Skip to main content

ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಸಂಘಟನೆಗೆ ಗ್ರಹಣ ಹಿಡಿದಿದೆ.

#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕಸಭಾ ಚುನಾವಣಾ ಅಂಕಣ
ಭಾಗ-11
( ಕೆ.ಅರುಣ್ ಪ್ರಸಾದ್ )

ಡಿ.ಕೆ. ಶಿವಕುಮಾರ್ ರಿಂದ ನಿಂತ ನೀರಾಗಿರುವ ಕಾಂಗ್ರೇಸ್ ಪಾಟಿ೯ ಶುದ್ದಿಕರಣ ಆದೀತೆ? ಪಕ್ಷದ ಸಂಘಟನೆ ಶಿಥಿಲ ಮಾಡುವ, ಪಕ್ಷದವರನ್ನೆ ಸೋಲಿಸುವ ಸದಾ ಪಕ್ಷ ವಿರೋದಿ ಕೆಲಸ ಮಾಡುತ್ತಾ ಸದಾ ಪಕ್ಷದ ಆಯಾ ಕಟ್ಟಿನ ಜಾಗದಲ್ಲಿ ಸ್ಥಾನ ಪಡೆಯುವ ಕಾಲೆಳೆಯುವ ಗುಂಪು ನಿಯOತ್ರಿಸಲು ಡಿ.ಕೆ.ಶಿವಕುಮಾರ್ ಸಫಲರಾಗುವರಾ?

ಮೈತ್ರಿ ಅಭ್ಯಥಿ೯ಯ ಗೆಲುವಿಗಾಗಿ ಡಿ.ಕೆ.ಶಿವಕುಮಾರ್ ನಿನ್ನೆಯಿಂದ ಶಿವಮೊಗ್ಗ ಜಿಲ್ಲೆಗೆ ಪ್ರವೇಶಿಸಿದ್ದಾರೆ. ಬಂದ ದಿನವೇ ಭದ್ರಾವತಿಯ ಕೆಲ ದಶಕಗಳ ಕಟ್ಟಾ ರಾಜಕೀಯ ವಿರೋದಿ ಕಾಂಗ್ರೇಸ್ ನ ಹಾಲಿ ಶಾಸಕ ಸಂಗಮೇಶ್ ಮತ್ತು ಜೆಡಿಎಸ್ ನ ಮಾಜಿ ಶಾಸಕ ಅಪ್ಪಾಜಿಗೌಡರನ್ನ ರಾಜಿ ಮಾಡಿ ಬಾಯಿ ಬಾಯಿ ಅನ್ನಿಸಿದ್ದಾರೆ.
  ಇದು ಜಿಲ್ಲೆಯ ಮೈತ್ರಿ ಪಕ್ಷದ ಪ್ರಚಾರಕ್ಕೆ ಒಳ್ಳೆಯ ಪ್ರಾರಂಭದ ಉತ್ಸಾಹದ ಅಂಶವಾಗಿದೆ.
  ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ನಲ್ಲಿ ಶಿವಮೊಗ್ಗ ಕೇಂದ್ರದಲ್ಲಿನ ಒಂದಿಷ್ಟು ಮುಖಂಡರಿದ್ದಾರೆ ಅವರು ಕಾಂಗ್ರೇಸ್ ಸಂಘಟನೆ ಮಾಡಲಾಗದವರು, ಈಶ್ವರಪ್ಪ ಯಡೂರಪ್ಪರ ಹತ್ತಿರ ತಮ್ಮ ಲೆಟರ್ ಫ್ಯಾಡ್ ರಾಜಕಾರಣದಿಂದ ವಗಾ೯ವಣೆ ಇತ್ಯಾದಿ ಲಾಭದ ನಿರೀಕ್ಷೆಯಲ್ಲಿ ಇದ್ದವರಿದ್ದಾರೆ.
  ತಾಲ್ಲೂಕ್ ಮಟ್ಟದಲ್ಲಿ ಯಾರಾದರೂ ಗೆದ್ದರೆ ಅವರಿಗೆ ಶಿವಮೊಗ್ಗ ಕೇಂದ್ರದಲ್ಲಿ ಭಾರೀ ಶೋ ಮಾಡಿ ಗೌರವಸಿ ಪಾಕೆಟ್ ಮಾಡಿ ಎಲ್ಲಾ ನಾಮಕರಣಗಳನ್ನ ತಮ್ಮ ಪರಿವಾರಕ್ಕೆ ಮೀಸಲು ಮಾಡುವ ಪರಿಪಾಟಗಳು ತಾಲ್ಲೂಕ್ ಕೇಂದ್ರದ ನಿಷ್ಟಾವಂತ ಕಾಂಗ್ರೇಸ್ ಕಾಯ೯ಕತ೯ರಿಗೆ ಬಿಸಿ ತುಪ್ಪ ಆಗಿದೆ.
  ಇದರ ಮಧ್ಯ ಗ್ರಾಮೀಣ ಪ್ರದೇಶದ ಯಾರೋಬ್ಬರು ಆಹ೯ತೆ ಇದ್ದರೂ ಪಕ್ಷ ಸಂಘಟನೆಯ ಮುಂಚೂಣಿಗೆ ಬಾರದಂತೆ ಬಂದರೂ ಹೆಚ್ಚು ಕಾಲ ಉಳಿಯದಂತೆ ಕಾಲೆಳೆಯುವ ಕೆಲಸದಿಂದ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಾಟಿ೯ ಇದ್ದು ಇಲ್ಲದ ಪಕ್ಷ ಆಗಿದೆ.
  ಇಂತವರನ್ನ ರಿಪೇರಿ ಮಾಡುವುದು ಅಷ್ಟು ಸಲೀಸಲ್ಲ ಬುಡಮಟ್ಟದಲ್ಲಿ ಬಲಿಷ್ಟ ಬೇರು ಹಮ್ಮಿದ ಮರದಂತೆ ಆಗಾಗ್ಗೆ ಪಕ್ಷಕ್ಕೆ ಹಾನಿಯನ್ನ ವ್ಯವಸ್ಥಿತವಾಗಿ ಮಾಡುತ್ತಾರೆ.
  ಇಂತಹ ಗುಂಪುಗಾರಿಕೆಯನ್ನ ಸರಿಯಾಗಿ ಬಂಗಾರಪ್ಪ ಬಳಸಿಕೊಂಡು ಬೇಕಾದಾಗ ಕಾಂಗ್ರೇಸ್ ಒಳಗೆ ಬರುವುದು, ಬೇಡಾದಾಗ ಹಾಳು ಮಾಡಿ ಹೊರ ಹೋಗುವುದು ಮಾಡಿದ್ದರು.
ಡಿ.ಬಿ. ಚಂದ್ರೇ ಗೌಡರು ಈ ಕಾರಣದಿಂದ ಜಿಲ್ಲೆಯೇ ಬಿಟ್ಟರು.
  ಸ್ವಾಮಿ ರಾವ್, ನಾರಾಯಣಪ್ಪ, ಎಲ್.ಟಿ. ಹೆಗ್ಗಡೆ ಕಾಂಗ್ರೇಸ್ ಬಿಡಲು ಇವೆಲ್ಲ ಕಾರಣ ಕೂಡ.
  ಶಿವಮೊಗ್ಗದಲ್ಲಿ ಪ್ರಸನ್ನ ಕುಮಾರ್ ಮೊದಲ ಬಾರಿ ಶಾಸಕ ರಾದಾಗ ಸ್ವಪಕ್ಷದವರೇ ವಿರುದ್ಧ ಕೆಲಸ ಮಾಡಿದ್ದರು, ಎರಡನೆ ಬಾರಿ ಸೋಲಿಸಲು ಅವರೆಲ್ಲರ ಸಹಕಾರವಿತ್ತು.
  ಪದವಿದರ ಕ್ಷೇತ್ರದಿಂದ ಕಳೆದ ಚುನಾವಣೆಯಲ್ಲಿ ದಿನೇಶ್ ಸ್ವಲ್ಪ ಓಟಿನಿಂದ ಸೋಲಲು ಸ್ವಪಕ್ಷದ ನಾಯಕರೇ ಕಾರಣ, ಈ ಬಾರಿಯೂ ಅವರ ಏಕಾಂಗಿ ಹೋರಾಟ ಗೆಲ್ಲಲಾಗಲಿಲ್ಲ.
  ಸಾಗರದ ಬೆಂಕಿ ಚೆಂಡಿನಂತ ಪ್ರಖರ ವಾಗ್ಮಿ ತಿ.ನಾ.ಶ್ರೀನಿವಾಸ್ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದರು ಅವರ ಕಾಲಾವದಿಯಲ್ಲಿ ಮೈತ್ರಿ ಅಭ್ಯಥಿ೯ 50 ಸಾವಿರ ಮತಗಳಿ೦ದ ಸೋತಿದ್ದರು, ಬಿಜೆಪಿಯ ಯಡೂರಪ್ಪ, ಈಶ್ವರಪ್ಪ ಮತ್ತು ಅಯನೂರು ಮಂಜುನಾಥರಿಗೆ ಏಟಿಗೆ ಏದಿರೇಟು ನೀಡುತ್ತಿದ್ದರು ಆದರೆ ಇದನ್ನ ಸಹಿಸದ ಬಿಜೆಪಿಯವರ ಟಿಪ್ ಪಡೆದು ಕಾಯ೯ ಪ್ರವೃತ್ತರಾದ ಒಂದು ಪಡೆ ಅವರನ್ನ ಜಿಲ್ಲಾ ಅಧ್ಯಕ್ಷ ಸ್ಥಾನದಿಂದ ಲೋಕ ಸಭಾ ಚುನಾವಣಾ ಸಂದಭ೯ದಲ್ಲೇ ಅವಮಾನಕರವಾಗಿ ಇಳಿಸಿತು, ಇವರನ್ನ ಇಳಿಸಲು ಕಾಗೋಡು, ಕಿಮ್ಮನೆ, ಪ್ರಸನ್ನ ಕುಮಾರರ ಪತ್ರ ಕೂಡ ಪಡೆದರು.
  ಮಂಜುನಾಥ ಭಂಡಾರಿಯಂತ ಅತ್ಯುತ್ತಮ ಸ೦ಘಟಕರು ಕಳೆದ ಲೋಕಸಭಾ ಚುನಾವ ಣೆಗೆ ಸ್ಪದಿ೯ಸಿದಾಗ ಪಕ್ಷದ ಅನೇಕ ದುರೀಣರೇ ಅವರ ವಿರುದ್ಧ ಮತಗಳಿಸಲು ತೆರೆಮರೆಯಲ್ಲಿ ಪ್ರಯತ್ನಿಸಿದರು.
  ಕಳೆದ ಸಕಾ೯ರದಲ್ಲಿ ಕಾಗೋಡು ಮ೦ತ್ರಿ ಮಾಡದೆ ಅವರಿಗೆ ಒಲ್ಲದ ಸ್ಪೀಕರ್ ಮಾಡಿದ್ದರು.
  ಕಿಮ್ಮನೆಯ ಮಂತ್ರಿ ಸ್ಥಾನ ಕಸಿದು ಅವಮಾನಿಸಿದರು.
ಈ ಸಾರಿ ಜಿಲ್ಲೆಯ ಏಕೈಕ ಕಾಂಗ್ರೇಸ್ ಶಾಸಕ ಭದ್ರಾವತಿ ಸಂಗಮೇಶ್ ರನ್ನ ಯಾವುದೇ ಕಾರಣಕ್ಕೂ ಮಂತ್ರಿ ಮಾಡದಂತೆ ನೋಡಿಕೊಳ್ಳಲಾಯಿತು.
  ಪಕ್ಷದ ಕಾಯ೯ಕತ೯ರ ಅಭಿಪ್ರಾಯ ಪಡೆಯದೆ ಜೆಡಿಎಸ್ ಗೆ ಲೋಕಸಭಾ ಸ್ಥಾನ ಬಿಟ್ಟಿದ್ದಾರೆ.
  ಮುಂದಿನ ದಿನದಲ್ಲಿ ಮೈತ್ರಿ ಮುಂದುವರಿದರೆ ಸೊರಬ, ಭದ್ರಾವತಿ, ಶಿವಮೊಗ್ಗ ಗ್ರಾಮಾoತರ, ತೀಥ೯ಹಳ್ಳಿ ವಿಧಾನ ಸಭಾ ಕ್ಷೇತ್ರ ಕಾಂಗ್ರೇಸ್ ಕೈಬಿಡುತ್ತದೆ.ಸಾಗರ, ಶಿವಮೊಗ್ಗ ಮತ್ತು ಶಿಕಾರಿಪುರ ಕಾಂಗ್ರೇಸ್ ಗೆ ಬಿಟ್ಟುಕೊಟ್ಟರೆ ಅಲ್ಲಿ ಕಾಂಗ್ರೇಸ್ ಬಿಜೆಪಿ ಸಂಘಟನೆ ಎದರು ಗೆಲ್ಲುವುದು ಕಷ್ಟವೇ, ಮುಂದಿನ ದಿನದಲ್ಲಿ ಶಿವಮೊಗ್ಗ ಕಾಂಗ್ರೇಸ್ ಮುಕ್ತ ಆದರೆ ಲಾಭ ಯಾರಿಗೆ ಬಿಜೆಪಿಗಲ್ಲವೆ?
ಇದು ನಿಷ್ಟಾವಂತ ಕಾಂಗ್ರೇಸಿಗರ ಕ್ಷೀಣ ಧ್ವನಿ ಅತ೯ನಾದ ಡಿ.ಕೆ.ಶಿವಕುಮಾರರಿಗೆ ಕೇಳಿಸುವಂತಾದರೆ ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಜೀವ ಪಡೆದೀತು !?

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...