Skip to main content

Blog number 914. ಮದ್ಯಾಹ್ನ ಊಟ ಆಯಿತಾ ಎಂದು ಕೇಳುವ ಸಂಪ್ರದಾಯದಂತೆ ಮುಂಗಾರಿನ ಮಳೆಗಾಲದ ಮಧ್ಯದಲ್ಲಿ ನಿಮ್ಮಲ್ಲಿ ಜಲ ಒಡಿತಾ? ಒರತೆ ಎದ್ದಿದಿಯಾ? ಎಂಬ ಪ್ರಶ್ನೆ ಸಹಜ ಯಾಕೆ?

#ಮುಂಗಾರು_ಬಿರುಸಾಗಿದೆ_ಎಲ್ಲೆಡೆ

#ತಣ್ಣನೆಯ_ಸುಳಿ_ಗಾಳಿ_ಬೀಸುತ್ತಿದೆ.

#ಜಲದ_ಬುಗ್ಗೆ_ಒಡೆದಿದೆ.

#ಪರಸ್ಪರವಾಗಿ_ಸಂಪ್ರದಾಯಿಕವಾಗಿ_ಕೇಳುವ_ಪ್ರಶ್ನೆ

#ನಿಮ್ಮಲ್ಲಿ_ಜಲದ_ಕಣ್ಣು_ಒಡೆಯಿತಾ?

#ನೀರಿನ_ಒರತೆ_ಎದ್ದಿದಿಯಾ?

  ಜಲ-ಬುಗ್ಗೆ - ಒರತೆ ಮುಂತಾದ ಪ್ರಾದೇಶಿಕ ಭಾಷೆಯಲ್ಲಿ ಕರೆಯುವ ಮಳೆಗಾಲದ ನೀರಿನ ಒರತೆ ಎದ್ದಿತೂ ಅಂದರೆ ಆ ವರ್ಷದ ಮಳೆ ಭೂಮಿಗೆ ಹದವಾಗಿ ತಲುಪಿತು ಅಂತಲೇ ಅರ್ಥ, ಇತ್ತೀಚಿಗೆ ಎಷ್ಟೋ ಮಳೆಗಾಲದಲ್ಲಿ ಮಳೆ ಪ್ರಮಾಣ ಕಡಿಮೆಯಿಂದ ಜಲ ಒಡೆಯುವುದಿಲ್ಲ.
  ಮಳೆ ಜಾಸ್ತಿ ಆಗಿ ಚಳಿಯ ಸುಳಿಗಾಳಿ ಪ್ರಾರಂಭ ಆಯಿತೆಂದರೆ ಜಲದ ಬುಗ್ಗೆಗಳು ಎದ್ದಿದೆ ಎಂದೇ ಅರ್ಥ.
  ಭೂಮಿಯು ಸರಿಯಾದ ಮಳೆ ನೀರು ದಾರಣೆ ಆದರೆ ನೈಸರ್ಗಿಕ ಒತ್ತಡದಿಂದ ಭೂಮಿಯಲ್ಲಿನ ಹೆಚ್ಚು ಪ್ರಮಾಣದ ಸೀಪೇಜ್ ನೀರು ಭೂಮಿ ಒಡೆದು ಹೊರ ಬರುತ್ತದೆ.
  ಒತ್ತಡ ಹೆಚ್ಚಿದ್ದಲ್ಲಿ ಬುಗ್ಗೆಯಾಗಿ ಚಿಮ್ಮುತ್ತದೆ, ಇದು ಆಯಾ ಪ್ರದೇಶದಲ್ಲಿ ಕೆಲವು ವಾರ - ತಿಂಗಳು ಹರಿಯುತ್ತದೆ, ಇನ್ನೂ ಕೆಲವು ವರ್ಷ ಪೂರ್ತಿ, ಕೆಲವು ಕಡೆ ಬಿಸಿ ನೀರಿನ ಬುಗ್ಗೆಗಳೂ ಇದೆ.
  ಇಂಗ್ಲೀಷ್ ನಲ್ಲಿ Spring ಎನ್ನುವ ಈ ನೀರು ರಸ್ತೆ ಬದಿಯಲ್ಲಿ  ಬುಗ್ಗೆಯಾಗಿ ಬಂದರೆ ಕುಡಿಯುವುದು ಸೂಕ್ತವಲ್ಲ ಅದರಲ್ಲಿ ತ್ಯಾಜ್ಯದ ವಿಷದ ಅಂಶ ಇರುತ್ತದೆಂದು ನ್ಯೂಯಾರ್ಕಿನ ಆರೋಗ್ಯ ಇಲಾಖೆ ಎಚ್ಚರಿಸಿದೆ.
  ಪಶ್ಚಿಮ ಘಟ್ಟ ಪ್ರದೇಶದಲ್ಲಿ ಈ ವರ್ಷದ ಮಳೆಗಾಲ ತಡವಾಗಿ ಆರಂಭವಾಗಿ ಈಗ ಅತಿ ಹೆಚ್ಚು ಮಳೆ ಸುರಿಯುತ್ತಿದೆ ಆದ್ದರಿಂದ ಎಲ್ಲಾ ಕಡೆ ಜಲ ಒಡೆದಿದೆ.
  ಗುಡ್ಡ ಪ್ರದೇಶದಲ್ಲಿ ಜನವಸತಿಯಿಂದ ದೂರ ಇರುವ ಈ ಒರತೆ ನೀರಿನಲ್ಲಿ ಮ್ಯಾಗ್ನೆಸಿಯಂ, ಪೊಟಾಸಿಯಂ, ಕ್ಯಾಲ್ಸಿಯಂ ಮತ್ತು ಸೋಡಿಯಂ ಯಥೇಚ್ಛವಾಗಿ ಇರುತ್ತದೆ ಮತ್ತು ಎಲ್ಲಾ ರೀತಿಯ ಮೈಕ್ರೋನ್ ಮತ್ತು ಕಲ್ಮಷಗಳು ನಿವಾರಣೆ ಆಗಿ ಈ ನೀರು ಕುಡಿಯಲು ಯೋಗ್ಯ, Ph ವ್ಯಾಲ್ಯೂ ಜಾಸ್ತಿ, ಆಲ್ಕಾಲೆನ್ ನೀರು ಎಂಬಿತ್ಯಾದಿ ಹೇಳುತ್ತಾರೆ.
  ಈ ರೀತಿಯ ಬುಗ್ಗೆಯ ನೀರು ಸಂಗ್ರಹಿಸಿ ಮಾರಾಟ ಮಾಡುವ ದೊಡ್ಡ-ದೊಡ್ಡ ಸಂಸ್ಥೆಗಳಿದೆ.
  ಸಾಗರ ತಾಲ್ಲೂಕಿನ ವರದಳ್ಳಿಯ ಶ್ರೀಧರ ತೀರ್ಥವರ್ಷ ಪೂರ್ತಿ ನೀರು ನೀಡುತ್ತದೆ, ತುಮರಿ ಭಾಗದಲ್ಲಿ ಅಬ್ಬಿ ನೀರು ಅನೇಕರ ಮನೆ ತೋಟಗಳಿಗೆ ನೀರಿನ ಆಸರೆ ಆಗಿದೆ.
  ನಮ್ಮ ಭಾಗದಲ್ಲಿ ಮಳೆಗಾಲದಲ್ಲಿ ಮಾತ್ರ ಪ್ರಾರಂಭ ಆಗಿ ಮಳೆ ನಿಂತಾಗ ನಿಂತು ಹೋಗುವ ಒರತೆಯ ಜಲದ ಬುಗ್ಗೆಗಳು ಇದೆ.
  ನಮ್ಮ ಭಾಗದಲ್ಲಿ ಮಧ್ಯಾಹ್ನ ಎದರು ಸಿಕ್ಕಿದರೆ ಊಟ ಆಯಿತಾ ಎಂಬ ಪ್ರಶ್ನೆಯಂತೆ ನಡು ಮಳೆಗಾಲದಲ್ಲಿ ಪರಸ್ಪರ ಪ್ರಶ್ನಿಸಿಕೊಳ್ಳುವುದು "ನಿಮ್ಮಲ್ಲಿ ಜಲ ಒಡಿತಾ " , ಜಲದ ಕಣ್ಣು ಒಡಿತಾ?, ಒರತೆ ಎದ್ದಿದಿಯಾ? ಅಂತೆಲ್ಲ ಈ ಮೂಲಕ ಮಳೆಯ ಸಾಂದ್ರತೆ ಅಂದಾಜಿಸುವ ಕ್ರಮ ಇದು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...