Skip to main content

Blog number 926. ಶಿವಮೊಗ್ಗದ ಮಾಜಿ ವಿದಾನ ಪರಿಷತ್ ಸದಸ್ಯರಾದ ಆರ್.ಪ್ರಸನ್ನ ಕುಮಾರ್ ಮತ್ತು ಇವರ ತಂದೆ ಹಿರಿಯ ಕಾಂಗ್ರೇಸ್ ಮುಖಂಡರಾಗಿದ್ದ ಟಿ.ರಾಮಪ್ಪನವರು ಇಬ್ಬರೂ ಶಿವಮೊಗ್ಗದ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದ ರಾಜಕಾರಣದ ದಾಖಲೆ.

#ಶಿವಮೊಗ್ಗದ_ಮಾಜಿ_ವಿಧಾನಪರಿಷತ್_ಸದಸ್ಯರಾದ_ಆರ್_ಪ್ರಸನ್ನಕುಮಾರ್

#ತಮ್ಮ_ಪುತ್ರನ_ವಿವಾಹ_ಆಹ್ವಾನಪತ್ರಿಕೆ_ನೀಡಲು_ಬಂದಿದ್ದರು.

#ಇವರ_ತಂದೆ_ಟಿ_ರಾಮಪ್ಪನವರು_ಬದರಿನಾರಾಯಣಯ್ಯಂಗಾರರ_ಚುನಾವಣೆಗಳನ್ನು_ಮಾಡಿದವರು

#ಶಿವಮೊಗ್ಗ_ಜಿಲ್ಲಾ_ವಿದ್ಯಾರ್ಥಿಕಾಂಗ್ರೇಸ್_ಯುವಕಾಂಗ್ರೇಸ್_ಜಿಲ್ಲಾಕಾಂಗ್ರೇಸ್_ಮುನ್ಸಿಪಲ್_ಕೌನ್ಸಿಲರ್
#ಶಿವಮೊಗ_ಭದ್ರಾವತಿ_ಕಾಪೋ೯ರೇಷನ್_ಕಾಪೋ೯ರೇಟರ್_ವಿದಾನಪರಿಷತ್_ಸದಸ್ಯರೂ_ಆದವರು

#ತಂದೆ_ಮಗ_ಇಬ್ಬರೂ_ಶಿವಮೊಗ್ಗ_ಮುನ್ಸಿಪಲ್_ಅಧ್ಯಕ್ಷರಾಗಿದ್ದು_ದಾಖಲೆ

  ಆರ್. ಪ್ರಸನ್ನಕುಮಾರ್ ಶಿವಮೊಗ್ಗದ ಪ್ರತಿಷ್ಠಿತ ಕುಟುಂಬ ಟಿ.ರಾಮಪ್ಪರವರ ಪುತ್ರ, ಇವರ ಸಹೋದರ ಐಪಿಎಸ್ ಮಾಡಿ ಬೆಂಗಳೂರಲ್ಲಿ ಡಿಐಜಿ ಆಗಿದ್ದಾರೆ.
   ಕಾಂಗ್ರೇಸ್ ಪಕ್ಷದ ನಿಷ್ಟಾವಂತ ಕುಟುಂಬ ಇವರದ್ದು, ಇವರ ತಂದೆ 1967ಮತ್ತು 1972ರಲ್ಲಿ  ಆನಂದಪುರಂನ ಬದರಿನಾರಾಯಣ ಅಯ್ಯಂಗಾರ್ ಅವರನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಆಯ್ಕೆ ಮಾಡುವಲ್ಲಿ ಇವರೆಲ್ಲರ ಸಹಾಯ ಮತ್ತು ಸಹಕಾರ ಇತ್ತು.
    ಟಿ.ರಾಮಪ್ಪನವರು ಶಿವಮೊಗ್ಗದ ಗೋಪಿ ವೃತ್ತದ ಸಮೀಪದ ಸಹ್ಯಾದ್ರಿ ಪೆಟ್ರೋಲ್ ಬಂಕ್ ಮಾಲಿಕರು, ಟಿಂಬರ್ ಗುತ್ತಿಗೆದಾರರಾಗಿದ್ದರು.
   ಶಿವಮೊಗ್ಗದ ಮುನ್ಸಿಪಲ್ ಅಧ್ಯಕ್ಷರಾಗಿದ್ದರು, ರಾಜ್ಯದ ಹಿರಿಯ ಕಾಂಗ್ರೇಸ್ ನಾಯಕರಾಗಿದ್ದ ಮಂತ್ರಿಗಳಾಗಿದ್ದ ಬಸಲಿಂಗಪ್ಪರ ಖಾಸಾ ಖಾಸಾ ಮಿತ್ರರು ಇವರಿಬ್ಬರು ಸೇರಿ ಶಿವಮೊಗ್ಗದಲ್ಲಿ ಸ್ಥಾಪಿಸಿದ ಡಾ.ಅಂಬೇಡ್ಕರ್ ಮಿಷನ್ ವಿದ್ಯಾ ಸಂಸ್ಥೆ ಪ್ರಸಿದ್ಧ ವಿದ್ಯಾ ಸಂಸ್ಥೆ ಆಗಿದೆ.
  ಆ ಕಾಲದಲ್ಲಿ ಬದರಿನಾರಾಯಣ ಅಯ್ಯಂಗಾರರಿಗೆ ಶಿವಮೊಗ್ಗದ ಮುಂದಾಳುಗಳಾದ ಆನಪ್ಪ,ಕೆಂಜಿಗಪ್ಪ, ಎಸ್.ವಿ.ತಿಮ್ಮಯ್ಯ ಮತ್ತು  ಟಿ.ರಾಮಪ್ಪರ ಸಿಂಡಿಕೇಟ್ ಬದರಿನಾರಾಯಣರ ಸತತ ಗೆಲುವಿಗೆ ಕಾರಣವಾಗಿತ್ತು.
   ಆರ್. ಪ್ರಸನ್ನ ಕುಮಾರ್ ರವರು ಬಿಕಾಂ ಪದವಿದರರು, ಕಾನೂನು ಪದವಿ ವ್ಯಾಸಂಗ ಮಧ್ಯದಲ್ಲೇ ಬಿಡುತ್ತಾರೆ, ಶಿವಮೊಗ್ಗ ಜಿಲ್ಲಾ ವಿದ್ಯಾರ್ಥಿ ಕಾಂಗ್ರೇಸ್, ಯುವ ಕಾಂಗ್ರೇಸ್ ಸಂಘಟನೆಯಲ್ಲಿ ಮುಂಚೂಣಿಯಾಗಿ ಗುರುತಿಸಿಕೊಳ್ಳುತ್ತಾರೆ.
  ನಂತರ ಶಿವಮೊಗ್ಗ ಮುನ್ಸಿಪಲ್ ಕೌನ್ಸಿಲರ್ ಆಗುತ್ತಾರೆ, ಶಿವಮೊಗ್ಗ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗುತ್ತಾರೆ ಆಗ ಬಂಗಾರಪ್ಪನವರು ಶಿವಮೊಗ್ಗ ಮುನ್ಸಿಪಾಲಿಟಿ ರದ್ದು ಮಾಡಿ ಶಿವಮೊಗ್ಗ - ಭದ್ರಾವತಿ ಜಂಟಿ ನಗರಸಭೆ ಮಾಡಿ ಮಲ್ಲಿಕಾರ್ಜುನ್ ರಾವ್ ರನ್ನು ಮೇಯರ್ ಮಾಡಿದಾಗ ಆರ್. ಪ್ರಸನ್ನ ಕುಮಾರ್ ಕಾರ್ಪೋರೇಟರ್ ಆಗುತ್ತಾರೆ ಆಗ ಮಲ್ಲಿಕಾರ್ಜುನ್ ರಾವ್ ಗೆ ಬಲಗೈ ಆಗಿದ್ದವರು ಈ ಪ್ರಸನ್ನ ಕುಮಾರ್ ಆಗ ನಡೆದ ಲೋಕ ಸಭಾ ಚುನಾವಣೆಯಲ್ಲಿ ಮಲ್ಲಿಕಾಜು೯ನ್ ರಾವ್  ಸ್ಪರ್ದೆಗೆ ಟಿಕೇಟ್ ಗಾಗಿ ಇವರೆಲ್ಲ ಒಂದಾಗಿ ಪ್ರಯತ್ನಿಸುತ್ತಾರೆ ಆದರೆ ಕೊನೆಗಳಿಗೆಯಲ್ಲಿ ಬಂಗಾರಪ್ಪ ತಮ್ಮ ಪತ್ನಿಯ ಸಹೋದರಿ ಪತಿ (ಷಡಕ) ಕೆ.ಜಿ. ಶಿವಪ್ಪರಿಗೆ ಟಿಕೇಟ್ ಕೊಟ್ಟು ಗೆಲ್ಲಿಸುತ್ತಾರೆ.
   ನಂತರ ಇನ್ನೊಮ್ಮೆ ಶಿವಮೊಗ್ಗ ಮುನ್ಸಿಪಾಲಿಟಿಗೆ ಸ್ಪರ್ದಿಸಿ ಗೆದ್ದು ಅಧ್ಯಕ್ಷರಾಗುತ್ತಾರೆ ಪ್ರಸನ್ನ ಕುಮಾರ್, ತಂದೆ ಮತ್ತು ಮಗ ಇಬ್ಬರೂ ಶಿವಮೊಗ್ಗದ ಮುನ್ಸಿಪಾಲಿಟಿ ಅದ್ಯಕ್ಷರಾಗಿರುವ ಮುರಿಯಲಾಗದ ದಾಖಲೆ ಇವರ ಹೆಸರಲ್ಲಿದೆ.
  ನಂತರ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದ ನೂತನ ಕಛೇರಿ ಕಟ್ಟಡ ನಿರ್ಮಾಣ ಮಾಡಿದ್ದಾರೆ.
  ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಜಿಲ್ಲೆಯ ಸ್ಥಳಿಯ ಸಂಘ ಸಂಸ್ಥೆಗಳಿಂದ ವಿದಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದರು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಅಲೆಯಲ್ಲಿ ಮಾಜಿ ಮಂತ್ರಿ ಡಿ.ಹೆಚ್.ಶಂಕರ್ ಮೂರ್ತಿಯವರ ಪುತ್ರ ಅರುಣ್ ಇವರ ಎದರು ಜಯಗಳಿಸಿದರು.
  ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೇಸ್ ಸ್ಥಾನಿಕ ಚುನಾವಣೆಯ ಡಿಸ್ಟ್ರಿಕ್ ರಿಟರ್ನಿಂಗ್ ಆಫೀಸರ್ ಆಗಿ ಜವಾಬ್ದಾರಿ ವಹಿಸಿದ್ದಾರೆ.
  ತಮ್ಮ ದ್ವಿತಿಯ ಪುತ್ರ ಸೂರಜ್ ವಿವಾಹ ಆಹ್ವಾನ ಪತ್ರಿಕೆ ನೀಡಲು ಇವರ ಜಿಗಣಿ ದೋಸ್ತ್  ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಜೊತೆ ಬಂದಿದ್ದರು, ಇವರಿಬ್ಬರೂ ನನ್ನ ಪೋಸ್ಟ್ ನಿರಂತರವಾಗಿ ನೋಡುತ್ತಾರೆ ಹಾಗಾಗಿ ಅನೇಕ ವಿಚಾರಗಳ ಮಾತಾಡಿದೆವು.
   ಇವರು 1967ಮತ್ತು 1972ರ ಬದರಿನಾರಾಯಣರ ಚುನಾವಣೆ ನೋಡಿದ, ಕೆಲಸ ಮಾಡಿದ ನೆನಪುಗಳ ಪುನರ್ ನೆನಪಿಸಿಕೊಂಡರು, ನನ್ನ ಮುಂದಿನ ಪುಸ್ತಕ #ಆನಂದಪುರಂ_ಇತಿಹಾಸ ಬಗ್ಗೆ ತುಂಬಾ ಆಸಕ್ತಿ ವ್ಯಕ್ತಪಡಿಸಿದರು.
  ಮೂರು ವರ್ಷದ ಹಿಂದೆ 2019 ರ ನವೆಂಬರ್ 10 ರಂದು ನನ್ನ ಮಗಳ ಮದುವೆಗೆ ಇವರಿಬ್ಬರೂ ಬಂದು ಶುಭ ಹಾರೈಸಿದ್ದರು.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...