Skip to main content

ಭಾಗ - 44, ಆನಂದಪುರಂ ಇತಿಹಾಸ, ಕೆಳದಿ ಅರಸ ವೀರಭದ್ರ ನಾಯಕರಿಂದ 1632 ರಲ್ಲಿ ನಿರ್ಮಾಣಗೊಂಡ ಆನಂದಪುರಂ ಜಾಮೀಯ ಮಸೀದಿ, ಟಿಪ್ಪು ಸುಲ್ತಾನರು ಪ್ರಾರ್ಥನೆ ಮಾಡಿದ ಮಸೀದಿ, ಮೈಸೂರು ಅರಸರು ಭೂದಾನ ನೀಡಿದ ದಾಖಲೆಗಳು ಇರುವ ಆನಂದಪುರಂ ಜಾಮೀಯ ಮಸೀದಿಗೆ 2032 ರಲ್ಲಿ ನಾಲ್ಕುನೂರನೇ ವಾರ್ಷಿಕೋತ್ಸವ.

#ಭಾಗ_44.
#ಆನಂದಪುರಂ_ಇತಿಹಾಸ.

#ಆನಂದಪುರಂ_ಜಾಮಿಯಾ_ಮಸೀದಿ_2032ಕ್ಕೆ_400_ವರ್ಷ_ಆಗಲಿದೆ.

#ಕೆಳದಿ_ಅರಸರು_ನಿರ್ಮಿಸಿ_12_ವರಹ_ಭೂಮಿ_ದಾನವೂ_ನೀಡಿದ್ದರು.

#ಟಿಪ್ಪೂಸುಲ್ತಾನರು_ಈ_ಮಸೀದಿಯಲ್ಲಿ_ಪ್ರಾರ್ಥನೆ_ಮಾಡಿದ್ದರು.

#ಕೆಳದಿ_ಅರಸರ_ದಾರ್ಮಿಕ_ಸೌಹಾದ೯ತೆಗೆ_ಪ್ರತೀಕ_ಆನಂದಪುರಂ_ಮಸೀದಿ.

#ಮೈಸೂರು_ರಾಜರು_1872ರಲ್ಲಿ_ಮಸೀದಿಗೆ_ಬೇಟಿನೀಡಿದ_ಸಂದರ್ಭದಲ್ಲಿ_2ಎಕರೆ7ಗುಂಟೆ_ತರಿಜಮೀನು_ದಾನನೀಡಿದ್ದರು.

  ಆನಂದಪುರಂ ಇತಿಹಾಸ ಸುತ್ತ ಮುತ್ತಲಿನ ಬೇರಾವುದೇ ಊರಿಗಿಂತ ಹೆಚ್ಚು ಇತಿಹಾಸದ ಪುಟದಲ್ಲಿ ದಾಖಲಾಗಿದೆ, ಹೆಚ್ಚಿನ ಅಧ್ಯಯನ ಮತ್ತು ಸ೦ಶೋದನೆಯಿಂದ ಇನ್ನೂ ಹೆಚ್ಚು ಹೆಚ್ಚು ಮಾಹಿತಿ ದೊರೆಯುವುದು ಖಚಿತ.
  ಆನಂದಪುರಂ ಜಾಮಿಯಾ ಮಸೀದಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಮೊಗ್ಗದಿಂದ ಸಾಗರ ಕಡೆ ಹೋಗುವಾಗ ಎಡ ಭಾಗದಲ್ಲಿ ಬೃಹತ್ ಜೋಡಿ ಮಿನಾರ್ ಗಳಿಂದ ನವೀಕರಣಗೊಂಡು ನಮಾಜು ನಡೆಯುತ್ತಿದೆ ಇದರ ಎದುರಿಗೇ ವಿದ್ಯಾ ಮಂತ್ರಿ ಆಗಿದ್ದ ಸ್ಥಳಿಯ ಕೊಡುಗೈ ದಾನಿ ಜಮೀನ್ದಾರರು, ಆನಂದಪುರಂ ಕನಕಮ್ಮಾಳ್ ಆಸ್ಪತ್ರೆ ನಿರ್ಮಿಸಿದ ದಾನಿ ರಾಮಕೃಷ್ಣ ಅಯ್ಯಂಗಾರ್ ಪುತ್ರ ಬದರಿನಾರಾಯಣ ಅಯ್ಯಂಗಾರ್ ಪ್ರಾಥಮಿಕ ಶಿಕ್ಷಣ ಪಡೆದ ಪ್ರಾಥಮಿಕ ಶಾಲೆ ಇದೆ.
  ಆನಂದಪುರಂ ಜಾಮಿಯಾ ಮಸೀದಿ ಉಲ್ಲೇಖ ಕೆಳದಿ ಶಾಸನದಲ್ಲಿರುವಂತೆ 1632 ರಲ್ಲಿ ಕೆಳದಿ ರಾಜ ವೀರಭದ್ರನಾಯಕರು (ಆಳ್ವಿಕೆ 1629-1945)  ಮಲವಕೊಪ್ಪದ ತಾವರೇಕೆರೆ ಸಮೀಪ (ಈಗಿನ ಮಸೀದಿ ಸ್ಥಳಕ್ಕೆ ಆಗ ಕರೆಯುತ್ತಿದ್ದ ಹೆಸರು) ನಿರ್ಮಿಸಿ ಮಸೀದಿಯ ದಾರ್ಮಿಕ ಸೇವೆಗಾಗಿ ಯಡೇಹಳ್ಳಿಯ ತಾವರೆಕೆರೆ ಸಮೀಪ (ಈಗಿನ ಯಡೇಹಳ್ಳಿ ಗೌರಿಕೆರೆ ಕೆಳಗಿನ ಗುಂಡಿಬೈಲಿನಲ್ಲಿ) 12 ವರಹಾ ಭೂಮಿ ದಾನ ಮಾಡಿದ ಉಲ್ಲೇಖವಿದೆ.
  ಆನಂದಪುರಂ ಕೋಟೆಯನ್ನು ಟಿಪ್ಪು ಸುಲ್ತಾನರ ಸೇನಾಧಿಕಾರಿ ಮತ್ತು ಕೆಳದಿ ರಾಜದಾನಿ ಬಿದನೂರಿನ ಆಡಳಿತಾಧಿಕಾರಿ ಹಯಾತ್ ಖಾನ್ ರಿಂದ ವಶಪಡಿಸಿ ಕೊಂಡ ಬ್ರಿಟೀಶ್ ತುಕಡಿ ನಂತರ ಅವರುನಡೆಸಿದ ಬೇಕರ ಹತ್ಯಾಕಾಂಡದಿಂದ ಆನಂದಪುರಂ ನಲ್ಲಿ ಸೈನಿಕರಲ್ಲದೆ ಸುಮಾರು ನಾನೂರು ಸ್ತ್ರಿಯರ ಹತ್ಯೆ ಮಾಡಿದ ವಿಚಾರ ತಿಳಿದ ಟಿಪ್ಪು ಸುಲ್ತಾನ್ ತನ್ನ ಸೈನ್ಯ ಕಳಿಸಿ ಆನಂದಪುರಂ ಕೋಟೆ ಪುನಃ ವಶಪಡಿಸಿಕೊಂಡು ಬ್ರಿಟೀಷ್ ಸೈನ್ಯದ ಮುಖಂಡ ಜನರಲ್ ಮ್ಯಾಥ್ಯೂ ಮತ್ತು ಸಂಗಡಿಗರನ್ನು ಹೆಡೆಮುರಿ ಕಟ್ಟಿ ಶ್ರೀರಂಗಪಟ್ಟಣದ ಜೈಲಿನಲ್ಲಿ ಬಂದಿಸಿಟ್ಟು ಕಾಲಾಪಾನಿ ಶಿಕ್ಷೆಯ ಮರಣದಂಡನೆ ನೀಡಿದ್ದು ಇತಿಹಾಸದಲ್ಲಿ ದಾಖಲಾಗಿದೆ.
  ಈ ಘಟನೆ ನಂತರ ಟಿಪ್ಪು ಸುಲ್ತಾನ್ ಆನಂದಪುರಂಗೆ ಬಂದು ಜಾಮಿಯಾ ಮಸೀದಿಯಲ್ಲಿ ಪ್ರಾರ್ಥನೆ ಮಾಡಿ ಹೊರಬಂದಾಗ ಆನಂದಪುರಂನ ಅಗ್ರಹಾರದ ಬ್ರಾಹ್ಮಣರು ಟಿಪ್ಪು ಸುಲ್ತಾನರಿಗೆ ರಂಗನಾಥ ಸ್ವಾಮಿ ದೇವಾಲಯಕ್ಕೆ ಆಹ್ವಾನಿಸುತ್ತಾರೆ (ಹಿಂದಿನ ರಾತ್ರಿಯೇ ಕೋದಂಡರಾಮ ದೇವರನ್ನು ರಂಗನಾಥ ಅಂತ ಮರು ನಾಮಕರಣ ಮಾಡಿರುತ್ತಾರೆ) ಟಿಪ್ಪು ಸುಲ್ತಾನರು ರಂಗನಾಥ ಸ್ವಾಮಿ ದೇವಾಲಯ ಸಂದರ್ಶಿಸಿ ನಂತರ ಆನಂದಪುರಂ ಕೋಟೆಗೆ ಬೇಟಿ ನೀಡಿ ಬಿದನೂರು ರಾಜಧಾನಿಗೆ ತಲುಪುತ್ತಾರೆ.
  1872 ರಲ್ಲಿ ಮೈಸೂರು ಅರಸರು ಆನಂದಪುರಂ ಇಕ್ಕೇರಿ ಬೇಟಿಯ ಸವಾರಿ ಬಂದಾಗ ಆನಂದಪುರಂ ಜಾಮೀಯ ಮಸೀದಿಯಲ್ಲಿ ಅವರನ್ನು ಸ್ವಾಗತಿಸಿ ಗೌರವಿಸಿದಾಗ ಅರಸರು ಆಚಾಪುರ ಗ್ರಾಮದಲ್ಲಿ 2 ಎಕರೆ 7 ಗುಂಟೆ ತರಿ ಜಮೀನು ದಾನವಾಗಿ ನೀಡಿದ ದಾಖಲೆ ಇದೆ.
  ಮೈಸೂರು ಸರ್ಕಾರ 1958ರಲ್ಲಿ ಮಸೀದಿ ಆಸ್ತಿಯನ್ನು ಮುಜರಾಯಿ ಇಲಾಖೆಯಿಂದ ಪ್ರತ್ಯೇಕ ಬೋರ್ಡ್ ರಚಿಸಿ ಅದರ ಸುಪರ್ಧಿಗೆ ನೀಡಿತು, ಇದರಿಂದ ಮಸೀದಿ ಕಮಿಟಿ ರಚಿಸಿ ಪ್ರತಿ ವರ್ಷ ವಕ್ಪ್ ಬೋರ್ಡ್ ಗೆ ವಾರ್ಷಿಕ ಲೆಖ್ಖ ಪತ್ರ ಸಲ್ಲಿಸುವ ಕಾನೂನು ಜಾರಿ ಆಯಿತು.
  ಸದರಿ ಆದೇಶದಂತೆ ಆನಂದಪುರಂ ಜಾಮೀಯ ಮಸೀದಿಗೆ ಮೊದಲ ಅಧ್ಯಕ್ಷರಾದವರು ಶ್ರೀಯುತ ತಾಜ್ ಷೀರ್ ಸಾಬ್, ಎರಡನೆ ಅಧ್ಯಕ್ಷರು ತಾವರೆ ಹಳ್ಳಿ ಸ್ಯೆಯದ್ ಅಹಮದ್ ಸಾಬ್ ಮೂರನೇ ಅಧ್ಯಕ್ಷರಾಗಿ ದಾಸಕೊಪ್ಪದ ಸ್ಯೆಯದ್ ಅಮೀರ್ ಸಾಬ್, ನಾಲ್ಕನೇ ಅಧ್ಯಕ್ಷರಾಗಿ ಅಬ್ದುಲ್ ಯಹ್ಯಾ ಸಾಬ್ (1968 ರಿಂದ 1988) ನಂತರದ ಐದನೇ ಅಧ್ಯಕ್ಷರಾಗಿ ಅಬ್ದುಲ್ ವಾಜೀದ್ ಸಾಬ್ ಆರನೇ ಅಧ್ಯಕ್ಷರಾಗಿ ಟಿಪ್ ಟಾಪ್ ಹಸನರ್ ಸಾಬ್ (ಸಾಗರದ ಟಿಪ್ ಟಾಪ್ ಇಬ್ರಾಹಿ೦ ಸಾಬ್ ರ ಸಹೋದರ) ಹಾಲಿ ಈಗಿನ ಏಳನೆ ಅಧ್ಯಕ್ಷರಾಗಿ ಯಡೇಹಳ್ಳಿಯ ನಗರದ ಬುಡನ್ ಸಾಬ್ ರ ಮೊಮ್ಮಗ ಮತ್ತು ಹಸನ್ ಸಾಹೇಬರ ಮಗ ಉದ್ಯಮಿ ಶೇಖ್ ಉಮ್ಮರ್ ಸಾಬ್ (ಯಡೇಹಳ್ಳಿ ಶೇಖ್ ಆಹಮದ್ ಮತ್ತು ಶೇಖ್ ಅಮೀರ್ ಸಹೋದರ) ಇದ್ದಾರೆ.
 ವಾಜೀದ್ ಸಾಬ್ ಮತ್ತು ಹಸನರ್ ಸಾಬ್ ಅಧ್ಯಕ್ಷರಾಗಿದ್ದಾಗ ಅವರಿಗೆಲ್ಲ ಯಡೇಹಳ್ಳಿಯ ಹಾಜಿ ಅಬ್ದುಲ್ ಗನ್ನಿಸಾಬ್ ರ ಸಹಕಾರ ಹೆಚ್ಚು ನೀಡಿದ್ದರೆಂದು ಸ್ಮರಿಸುತ್ತಾರೆ
  ಆಯಾ ಕಾಲದ ಕಮಿಟಿಯ ಆಡಳಿತದಲ್ಲಿ ಅಭಿವೃದ್ದಿ ಕಾಣುತ್ತಿರುವ ಆನಂದಪುರಂ ಜಾಮಿಯಾ ಮಸೀದಿ ಕೇವಲ ಪ್ರಾರ್ಥನ ಮಂದಿರ ಮಾತ್ರವಲ್ಲ ಕೆಳದಿ ಅರಸರ, ಟಿಪ್ಪು ಸುಲ್ತಾನರ ಮತ್ತು ಮೈಸೂರು ಅರಸರ ಕೃಪಕಟಾಕ್ಷ ಪಡೆದ ಐತಿಹಾಸಿಕವಾದ ಮೌಲ್ಯಗಳುಳ್ಳ ಜಾಮೀಯಾ ಮಸೀದಿ ಆಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...