#ಪ್ರಸಕ್ತ ರಾಜ ಕಾರಣದ ಒಳಗುಟ್ಟು#
ಲೋಕ ಸಭಾ ಚುನಾವಣಾ ಅಂಕಣ
ಭಾಗ-13.
(ಕೆ.ಅರುಣ್ ಪ್ರಸಾದ್)
ಶಿವಮೊಗ್ಗ ಲೋಕಸಭಾ ಚುನಾವಣೆ ಮುಗಿಯಿತು ಇಬ್ಬರಿಗೂ ಗೆಲುವಿನ ಸೋಲಿನ ಚಾನ್ಸ್ 50:50.
ನಿನ್ನೆಯ ಮತದಾನದ ನಂತರ ಇಷ್ಟು ದಿನದ ಪ್ರಚಾರದ ಶಬ್ದ ನಿಶ್ಯಬ್ದವಾಗಿದೆ, ಅಭ್ಯಥಿ೯ಗಳು ನಾಟ್ ಕವರೇಜ್ನಲ್ಲಿದ್ದರೆ, ಪದಾಧಿಕಾರಿಗಳು ಕಾಯ೯ಕತ೯ರು ಕೂಡ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಅಧಿಕಾರಿಗಳು, ಟ್ಯಾಕ್ಸಿಯವರು, ಪತ್ರಕತ೯ರು ಕೂಡ.
ತಮ್ಮ ತಮ್ಮ ಮತ ಕೇಂದ್ರದಲ್ಲಿ ಏನಾಗಿದೆ ಅಂತ ಪ್ರತಮ ವತ೯ಮಾನ ತಿಳಿದಿದ್ದಾರೆ, ತಾಲ್ಲೂಕಗಳಲ್ಲಿ ಏನಾಗಬಹುದು? ಇದಕ್ಕೆ ಯಾರು ಕಾರಣ? ಹೀಗೆ ಚಚೆ೯ ಪ್ರಾರಂಭ ಆಗಿದೆ.
ಮುಂದುವರಿದು ದೂರದ ಬೈoದೂರಿನಲ್ಲಿ ಆ ಪಕ್ಷ ಮುಂದಿದೆ, ಈ ಸಾರಿ ಭದ್ರಾವತಿ JDS ಪುಲ್ ಲೀಡ್, ಸೊರಬ ಬಿಜೆಪಿ ಕೈಬಿಟ್ಟಿದೆ, ಒಕ್ಕಲಿಗರು, ಈಡಿಗರು, ಅಲ್ಪಸಂಖ್ಯಾತರು ಮದುಗೆ ಓಟು ಮಾಡಿದ್ದಾರೆ, ಸಾಗರದಲ್ಲಿ ಹಾಲಪ್ಪರ ಸಾದನೆ ಸಾಕಾಗಿಲ್ಲ ಅಂತ ಮಾತಾಡುತ್ತಾರೆ.
ಅದೇ ರೀತಿ ಕಾಂಗ್ರೇಸ್ ನವರು JDSಗೆ ಕೆಲಸ ಮಾಡಿಲ್ಲ, ಕೊಟ್ಟ ಹಣ ಮತದಾರನಿಗೆ ತಲುಪಿಲ್ಲ, ಕಿಮ್ಮನೆ ಮಂಜುನಾಥ ಗೌಡರು ಒಂದಾಗಲಿಲ್ಲ, ಅಪ್ಪಾಜಿಗೌಡರು ಸಂಗಮೇಶ್ ಸರಿ ಆಗಲಿಲ್ಲ ಎಂಬ ಚಚೆ೯ ಕೂಡ ಇದೆ.
ಹಣ ಬರುತ್ತಾ ಇತ್ತು ಅಲ್ಲಲ್ಲಿ ರೈಡ್ ಆಯಿತು, ಭದ್ರಾವತಿಗೆ ಟೈರ್ ಲ್ಲಿ ಕಳಿಸಿದರು ಹಿಡಿದು ಬಿಟ್ಟರು ಅಂತ ಕೆಲವರು, ಇದೇ ನೆಪ ಮಾಡಿ ಜನರಿಗೆ ಕೊಡಬೇಕಾದ ಹಣ ಗುಳುಂ ಆಯಿತು ಅಂತ.
ನಮ್ಮಲ್ಲಿ ಬಿಜೆಪಿಗೆ 100 ಕೊಟ್ಟರು ಆ ಊರಲ್ಲಿ 200, JDS ನವರು ಹಣನೇ ನೀಡಿಲ್ಲ ಅಂತ ಮತದಾರರ ಚಚೆ೯.
JDS ಕಾಂಗ್ರೇಸ್ ಪ್ರಮುಖರು ಚುನಾವಣೆ ಒಂದು ವಾರ ಇರೋ ತನಕ ಕರಪತ್ರವೇ ಬಂದಿರಲಿಲ್ಲ, ಎಲ್ಲಾ ಅವ್ಯವಸ್ಥೆ ಆದರೆ ಮತದಾರ ನಮ್ಮ ಪರವಾಗಿದ್ದಾನೆ ಅನ್ನುತ್ತಾರೆ.
ಬಿಜೆಪಿಯಲ್ಲಿನ ಮುಖಂಡರು, ಕಾಯ೯ಕತ೯ರು ಯಡೂರಪ್ಪರ ಹತ್ತಿರ ಹಣ ಖಾಲಿ ಆಗಿರಬೇಕು, ಮಧ್ಯOತರ ಚುನಾವಣೆಯಲ್ಲಿ ಖಚು೯ ಮಾಡಿದ ಅದ೯ ಹಣ ಖಚು೯ ಮಾಡಿಲ್ಲ, ಕೇಳಿದರೆ ಮೋದಿ ಅಲೆ ಇದೆ ಲಕ್ಷ ಓಟಲ್ಲಿ ಗೆಲ್ಲುತ್ತೇವೆ ಅನ್ನುತ್ತಾರೆ ಈ ಸಾರಿ ಸೋಲು ಗ್ಯಾರಂಟಿ ಅಂತಾರೆ.
ಒಟ್ಟಾರೆ ಈ ಚುನಾವಣೆ ಪಲಿತಾಂಶ ಇಬ್ಬರಿಗೂ ಅನುಕೂಲ ಮತ್ತು ಅನಾನುಕೂಲ ಇದೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment