Skip to main content

ರೂಪಾ೦ತರಕಾರಿ ಕೊರಾನಾ ಎರಡನೆ ಅಲೆಗೆ ಜೀವ ತೆತ್ತ ಯುವಕ ಕಂಚಾಳಸರ ಗಣಪತಿ ( 45 ವರ್ಷ) ಗೆ ಶ್ರದ್ದಾಂಜಲಿಗಳು, ಮೈ ಮರೆಯದೇ ಜನ ಜಾಗೃತರಾಗಿರಬೇಕು.

#ಶ್ರದ್ಧಾ೦ಜಲಿಗಳು

#ಆನಂದಪುರಂ_ಸಮೀಪದ_ಕಂಚಾಳಸರದ_ಗಣಪತಿ.
  
   ಗೌತಮಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಾಳಸರದ ಯಲಂದೂರು ನಾರಾಯಣಪ್ಪರ ದೊಡ್ಡ ಮಗ ಗಣಪತಿ 45 ವರ್ಷ ಕೊರಾನದಿಂದ ಮೃತರಾದ ಸುದ್ದಿ ಗೌತಮಪುರ ಗ್ರಾ.ಪಂ.ಮಾಜಿ ಅಧ್ಯಕ್ಷ ಸಂಗಣ್ಣನ ಕೆರೆ ಹಿರಿಯಣಪ್ಪ ನಿನ್ನೆ ತಿಳಿಸಿದಾಗ ತುಂಬಾ ಬೇಸರ ಆಯಿತು.
   ಇವರ ತಂದೆ ನಮ್ಮ ಅಕ್ಕಿ ಗಿರಣಿ ಇದ್ದಾಗ ಅಕ್ಕಿ ಮಾಡಿಸಲು ಎತ್ತಿನಗಾಡಿಯಲ್ಲಿ ಬರುವಾಗ ಗಣಪತಿ ಸಣ್ಣ ಚುರುಕಿನ ಸುಂದರ ಬಾಲಕ.
   ಅಂಬ್ಲಿಗೋಳ ದಟ್ಟ ಅರಣ್ಯದ ಮಧ್ಯದ ಸಣ್ಣ ಹಳ್ಳಿ ಕಂಚಾಳಸರ ಮುಖ್ಯ ಸಾರಿಗೆ ಸಂಪರ್ಕದ ರಸ್ತೆಗೆ ಸುಮಾರು 8 ಕೀ ಮಿ ಒಳಗಿದೆ, ಕೊರಾನಾ ರೂಪಾಂತರಗೊಂಡು ಸಣ್ಣ ವಯಸ್ಸಿನವರನ್ನೆ ಬಲಿ ಪಡೆಯುತ್ತಿರುವುದು ಅಪಾಯಕಾರಿ ಮುನ್ಸೂಚನೆ.
    18 ವರ್ಷ ಮೇಲ್ಪಟ್ಟ 45 ವರ್ಷದ ಒಳಗಿನವರಿಗೆ ಸಿಗದ ಲಸಿಕೆ ಕಾರಣದಿಂದ ಯುವಜನತೆ ಹೆಚ್ಚು ಜಾಗೃತರಾಗಬೇಕಾದ ಅನಿವಾಯ೯ತೆ ಇದೆ.
   "ಕೊರಾನಾ ಎಲ್ಲಿದೆ? ಅನ್ನುವ ವಿತಂಡವಾದ, ಸಣ್ಣ ವಯಸ್ಸಿನವರಿಗೆ ಕೊರಾನಾ ಬರುವುದಿಲ್ಲ, ನಮ್ಮದು ಹಳ್ಳಿ ದಟ್ಟ ಅರಣ್ಯದ ಮಧ್ಯ ಇದೆ ಕೊರಾನಾ ಇಲ್ಲ, ಮಾಸ್ಕ್ ಬೇಕಾಗಿಲ್ಲ, ಎಲ್ಲಾ ಸುಳ್ಳು" ಇತ್ಯಾದಿ ವಾದ ಮಾಡುವ ಕಾಲ ಅಲ್ಲ ಇದು.
  ಹೊರಗಿನ ಜನಸಂಪರ್ಕ ಮಾಡುವವರು ಮಾಸ್ಕ್ ಹಾಕುವುದರಿಂದ ಸೋಂಕು ತಗಲುವುದಿಲ್ಲ, ಮಾಸ್ಕ ಹಾಕದಿದ್ದರೆ ಸೋಂಕು ತಗಲುತ್ತದೆ, ತಗಲಿಸಿಕೊಂಡವರ ಅದೃಷ್ಟ ಇದ್ದರೆ ( ನಿರೋದಕ ಶಕ್ತಿ ಇದ್ದರೆ) ತೊಂದರೆ ಆಗದಿರಬಹುದು ಆದರೆ ಇವನಿಂದ ಯಾರ ಸಂಪರ್ಕ ಮಾಡದ ಮನೆಯ ಹಿರಿ ಕಿರಿಯರು ಅಪಾಯಕ್ಕೆ ಗುರಿ ಆಗಬಹುದು, ಅಷ್ಟೇ ಅಲ್ಲ ಇವರ ಸಂಪರ್ಕಕ್ಕೆ ಬರುವ ನೂರಾರು ಜನರಿಗೆ ಕಾಯಿಲೆ ಹರಡುತ್ತಾ ಇಡೀ ಸಮಾಜಕ್ಕೆ ಕಂಟಕಕ್ಕೆ ಕಾರಣ ಆಗುತ್ತಾನೆ (Super spreader).
  ಮಾಸ್ಕ್ ಧರಸಿಯೂ ಕೈಯನ್ನು ಸೋಪಿನಿಂದ ತೊಳೆಯದೇ (ಅಥವ ಸ್ಯಾನಿಟೈಸರ್ ಬಳಸದೇ) ಮುಖ, ಕಣ್ಣು, ಮೂಗು ಮತ್ತು ಬಾಯಿಗೆ ತಾಗಿಸಿದರೆ ಕೊರಾನ ಸುಲಭವಾಗಿ ದೇಹ ಸೇರುತ್ತದೆ ಆದ್ದರಿಂದ ಕನಿಷ್ಟ ಮಾಸ್ಕ್ ಸ್ಯಾನಿಟೈಸರ್ ಗಳಿಂದಲೇ ನಾವು ಕೊರಾನಾದಿಂದ ಸಲೀಸಾಗಿ ಬಚಾವಾಗಬಹುದು. ಜೊತೆಗೆ ನಿಮ್ಮಮನೆಯ ಗೇಟ್ ಮತ್ತು ಬಾಗಿಲಿಗೆ ಬೀಗ ಹಾಕಿ, ಬೇರೆಯವರೂ ನಿಮ್ಮ ಮನೆಯ ಒಳಗೆ ಬರುವುದು ಬೇಡ ಹಾಗೆಯೇ ನೀವು ಕೂಡ ಬೇರೆಯವರ ಮನೆಗೆ ಹೋಗುವುದು ಬೇಡ.
   ಈ ಮೂಲಕ ನಿಮ್ಮ ಮನೆಯ #ಆರೋಗ್ಯರಕ್ಷಾಕವಚ ನಿರ್ಮಿಸಿಕೊಂಡರೆ ಈ ಗಂಡಾಂತರಕಾರಿ ಕೊರಾನದ ಮುಂದಿನ ಅಪಾಯಕಾರಿ ಅಲೆ ಸುಲಭದಲ್ಲಿ ಎದುರಿಸಬಹುದು.
  ಶಿವಮೊಗ್ಗದ ನಾರಾಯಣ ಹೃದಯಾಲಯ, ಸಜಿ೯ ಮುಂತಾದ ಆಸ್ಪತ್ರೆಯಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಲಭ್ಯವಿದೆ (680 ರೂಪಾಯಿ ಪಾವತಿ ಮಾಡಬೇಕು) ತಕ್ಷಣ ಪಡೆಯುವವರು 
https://www.cowin.gov.in/home

ಈ ಲಿಂಕ್ ನಲ್ಲಿ ಮೊದಲು ಪೋನ್ ನಂಬರ್ ಮತ್ತು ಆದಾರ ಕಾರ್ಡ್ ನಮೂದಿಸಿ  ರಿಜಿಸ್ಟರ್ ಮಾಡಬೇಕು ನಂತರ ದಿನಾಂಕ ಮತ್ತು ಸಮಯ (ಶೆಡ್ಯೂಲ್ ) ಲಸಿಕೆ ಲಭ್ಯದ ಆದಾರದಲ್ಲಿ ನಿಗದಿ ಮಾಡಿ ಅಲ್ಲಿಗೆ ಹೋಗಿ ಲಸಿಕೆ ಪಡೆಯಬಹುದು.
  ಸರ್ಕಾರದಿಂದ ಲಸಿಕೆ 18 ವರ್ಷ ಮೇಲ್ಪಟ್ಟವರಿಗೆ ಸದ್ಯದಲ್ಲೆ ಎಲ್ಲಾ ಸ್ಥಳಿಯ ಆರೋಗ್ಯ ಕೇಂದ್ರದಲ್ಲಿ ಲಭ್ಯವಾಗಲಿದೆ ಎನ್ನುವ ಮಾಹಿತಿ ಇದೆ.
(ದಯಮಾಡಿ ಹೆಚ್ಚು ಜನರಿಗೆ ಮಾಹಿತಿಗಾಗಿ ಶೇರ್ ಮಾಡಿ)
  ದಯಮಾಡಿ ನಿರ್ಲಕ್ಷಿಸದೆ ಕುಟುಂಬದ ಆದಾರ ಸ್ಥಂಭವಾದವರನ್ನು ರಕ್ಷಿಸಿಕೊಳ್ಳಲು ಮರೆಯಬೇಡಿ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...