ ಸನ್ಮಾನಿಸಿದ್ದು ಈಗ ನೆನಪಿಸಿಕೊಳ್ಳಲು ನಮಗೆಲ್ಲ ಹೆಮ್ಮೆಯ  ಸಂಗತಿ.

(ನಾಳೆ ಮುಂದಿನ ಭಾಗ -31)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ