Skip to main content

Blog number 925. ಗಟಾರಿ ಅಮಾವಾಸ್ಯೆಎಂಬ ಹಾಸ್ಯದ ಹೆಸರಲ್ಲಿ ಕರೆಯುವ ಬೀಮನ ಅಮಾವಾಸ್ಯೆ ಅಥವ ಆಷಾಡ ಆಮಾವಾಸ್ಯೆ ಮಹಾರಾಷ್ಟ್ರದ ಬಾರ್ ರೆಸ್ಟೋರೆಂಟ್ ಗಳ ಲಾಭದ ವಾಣಿಜ್ಯ ಉದ್ದೇಶಕ್ಕೆ ಹೆಚ್ಚು ಪ್ರಚಾರ ಪಡೆದಿದೆ

#ಬೀಮನಅಮವಾಸ್ಯೆ_ಆಷಾಡಅಮವಾಸ್ಯೆ_ಗಾಯಿತ್ರಿಅಮಾವಸ್ಯೆ

#ಶ್ರಾವಣಮಾಸದ_ಮೊದಲ_ಹಬ್ಬ

#ಇದರ_ಮರುದಿನದಿಂದ_ಮಾಂಸಹಾರ_ಕುಡಿತ_ಮಾಡುವುದಿಲ್ಲ

#ಕೊನೆಯದಿನ_ಯಥೇಚ್ಚವಾಗಿ_ಕುಡಿದು_ತಿಂದು_ಗಟಾರಕ್ಕೆ_ಬೀಳುವ_ಜನರಿಂದ_ಇದಕ್ಕೆ_ಗಟಾರಿಅಮಾವಸ್ಯೆ_ಎಂಬ_ಹೆಸರು 

#ಇದನ್ನು_ಪ್ರಚಾರ_ಮಾಡಿ_ಭರಪೂರ_ವ್ಯಾಪಾರ_ಗಿಟ್ಟಿಸುವ_ಬಾರ್_ರೆಸ್ಟೋರಾಂಟಗಳು.

   ಬೀಮನ ಅಮಾವಾಸ್ಯೆ, ಆಷಾಡ ಅಮಾವಾಸ್ಯೆ ಶ್ರಾವಣ ಮಾಸದ ಮೊದಲ ಹಬ್ಬ, ಮನೆಯ ಹೆಣ್ಣು ತನ್ನ ಗಂಡ ಮತ್ತು ಸಹೋದರನ ಒಳಿತಿಗಾಗಿ ಈ ದಿನ ಪೂಜೆ ಮಾಡುತ್ತಾಳೆ.
 ಕರ್ನಾಟಕದಲ್ಲಿ ಬೀಮನ ಅಮಾವಾಸ್ಯೆ, ಗುಜರಾತಿನಲ್ಲಿ ಹರಿಯಾಲ ಅಮಾವಾಸ್ಯೆ, ಆಂದ್ರದಲ್ಲಿ ಚುಕ್ಕೇಲ ಅಮಾವಾಸ್ಯೆ, ಗಾಯಿತ್ರಿ ಅಮಾವಾಸ್ಯೆ, ಆಷಾಡ ಅಮಾವಾಸ್ಯೆ ಅಂತ ಚಂದ್ರಮಾನ ಪದ್ಧತಿ ಪ್ರಕಾರ ಶ್ರಾವಣ ಮಾಸ ಪ್ರಾರಂಭದ ಹಿಂದಿನ ದಿನ ಕರೆಯುತ್ತಾರೆ.
   ಉತ್ತರ ಭಾರತದಲ್ಲಿ 15 ದಿನದ ಹಿಂದಿನಿಂದಲೇ ಶ್ರಾವಣ ಮಾಸ ಪ್ರಾರಂಭ ಆಗಿ ಜನ ಗಂಗಾ ನದಿ ತಟಕ್ಕೆ ಕಾವಡಿ ಸೇವೆ ಅಭಿಶೇಕ ಮಾಡುತ್ತಿದ್ದಾರೆ.
   ಶ್ರಾವಣ ಮಾಸ ಶಿಸ್ತುಬದ್ದವಾಗಿ ಆಚರಿಸುವ ಮರಾಠಿ ಜನರಲ್ಲಿ ಗಟಾರಿ ಅಮಾವಾಸ್ಯೆ ಹಾಸ್ಯದ ಜೊತೆ ಹಾಸು ಹೊಕ್ಕಾಗಿದೆ.
  ಮಹಾರಾಷ್ಟ್ರದಲ್ಲಿ ಮಾಂಸಹಾರಿಗಳು ಶ್ರಾವಣದಲ್ಲಿ ಸಂಪೂರ್ಣ ಸಸ್ಯಹಾರ ಸೇವಿಸುವಂತಾಗುವ ನಿಯಮ ಪಾಲಿಸುತ್ತಾರೆ ಮತ್ತು ಈ ತಿಂಗಳು ಪೂರ್ತಿ ಮಧ್ಯಪಾನ ಕೂಡ ತ್ಯಜಿಸುತ್ತಾರೆ ಆದ್ದರಿಂದ ಮದ್ಯಪಾನ ಮಾಂಸಹಾರ ಸೇವಿಸುವ ಕಡೆಯ ದಿನವಾದ ಶ್ರಾವಣದ ಪೂರ್ವದ ಈ ಅಮಾವಾಸ್ಯೆಯಲ್ಲಿ ಕಂಠ ಪೂರ್ತಿ ಕುಡಿದು ತಿಂದು ಕೆಲವರು ಚರಂಡಿಗೆ (ಗಟಾರಕ್ಕೆ) ಬೀಳುತ್ತಾರೆಂದು ಈ ಅಮಾವಾಸ್ಯೆಗೆ ಜನ ಹಾಸ್ಯದಿಂದ ಕರೆದದ್ದು ಗಟಾರಿ ಅಮಾವಾಸ್ಯೆ.
  ವಾಣಿಜ್ಯ ಉದ್ದೇಶಕ್ಕಾಗಿ ಇದನ್ನು ಲಾಭಕ್ಕೆ ಬಳಸಿಕೊಂಡ ಮಹಾರಾಷ್ಟ್ರ, ಗೋವಾ, ಗುಜರಾತ್, ಕರ್ನಾಟಕದ ಮಹಾರಾಷ್ಟ್ರದ ಗಡಿ ಜಿಲ್ಲೆಗಳಲ್ಲಿನ ಬಾರ್ ರೆಸ್ಟೋರೆಂಟ್ ಗಳು ಈ ದಿನಕ್ಕೆ ಹೆಚ್ಚಿನ ಪ್ರಚಾರ ನೀಡಿ ಹೆಚ್ಚು ವ್ಯಾಪಾರ ಮಾಡುವುದರಿಂದ ಗಟಾರಿ ಅಮಾವಾಸ್ಯೆ ಒಂದು ವಿಶೇಷ ಆಚರಣೆಯೇ ಆಗಿದೆ.
   ಮಹಾರಾಷ್ಟ್ರದ ಹೆಚ್ಚಿನ ಕುಟುಂಬಗಳು ಗಣೇಶನ ಹಬ್ಬದ ತನಕ, ಇನ್ನು ಕೆಲವು ಕುಟುಂಬ ನವರಾತ್ರಿ ಮುಗಿಯುವ ತನಕ ಮಾಂಸಹಾರ ಮಧ್ಯಪಾನ ಸಂಪೂರ್ಣ ತ್ಯಜಿಸುತ್ತಾರೆ.
  ಈ ವರ್ಷದ ಆಷಾಡ ಅಮಾವಸ್ಯೆ 28- ಜುಲೈ -2022ರ ಗುರುವಾರ ಇದೆ, 29- ಜುಲೈ -2022 ಶುಕ್ರವಾರದಿಂದ ಶ್ರಾವಣ ಮಾಸ ಪ್ರಾರಂಭ ಆದ್ದರಿಂದ ಗುರುವಾರ ಪೂರ್ತಿ ಗಟಾರಿ ಅಮಾವಾಸ್ಯೆಯ ಭರಪೂರ ವ್ಯಾಪಾರಕ್ಕೆ ಮಹಾರಾಷ್ಟ್ರದ ಬಾರ್ ರೆಸ್ಟೋರೆಂಟ್ ಗಳು ತಯಾರಾಗಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...