Skip to main content

#ಚOಪಕ ಸರಸ್ಸು ಕೆಳದಿ ರಾಣಿಯ ದುರಂತ ಪ್ರೇಮಕಥೆಯ ಸ್ಮಾರಕ ಜೋಗಿ ಜನಪದ ಸಂಗೀತ ಕಲಾವಿದ ನಾಗರಾಜ ತೋOಬ್ರಿ ಧ್ವನಿಯಲ್ಲಿ ಮತ್ತು ಕಿನ್ನರಿಯ ನಾದದೊಂದಿಗೆ #

ಜೋಗಿ ಜನಪದ ಸಂಗೀತ ಕಲಾವಿದ ಜಿ.ನಾಗರಾಜ ತೋoಬ್ರಿ.
ಆನoದಪುರದ ಚಂಪಕ ಸರಸ್ಸು ಎಂಬ ಸುಂದರ ಕೊಳ, ಸ್ವಾಗತಿಸುವ ಕಲಾತ್ಮಕ ಕಲ್ಲಿನ ಜೋಡು ಆನೆ, ಕೊಳದ ಮದ್ಯದ ದೇವಾಲಯ, ಸುತ್ತುವರಿದ ಪಗಾರ, ದೇವರ ಕಣ್ಣು ಚಲನ ಚಿತ್ರದಲ್ಲಿ ಪ್ರಖ್ಯಾತ ಚಲನ ಚಿತ್ರಗೀತೆ "ಓ ಇನಿಯಾ ನೀ ಎಲ್ಲಿರುವೆ" ಹಾಡು 1970 ರ ದಶಕದಲ್ಲಿ ಚಿತ್ರಿಕರಣ ಆದ ಸ್ಥಳ ಈಗ ಪಾಳು ಬೀಳುವುದನ್ನ ಸ್ಥಳಿಯ ಕ್ರೀಯಾ ಶೀಲ ಯುವ ಪಡೆ ಪ್ರತಿ ವಷ೯ ಶ್ರಮದಾನದಿಂದ ಪ್ರವಾಸಿಗರ ವೀಕ್ಷಣೆಗೆ, ಸ್ಥಳಿಯರ ಈಜು ತರಬೇತಿಗೆ ವ್ಯವಸ್ಥೆಗೆ ಅನುವು ಮಾಡಿ ಸಾವ೯ಜನಿಕರ ಪ್ರಶಂಸೆಗೆ ಕಾರಣರಾಗಿದ್ದಾರೆ.
    ಚಂಪಕ ಸರಸ್ಸು ಅಂದರೇನು? ಚಂಪಕ ಯಾರು ಎನ್ನುವ ಚಚೆ೯ ಆಗಾಗ್ಗೆ ಮುನ್ನಲೆಗೆ ಬಂದು ಮರೆತು ಹೋಗುತ್ತಿದೆ.
  ಆನಂದಪುರದ ಹಿಂದುಳಿದ ಜಾತಿಯ ಸುಂದರ ತರುಣಿ ಚOಪಕಳು ಪ್ರತಿ ದಿನ ಮುಂಜಾನೆ  ರಾಜ ವೆಂಕಟಪ್ಪ ನಾಯಕ ಸಾಗಿ ಹೋಗುವ ರಾಜ ಮಾಗ೯ದ ಇತಿ ಹಾಸ ಪ್ರಸಿದ್ಧ ಗಂಗಾ ಮಠದ ಎದುರಿನ ಮನೆಯವಳು, ರಾಜರ ಸ್ವಾಗತಕ್ಕೆ ದಿನಕ್ಕೆ ಒಂದೊಂದು ರೀತಿ ಸುಂದರ ರಂಗೋಲಿ ಬಿಡಿಸಿ ಮರೆಯಲ್ಲಿ ವೀಕ್ಷಿಸುತ್ತಿದ್ದಳು ರಾಜ ವೆಂಕಟಪ್ಪ ನಾಯಕ ಗಂಗಾಮಠದ ಗಂಗಾಮಾತೆಗೆ ಬಲಕ್ಕೆ ತಿರುಗಿ ಕುದುರೆ ಮೇಲಿಂದ ತಲೆಬಾಗಿ ವ೦ದಿಸುವುದು ನಂತರ ಎಡಕ್ಕೆ ತಿರುಗಿ ಸುಂದರ ರಂಗೋಲಿ ವೀಕ್ಷಿಸುವುದು ಪದ್ದತಿ ಆಗಿ ಇದು ಪ್ರೇಮ ಕಥೆಗೆ ಕಾರಣವಾಗಿ ರಾಜವೆಂಕಟಪ್ಪ ನಾಯಕರು ಚಂಪಕಳನ್ನ ವರಸಿ ವಿವಾಹವಾಗಿ ಆನಂದಪುರದ ಕೋಟೆಯ ಅರಮನೆಯಲ್ಲಿ ಇರಿಸುತ್ತಾರೆ ಚಂಪಕಳ ವಿವಾಹ ಕಾರಣದಿಂದ ಯಡೇಹಳ್ಳಿ ಕೋಟೆ ಎಂದಿದ್ದ ಹೆಸರನ್ನ ಆನಂದಪುರ ಎಂದು ಕರೆಯುತ್ತಾರೆ.
  ಪಟ್ಟದ ರಾಣಿ ಭದ್ರಮ್ಮಅನ್ಯ ಜಾತಿಯ  ಚಂಪಕಳನ್ನ ಸಹಿಸದೆ ಅನ್ನಹಾರ ತ್ಯಜಿಸಿ ಜೀವ ತ್ಯಾಗ ಮಾಡುತ್ತಾರೆ ಇದರಿ೦ದ ರಾಜ ವೆಂಕಟಪ್ಪ ನಾಯಕರಿಗೆ ಪ್ರಜೆಗಳಲ್ಲಿ ಅಪಕೀತಿ೯ ಉಂಟಾಗುತ್ತದೆ ಇದರಿ೦ದ ನೊಂದ ಚಂಪಕ ಹಾಲಿನಲ್ಲಿ ವಜ್ರದ ಪುಡಿ ಬೆರಸಿ ಸೇವಿಸಿ ಜೀವ ಹಾನಿ ಮಾಡಿಕೊಳ್ಳುವ ದುರಂತ ಪ್ರೇಮ ಕಥೆ ಜನ ಮಾನಸದಿಂದ ಅಳಿಸಿ ಹೋಗಿದೆ.
   ಚಂಪಕಳ ಸ್ಮರಣಾಥ೯ ರಾಜ ವೆಂಕಟಪ್ಪ ನಾಯಕರು ಆನಂದಪುರದ ಸಮೀಪದಲ್ಲಿ ನಿಮಿ೯ಸಿರುವ ಸ್ಮಾರಕವೇ ಚಂಪಕ ಸರಸ್ಸು.
  ಸರಸ್ಸು ಅಂದರೆ ಕೊಳ, ಕೆಳದಿ ರಾಜ್ಯ ದೀಘ೯ವಾಗಿ ಆಳಿದವರು ರಾಜ ವೆಂಕಟಪ್ಪ ನಾಯಕ, ಸಾಗರ ಪಟ್ಟಣ ನಿಮಿ೯ಸಿದವರು, ಕೋಟೆ ಕೊತ್ತಲ ದೇವಾಲಯಗಳು ಇವರ ಕಾಲದಲ್ಲಿ ನಿಮಾ೯ಣ ಆಯಿತು ಆದರೆ ಕೆಳದಿ ರಾಜರಲ್ಲಿ ಶಿವಪ್ಪ ನಾಯಕ ಮತ್ತು ರಾಣಿ ಚೆನ್ನಮ್ಮ ಮಾತ್ರ ನಮಗೆ ಹೆಚ್ಚು ಪರಿಚಯಿಸುವ ಸಾಹಿತ್ಯಗಳು ಬಂದು ಪ್ರಖ್ಯಾತ ಕೆಳದಿ ಅರಸ ರಾಜ ವೆಂಕಟಪ್ಪ ನಾಯಕ ತೆರೆಮರೆಗೆ ಸರಿಸಿದ್ದೇವೆ.
   ಆನಂದಪುರ ಸುತ್ತಮುತ್ತಲಿನ ಲಾವಣಿಗಳಲ್ಲಿ ಇದ್ದ ಚಂಪಕ ವೃತ್ತಾ೦ತ ಬೇಸಾಯದ ನಾಟಿಗಳಲ್ಲಿ ಹಾಡಿ ಕಣ್ಣಿರಾ ಗುತ್ತಿದ್ದರು ಹೆಣ್ಣು ಮಕ್ಕಳು ಈಗ ಅದು ಮರೆತು ಹೋಗಿದೆ ಅದನ್ನ ಸ್ವಲ್ಪ ಸ್ವಲ್ಪ ಪತ್ತೆ ಮಾಡಿ ನಾನು ಬರೆದಿಟ್ಟಿದ್ದು ಖ್ಯಾತ ಜೋಗಿ ಪದಗಾಯಕ, ಕಲಾವಿದ ಉತ್ಸಾಹಿ ತರುಣ ತೊ೦ಬ್ರಿ ನಾಗರಾಜರಿಗೆ ನೀಡಿದ್ದೆ ಅದನ್ನ ಅವರು ಹಾಡಿ ವಿಡಿಯೋ ಕಳಿಸಿದ್ದಾರೆ, ಉಳಿದ ಅದ೯ ಭಾಗ ನನ್ನಲ್ಲಿ ಇದೆ ಅದನ್ನು ಸೇರಿಸಿ ಹಾಡಿದರೆ ಚಂಪಕ ಚರಿತೆ ಆದೀತು.
  ರಾಣಿ ಚOಪಕಳ ಮತ್ತು ರಾಜ ವೆಂಕಟಪ್ಪ ನಾಯಕರ ದುರOತ ಪ್ರೇಮಕಥೆಯ ಕಾದಂಬರಿ ನಾನು ಬರೆದು ಕೆಲವಷ೯ ಆಯಿತು ಆದರೆ ಅದನ್ನ ಅಚ್ಚಿಸಲು ಆಗಿಲ್ಲ ಇತ್ತೀಚಿಗೆ ಊರ ಯುವಕರು ಚಂಪಕ ಸರಸ್ಸು ಬಗ್ಗೆ ಆಸಕ್ತಿವಹಿಸುತ್ತಿರುವುದು, ಕಲಾವಿದ ನಾಗರಾಜ್ ಹಾಡುತ್ತಿರುವುದ ನೋಡಿ ರಾಣಿ ಚಂಪಕ ಕಾದಂಬರಿ ಹೊರ ತರುವ ಹುಮ್ಮಸ್ಸು ಬಂದಿದೆ.
 ನನ್ನ ಒಂದು ರೆಸ್ಟೋರೆಂಟ್ ಗೆ  2013ರಲ್ಲಿ "ಚಂಪಕ ಪ್ಯಾರಾಡೈಸ್ " ಎಂದು ನಾಮಕರಣ ಚಂಪಕಳ ನೆನಪಿಗಾಗಿ ಮಾಡಿದ್ದು ಈ ಸಂದಭ೯ದಲ್ಲಿ ನೆನಪಾಯಿತು.
  ದೀಘ೯ ಲೇಖನ ಆಯಿತು ಕಾರಣ ಇದು ನಮ್ಮ ಊರು ಆನಂದಪುರದ ಇತಿಹಾಸ ಆದ್ದರಿಂದ.
https://m.facebook.com/story.php?story_fbid=2833900943310726&id=100000725455473&sfnsn=scwspmo&d=n&vh=i
  ಆದಶ೯ ಹುOಚ ಇವರು ಬರೆದ ಮಾಹಿತಿ ಕೂಡ ಇಲ್ಲಿದೆ
 ಅಲ್ಲಿ ಸ್ಥಾಪಿತವಾಗಿರುವ ಆನೆಗಳಲ್ಲಿ ಒಂದು ಗಂಡಾನೆಯಾಗಿದ್ದು ವೆಂಕಟಪ್ಪ ನಾಯಕ ಮತ್ತು ಇನ್ನೊಂದು ಹೆಣ್ಣಾಗಿದ್ದು ಚಂಪಕ ಅರಸಿಯ ನೆನಪಿಗೆ ವೆಂಕಟಪ್ಪ ನಾಯಕ ನಿಲ್ಲಿಸಿ ಸತ್ತ ನಂತರ ಜನಮಾನಸದಲ್ಲಿ ಅವರ ನೆನಪು ಉಳಿಯಲಿ ಎಂದು ಹಾರೈಸಿದ್ದನಂತೇ.‌....
ಮೊಘಲ್ ದೊರೆಗಳು ಗುಲಾಬಿಯನ್ನು ಪ್ರೀತಿಯ ಸಂಕೇತ ವನ್ನಾಗಿ ಮಾಡುವ ಮೊದಲು ಕಮಲ ಪ್ರೀತಿಯ ಸಂಕೇತವಾಗಿತ್ತು...ಅರಳಿದ ಕಮಲ ಗಂಡಾನೆ ಬಳಿ ಇದ್ದು ಮೊಗ್ಗು ಕಮಲ ಹೆಣ್ಣಾನೆ ಬಳಿ ಇದೆ.....ಗಂಡನ್ನು ಅರಳಿದ ಕಮಲಕ್ಕೂ ಹೆಣ್ಣನ್ನು ಮೊಗ್ಗಾಗಿಯೂ ತೋರಿಸಿದ್ದಾರೆ.....ಗಂಡಾನೆಯ ಕಾಲುಗಳ ದಷ್ಟಪುಷ್ಟವಾಗಿದೆ, ಹೆಣ್ಣಾನೆಯ ಕಾಲು ಸ್ವಲ್ಪ ತಳುಕು ಬಳಕು ಹೊಂದಿದೆ, ಕಣ್ಣುಗಳ ಅಲಂಕಾರದಲ್ಲೂ ವ್ಯತ್ಯಾಸವಿದೆ, ಕಿವಿಗಳು ಬೇರೆ ಬೇರ ಅಕಾರದಲ್ಲಿದೆ....ಗಂಡಾನೆಯ ಹಣೆಯ ಮೇಲಿನ ಕೆತ್ತನೆಯು ಅರೇಬಿಯನ್ ಶೈಲಿಯ ಗಿಳಿ ಎಂದು ಕನಫ್ಯೂಸ್ ಆಗಬಹುದು ಆದರೆ ನಿಜವಾಗಲೂ ನೋಡಿದರೆ ಅದು ಗಂಡ ಬೇರುಂಡದ ಮಿರರ್ ಅಥವಾ ಫ್ಲೀಪ್ ಇಮೇಜ್ ಆಗಿದೆ..... 
ಹೆಣ್ಣು ಮತ್ತು ಗಂಡಾನೆಯ ಹಣೆಯ ಅಲಂಕಾರವೂ ಬೇರೆ ಬೇರೆ ಆಗಿದೆ
ಇನ್ನು ಚಂಪಕ ಅರಸಿ ಅಥವಾ ಸರಸಿ ಅತಿಲೋಕ ಸುಂದರಿಯಾಗಿದ್ದು ಬಾಂಗಾರದ ನೀಳ ರಾಶಿ ಹೊಂದಿದ್ದಳು, ಅವಳ ಕೂದಲು, ಬಟ್ಟೆ ಇನ್ನೂ ಎಲ್ಲಿಯೋ ಅನಂತಪುರದ ಯಾರದೋ ಮನೆಯಲ್ಲಿದೆ ಎಂಬ ಗುಮಾನಿಯಿದೆ...
ದೊಡ್ಡ ರಾಣಿಯ ಸನ್ಯಾಸತ್ವ,ಜನರ ಹೀಗೆಳಿಯುವಿಕೆ ಎದುರು ವೆಂಕಟಪ್ಪನ ಪ್ರೀತಿ ಕೆಲ ಕಾಲ ಕಾಪಾಡಿತ್ತಾದರೂ ಜನರ ದೂಷಣೆಗೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಕೋಟೆ ಅವಳೊಂದಿಗೆ ಕೊನೆಯಾಯಿತು...ಈಗ ಹಾಳು ಕೋಟೆಯ ಮಧ್ಯೆ ರೈಲ್ವೆ ಹಳಿ ಹೋಗಿದ್ದರಿಂದ ಎರಡು ಬತೇರಿಗಳು ಹಾಳಾಗಿದ್ದು ಈಗಲೂ ಕೊಟೆಯ ಒಳಗೊಂದು ಹೊರಗೊಂದು ಬತೇರಿ ಹಾಗೇ ಇದೆ...
ಕೋಟೆಯ ಒಳಗೊಂದು ದರ್ಬಾರ್ ಹಾಲ್ , ಅರಮನೆ, ಬಾವಿ, ಕೆಲಸದವರ ವಸತಿ ಇದ್ದ ಪ್ರಾಪರ್ ಮ್ಯಾಪ್ ಆಗ ಭಾರತಕ್ಕ ಬಂದಿದ್ದ ವಿದೇಶಿ ಪ್ರಯಾಣಿಕನೊಬ್ಬ ದಾಖಲಿಸಿದ್ದಾನೆ...ಈಗಿನ‌ ಅನಂತಪುರ ಗದ್ದೆಗಳಿಂದಲೂ, ಎಡೆಹಳ್ಳಿ ಪ್ರಾಪರ್ ವ್ಯಾಪಾರಿ ಕೇಂದ್ರವಾಗಿತ್ತು, ಬತೇರಿಯಿಂದ ಮೂರು ರಸ್ತೆಗಳ ಕಾಣುತ್ತಿದ್ದು , ಬತೆರಿಯಿಂದ ಹಾರಿಸಿದ ಕಲ್ಲುಗುಂಡು  ಕೆರೆ ದಾಟಿ ರಸ್ತೆಗೆ ಬೀಳುತ್ತಂತೇ.....
ಈಗಲೂ ಕೊಟೆಯ ಒಳಗೆ ಜನವಸತಿ ಪ್ರದೇಶದಲ್ಲಿ ವೆಜಿಟೇಷನ್ ಬೆರೆಯದೇ ಆಗಿದೆ....ಯಾರಾದರೂ ಒಳಹೊಗಿದ್ದರೆ ಗಮನಿಸಬಹುದು.....

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ