Skip to main content

Blog number 912. ಆನಂದಪುರಂ ಇತಿಹಾಸ - 76. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಕಾಲದ ಕುಗ್ರಾಮ ಹೆಗ್ಗೋಡಿನಲ್ಲಿ ನೀನಾಸಂ, ಶಿವರಾಂ ಕಾರಂತ ರಂಗಮಂದಿರ, ಅಕ್ಷರ ಪ್ರಕಾಶನ ಸ್ಥಾಪಿಸಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ, ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಕೆ.ವಿ.ಸುಬ್ಬಣ್ಣ ರಂಗಮಂದಿರ ಆನಂದಪುರಂ ಹೋಬಳಿ ಆಚಾಪುರ ಗ್ರಾಮ ಪಂಚಾಯತ್ ಮುರುಘಾಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿಮಿ೯ಸಿದ ನನ್ನ ಸಾರ್ಥಕತೆಯ ಸವಿ ನೆನಪು

ಆನಂದಪುರಂ_ಇತಿಹಾಸ_75.

#ಆನಂದಪುರಂನ_ಮುರುಘಾಮಠದ_ಸರ್ಕಾರಿ_ಶಾಲಾವರಣದಲ್ಲಿ_ಕೆ_ವಿ_ಸುಬ್ಬಣ್ಣ_ರಂಗಮಂದಿರ,

#ಏಷ್ಯಾದ_ನೊಬೆಲ್_ಪ್ರಶಸ್ತಿ_ಎನ್ನುವ_ಮ್ಯಾಗ್ಸೆಸ್ಸೆ_ಪ್ರಶಸ್ತಿ_ಪಡೆದ_ಮೊದಲ_ಕನ್ನಡಿಗ

#ಕಾಳಿದಾಸ_ಸಮ್ಮಾನ_ಕೇಂದ್ರ_ಸಾಹಿತ್ಯಅಕಾಡೆಮಿ_ಪ್ರಶಸ್ತಿ_ಸಂಗೀತ_ನಾಟಕ_ಅಕಾಡೆಮಿ_ಪ್ರಶಸ್ತಿ_ಪಡೆದ_ಸಾಗರ_ತಾಲ್ಲೂಕಿನ_ಹೆಮ್ಮೆ.

#ಪದ್ಮಶ್ರೀ_ಪ್ರಶಸ್ತಿ_ಸ್ವೀಕರಿಸದ_ಸಜ್ಜನ_ಕೆ_ವಿ_ಸುಬ್ಬಣ್ಣ.

#ನೀನಾಸಂ_ಎಂಬ_ಸಂಸ್ಥೆ_ಸಂಸ್ಥಾಪಕ

#ಜುಲೈ_16_ಕೆವಿ_ಸುಬ್ಬಣ್ಣರ_17ನೇ_ಪುಣ್ಯಸ್ಮರಣೆ.

  ಕುಂಟಗೋಡು ವಿಭೂತಿ ಸುಬ್ಬಣ್ಣ ಅಂದರೆ ಕೆ.ವಿ.ಸುಬ್ಬಣ್ಣ ಸಾಹಿತ್ಯ - ನಾಟಕ - ಪ್ರಕಾಶನ - ಸಮಾಜ ಸೇವೆಯಲ್ಲಿ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನ ನೀನಾಸಂ ಸಂಸ್ಥಾಪಕರು.
  ಇವರದ್ದೆ ಅಕ್ಷರ ಪ್ರಕಾಶನ ಕನ್ನಡದ ಆಯ್ದ ಪುಸ್ತಕ ಪರಿಚಯ ಮಾಡುವಂತ ಪ್ರತಿಷ್ಟಿತ ಸಂಸ್ಥೆ 1957 ರಲ್ಲಿ ಪ್ರಾರಂಭ ಆಗಿ 500 ಕ್ಕೂ ಹೆಚ್ಚು ಪುಸ್ತಕ ಮುದ್ರಿಸಿದೆ.
  ಸ್ವತಃ ಸುಬ್ಬಣ್ಣರ 20ಕ್ಕೂ ಹೆಚ್ಚಿನ ಕೃತಿ ಬಿಡುಗಡೆ ಆಗಿದೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಇವರ ಕವಿರಾಜ ಮಾರ್ಗ ಮತ್ತು ಕನ್ನಡ ಭಾಷೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ (2003ರಲ್ಲಿ ) ಮತ್ತು 2001-2002 ರಲ್ಲಿ ಕಾಳಿದಾಸ ಸಮ್ಮಾನ ಪ್ರಶಸ್ತಿ, 1991ರಲ್ಲಿ ಏಷ್ಯಾದ ನೋಬೆಲ್ ಪ್ರಶಸ್ತಿ ಎಂದೇ ಕರೆಯುವ ಪಿಲಿಪೈನ್ ಸರ್ಕಾರ ನೀಡುವ ಪ್ರತಿಷ್ಟಿತ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು ನಮ್ಮ ಸುಬ್ಬಣ್ಣ.
  ಭಾರತ ಸರ್ಕಾರ  ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಸಾಗರ ತಾಲ್ಲೂಕಿನ ವ್ಯಕ್ತಿ ಇವರು ಆದರೆ ಇವರು ಪದ್ಮಶ್ರೀ ನಿರಾಕರಿಸಿದರು.
 1932 ರ ಪೆಬ್ರುವರಿ 20 ರಲ್ಲಿ ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಮುಂಡಿಗೆಸರದಲ್ಲಿ ಕೆ.ವಿ.ರಾಮಪ್ಪ ಮತ್ತು ಸಾವಿತ್ರಮ್ಮ ದಂಪತಿಯ ಮಗನಾಗಿ ಹುಟ್ಟಿದ ಕೆ.ವಿ ಸುಬ್ಬಣ್ಣರ ಮನೆತನದ ಹೆಸರು ವಿಭೂತಿ ಇವರ ಪತ್ನಿ ಶೈಲಜ ಹಾಗೂ ಪುತ್ರ ಕೆ.ವಿ.ಅಕ್ಷರ.
  ಗುಟ್ಕಾ ಕ್ಯಾನ್ಸರ್ ಗೆ ಕಾರಣ ಅಂತ ಗುಟ್ಕಾ ರದ್ದತಿಗೆ ಬಹಿರಂಗ ಹೇಳಿಕೆ ನೀಡಿದ ಮಲೆನಾಡ ಅಡಿಕೆ ಬೆಳೆಗಾರ ಕೆ.ವಿ.ಸುಬ್ಬಣ್ಣ.
  ನೇರ ನಡೆ ನುಡಿಯ ಇವರು 1949 ರಲ್ಲಿ ಕುಗ್ರಾಮವಾದ ಹೆಗ್ಗೋಡಿನಲ್ಲಿ ನೀನಾಸಂ ಅಂದರೆ ನೀಲಕಂಠ ನಾಟಕ ಸಂಘ ಸ್ಥಾಪನೆ ಮಾಡುತ್ತಾರೆ, ಹೆಗ್ಗೋಡಿನಲ್ಲಿ ಪ್ರಖ್ಯಾತ ಸಾಹಿತಿ ಶಿವರಾಂ ಕಾರಂತ ರಂಗ ಮಂದಿರ ಸ್ಥಾಪಿಸಿದರು.
   ಇಂತಹ ನನ್ನ ಸಾಗರ ತಾಲ್ಲೂಕಿನ ಪ್ರಮುಖ ವ್ಯಕ್ತಿಯಾದ ಕೆ.ವಿ.ಸುಬ್ಬಣ್ಣರ ಹೆಸರಲ್ಲಿ ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯತನ ಮುರುಘಾಮಠದ ಸರ್ಕಾರಿ ಮಾದ್ಯಮಿಕ ಶಾಲೆಯ ಆವರಣದಲ್ಲಿ ರಂಗಮಂದಿರ ನಿರ್ಮಿಸಿದ್ದೆ.
   ಇದರ ಬಗ್ಗೆ ವಿವರಿಸಲು ಹೆಗ್ಗೋಡಿನ ಸುಬ್ಬಣ್ಣರ ಮನೆಗೆ ಹೋದಾಗ ಪ್ರಾರಂಭದಲ್ಲಿ ತನ್ನ ಹೆಸರು ಇಡುವ ಬಗ್ಗೆ ಒಪ್ಪಿಗೆ ಇಲ್ಲ ಅಂದಾಗ ನಾನು "ನೀವು ಹೆಗ್ಗೋಡಿನಲ್ಲಿ ಶಿವರಾಂ ಕಾರಂತರ ಹೆಸರಿನಲ್ಲಿ ರಂಗ ಮಂದಿರ ನಾಮಕರಣಕ್ಕೆ ನೀವು ಶಿವರಾಂ ಕಾರಂತರ ಜೊತೆ ಸಂವಾದ ಮಾಡಿದ ಘಟನೆ ನಿಮ್ಮ ಪುಸ್ತಕದಲ್ಲಿ ಓದಿದೆ" ಅಂದಾಗ ಅವರು ನನ್ನ ಪುಸ್ತಕ ಓದಿನ ಹವ್ಯಾಸ ಅಭಿನಂದಿಸಿದರು.
  ನಿಮ್ಮಂತಹ ಸಾದಕರು ಮುಂದಿನ ತಲೆಮಾರಿಗೆ ನೆನಪಿನಲ್ಲಿರಲು ನನ್ನ ಸಣ್ಣ ಪ್ರಯತ್ನಕ್ಕೆ ನೀವು ಒಪ್ಪಬೇಕೆಂದು ಅವರನ್ನು ಒಪ್ಪಿಸಿ ಅವರಿಂದ ಲಿಖಿತ ಅನುಮತಿ ಪತ್ರ ಪಡೆದೆ ಆದರೆ ಅವರ ಹೆಸರಿನ ರಂಗ ಮಂದಿರ ಉದ್ಘಾಟಿಸಲು ಅವರು ಮುಜುಗರದಿಂದ ಒಪ್ಪಲಿಲ್ಲ, ನಾವೆಲ್ಲ ಸೇರಿ ಅವತ್ತು ಈ ಶಾಲೆಯ ಶಿಕ್ಷಕರಾಗಿದ್ದ ಇವತ್ತಿನ ಸಾಗರ ತಾಲ್ಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ಟಾಮಿ, ಮುಖ್ಯ ಶಿಕ್ಷಕರಾದ ಗಂಗಾದರ್, ಗ್ರಾಮ ಪಂಚಾಯತ್ ಅಧ್ಯಕ್ಷ ಸಣ್ಣೀರಪ್ಪ, ಉಪಾದ್ಯಕ್ಷ ನಜೀರ್ ಖಾನ್ ಸಮ್ಮುಖದಲ್ಲಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ ಅಧ್ಯಕ್ಷತೆಯಲ್ಲಿ ಮುರುಘರಾಜ ಮಠದ ಸ್ವಾಮೀಜಿಯವರಿಂದ ಉದ್ಘಾಟಿಸಿದೆವು.
  16- ಜುಲೈ -2005 ರಲ್ಲಿ ಇಹಲೋಕ ತ್ಯಜಿಸಿದ ಕೆ.ವಿ.ಸುಬ್ಬಣ್ಣರ 17 ನೇ ಪುಣ್ಯ ತಿಥಿ ಮುಂದಿನ ಶನಿವಾರ ಹೆಗ್ಗೋಡಿನಲ್ಲಿ ಹಮ್ಮಿಕೊಂಡಿದ್ದಾರೆ, ದಿ.ಶಂಕರ್ ನಾಗ್ ದರ್ಮ ಪತ್ನಿ ಆರುಂದತಿ ನಾಗ್ ಉಪನ್ಯಾಸ ಮತ್ತು ಅವತ್ತು ಸಂಜೆ 7ಕ್ಕೆ ನಾಟಕ ಪ್ರದರ್ಶನ ಇದೆ ಎಂದು ನೀನಾಸಂ ಪ್ರಾಂಶುಪಾಲ ಗಣೇಶ್ ಹೆಗ್ಗೋಡು ಅವರ ಪೋಸ್ಟ್ ನೋಡಿದ ಮೇಲೆ ನೆನಪಾಯಿತು.
 ಇಕ್ಕೇರಿ ಬಂಗಾರದ ಗಣಿ ವಿರೋದಿ ಹೋರಾಟದಲ್ಲಿ, 1999 ರಲ್ಲಿ ನಾನು ಪಕ್ಷೇತರನಾಗಿ ವಿಧಾನ ಸಭಾ ಚುನಾವಣೆಗೆ ಸ್ಪರ್ದಿಸಿದಾಗ ಕೆ.ವಿ.ಸುಬ್ಬಣ್ಣರ ಅಧ್ಯಕ್ಷತೆಯಲ್ಲಿ ಸಾಗರದ ಪುರಸಭಾ ಆವರಣದಲ್ಲಿ ನಡೆದ ಎಲ್ಲಾ ವಿಧಾನ ಸಭಾ ಅಭ್ಯರ್ಥಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ನನ್ನ ಭಾಷಣ ಅಭಿನಂದಿಸಿದ ಕೆ.ವಿ.ಸುಬ್ಬಣ್ಣ ನನಗೆ ಸದಾ ಸ್ಮರಣೀಯರು ಅವರ ಜೊತೆಯ ಸಬೆಗಳು ಕೂಡ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ