Skip to main content

Blog number 913.ಆನಂದಪುರಂ ಇತಿಹಾಸ ಭಾಗ-76. ಕಾಯಕಯೋಗಿ ನಡೆದಾಡುವ ದೇವರು ಸಿದ್ಧಗಂಗಾ ಸ್ವಾಮಿಗಳು ಆನಂದಪುರಂಗೆ ಬಂದಿದ್ದರು. 24- ಏಪ್ರಿಲ್ -1969ರಂದು ನರಸೀಪುರದಲ್ಲಿ ಮಹಾತ್ಮಾ ಗಾಂಧೀಜಿ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಶಾಲಾ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿದ್ದರು.

ಆನಂದಪುರಂ_ಇತಿಹಾಸ_ಭಾಗ_76.

#ಕಾಯಕಯೋಗಿ_ಶತಮಾನದ_ಸಂತ_ಸಿದ್ದಗಂಗಾ_ಸ್ವಾಮೀಜಿ_ಆನಂದಪುರಂಗೆ_ಬಂದಿದ್ದರು.

#ಸಮೀಪದ_ನರಸೀಪುರದದಲ್ಲಿ_ಮಹಾತ್ಮಾಗಾಂದೀಜಿ_ಜನ್ಮಶತಾಬ್ಧಿ_ಸ್ಮರಣಾರ್ಥ_ಪ್ರಾಥಮಿಕ_ಶಾಲಾ_ಶಂಕುಸ್ಥಾಪನೆಗೆ 

#ಸ್ಥಳಿಯರು_ನೀಡಿದ_ಜಾಗದಲ್ಲಿ_ಆಗಿನ_ಸರ್ಕಾರದ_PWD_ಇಂಜಿನಿಯರ್_ಸಿಬ್ಬಂದಿ_ಕಂಟ್ರಾಕ್ಟರ್_ನಿರ್ಮಿಸಿದ_ಶಾಲೆ,

#ನರಸೀಪುರ_ಶಾಲಾ_ಕಟ್ಟಡ_ಶಂಕು_ಸ್ಥಾಪನೆ_24_ಏಪ್ರಿಲ್_1969 .
  
#ಶಂಕುಸ್ಥಾಪನ_ಶಿಲಾಪಲಕ_ಶಾಲಾ_ಕೊಠಡಿಯ_ಗೋಡೆಯಲ್ಲಿ_ನೋಡಬಹುದು.
   ಮಹಾತ್ಮಾ ಗಾಂಧೀಜಿ ಜನ್ಮ ದಿನ 2 ಅಕ್ಟೋಬರ್ 1869, ಭಾರತ ದೇಶದ ಸ್ವಾತಂತ್ರ್ಯ ಹೋರಾಟದ ನೇತಾರರಾದ ಅವರ ಜನ್ಮ ಶತಮಾನೋತ್ಸವ 1969 ರಲ್ಲಿ ದೇಶದಾದ್ಯಂತ ಅತ್ಯಂತ ವಿಜೃಂಬಣೆಯಿಂದ ಆಚರಿಸಲಾಗಿತ್ತು.
   ಜನ್ಮ ಶತಮಾನೋತ್ಸವದ ವಿಶೇಷ ಅಂಚೆ ಚೀಟಿ, ಅಂಚೆ ಕಾರ್ಡು, ನಾಣ್ಯಗಳು, ಕರೆನ್ಸಿಗಳು ಮತ್ತು ಶಾಲೆ ಮುಂತಾದ ನಿರ್ಮಾಣ ಕೂಡ ಆಯಿತು.
   ಮಹಾತ್ಮಾ ಗಾಂಧಿಯವರ ಜನ್ಮ ಶತಮಾನೋತ್ಸವಕ್ಕೆ ಭಾರತ ಮಾತ್ರವಲ್ಲ ವಿಶ್ವದ 40 ದೇಶಗಳು ಅವರ ಸ್ಮರಣಾರ್ಥವಾಗಿ 1969 ರಲ್ಲಿ ವಿಶೇಷ ಅಂಚೆ ಚೀಟಿ ಲೋಕಾರ್ಪಣೆ ಮಾಡಿ ಮಹಾತ್ಮಾ ಗಾಂಧೀಜಿಯವರನ್ನು ಸ್ಮರಿಸಿ ಗೌರವಾರ್ಪಣೆ ಮಾಡಿತ್ತು. (ಬೇರೆ ಬೇರೆ ಸಂದರ್ಭಗಳಲ್ಲಿ ಗಾಂಧೀಜಿ ಅಂಚೆ ಚೀಟಿ ಬಿಡುಗಡೆ ಮಾಡಿದ ದೇಶಗಳ ಸಂಖ್ಯೆ 100 ಕ್ಕೂ ಹೆಚ್ಚು)
   ಸ್ವಾತಂತ್ರ ಪಡೆದ 22ನೇ ವಾರ್ಷಿಕೋತ್ಸವ ಕೂಡ ಇದಾದ್ದರಿಂದ ಭಾರತ ದೇಶದಲ್ಲಿ ಗಾಂಧಿ ಜನ್ಮ ಶತಮಾನೋತ್ಸವ ಸಂಭ್ರಮದಲ್ಲಿ ಆಚರಿಸಲಾಯಿತು.
  ಈ ಸಂದರ್ಭದಲ್ಲಿ ಸರ್ಕಾರದ ಆಡಳಿತದಲ್ಲಿನ ನೌಕರ ವೃಂದ ಮತ್ತು ಗುತ್ತಿಗೆದಾರರು ಕೂಡ ಈ ಸಂಭ್ರಮಾಚರಣೆಯಲ್ಲಿ ಭಾಗಿಯಾಗಿತ್ತು ಅಂದರೆ ಸುಮ್ಮನೆ ಭಾಗಿವಹಿಸುವುದಲ್ಲ ಅವರೆಲ್ಲ ಸೇರಿ ಅವರ ವೇತನದಲ್ಲಿನ ಹಣ, ಅವರ ಸಂಪಾದನೆಯ ಹಣ ಸಂಗ್ರಹಿಸಿ ಮಹಾತ್ಮ ಗಾಂಧೀಜಿ ಜನ್ಮ ಶತಮಾನೋತ್ಸವದ ಅಂಗವಾಗಿ ಶಾಶ್ವತವಾದ ಸ್ಮರಣೆ ದಾಖಲಿಸುವ ಮಹತ್ತರ ಕೆಲಸವದು.
  ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ PWD ಇಲಾಖೆ ಅಧಿಕಾರಿಗಳು, PWD ಕಂಟ್ರಾಕ್ಟರ್ ಗಳು ಮತ್ತು ನೀರಾವರಿ ಇಲಾಖೆ ಕಂಟ್ರಾಕ್ಟರ್ ಗಳು ಸೇರಿ ಮಹಾತ್ಮ ಗಾಂಧೀಜಿ ಜನ್ಮ ಶತಮಾನೋತ್ಸವ ಸ್ಮರಣಾರ್ಥ ಆನಂದಪುರಂ ಹೋಬಳಿಯ  ನರಸೀಪುರದಲ್ಲಿ (ಈಗಿನ ಶಿಕಾರಿಪುರ ಆನಂದಪುರಂ ರಾಷ್ಟ್ರೀಯ ಹೆದ್ದಾರಿ, ಆನಂದಪುರಂನಿಂದ ಶಿಕಾರಿಪುರ ಮಾರ್ಗದಲ್ಲಿ ಎಡ ಭಾಗದಲ್ಲಿ) ಪ್ರಾಥಮಿಕ ಶಾಲೆ ನಿರ್ಮಿಸಲು ಯೋಚಿಸುತ್ತಾರೆ.
   1964 ರಲ್ಲಿ ಸಮೀಪದ ಅಂಬ್ಲಿಗೋಳ ಡ್ಯಾಂ ಉದ್ಘಾಟನೆ ಆಗಿದ್ದರೂ ಬಾಕಿ ಉಳಿದ ಕಾಮಗಾರಿ 1969 ರಲ್ಲೂ ನಡೆಯುತ್ತಿತ್ತು ಈ ಎಲ್ಲಾ ನಿರಾವರಿ ಇಲಾಖಾ ಕಾಮಗಾರಿ ನಿರ್ವಹಿಸುವ ಕಂಟ್ರಾಕ್ಟರ್ ಗಳೂ ಕೈಜೋಡಿಸುತ್ತಾರೆ.
  ಆ ಕಾಲದ ಹಿರಿಯ ಸಮಾಜವಾದಿ ದುರೀಣ ಖೈರಾದ ಬಿ. ಕೆ. ಕೊಲ್ಲಪ್ಪ ನೇತೃತ್ವದಲ್ಲಿ, ತಂಗಳವಾಡಿ ಬಿ.ಧರ್ಮಪ್ಪ (ನಂತರ 1883 ರಲ್ಲಿ ಶಾಸಕರಾಗುತ್ತಾರೆ), ಕೌತಿ ನಾಗಪ್ಪ, ನರಸೀಪುರದ ಎನ್.ಡಿ. ಹುಚ್ಚಪ್ಪ, ಆನಂದಪುರಂನ ಕಂಟ್ರಾಕ್ಟರ್ ತಿರುಮಲಾಚಾರ್ ಅಯ್ಯಂಗಾರ್ ಸೇರಿ ಈ ಘನ ಕಾಯ೯ದ ನೇತೃತ್ವವಹಿಸುತ್ತಾರೆ ಇವರೆಲ್ಲ ಸೇರಿ 
  ನರಸೀಪುರದ ಗ್ರಾಮಸ್ಥರನ್ನು ಸೇರಿಸಿ ತಮ್ಮ ಉದ್ದೇಶ ತಿಳಿಸುತ್ತಾರೆ, ಆಗ ನರಸೀಪುರ - ತಳಗೇರಿ ಭಾಗದಲ್ಲಿ ಶಾಲೆ ಇದ್ದಿರಲಿಲ್ಲ ದೂರದ ಹೊಸಕೊಪ್ಪ ಮತ್ತು ಗೌತಮಪುರದಲ್ಲಿ ಮಾತ್ರ ಶಾಲೆ ಪ್ರಾರಂಭ ಆಗಿತ್ತು, 1964 ರಲ್ಲಿ ಹೊಸಕೊಪ್ಪ ಶಾಲೆ ಪ್ರಾರಂಭ ಆಗಿತ್ತು.
   ಈ ವಿಚಾರ ಕೇಳಿ ನರಸೀಪುರದ ಗ್ರಾಮಸ್ಥರು ತಮ್ಮ ಊರಿಗೆ ಶಾಲೆ ಬರುವ ವಿಚಾರದಿಂದ ಪುಳಕಿತರಾಗುತ್ತಾರೆ ಮತ್ತು ತಮ್ಮ ಊರಲ್ಲೇ ಶಾಲೆ ಪ್ರಾರಂಭವಾಗಲಿ ಎಂದು ಸಂತೋಷದಿಂದ ಜಾಗ ನೀಡುತ್ತಾರೆ.
  ಮಹಾತ್ಮಾ ಗಾಂಧೀಜಿ ಜನ್ಮ ಶತಮಾನೋತ್ಸವ ಸಂಭ್ರಮದ ಆಚರಣೆ ಸ್ಮರಣೀಯ ಮಾಡುವ ಪ್ರಾಥಮಿಕ ಶಾಲಾ ಕೊಠಡಿ ನಿರ್ಮಾಣವನ್ನ ಕೈಗೊಂಡ ಇವರೆಲ್ಲ ಸೇರಿ ಈ ಸಂದರ್ಭವನ್ನೂ ಇನ್ನೊಂದು ಐತಿಹಾಸಿಕ ಸ್ಮರಣೀಯ ದಾಖಲೆಗೆ ಕಾರಣವಾಗುವ ಕೆಲಸ ಮಾಡಿದರು ಅದೇನೆಂದರೆ ತುಮಕೂರಿನ ಸಿದ್ಧಗಂಗಾ ಮಠದ ಶ್ರೀಗಳನ್ನು ಕರೆತಂದು ಈ ಶಾಲೆಯ ಶಂಕುಸ್ಥಾಪನೆ ನೆರವೇರಿಸುತ್ತಾರೆ.
   24 ಏಪ್ರಿಲ್ 1969 ರ ಆ ದಿನ ಸಿದ್ದಗಂಗಾ ಶ್ರೀಗಳು ಆನಂದಪುರಂನ ನರಸೀಪುರದಲ್ಲಿ ಮಹಾತ್ಮಾ ಗಾಂಧೀಜಿ ಜನ್ಮ ಶತಮಾನದ ಸ್ಮರಣಾರ್ಥ ನಿರ್ಮಿಸುವ ಪ್ರಾಥಮಿಕ ಶಾಲಾ ಕಟ್ಟಡದ ಭೂಮಿ ಪೂಜೆ ಮಾಡಿ ಶಂಕುಸ್ಥಾಪನೆ ನೆರವೇರಿಸುತ್ತಾರೆ, ಅವತ್ತು ಸುತ್ತ ಮುತ್ತಲಿನ ಗ್ರಾಮಸ್ಥರೆಲ್ಲ ಸೇರಿ ಸಿದ್ದಗಂಗಾ ಸ್ವಾಮೀಜಿಗಳ ಸ್ವಾಗತಿಸುತ್ತಾರೆ,ಅದೇ ವರ್ಷದಲ್ಲಿ ಶಾಲೆ ಪ್ರಾರಂಭ ಆಗುತ್ತದೆ.
  ಇವತ್ತು ನರಸೀಪುರದ ಶಾಲೆ ಅನೇಕ ಕೊಠಡಿಗಳ ಜೊತೆ ಮಾಧ್ಯಮಿಕ ಶಾಲೆಯಾಗಿ ಅನೇಕ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ ಈ ಶಾಲೆಗೆ ನಿರ್ಮಾಣವಾಗಿ 53 ವರ್ಷ ವಾಯಿತು.
  ಇವತ್ತೂ ಈ ಶಾಲೆಯಲ್ಲಿ 24- ಏಪ್ರಿಲ್ 1969 ರಲ್ಲಿ ಸಿದ್ದಗಂಗಾ ಸ್ಟಾಮಿಗಳಿಂದ ಶಂಕುಸ್ಥಾಪನೆ ಮಾಡಿದ ಶಾಲಾ ಕಟ್ಟಡದ ಗೋಡೆಗೆ ಅಳವಡಿಸಿದ ಶಿಲಾ ಪಲಕ ಸಂರಕ್ಷಿಸಿಕೊಂಡು ಬಂದ ಶಿಕ್ಷಕ ವರ್ಗ ಮತ್ತು ಗ್ರಾಮಸ್ಥರು ಅಭಿನಂದನೀಯರು.
  ಸಿದ್ದಗಂಗಾ ಸ್ವಾಮೀಜಿ ಶತಾಯುಷಿಗಳಾಗಿ ಬದುಕಿದರು, ಸಿದ್ಧಗಂಗಾದಲ್ಲಿ ನಿತ್ಯ ಸಾವಿರಾರು ಜನರಿಗೆ ಅನ್ನದಾಸೋಹ, ಪ್ರತಿ ವರ್ಷ 10 ಸಾವಿರಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ವಿದ್ಯಾ ದಾಸೋಹದಿಂದ, ನಿಸ್ವಾರ್ಥ ಸಮಾಜ ಸೇವೆಯಿಂದ ದೈವ ಸ್ವರೂಪರಾಗಿ ನಡೆದಾಡುವ ದೇವರೆಂದೇ ಪ್ರಸಿದ್ಧರಾದರು ಇವರ ಅಮೃತ ಹಸ್ತದಲ್ಲಿ ಶಂಕುಸ್ಥಾಪನೆ ಆದ ನರಸೀಪುರ ಶಾಲೆ ಎಂಬುದು ನಮಗೆಲ್ಲ ಹೆಮ್ಮೆಯ ವಿಷಯ ಮತ್ತು ಈ ನಡೆದಾಡುವ ದೇವರು ನಮ್ಮ ಆನಂದಪುರಂ ನೆಲದಲ್ಲಿ ನಡೆದಾಡಿದರೆಂಬುದು ಕೂಡ ಪುಣ್ಯ ಸ್ಮರಣೆ ಆಗಿದೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ