Skip to main content

Blog number 911. ದೇವನೂರು ಮಹಾದೇವರ RSS - ಆಳ ಮತ್ತು ಅಗಲ ಎಂಬ ಪುಸ್ತಕಕ್ಕೆ ಅರವಿಂದ ಚೊಕ್ಕಾಡಿಯವರ ಮೂರನೆ ಆಯಾಮದ ಮಿಮರ್ಶೆಗೆ ಕಾಯುತ್ತಾ .....

#ಬಹುಚರ್ಚಿತ_ದೇವನೂರುಮಹಾದೇವರ_ಪುಸ್ತಕ.

#ಆರ್_ಎಸ್_ಎಸ್_ಆಳ_ಮತ್ತು_ಆಗಲ

#ಪರ_ವಿರೋದಗಳಿಗಿಂತ_ಮೂರನೆ_ಆಯಾಮದ_ವಿಮರ್ಶೆಗಾಗಿ_ಅರವಿಂದಚೊಕ್ಕಾಡಿಗೆ_ವಿನಂತಿ

#ದೇವನೂರು_ಮಹಾದೇವರ_ಪುಸ್ತಕದ_ಲಿಂಕ್_ಇಲ್ಲಿದೆ_ನೀವೂ_ಓದಿ.
  
   ದೇವನೂರು ಮಹಾದೇವರು ಕನ್ನಡದ ವಿಚಾರವಂತ ಲೇಖಕರು ಅವರ #ಕುಸುಮಾಬಾಲೆ ಪ್ರಸಿದ್ದ ಪುಸ್ತಕ ಆದರೆ ನನಗೆ ಅರ್ಥಮಾಡಿಕೊಳ್ಳಲಾಗಲಿಲ್ಲ, ಒಮ್ಮೆ ಮೈಸೂರಿನ ಗೆಳೆಯ ಕರುಣಾಕರ್ ದೇವನೂರರನ್ನು ಪೋನಿನಲ್ಲಿ ಪರಿಚಯಿಸಿದಾಗ ಅವರ ಜೊತೆ ಮಾತಾಡುವಾಗ ಇದನ್ನು ಹೇಳಿದ್ದೆ.
   ಮೊನ್ನೆ ಅವರು ಬರೆದ RSS ಆಳ-ಅಗಲ ಪುಸ್ತಕದ ಬಗ್ಗೆ ವಿಶ್ವವಾಣಿ ವಿಶ್ವೇಶ್ವರ ಭಟ್ಟರು ಈ ಪುಸ್ತಕದ ಬಗ್ಗೆ ನಕಾರಾತ್ಮಕವಾಗಿ ಬರೆದ ಪೋಸ್ಟ್ ನಂತರ ಇದನ್ನು ಓದಲೇ ಬೇಕೆಂಬ ತುಡಿತಕ್ಕೆ ಈ ಪುಸ್ತಕದ PDF ಲಿಂಕ್ ಸಿಕ್ಕಿದ್ದರಿಂದ ಓದಿದೆ ಮತ್ತು ನನ್ನ ಸೀಮಿತ ಜ್ಞಾನದ ದಾರಣ ಶಕ್ತಿಯಲ್ಲಿ ಅರ್ಥ ಮಾಡಿಕೊಂಡರೂ ಇದನ್ನು ಪರ-ವಿರೋದ ವಿಮರ್ಷೆಗಿಂತ ಮೂರನೆ ಆಯಾಮದಲ್ಲಿನ ವಿಮರ್ಷೆ ಎಲ್ಲರೂ ತಿಳಿದುಕೊಳ್ಳುವ ಕುತೂಹಲ.
  ಇದಕ್ಕಾಗಿ ಖ್ಯಾತ ಅಂಕಣಕಾರ, ಶಿಕ್ಷಣ ತಜ್ಞ ವಿಶೇಷವಾಗಿ ಯಾರದೇ ಹೊಗಳುವಿಕೆ ತೆಗಳುವಿಕೆಗೆ ಬಗ್ಗದ ಜಗ್ಗದ ನಾನು ಇಷ್ಟ ಪಡುವ ತರ್ಕ ಜ್ಞಾನಿ ಅರವಿಂದ ಚೊಕ್ಕಾಡಿಯವರಿಗೆ ವಿನಂತಿಸಿದ್ದೆ ಅವರು ಈ ಪುಸ್ತಕ ಓದಿದ್ದಾರೆ ಮತ್ತು ದೇವನೂರುರವರು ಉಲ್ಲೇಖಿಸಿದ ಪುಸ್ತಕ ಓದಿ ವಿಮರ್ಷೆ ಮಾಡುವುದಾಗಿ ತಿಳಿಸಿದ ಪೋಸ್ಟ್ ಇಲ್ಲಿ ಅಂಟಿಸಿದ್ದೇನೆ.
  ನಾನೂ ಕೆಲ ಕಾಲ ನಮ್ಮ ಊರಿನ RSS ಶಾಖೆಗೆ ದಿನಂಪ್ರತಿ ಬೆಳಿಗ್ಗೆ ಆಡಲು ಹೋದವನು, ಶಾಖೆ ನಡೆಸುವ ಸಾಗರದ ಹಿರಿಯ ಆರ್.ಎಸ್.ಎಸ್. ಪ್ರಚಾರಕ ಪ್ರಾಣೇಶರು ರಾತ್ರಿ ನನ್ನ ಮನೆಯಲ್ಲಿ ತಂಗುತ್ತಿದ್ದರು, ಕೆಲ ಸಾಹಿತ್ಯವೂ ಓದಿದ್ದೆ ನಂತರ ಸಾಗರದ ಬಿ.ಹೆಚ್.ರಸ್ತೆಯ ಪುತ್ತೂರಾಯರ ಕಟ್ಟಡವನ್ನು ಸೇವಾ ಸಾಗರ ಬಾಡಿಗೆಗೆ ಪಡೆದು ವಿದ್ಯಾರ್ಥಿಗಳಿಗೆ ನೀಡುತ್ತಿತ್ತು ಆಗ ಕೆಲ ತಿಂಗಳು ವ್ಯಾಸಂಗಕ್ಕಾಗಿ ಅಲ್ಲಿದ್ದಾಗ ಅವರ ನಿಯಮದಂತೆ ಬೆಳಿಗ್ಗೆ ಸಾಮೂಹಿಕ ಪ್ರಾರ್ಥನೆಗೆ ಸೇರಲೇ ಬೇಕಿತ್ತು ಆದ್ದರಿಂದ #ನಮಸ್ತೆ_ಸದಾವತ್ಸಲೆ #ಕರಾಗ್ರೆ_ವಸತೆ_ಲಕ್ಷ್ಮೀ ಚಿರಪರಿಚಿತ ಆಗ ಬೆಳಗಿನ ಪ್ರಾರ್ಥನೆ ಹಾಲಿ ರಾಜ್ಯ ಸರ್ಕಾರದ ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿರುವ ಗುರುಮೂರ್ತಿ, ಸಾಗರದ ಸಹಕಾರಿ ಮುಖಂಡ ಯು. ಹೆಚ್.ರಾಮಪ್ಪ ನೇತೃತ್ವದಲ್ಲಿ ನಡೆಯುತ್ತಿತ್ತು, ಸಾಗರಕ್ಕೆ ಬರುವ ಎಲ್ಲಾ ಆರ್.ಎಸ್.ಎಸ್. ಮುಖಂಡರು ಈ ಕಟ್ಟಡದಲ್ಲೇ ಉಳಿಯುತ್ತಿದ್ದರು.
  ಒಮ್ಮೆ ಈ ಸಂಸ್ಥೆಯ ಪ್ರಮುಖರಾಗಿದ್ದ ಹಿಂದೂ ಸೇವಾ ಪ್ರತಿಷ್ಠಾನದ ಸ್ಥಾಪಕ ಅಜಿತ್ ಕುಮಾರ್ ಜೀ ಒಂದು ಪ್ರಶ್ನೆ ಕೇಳಿದರು ಅದಕ್ಕೆ ಪರವಾಗಿರುವವರು ಕೈ ಎತ್ತಿ ಎಂದಾಗ ನಾವು ಒಂದೆರೆಡು ಜನ ಬಿಟ್ಟು ಎಲ್ಲರೂ ಕೈ ಎತ್ತಿದರು, ವಿರೋದ ಇರುವವರು ಕೈ ಎತ್ತಿ ಅಂದಾಗ ನಾನು ಇನ್ನೊಬ್ಬರು ಕೈ ಎತ್ತಿದಾಗ ಇಡೀ ಸಭೆಯ ವಕ್ರದೃಷ್ಟಿಗೆ ಪಾತ್ರರಾದೆವು, ಅತ್ಯಂತ ತೀಕ್ಷ್ಣ ಮತಿಯ ಅಜಿತರು ಕಾರಣ ವಿವರಿಸಲು ಹೇಳಿದರು ನನ್ನ ವಿವರಣೆ ಕೇಳಿದ ಮೇಲೆ ನೀವಿಬ್ಬರು ಹೊರ ಹೋಗಿ ಅ೦ತ ಗೌರವದಿಂದ ಬಿಳ್ಕೊಟ್ಟ ಮೇಲೆ RSS ಸಂಬಂದ ತಪ್ಪಿ ಹೋಯಿತಾದರೂ ಅನೇಕರ ಸಂಪರ್ಕ ಇವತ್ತೂ ಉಳಿದಿದೆ.
  ದೇಶದಾದ್ಯಂತ ಅರವತ್ತು ಲಕ್ಷಕ್ಕೂ ಮಿಕ್ಕಿದ ಸದಸ್ಯತ್ವದ ಮತ್ತು ನಿತ್ಯ ಅರವತ್ತು ಸಾವಿರ ಮೀರಿದ ಶಾಖೆ ನಡೆಸುವ, ಪರ-ವಿರೋದ  ಯಾವುದನ್ನೂ ಬಹಿರ೦ಗವಾಗಿ ಸಮರ್ಥನೆ ಅಥವ ನಿರಾಕರಣೆ ಮಾಡದ RSS ಆಳ ಅಗಲ ತಿಳಿದುಕೊಳ್ಳುವ ಆಸಕ್ತಿ ಎಲ್ಲರಿಗೂ ಇದೆ ಈ ಸಂಘಟನೆಯ ಬಿಗಿ ಹಿಡಿತದಲ್ಲಿ ಭಾರತ ದೇಶವನ್ನು ಆಳುತ್ತಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವುದರಿಂದ RSS ಬಗ್ಗೆ ಕುತೂಹಲ ಜಾಸ್ತಿಯೆ.
  ಇದನ್ನು ವಿರೋದಿಸುವವರ ಸಂಖ್ಯೆ ಧರ್ಮದ್ವೇಷ, ದಲಿತ ಶೂದ್ರರ ಅಸಮಾನತೆ ಕಾರಣದಿಂದ ಹೆಚ್ಚು ಇದೆ ಅದನ್ನು ನಿರಾಕರಿಸುವ ಸಂದೇಶವಾಗಿ ಹಿಂದುಳಿದ ವರ್ಗದ ಮೋದಿ ಪ್ರದಾನಿ ಆಗಿರುವುದು, ಪರಿಶಿಷ್ಟ ಜಾತಿ- ಪಂಗಡಗಳವರು ರಾಷ್ಟ್ರಪತಿ ಮಾಡುವುದು, ಭಾರತೀಯ ಯೋಗ - ಆಯುವೇ೯ದ ಪ್ರಚಾರ ಮಾಡುವುದು, ಮೂಡನಂಬಿಕೆ - ಮಧ್ಯಪಾನ ವಿರೋದ , ರಾಷ್ಟ್ರೀಯ ವಿಪತ್ತು ಆದಾಗ ಸ್ವಯಂ ಸೇವಕರ ಸೇವೆಗಳ ಜೊತೆ ಭಾರತೀಯ ಪ್ರಜೆಗಳೇ ಆದ ಅನ್ಯಧರ್ಮಿಯರ ವಿರೋದ ಮಾಡುವ ಬಗ್ಗೆ RSS ಬಗ್ಗೆ  ಮೂರನೇ ಆಯಾಮದ ವಿಮರ್ಷೆಯ ಪುಸ್ತಕ ಯಾವುದೂ ಇಲ್ಲ ಹಾಗಾಗಿ RSS ಕರ್ನಾಟಕದಲ್ಲಿ ಚರ್ಚಿಯ ಮುನ್ನಲೆಯಲ್ಲಿದೆ.

#ಅರವಿಂದ_ಚೊಕ್ಕಾಡಿಯವರ_ಪ್ರತಿಕ್ರಿಯೆ.

ಅರುಣ್ ಪ್ರಸಾದ್,

ನಿಮ್ಮ ಅಪೇಕ್ಷೆಯಂತೆ ದೇವನೂರು ಮಹಾದೇವ ಅವರ ಪುಸ್ತಕವನ್ನು ಓದಿದೆ ನಾನು. ಅದರ ಬಗ್ಗೆ ಈಗಲೂ ನನ್ನ ಕಮೆಂಟ್ ಕೊಡುವುದಿಲ್ಲ.‌ ಇದರ ಬಗ್ಗೆ ಕಮೆಂಟ್ ಮಾಡಬೇಕಾದರೆ ಮೊದಲು ಗೋಳ್ವಾಲ್ಕರ್ ಅವರ ' ಚಿಂತನ ಗಂಗಾ' ವನ್ನು ಓದಬೇಕು. ಏಕೆಂದರೆ ದೇವನೂರು ಒಂದು ಸ್ಟಾಂಡ್ ತೆಗೆದುಕೊಂಡಿರುವ ಲೇಖಕ. ಆದ್ದರಿಂದ 
'ಚಿಂತನ ಗಂಗಾ' ದಿಂದ ತಮ್ಮ ವ್ಯೂ ಅನ್ನು ವಿಸ್ತರಿಸಲು ಬೇಕಾದ ಅಂಶಗಳನ್ನು ಮಾತ್ರ ತೆಗೆದುಕೊಳ್ಳುವುದು ಸಹಜ.‌ ಆದರೆ ಅಲ್ಲಿ ಗೋಳ್ವಲ್ಕರ್ ಯಾವ ಕಾಂಟೆಕ್ಸ್ಟ್‌ನಲ್ಲಿ ಹೇಳಿದ್ದಾರೆ ಎಂದು ಗೊತ್ತಾಗಬೇಕಾದರೆ ಅದರ ಒರಿಜಿನಲ್ ಅನ್ನು ಓದಬೇಕು. ಉದಾಹರಣೆಗೆ ಭಾರತ ಸಂವಿಧಾನ ಹಲವು ಪಾಶ್ಚಿಮಾತ್ಯ ಸಂವಿಧಾನಗಳ ಎರಕ ಎಂದಿದ್ದಾರೆ ಎನ್ನುವುದು. ಈ ಮಾತನ್ನು ಗೋಳ್ವಲ್ಕರ್ ಮಾತ್ರ ಹೇಳಿದ್ದಲ್ಲ.‌ ಜಸ್ಟೀಸ್ ಮಹಮದ್ ಹಿದಾಯತುಲ್ಲಾ ಕೂಡ ಹೇಳಿದ್ದರು. ಮತ್ತು ಅವರು ಇನ್ನೂ ತೀಕ್ಷ್ಣವಾಗಿ ಪ್ರಸ್ತಾವನಾ ಬರೆಹವು ಅಮೆರಿಕ ಸ್ವಾತಂತ್ರ್ಯ ಘೋಷಣೆಯಂತಿದೆ ಎಂದು ಹೇಳಿದ್ದಾರೆ. Bag of borrowings ಎನ್ನುವುದು ಸಂವಿಧಾನದ ಬಗ್ಗೆ ಹಲವರು ಮಾಡಿದ ಟೀಕೆ ಎಂದು ರಾಜ್ಯಶಾಸ್ತ್ರದ ಎಲ್ಲ ವಿದ್ಯಾರ್ಥಿಗಳೂ ತಿಳಿದಿರುವ ಸತ್ಯ. ಗೋಳ್ವಲ್ಕರ್ ಯಾವ ಉದ್ದೇಶದಿಂದ ಅದನ್ನು ಹೇಳಿದ್ದಾರೆ ಎಂದು ಗೊತ್ತಿಲ್ಲದೆ ಅದರ ಬಗ್ಗೆ ಕಮೆಂಟ್ ಮಾಡಲು ಆಗುವುದಿಲ್ಲ.‌

ಆದರೆ ದೇವನೂರು ಈ ಏಕಾತ್ಮಕತೆಯ ಸರಕಾರದ ಕುರಿತಾಗಿನ ಒಲವಿನ ಬಗ್ಗೆ ಹೇಳಿದ್ದು ಸತ್ಯ ಎನಿಸುತ್ತದೆ.‌ ನಾನು ಅಧ್ಯಯನ ಮಾಡಿದ ಮಟ್ಟಿಗೆ ಏಕತೆ ಮತ್ತು ಅನೇಕತೆಯ ವ್ಯೂನಲ್ಲಿ ಹಿಂದುತ್ವದ ವ್ಯೂ, ಗಾಂಧಿಯನ್ ವ್ಯೂ, ಸಂವಿಧಾನದ ವ್ಯೂನಲ್ಲಿ ವ್ಯತ್ಯಾಸಗಳಿವೆ.‌ ಎಲ್ಲವೂ ಏಕ ಮತ್ತು ಅನೇಕವನ್ನು ಒಪ್ಪುತ್ತವೆ. ಆದರೆ ಹಿಂದುತ್ವದ ವ್ಯೂನಲ್ಲಿ ಏಕವೇ ಪ್ರಧಾನವಾಗಿದ್ದು ಏಕದ ಅನುಮತಿಯ ಅಡಿಯಲ್ಲಿ ಅನೇಕವು ವಿಸ್ತರಿಸಲ್ಪಡುತ್ತದೆ. ಗಾಂಧಿಯನ್ ವ್ಯೂನಲ್ಲಿ ಅನೇಕಗಳೆಲ್ಲ ಒಟ್ಟಾಗಿ ಆಗಿ ರೂಪುಗೊಳ್ಳುವ ಸಮಗ್ರತೆಯಲ್ಲಿ ಉಂಟಾಗುವ ಸಾಮಾನ್ಯತೆಯು ಏಕವನ್ನು ರೂಪಿಸುತ್ತದೆ.‌ ಸಂವಿಧಾನದ ವ್ಯೂನಲ್ಲಿ ಇಷ್ಟು ಏಕ, ಇಷ್ಟು ಅನೇಕ; ಏಕವು ಕೇಂದ್ರಕ್ಕೆ, ಅನೇಕವು ರಾಜ್ಯಕ್ಕೆ ಎಂಬ ಹಂಚಿಕೆ ಇದೆ. 

ಆರ್ಯ ಶ್ರೇಷ್ಠತೆಯ ವಿಚಾರದಲ್ಲಿ ನನ್ನ ಅಧ್ಯಯನವು ದೇವನೂರು ಅವರ ವ್ಯೂಗಿಂತ ಭಿನ್ನವಿದೆ. ಯಾವುದೇ ರಚನೆಯ ಪ್ರಾರಂಭದಲ್ಲಿ ಬ್ರಾಹ್ಮಣರಿಗೆ ಹೆಚ್ಚು ಪ್ರತಿನಿಧಿತ್ವ ಬರುವುದು ಈ ದೇಶದ ಸಿಸ್ಟಮ್. ಕ್ರಮೇಣ ಅದು ಇತರರ ಕೈಗೆ ಹೋಗುತ್ತದೆ. ಕಾಂಗ್ರೆಸ್‌ನಲ್ಲೂ ಹೀಗೇ ಆದದ್ದು. ಕಮ್ಯುನಿಸ್ಟ್‌ನಲ್ಲೂ ಹೀಗೇ ಆದದ್ದು. ಆದರೆ ದೇವನೂರು ಬ್ರಾಹ್ಮಣ ಎನ್ನುವುದಿಲ್ಲ. ಆರ್ಯ ಶ್ರೇಷ್ಠತೆಯ ವ್ಯಸನ ಎನ್ನುತ್ತಾರೆ. ಆರ್ಯ ಎನ್ನುವ ಜನಾಂಗವಿಲ್ಲ. ಆರ್ಯ ಎನ್ನುವುದು ನಾರ್ಡಿಕ್ ಜನಾಂಗವನ್ನು. ಅದು ಜನಾಂಗೀಯ ಮಿಶ್ರಣವನ್ನು ಕಂಡಾಗಿದೆ. Suppose ಗೋಳ್ವಲ್ಕರ್ ಕಾಲಮಾನದಲ್ಲಿದ್ದ ಥಿಯರಿಯ ಆಧಾರದಲ್ಲಿ ಹೇಳುವುದಾದರೆ, ಮತ್ತು ಆರ್.‌ಎಸ್. ಎಸ್. ಚಿತ್ಪಾವನರಿಂದ ಸ್ಥಾಪಿಸಲ್ಪಟ್ಟಿತು ಎನ್ನುವುದಾದರೆ ಚಿತ್ಪಾವನರು ನಾರ್ಡಿಕ್ ಜನಾಂಗೀಯ ಲಕ್ಷಣಗಳನ್ನು ಪ್ರತಿನಿಧಿಸುವುದಿಲ್ಲ. ಅವರದು ಬೇರೆಯೇ ವಿಂಗ್. ಮತ್ತೆ ಅಲ್ಲಿ ನಂಬೂದರಿಗಳ ವಿಚಾರವಿದೆ. ನಂಬೂದರಿಗಳು ದಕ್ಷಿಣ ಭಾರತದ ಬಹುತೇಕ ಎಲ್ಲ ಜಾತಿ- ಧರ್ಮದವರ ಹಾಗೆ ಪೇಲಿಯೋ ಮೆಡಿಟರೇನಿಯನ್ ಜನಾಂಗದ ಲಕ್ಷಣಗಳನ್ನು ಪ್ರತಿನಿಧಿಸುವವರು. ನಾರ್ಡಿಕ್ ಜನಾಂಗೀಯ ಲಕ್ಷಣಗಳು ಹಿಂದೂ ಮತ್ತು‌ ಮುಸ್ಲಿಂ ಸಿಂಧಿಗಳು, ಕಾಶ್ಮೀರಿ ಪಂಡಿತರು ಇವರಲ್ಲಿ ಒಂದಷ್ಟು ಇದೆ. ಜಾತಿ ಮತ್ತು ಜನಾಂಗ ಎರಡರಲ್ಲಿ ಯಾವುದನ್ನು ಪ್ರಧಾನವಾಗಿ ಆಧರಿಸಿದ್ದರೂ ಜವಾಹರ ಲಾಲ್ ನೆಹರೂ ಅವರನ್ನು ಹಿಂದುತ್ವದ ಶಕ್ತಿಗಳು ವಿರೋಧಿಸಲು ಸಾಧ್ಯವಿರಲಿಲ್ಲ.‌ ನನ್ನ ಬಳಿ ಆರ್.‌ಎಸ್.ಎಸ್. ನವರೇ ಕೊಟ್ಟಿರುವ ಆರ್.‌ಎಸ್.ಎಸ್ 360 ಪುಸ್ತಕ ಇದೆ. ಅದರಲ್ಲಿ ನೆಹರೂ ಮಾತ್ರ ಅಲ್ಲ ಸರ್ದಾರ್ ಪಟೇಲರ ಮೇಲಿನ ಅವರ ಭಿನ್ನಾಭಿಪ್ರಾಯಗಳೂ ಗೊತ್ತಾಗುತ್ತವೆ. ತನ್ನ ಥಿಯರಿಯನ್ನು ಒಪ್ಪದವರು ಯಾವ ಜಾತಿ, ಜನಾಂಗದವನಿದ್ದರೂ ಅವರನ್ನು ತಮ್ಮವರನ್ನಾಗಿಸಿಕೊಳ್ಳಲು ಹಿಂದುತ್ವದವರು ಇದು ವರೆಗೆ ಹೋಗಿಲ್ಲ.

ಇದೇನೇ ಇದ್ದರೂ ನನ್ನ ರಿಯಾಕ್ಷನ್ ಅನ್ನು ಹೇಳುತ್ತೇನೆ. ಆದಷ್ಟು ಶೀಘ್ರವಾಗಿ. ಗೋಳ್ವಲ್ಕರ್ ಅವರ ಪುಸ್ತಕವನ್ನು ಮೊದಲು ಓದಿಕೊಳ್ಳಬೇಕು.‌

ಸಧ್ಯಕ್ಕೆ ನನ್ನ ಬಳಿ ಆರ್.‌ಎಸ್.ಎಸ್ ಪರ ಮತ್ತು ವಿರುದ್ಧ ಸ್ಟಾಂಡ್ ಇರುವವರ ವ್ಯೂ ಇರುವ ಪುಸ್ತಕ ಇದೆಯೇ ಹೊರತು ಥರ್ಡ್ ಪರ್ಸನ್ ಆಗಿ ಅಬ್ಸರ್ವೇಷನ್ ಮಾಡಿದ ಯಾರೊಬ್ಬರ ಪುಸ್ತಕಗಳೂ ಇಲ್ಲ.‌ ನಾನು ಲೇಖಕ ಅಷ್ಟೆ. ಆದ್ದರಿಂದ ಆ್ಯಕ್ಟಿವಿಸ್ಟ್ ಶೈಲಿಯಲ್ಲಿ ರಿಯಾಕ್ಟ್ ಮಾಡುವುದಿಲ್ಲ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ