Skip to main content

Blog number 912. ಆನಂದಪುರಂ ಇತಿಹಾಸ - 76. ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಒಂದು ಕಾಲದ ಕುಗ್ರಾಮ ಹೆಗ್ಗೋಡಿನಲ್ಲಿ ನೀನಾಸಂ, ಶಿವರಾಂ ಕಾರಂತ ರಂಗಮಂದಿರ, ಅಕ್ಷರ ಪ್ರಕಾಶನ ಸ್ಥಾಪಿಸಿ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ, ಪದ್ಮಶ್ರೀ ಪ್ರಶಸ್ತಿ ನಿರಾಕರಿಸಿದ ಕೆ.ವಿ.ಸುಬ್ಬಣ್ಣ ರಂಗಮಂದಿರ ಆನಂದಪುರಂ ಹೋಬಳಿ ಆಚಾಪುರ ಗ್ರಾಮ ಪಂಚಾಯತ್ ಮುರುಘಾಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನಿಮಿ೯ಸಿದ ನನ್ನ ಸಾರ್ಥಕತೆಯ ಸವಿ ನೆನಪು

ಆನಂದಪುರಂ_ಇತಿಹಾಸ_75.

#ಆನಂದಪುರಂನ_ಮುರುಘಾಮಠದ_ಸರ್ಕಾರಿ_ಶಾಲಾವರಣದಲ್ಲಿ_ಕೆ_ವಿ_ಸುಬ್ಬಣ್ಣ_ರಂಗಮಂದಿರ,

#ಏಷ್ಯಾದ_ನೊಬೆಲ್_ಪ್ರಶಸ್ತಿ_ಎನ್ನುವ_ಮ್ಯಾಗ್ಸೆಸ್ಸೆ_ಪ್ರಶಸ್ತಿ_ಪಡೆದ_ಮೊದಲ_ಕನ್ನಡಿಗ

#ಕಾಳಿದಾಸ_ಸಮ್ಮಾನ_ಕೇಂದ್ರ_ಸಾಹಿತ್ಯಅಕಾಡೆಮಿ_ಪ್ರಶಸ್ತಿ_ಸಂಗೀತ_ನಾಟಕ_ಅಕಾಡೆಮಿ_ಪ್ರಶಸ್ತಿ_ಪಡೆದ_ಸಾಗರ_ತಾಲ್ಲೂಕಿನ_ಹೆಮ್ಮೆ.

#ಪದ್ಮಶ್ರೀ_ಪ್ರಶಸ್ತಿ_ಸ್ವೀಕರಿಸದ_ಸಜ್ಜನ_ಕೆ_ವಿ_ಸುಬ್ಬಣ್ಣ.

#ನೀನಾಸಂ_ಎಂಬ_ಸಂಸ್ಥೆ_ಸಂಸ್ಥಾಪಕ

#ಜುಲೈ_16_ಕೆವಿ_ಸುಬ್ಬಣ್ಣರ_17ನೇ_ಪುಣ್ಯಸ್ಮರಣೆ.

  ಕುಂಟಗೋಡು ವಿಭೂತಿ ಸುಬ್ಬಣ್ಣ ಅಂದರೆ ಕೆ.ವಿ.ಸುಬ್ಬಣ್ಣ ಸಾಹಿತ್ಯ - ನಾಟಕ - ಪ್ರಕಾಶನ - ಸಮಾಜ ಸೇವೆಯಲ್ಲಿ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಹೆಗ್ಗೋಡಿನ ನೀನಾಸಂ ಸಂಸ್ಥಾಪಕರು.
  ಇವರದ್ದೆ ಅಕ್ಷರ ಪ್ರಕಾಶನ ಕನ್ನಡದ ಆಯ್ದ ಪುಸ್ತಕ ಪರಿಚಯ ಮಾಡುವಂತ ಪ್ರತಿಷ್ಟಿತ ಸಂಸ್ಥೆ 1957 ರಲ್ಲಿ ಪ್ರಾರಂಭ ಆಗಿ 500 ಕ್ಕೂ ಹೆಚ್ಚು ಪುಸ್ತಕ ಮುದ್ರಿಸಿದೆ.
  ಸ್ವತಃ ಸುಬ್ಬಣ್ಣರ 20ಕ್ಕೂ ಹೆಚ್ಚಿನ ಕೃತಿ ಬಿಡುಗಡೆ ಆಗಿದೆ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಇವರ ಕವಿರಾಜ ಮಾರ್ಗ ಮತ್ತು ಕನ್ನಡ ಭಾಷೆ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ (2003ರಲ್ಲಿ ) ಮತ್ತು 2001-2002 ರಲ್ಲಿ ಕಾಳಿದಾಸ ಸಮ್ಮಾನ ಪ್ರಶಸ್ತಿ, 1991ರಲ್ಲಿ ಏಷ್ಯಾದ ನೋಬೆಲ್ ಪ್ರಶಸ್ತಿ ಎಂದೇ ಕರೆಯುವ ಪಿಲಿಪೈನ್ ಸರ್ಕಾರ ನೀಡುವ ಪ್ರತಿಷ್ಟಿತ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪಡೆದ ಮೊದಲ ಕನ್ನಡಿಗರು ನಮ್ಮ ಸುಬ್ಬಣ್ಣ.
  ಭಾರತ ಸರ್ಕಾರ  ಪದ್ಮಶ್ರೀ ಪ್ರಶಸ್ತಿ ಪಡೆದ ಮೊದಲ ಸಾಗರ ತಾಲ್ಲೂಕಿನ ವ್ಯಕ್ತಿ ಇವರು ಆದರೆ ಇವರು ಪದ್ಮಶ್ರೀ ನಿರಾಕರಿಸಿದರು.
 1932 ರ ಪೆಬ್ರುವರಿ 20 ರಲ್ಲಿ ಸಾಗರ ತಾಲ್ಲೂಕಿನ ಹೆಗ್ಗೋಡು ಸಮೀಪದ ಮುಂಡಿಗೆಸರದಲ್ಲಿ ಕೆ.ವಿ.ರಾಮಪ್ಪ ಮತ್ತು ಸಾವಿತ್ರಮ್ಮ ದಂಪತಿಯ ಮಗನಾಗಿ ಹುಟ್ಟಿದ ಕೆ.ವಿ ಸುಬ್ಬಣ್ಣರ ಮನೆತನದ ಹೆಸರು ವಿಭೂತಿ ಇವರ ಪತ್ನಿ ಶೈಲಜ ಹಾಗೂ ಪುತ್ರ ಕೆ.ವಿ.ಅಕ್ಷರ.
  ಗುಟ್ಕಾ ಕ್ಯಾನ್ಸರ್ ಗೆ ಕಾರಣ ಅಂತ ಗುಟ್ಕಾ ರದ್ದತಿಗೆ ಬಹಿರಂಗ ಹೇಳಿಕೆ ನೀಡಿದ ಮಲೆನಾಡ ಅಡಿಕೆ ಬೆಳೆಗಾರ ಕೆ.ವಿ.ಸುಬ್ಬಣ್ಣ.
  ನೇರ ನಡೆ ನುಡಿಯ ಇವರು 1949 ರಲ್ಲಿ ಕುಗ್ರಾಮವಾದ ಹೆಗ್ಗೋಡಿನಲ್ಲಿ ನೀನಾಸಂ ಅಂದರೆ ನೀಲಕಂಠ ನಾಟಕ ಸಂಘ ಸ್ಥಾಪನೆ ಮಾಡುತ್ತಾರೆ, ಹೆಗ್ಗೋಡಿನಲ್ಲಿ ಪ್ರಖ್ಯಾತ ಸಾಹಿತಿ ಶಿವರಾಂ ಕಾರಂತ ರಂಗ ಮಂದಿರ ಸ್ಥಾಪಿಸಿದರು.
   ಇಂತಹ ನನ್ನ ಸಾಗರ ತಾಲ್ಲೂಕಿನ ಪ್ರಮುಖ ವ್ಯಕ್ತಿಯಾದ ಕೆ.ವಿ.ಸುಬ್ಬಣ್ಣರ ಹೆಸರಲ್ಲಿ ಆನಂದಪುರಂ ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ಆನಂದಪುರಂ ಹೋಬಳಿಯ ಆಚಾಪುರ ಗ್ರಾಮ ಪಂಚಾಯತನ ಮುರುಘಾಮಠದ ಸರ್ಕಾರಿ ಮಾದ್ಯಮಿಕ ಶಾಲೆಯ ಆವರಣದಲ್ಲಿ ರಂಗಮಂದಿರ ನಿರ್ಮಿಸಿದ್ದೆ.
   ಇದರ ಬಗ್ಗೆ ವಿವರಿಸಲು ಹೆಗ್ಗೋಡಿನ ಸುಬ್ಬಣ್ಣರ ಮನೆಗೆ ಹೋದಾಗ ಪ್ರಾರಂಭದಲ್ಲಿ ತನ್ನ ಹೆಸರು ಇಡುವ ಬಗ್ಗೆ ಒಪ್ಪಿಗೆ ಇಲ್ಲ ಅಂದಾಗ ನಾನು "ನೀವು ಹೆಗ್ಗೋಡಿನಲ್ಲಿ ಶಿವರಾಂ ಕಾರಂತರ ಹೆಸರಿನಲ್ಲಿ ರಂಗ ಮಂದಿರ ನಾಮಕರಣಕ್ಕೆ ನೀವು ಶಿವರಾಂ ಕಾರಂತರ ಜೊತೆ ಸಂವಾದ ಮಾಡಿದ ಘಟನೆ ನಿಮ್ಮ ಪುಸ್ತಕದಲ್ಲಿ ಓದಿದೆ" ಅಂದಾಗ ಅವರು ನನ್ನ ಪುಸ್ತಕ ಓದಿನ ಹವ್ಯಾಸ ಅಭಿನಂದಿಸಿದರು.
  ನಿಮ್ಮಂತಹ ಸಾದಕರು ಮುಂದಿನ ತಲೆಮಾರಿಗೆ ನೆನಪಿನಲ್ಲಿರಲು ನನ್ನ ಸಣ್ಣ ಪ್ರಯತ್ನಕ್ಕೆ ನೀವು ಒಪ್ಪಬೇಕೆಂದು ಅವರನ್ನು ಒಪ್ಪಿಸಿ ಅವರಿಂದ ಲಿಖಿತ ಅನುಮತಿ ಪತ್ರ ಪಡೆದೆ ಆದರೆ ಅವರ ಹೆಸರಿನ ರಂಗ ಮಂದಿರ ಉದ್ಘಾಟಿಸಲು ಅವರು ಮುಜುಗರದಿಂದ ಒಪ್ಪಲಿಲ್ಲ, ನಾವೆಲ್ಲ ಸೇರಿ ಅವತ್ತು ಈ ಶಾಲೆಯ ಶಿಕ್ಷಕರಾಗಿದ್ದ ಇವತ್ತಿನ ಸಾಗರ ತಾಲ್ಲೂಕಿನ ಸಾಹಿತ್ಯ ಪರಿಷತ್ ಅಧ್ಯಕ್ಷ ವಿ.ಟಿ. ಸ್ಟಾಮಿ, ಮುಖ್ಯ ಶಿಕ್ಷಕರಾದ ಗಂಗಾದರ್, ಗ್ರಾಮ ಪಂಚಾಯತ್ ಅಧ್ಯಕ್ಷ ಸಣ್ಣೀರಪ್ಪ, ಉಪಾದ್ಯಕ್ಷ ನಜೀರ್ ಖಾನ್ ಸಮ್ಮುಖದಲ್ಲಿ, ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಶೇಖರ್ ಪೂಜಾರಿ ಅಧ್ಯಕ್ಷತೆಯಲ್ಲಿ ಮುರುಘರಾಜ ಮಠದ ಸ್ವಾಮೀಜಿಯವರಿಂದ ಉದ್ಘಾಟಿಸಿದೆವು.
  16- ಜುಲೈ -2005 ರಲ್ಲಿ ಇಹಲೋಕ ತ್ಯಜಿಸಿದ ಕೆ.ವಿ.ಸುಬ್ಬಣ್ಣರ 17 ನೇ ಪುಣ್ಯ ತಿಥಿ ಮುಂದಿನ ಶನಿವಾರ ಹೆಗ್ಗೋಡಿನಲ್ಲಿ ಹಮ್ಮಿಕೊಂಡಿದ್ದಾರೆ, ದಿ.ಶಂಕರ್ ನಾಗ್ ದರ್ಮ ಪತ್ನಿ ಆರುಂದತಿ ನಾಗ್ ಉಪನ್ಯಾಸ ಮತ್ತು ಅವತ್ತು ಸಂಜೆ 7ಕ್ಕೆ ನಾಟಕ ಪ್ರದರ್ಶನ ಇದೆ ಎಂದು ನೀನಾಸಂ ಪ್ರಾಂಶುಪಾಲ ಗಣೇಶ್ ಹೆಗ್ಗೋಡು ಅವರ ಪೋಸ್ಟ್ ನೋಡಿದ ಮೇಲೆ ನೆನಪಾಯಿತು.
 ಇಕ್ಕೇರಿ ಬಂಗಾರದ ಗಣಿ ವಿರೋದಿ ಹೋರಾಟದಲ್ಲಿ, 1999 ರಲ್ಲಿ ನಾನು ಪಕ್ಷೇತರನಾಗಿ ವಿಧಾನ ಸಭಾ ಚುನಾವಣೆಗೆ ಸ್ಪರ್ದಿಸಿದಾಗ ಕೆ.ವಿ.ಸುಬ್ಬಣ್ಣರ ಅಧ್ಯಕ್ಷತೆಯಲ್ಲಿ ಸಾಗರದ ಪುರಸಭಾ ಆವರಣದಲ್ಲಿ ನಡೆದ ಎಲ್ಲಾ ವಿಧಾನ ಸಭಾ ಅಭ್ಯರ್ಥಿಗಳ ಮುಖಾಮುಖಿ ಕಾರ್ಯಕ್ರಮದಲ್ಲಿ ನನ್ನ ಭಾಷಣ ಅಭಿನಂದಿಸಿದ ಕೆ.ವಿ.ಸುಬ್ಬಣ್ಣ ನನಗೆ ಸದಾ ಸ್ಮರಣೀಯರು ಅವರ ಜೊತೆಯ ಸಬೆಗಳು ಕೂಡ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...