#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕಸಭಾ ಚುನಾವಣಾ ಅಂಕಣ ಭಾಗ -2.
(ಕೆ.ಆರುಣ್ ಪ್ರಸಾದ್)
ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದಲ್ಲಿ ಸಂಘಟನೆ ಯಾಕೆ ಕುಗ್ಗಿದೆ?
ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಕಾಂಗ್ರೇಸ್ ಪಕ್ಷದ ಸಂಘಟನೆ ಈಗ ಏಕಿಲ್ಲ ಎಂದು ಪರಿಶೀಲಿಸಿದರೆ ಪರಸ್ಪರ ಕಾಲು ಏಳೆಯುವ, ಕುತಂತ್ರ ಮಾಡುವವರಿಂದ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ.
ಸಮಥ೯ರನ್ನ, ಅಹ೯ರನ್ನ ಸದಾ ಮೂಲೆಗುಂಪು ಮಾಡಲು ಒಂದು ಗುಂಪು ತಯಾರಾಗಿ ಬಿಡುತ್ತದೆ ಅದನ್ನ ಅಧಿಕಾರ ಇದ್ದವರು ಪೋಷಿಸುತ್ತಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ತೀ.ನಾ.ಶ್ರೀನಿವಾಸ್ ರನ್ನ ತರಾತುರಿಯಿಂದ ಕೆಳಗಿಳಿಸಿದರು ಇದಕ್ಕೆ ಯಾವುದೇ ಕಾರಣ ತಿಳಿಸಲಿಲ್ಲ, ಲೋಕ ಸಭಾ ಮಧ್ಯOತರ ಚುನಾವಣೆಯಲ್ಲಿ ಸ್ಪದಿ೯ಸಲು ಅಭ್ಯಥಿ೯ಯೇ ಇಲ್ಲ ಎಂಬ ತೀಮಾ೯ನ ಮಾಡಿಬಿಟ್ಟರು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯಥಿ೯ ಮಂಜುನಾಥ ಭಂಡಾರಿ ಸ್ಪದಿ೯ಸಿದ್ದಾಗ ಕಾ೦ಗ್ರೇಸ್ ಮುಖಂಡರುಗಳೇ ಜೆಡಿಎಸ್ ಅಭ್ಯಥಿ೯ ಗೀತಾ ಶಿವರಾಜ್ ಕುಮಾರರಿಗೆ ಬೆಂಬಲಿಸಿದ್ದರು.
ಈಗಿನ ಲೋಕಸಭಾ ಚುನಾವಣಾ ಸಂದಭ೯ದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅದ್ಯಕ್ಷರುಗಳನ್ನ ದಿಡೀರ್ ಆಗಿ ಬದಲಾಯಿಸಿದ್ದು ಅಲ್ಲಿ ಬಿನ್ನಮತಕ್ಕೆ ಕಾರಣ ಆಗಿದೆ.
ಜಿಲ್ಲೆಯ ಏಕೈಕ ಕಾಂಗ್ರೇಸ್ ಶಾಸಕ ಭದ್ರಾವತಿಯ ಸಂಗಮೇಶರಿಗೆ ಮಂತ್ರಿ ಸ್ಥಾನ ದೊರೆಯದಂತೆ ಮಾಡಿ ಮೂಲೆಗುOಪು ಮಾಡಲಾಗಿದೆ.
ಮುಖಂಡರುಗಳು ಜಿಲ್ಲಾ ಕೇಂದ್ರದಲ್ಲಿ ಪತ್ರಿಕಾ ಗೋಷ್ಟಿ, ಸಭೆ ಸಮಾರಂಭದಲ್ಲಿ ಮುಖ ತೋರಿಸಿದರೆ, ಕಾಯ೯ಕತ೯ರು ಸೋಷಿಯಲ್ ಮೀಡಿಯಾದಲ್ಲಿ ಮುಖ ತೊರಿಸುತ್ತಾರೆ.
ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರ ಬಿಟ್ಟರೆ ಬೇರೆಲ್ಲ ಕ್ಷೇತ್ರಗಳನ್ನ ಕಳದು ಕೊಂಡಿರುವ ಕಾಂಗ್ರೇಸ್ ಪಕ್ಷಕ್ಕೆ 1775 ಬೂತ್ ಗಳಲ್ಲಿ ಸರಿಯಾಗಿ ಸಮಿತಿಗಳನ್ನು ಕೂಡ ರಚಿಸಲಾಗಿಲ್ಲವೆಂದರೆ ಇನ್ನು ಚುನಾವಣೆ ಹೇಗೆ ನಡೆಸ ಬಹುದು?
ಕಾಯ೯ಕತ೯ರಲ್ಲೂ ತಮ್ಮ ಪಕ್ಷದ ಅಭ್ಯಥಿ೯ ಇಲ್ಲದೇ ಇರುವುದು ಅವರ ಉತ್ಸಾಹಕ್ಕೆ ಭಂಗ ಬಂದಿದೆ, ಸಮ್ಮಿಶ್ರ ಅಭ್ಯಥಿ೯ಯ ಪಕ್ಷ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲೂ ಇಲ್ಲದಿರುವುದು, ಅನೇಕ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಕಚೇರಿಯೂ ಇಲ್ಲದಿರುವುದು ಕಾಂಗ್ರೇಸ್ ಕಾಯ೯ಕತ೯ರಿಗೆ ಹುಮ್ಮಸ್ಸು ತರುತ್ತಿಲ್ಲ.
ಗ್ರಾಮೀಣ ಪ್ರದೇಶ, ಪರಿಶಿಷ್ಟ ಕಾಲೊನಿಗಳಲ್ಲೂ ಮೋದಿ ಹವಾ, ಯುವ ಜನಾಂಗಗಳಲ್ಲಿ ಸಜಿ೯ಕಲ್ ಸ್ಟೈಕ್ ಉOಟು ಮಾಡಿರುವ ಮೊದಿ ಅಲೆ ಜಿಲ್ಲೆಯ ಕಾ೦ಗ್ರೇಸ್ ಕಾಯ೯ಕತ೯ರಿಗೆ ಚುನಾವಣೆ ಕಬ್ಬಿಣದ ಕಡಲೆ ಆಗಿದೆ.
ವಾಸ್ತವಾoಶ ಮರೆಮಾಚಿ ನಾವೇ ಗೆಲ್ಲುತ್ತೇವೆ, ಡಿಕೆ ಶಿವಕುಮಾರ್ ಮ್ಯಾಜಿಕ್ ಮಾಡುತ್ತಾರೆ, ನಮ್ಮದೆ ಸಕಾ೯ರ, ಕೊನೆಯ ದಿನದಲ್ಲಿ ಹಣದ ಶಕ್ತಿ ಎಂತಲ್ಲ ಹೇಳುತ್ತಾರಾದರೂ ಗ್ರಾಮೀಣ ಕಾಂಗ್ರೇಸ್ ಕಾಯ೯ಕತ೯ನಿಗೆ ಇರುವ ಅನುಮಾನ ಅಪನಂಬಿಕೆ ಹಾಗೇ ಉಳಿದು ಬಿಟ್ಟಿದೆ.
#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ. ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ. ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ. #ದೀರ್ಘವಾದರೂ_ಪೂರ್ಣ_ಲೇಖನ_ಓದಿ #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ
Comments
Post a Comment