#ಪ್ರಸಕ್ತ ರಾಜ ಕಾರಣದ ಒಳಗುಟ್ಟು#
ಲೋಕ ಸಭಾ ಚುನಾವಣಾ ಅಂಕಣ
ಭಾಗ-13.
(ಕೆ.ಅರುಣ್ ಪ್ರಸಾದ್)
ಶಿವಮೊಗ್ಗ ಲೋಕಸಭಾ ಚುನಾವಣೆ ಮುಗಿಯಿತು ಇಬ್ಬರಿಗೂ ಗೆಲುವಿನ ಸೋಲಿನ ಚಾನ್ಸ್ 50:50.
ನಿನ್ನೆಯ ಮತದಾನದ ನಂತರ ಇಷ್ಟು ದಿನದ ಪ್ರಚಾರದ ಶಬ್ದ ನಿಶ್ಯಬ್ದವಾಗಿದೆ, ಅಭ್ಯಥಿ೯ಗಳು ನಾಟ್ ಕವರೇಜ್ನಲ್ಲಿದ್ದರೆ, ಪದಾಧಿಕಾರಿಗಳು ಕಾಯ೯ಕತ೯ರು ಕೂಡ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ.
ಅಧಿಕಾರಿಗಳು, ಟ್ಯಾಕ್ಸಿಯವರು, ಪತ್ರಕತ೯ರು ಕೂಡ.
ತಮ್ಮ ತಮ್ಮ ಮತ ಕೇಂದ್ರದಲ್ಲಿ ಏನಾಗಿದೆ ಅಂತ ಪ್ರತಮ ವತ೯ಮಾನ ತಿಳಿದಿದ್ದಾರೆ, ತಾಲ್ಲೂಕಗಳಲ್ಲಿ ಏನಾಗಬಹುದು? ಇದಕ್ಕೆ ಯಾರು ಕಾರಣ? ಹೀಗೆ ಚಚೆ೯ ಪ್ರಾರಂಭ ಆಗಿದೆ.
ಮುಂದುವರಿದು ದೂರದ ಬೈoದೂರಿನಲ್ಲಿ ಆ ಪಕ್ಷ ಮುಂದಿದೆ, ಈ ಸಾರಿ ಭದ್ರಾವತಿ JDS ಪುಲ್ ಲೀಡ್, ಸೊರಬ ಬಿಜೆಪಿ ಕೈಬಿಟ್ಟಿದೆ, ಒಕ್ಕಲಿಗರು, ಈಡಿಗರು, ಅಲ್ಪಸಂಖ್ಯಾತರು ಮದುಗೆ ಓಟು ಮಾಡಿದ್ದಾರೆ, ಸಾಗರದಲ್ಲಿ ಹಾಲಪ್ಪರ ಸಾದನೆ ಸಾಕಾಗಿಲ್ಲ ಅಂತ ಮಾತಾಡುತ್ತಾರೆ.
ಅದೇ ರೀತಿ ಕಾಂಗ್ರೇಸ್ ನವರು JDSಗೆ ಕೆಲಸ ಮಾಡಿಲ್ಲ, ಕೊಟ್ಟ ಹಣ ಮತದಾರನಿಗೆ ತಲುಪಿಲ್ಲ, ಕಿಮ್ಮನೆ ಮಂಜುನಾಥ ಗೌಡರು ಒಂದಾಗಲಿಲ್ಲ, ಅಪ್ಪಾಜಿಗೌಡರು ಸಂಗಮೇಶ್ ಸರಿ ಆಗಲಿಲ್ಲ ಎಂಬ ಚಚೆ೯ ಕೂಡ ಇದೆ.
ಹಣ ಬರುತ್ತಾ ಇತ್ತು ಅಲ್ಲಲ್ಲಿ ರೈಡ್ ಆಯಿತು, ಭದ್ರಾವತಿಗೆ ಟೈರ್ ಲ್ಲಿ ಕಳಿಸಿದರು ಹಿಡಿದು ಬಿಟ್ಟರು ಅಂತ ಕೆಲವರು, ಇದೇ ನೆಪ ಮಾಡಿ ಜನರಿಗೆ ಕೊಡಬೇಕಾದ ಹಣ ಗುಳುಂ ಆಯಿತು ಅಂತ.
ನಮ್ಮಲ್ಲಿ ಬಿಜೆಪಿಗೆ 100 ಕೊಟ್ಟರು ಆ ಊರಲ್ಲಿ 200, JDS ನವರು ಹಣನೇ ನೀಡಿಲ್ಲ ಅಂತ ಮತದಾರರ ಚಚೆ೯.
JDS ಕಾಂಗ್ರೇಸ್ ಪ್ರಮುಖರು ಚುನಾವಣೆ ಒಂದು ವಾರ ಇರೋ ತನಕ ಕರಪತ್ರವೇ ಬಂದಿರಲಿಲ್ಲ, ಎಲ್ಲಾ ಅವ್ಯವಸ್ಥೆ ಆದರೆ ಮತದಾರ ನಮ್ಮ ಪರವಾಗಿದ್ದಾನೆ ಅನ್ನುತ್ತಾರೆ.
ಬಿಜೆಪಿಯಲ್ಲಿನ ಮುಖಂಡರು, ಕಾಯ೯ಕತ೯ರು ಯಡೂರಪ್ಪರ ಹತ್ತಿರ ಹಣ ಖಾಲಿ ಆಗಿರಬೇಕು, ಮಧ್ಯOತರ ಚುನಾವಣೆಯಲ್ಲಿ ಖಚು೯ ಮಾಡಿದ ಅದ೯ ಹಣ ಖಚು೯ ಮಾಡಿಲ್ಲ, ಕೇಳಿದರೆ ಮೋದಿ ಅಲೆ ಇದೆ ಲಕ್ಷ ಓಟಲ್ಲಿ ಗೆಲ್ಲುತ್ತೇವೆ ಅನ್ನುತ್ತಾರೆ ಈ ಸಾರಿ ಸೋಲು ಗ್ಯಾರಂಟಿ ಅಂತಾರೆ.
ಒಟ್ಟಾರೆ ಈ ಚುನಾವಣೆ ಪಲಿತಾಂಶ ಇಬ್ಬರಿಗೂ ಅನುಕೂಲ ಮತ್ತು ಅನಾನುಕೂಲ ಇದೆ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment