#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕ ಸಭಾ ಚುನಾವಣಾ ಅ೦ಕಣ
ಭಾಗ-7
( ಕೆ.ಅರುಣ್ ಪ್ರಸಾದ್ )
5 ದಿನದ ಚುನಾವಣಾ ಪ್ರಚಾರ ಬಾಕಿ ಇದೆ, ಇದರಲ್ಲಿ ಶಿವಮೊಗ್ಗದಲ್ಲಿ ಯಾವ ಪಕ್ಷ ಪ್ರಚಾರದಲ್ಲಿ ಮುಂದಿದೆ?
ಈ ವಿಚಾರದ ಬಗ್ಗೆ ನನ್ನದೇ ಆದ ಸುದ್ದಿ ಮೂಲಗಳನ್ನ ಜಾಲಾಡಿದೆ, ಈಗ ನಾನು ಯಾವುದೇ ರಾಜಕೀಯದಲ್ಲಿ ಸಕ್ರಿಯನಾಗಿಲ್ಲದ್ದರಿಂದ ಹೆಚ್ಚು ಸತ್ಯ ಸಂದೇಶ ಪಡೆಯುತ್ತೇನೆ.
ಜಂಟಿ ಪಕ್ಷದ ಪ್ರಚಾರದ ಬಗ್ಗೆ ಅನಂದಪುರಂ ಹೋಬಳಿಯ ಆಚಾಪುರದ ಗ್ರಾ.ಪಂ. ನ ನಿಷ್ಟಾವಂತ ಕಾಂಗ್ರೇಸ್ ಕಾಯ೯ಕತ೯ ಇಸ್ಲಾಂಪುರದ ಮಂಜಪ್ಪರ ಹತ್ತಿರ ಕೇಳಿದೆ ಅವರು ಹೇಳಿದ್ದು ಅಜಿ೯ ಹಾಕೋ ದಿನ ನಿಗದಿಪಡಿಸಿದ ಬಸ್ ಲ್ಲಿ 8 ಜನ ಮಾತ್ರ ಹೋಗಿದ್ದೆವು ಅಂದರು, ಯಾಕೆ ಅಂದೆ ನಮ್ಮಲ್ಲಿ ಸಂಘಟನೆ ಇಲ್ಲ, ಒಗ್ಗಟ್ಟು ಇಲ್ಲ ಅಂದರು.
ಇವತ್ತಿನ ತನಕ ಒಂದೇ ಒಂದು ಕರಪತ್ರ ಮತದಾರನ ಮನೆಗೆ ಮುಟ್ಟಿಸಿಲ್ಲ ಅಂದಾಗ ನನಗೆ ಆಶ್ಚಯ೯ ಆಯಿತು.
ಪರಿಶಿಷ್ಟ ಜನಾ೦ಗದ ಮುಖಂಡ ಮಂಜಪ್ಪ ಬೇಸರದಿಂದ ಹೇಳಿದ ಮಾತು ಏನೆಂದರೆ ಕಾಂಗ್ರೇಸ್ ಗುರುತಲ್ಲಿ ಯಾರನ್ನಾದರು ನಿಲ್ಲಿಸಿದ್ದರೆ ಪಲಿತಾಂಶ ಒಳ್ಳೆಯದಾಗುತ್ತಿತ್ತು ಅಂದರು.
ಇವರು ಹೀಗೆ ಅಂದ ಮೇಲೆ ಇದೇ ಗ್ರಾಮ ಪಂಚಾಯತನ ಆಚಾಪುರ ಬೂತಿನ ಬಿಜೆಪಿ ಅದ್ಯಕ್ಷ ರಿಕ್ಷಾ ಮಾಲಿಕ ಶಿವರಾಂ ಗೌಡರಿಗೆ ಅವರ ಪಕ್ಷದ ಪ್ರಚಾರದ ಬಗ್ಗೆ ಕೇಳಿದೆ, ಬೂತ್ ಕಮಿಟಿ ಅಧ್ಯಕ್ಷರ ಹೋಬಳಿ ಮಟ್ಟದ ಸಭೆ ಶಾಸಕ ಹಾಲಪ್ಪ ನಡೆಸಿದ್ದಾರೆ, ಅಭ್ಯಥಿ೯ ಅಜಿ೯ ಸಲ್ಲಿಸುವ ದಿನ ಪ್ರತಿ ಬೂತನಿಂದ 10 ಜನ ಹೋಗಿದ್ದರು, ಈಗ ಎರೆಡು ಸಾರಿ ಪ್ರತಿ ಮನೆಗೆ ಕರಪತ್ರ, ಪ್ರಣಾಳಿಕೆ ತಲುಪಿಸಿದ್ದೇವೆ, ಇವತ್ತು ಪ್ರತಿ ಬೂತಿಂದ 5 ಜನ ಶಿವಮೊಗ್ಗದಲ್ಲಿ ನಡೆದ ರಕ್ಷಣಾ ಸಚಿವೆ ನಿಮ೯ಲಾ ಸೀತಾರಾಮ್ ಬಹಿರಂಗ ಸಭೆಗೆ ಹೋಗಿದ್ದಾರೆ, ಪೇಜ್ ಪ್ರಮುಖರ ಸಭೆ ಆಗಿದೆ, ನಾಳೆ ಸಿ ಓಟರ್ ಬಗ್ಗೆ ಸಾಗರದಲ್ಲಿ ಮೀಟಿಂಗ್ ಇದೆ ಅಂದರು.
17ನೇ ತಾರೀಖಿನಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬರ್ತಾರೆ, ಡಿಕೆಶಿ ಬರ್ತಾರೆ ಅಂತ ಸುಮ್ಮಿಶ್ರ ಅಬ್ಯಥಿ೯ ಹೇಳಿಕೆ ಬರುತ್ತಿದೆ.
ಯಾರಾದರೂ ಗೆಲ್ಲಲಿ ಆದರೆ ರಚನಾತ್ಮಕ ಸಂಘಟನೆ ಮತ್ತು ಪ್ರಾಮಾಣಿಕ ಪ್ರಯತ್ನ ಕೂಡ ಸೋಲು ಗೆಲುವಿಗೆ ಕಾರಣ ಆಗಬಹುದಾ? ಎಂಬ ಪ್ರಶ್ನೆಗೆ ಮೇ 23ಕ್ಕೆ ಉತ್ತರ ಸಿಗಬಹುದೇನೋ ಕಾಯೋಣ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment