Skip to main content

Blog number 926. ಶಿವಮೊಗ್ಗದ ಮಾಜಿ ವಿದಾನ ಪರಿಷತ್ ಸದಸ್ಯರಾದ ಆರ್.ಪ್ರಸನ್ನ ಕುಮಾರ್ ಮತ್ತು ಇವರ ತಂದೆ ಹಿರಿಯ ಕಾಂಗ್ರೇಸ್ ಮುಖಂಡರಾಗಿದ್ದ ಟಿ.ರಾಮಪ್ಪನವರು ಇಬ್ಬರೂ ಶಿವಮೊಗ್ಗದ ಮುನ್ಸಿಪಾಲಿಟಿ ಅಧ್ಯಕ್ಷರಾಗಿದ್ದ ರಾಜಕಾರಣದ ದಾಖಲೆ.

#ಶಿವಮೊಗ್ಗದ_ಮಾಜಿ_ವಿಧಾನಪರಿಷತ್_ಸದಸ್ಯರಾದ_ಆರ್_ಪ್ರಸನ್ನಕುಮಾರ್

#ತಮ್ಮ_ಪುತ್ರನ_ವಿವಾಹ_ಆಹ್ವಾನಪತ್ರಿಕೆ_ನೀಡಲು_ಬಂದಿದ್ದರು.

#ಇವರ_ತಂದೆ_ಟಿ_ರಾಮಪ್ಪನವರು_ಬದರಿನಾರಾಯಣಯ್ಯಂಗಾರರ_ಚುನಾವಣೆಗಳನ್ನು_ಮಾಡಿದವರು

#ಶಿವಮೊಗ್ಗ_ಜಿಲ್ಲಾ_ವಿದ್ಯಾರ್ಥಿಕಾಂಗ್ರೇಸ್_ಯುವಕಾಂಗ್ರೇಸ್_ಜಿಲ್ಲಾಕಾಂಗ್ರೇಸ್_ಮುನ್ಸಿಪಲ್_ಕೌನ್ಸಿಲರ್
#ಶಿವಮೊಗ_ಭದ್ರಾವತಿ_ಕಾಪೋ೯ರೇಷನ್_ಕಾಪೋ೯ರೇಟರ್_ವಿದಾನಪರಿಷತ್_ಸದಸ್ಯರೂ_ಆದವರು

#ತಂದೆ_ಮಗ_ಇಬ್ಬರೂ_ಶಿವಮೊಗ್ಗ_ಮುನ್ಸಿಪಲ್_ಅಧ್ಯಕ್ಷರಾಗಿದ್ದು_ದಾಖಲೆ

  ಆರ್. ಪ್ರಸನ್ನಕುಮಾರ್ ಶಿವಮೊಗ್ಗದ ಪ್ರತಿಷ್ಠಿತ ಕುಟುಂಬ ಟಿ.ರಾಮಪ್ಪರವರ ಪುತ್ರ, ಇವರ ಸಹೋದರ ಐಪಿಎಸ್ ಮಾಡಿ ಬೆಂಗಳೂರಲ್ಲಿ ಡಿಐಜಿ ಆಗಿದ್ದಾರೆ.
   ಕಾಂಗ್ರೇಸ್ ಪಕ್ಷದ ನಿಷ್ಟಾವಂತ ಕುಟುಂಬ ಇವರದ್ದು, ಇವರ ತಂದೆ 1967ಮತ್ತು 1972ರಲ್ಲಿ  ಆನಂದಪುರಂನ ಬದರಿನಾರಾಯಣ ಅಯ್ಯಂಗಾರ್ ಅವರನ್ನು ಶಿವಮೊಗ್ಗ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೇಸ್ ಪಕ್ಷದಿಂದ ಆಯ್ಕೆ ಮಾಡುವಲ್ಲಿ ಇವರೆಲ್ಲರ ಸಹಾಯ ಮತ್ತು ಸಹಕಾರ ಇತ್ತು.
    ಟಿ.ರಾಮಪ್ಪನವರು ಶಿವಮೊಗ್ಗದ ಗೋಪಿ ವೃತ್ತದ ಸಮೀಪದ ಸಹ್ಯಾದ್ರಿ ಪೆಟ್ರೋಲ್ ಬಂಕ್ ಮಾಲಿಕರು, ಟಿಂಬರ್ ಗುತ್ತಿಗೆದಾರರಾಗಿದ್ದರು.
   ಶಿವಮೊಗ್ಗದ ಮುನ್ಸಿಪಲ್ ಅಧ್ಯಕ್ಷರಾಗಿದ್ದರು, ರಾಜ್ಯದ ಹಿರಿಯ ಕಾಂಗ್ರೇಸ್ ನಾಯಕರಾಗಿದ್ದ ಮಂತ್ರಿಗಳಾಗಿದ್ದ ಬಸಲಿಂಗಪ್ಪರ ಖಾಸಾ ಖಾಸಾ ಮಿತ್ರರು ಇವರಿಬ್ಬರು ಸೇರಿ ಶಿವಮೊಗ್ಗದಲ್ಲಿ ಸ್ಥಾಪಿಸಿದ ಡಾ.ಅಂಬೇಡ್ಕರ್ ಮಿಷನ್ ವಿದ್ಯಾ ಸಂಸ್ಥೆ ಪ್ರಸಿದ್ಧ ವಿದ್ಯಾ ಸಂಸ್ಥೆ ಆಗಿದೆ.
  ಆ ಕಾಲದಲ್ಲಿ ಬದರಿನಾರಾಯಣ ಅಯ್ಯಂಗಾರರಿಗೆ ಶಿವಮೊಗ್ಗದ ಮುಂದಾಳುಗಳಾದ ಆನಪ್ಪ,ಕೆಂಜಿಗಪ್ಪ, ಎಸ್.ವಿ.ತಿಮ್ಮಯ್ಯ ಮತ್ತು  ಟಿ.ರಾಮಪ್ಪರ ಸಿಂಡಿಕೇಟ್ ಬದರಿನಾರಾಯಣರ ಸತತ ಗೆಲುವಿಗೆ ಕಾರಣವಾಗಿತ್ತು.
   ಆರ್. ಪ್ರಸನ್ನ ಕುಮಾರ್ ರವರು ಬಿಕಾಂ ಪದವಿದರರು, ಕಾನೂನು ಪದವಿ ವ್ಯಾಸಂಗ ಮಧ್ಯದಲ್ಲೇ ಬಿಡುತ್ತಾರೆ, ಶಿವಮೊಗ್ಗ ಜಿಲ್ಲಾ ವಿದ್ಯಾರ್ಥಿ ಕಾಂಗ್ರೇಸ್, ಯುವ ಕಾಂಗ್ರೇಸ್ ಸಂಘಟನೆಯಲ್ಲಿ ಮುಂಚೂಣಿಯಾಗಿ ಗುರುತಿಸಿಕೊಳ್ಳುತ್ತಾರೆ.
  ನಂತರ ಶಿವಮೊಗ್ಗ ಮುನ್ಸಿಪಲ್ ಕೌನ್ಸಿಲರ್ ಆಗುತ್ತಾರೆ, ಶಿವಮೊಗ್ಗ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾಗುತ್ತಾರೆ ಆಗ ಬಂಗಾರಪ್ಪನವರು ಶಿವಮೊಗ್ಗ ಮುನ್ಸಿಪಾಲಿಟಿ ರದ್ದು ಮಾಡಿ ಶಿವಮೊಗ್ಗ - ಭದ್ರಾವತಿ ಜಂಟಿ ನಗರಸಭೆ ಮಾಡಿ ಮಲ್ಲಿಕಾರ್ಜುನ್ ರಾವ್ ರನ್ನು ಮೇಯರ್ ಮಾಡಿದಾಗ ಆರ್. ಪ್ರಸನ್ನ ಕುಮಾರ್ ಕಾರ್ಪೋರೇಟರ್ ಆಗುತ್ತಾರೆ ಆಗ ಮಲ್ಲಿಕಾರ್ಜುನ್ ರಾವ್ ಗೆ ಬಲಗೈ ಆಗಿದ್ದವರು ಈ ಪ್ರಸನ್ನ ಕುಮಾರ್ ಆಗ ನಡೆದ ಲೋಕ ಸಭಾ ಚುನಾವಣೆಯಲ್ಲಿ ಮಲ್ಲಿಕಾಜು೯ನ್ ರಾವ್  ಸ್ಪರ್ದೆಗೆ ಟಿಕೇಟ್ ಗಾಗಿ ಇವರೆಲ್ಲ ಒಂದಾಗಿ ಪ್ರಯತ್ನಿಸುತ್ತಾರೆ ಆದರೆ ಕೊನೆಗಳಿಗೆಯಲ್ಲಿ ಬಂಗಾರಪ್ಪ ತಮ್ಮ ಪತ್ನಿಯ ಸಹೋದರಿ ಪತಿ (ಷಡಕ) ಕೆ.ಜಿ. ಶಿವಪ್ಪರಿಗೆ ಟಿಕೇಟ್ ಕೊಟ್ಟು ಗೆಲ್ಲಿಸುತ್ತಾರೆ.
   ನಂತರ ಇನ್ನೊಮ್ಮೆ ಶಿವಮೊಗ್ಗ ಮುನ್ಸಿಪಾಲಿಟಿಗೆ ಸ್ಪರ್ದಿಸಿ ಗೆದ್ದು ಅಧ್ಯಕ್ಷರಾಗುತ್ತಾರೆ ಪ್ರಸನ್ನ ಕುಮಾರ್, ತಂದೆ ಮತ್ತು ಮಗ ಇಬ್ಬರೂ ಶಿವಮೊಗ್ಗದ ಮುನ್ಸಿಪಾಲಿಟಿ ಅದ್ಯಕ್ಷರಾಗಿರುವ ಮುರಿಯಲಾಗದ ದಾಖಲೆ ಇವರ ಹೆಸರಲ್ಲಿದೆ.
  ನಂತರ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದ ನೂತನ ಕಛೇರಿ ಕಟ್ಟಡ ನಿರ್ಮಾಣ ಮಾಡಿದ್ದಾರೆ.
  ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದಾಗ ಶಿವಮೊಗ್ಗ ಜಿಲ್ಲೆಯ ಸ್ಥಳಿಯ ಸಂಘ ಸಂಸ್ಥೆಗಳಿಂದ ವಿದಾನ ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದರು ಈ ಬಾರಿ ಚುನಾವಣೆಯಲ್ಲಿ ಬಿಜೆಪಿಯ ಅಲೆಯಲ್ಲಿ ಮಾಜಿ ಮಂತ್ರಿ ಡಿ.ಹೆಚ್.ಶಂಕರ್ ಮೂರ್ತಿಯವರ ಪುತ್ರ ಅರುಣ್ ಇವರ ಎದರು ಜಯಗಳಿಸಿದರು.
  ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೇಸ್ ಸ್ಥಾನಿಕ ಚುನಾವಣೆಯ ಡಿಸ್ಟ್ರಿಕ್ ರಿಟರ್ನಿಂಗ್ ಆಫೀಸರ್ ಆಗಿ ಜವಾಬ್ದಾರಿ ವಹಿಸಿದ್ದಾರೆ.
  ತಮ್ಮ ದ್ವಿತಿಯ ಪುತ್ರ ಸೂರಜ್ ವಿವಾಹ ಆಹ್ವಾನ ಪತ್ರಿಕೆ ನೀಡಲು ಇವರ ಜಿಗಣಿ ದೋಸ್ತ್  ಶಿವಮೊಗ್ಗ ಜಿಲ್ಲಾ ಪಂಚಾಯತ್ ನ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಜೊತೆ ಬಂದಿದ್ದರು, ಇವರಿಬ್ಬರೂ ನನ್ನ ಪೋಸ್ಟ್ ನಿರಂತರವಾಗಿ ನೋಡುತ್ತಾರೆ ಹಾಗಾಗಿ ಅನೇಕ ವಿಚಾರಗಳ ಮಾತಾಡಿದೆವು.
   ಇವರು 1967ಮತ್ತು 1972ರ ಬದರಿನಾರಾಯಣರ ಚುನಾವಣೆ ನೋಡಿದ, ಕೆಲಸ ಮಾಡಿದ ನೆನಪುಗಳ ಪುನರ್ ನೆನಪಿಸಿಕೊಂಡರು, ನನ್ನ ಮುಂದಿನ ಪುಸ್ತಕ #ಆನಂದಪುರಂ_ಇತಿಹಾಸ ಬಗ್ಗೆ ತುಂಬಾ ಆಸಕ್ತಿ ವ್ಯಕ್ತಪಡಿಸಿದರು.
  ಮೂರು ವರ್ಷದ ಹಿಂದೆ 2019 ರ ನವೆಂಬರ್ 10 ರಂದು ನನ್ನ ಮಗಳ ಮದುವೆಗೆ ಇವರಿಬ್ಬರೂ ಬಂದು ಶುಭ ಹಾರೈಸಿದ್ದರು.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ