#ಪ್ರಸಕ್ತ ರಾಜಕಾರಣದ ಒಳಗುಟ್ಟು#
ಲೋಕಸಭಾ ಚುನಾವಣಾ ಅಂಕಣ ಭಾಗ -2.
(ಕೆ.ಆರುಣ್ ಪ್ರಸಾದ್)
ಶಿವಮೊಗ್ಗ ಜಿಲ್ಲೆಯ ಕಾಂಗ್ರೇಸ್ ಪಕ್ಷದಲ್ಲಿ ಸಂಘಟನೆ ಯಾಕೆ ಕುಗ್ಗಿದೆ?
ಒಂದು ಕಾಲದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿದ್ದ ಕಾಂಗ್ರೇಸ್ ಪಕ್ಷದ ಸಂಘಟನೆ ಈಗ ಏಕಿಲ್ಲ ಎಂದು ಪರಿಶೀಲಿಸಿದರೆ ಪರಸ್ಪರ ಕಾಲು ಏಳೆಯುವ, ಕುತಂತ್ರ ಮಾಡುವವರಿಂದ ಪಕ್ಷ ಹೀನಾಯ ಸ್ಥಿತಿಗೆ ತಲುಪಿದೆ.
ಸಮಥ೯ರನ್ನ, ಅಹ೯ರನ್ನ ಸದಾ ಮೂಲೆಗುಂಪು ಮಾಡಲು ಒಂದು ಗುಂಪು ತಯಾರಾಗಿ ಬಿಡುತ್ತದೆ ಅದನ್ನ ಅಧಿಕಾರ ಇದ್ದವರು ಪೋಷಿಸುತ್ತಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ತೀ.ನಾ.ಶ್ರೀನಿವಾಸ್ ರನ್ನ ತರಾತುರಿಯಿಂದ ಕೆಳಗಿಳಿಸಿದರು ಇದಕ್ಕೆ ಯಾವುದೇ ಕಾರಣ ತಿಳಿಸಲಿಲ್ಲ, ಲೋಕ ಸಭಾ ಮಧ್ಯOತರ ಚುನಾವಣೆಯಲ್ಲಿ ಸ್ಪದಿ೯ಸಲು ಅಭ್ಯಥಿ೯ಯೇ ಇಲ್ಲ ಎಂಬ ತೀಮಾ೯ನ ಮಾಡಿಬಿಟ್ಟರು.
ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯಥಿ೯ ಮಂಜುನಾಥ ಭಂಡಾರಿ ಸ್ಪದಿ೯ಸಿದ್ದಾಗ ಕಾ೦ಗ್ರೇಸ್ ಮುಖಂಡರುಗಳೇ ಜೆಡಿಎಸ್ ಅಭ್ಯಥಿ೯ ಗೀತಾ ಶಿವರಾಜ್ ಕುಮಾರರಿಗೆ ಬೆಂಬಲಿಸಿದ್ದರು.
ಈಗಿನ ಲೋಕಸಭಾ ಚುನಾವಣಾ ಸಂದಭ೯ದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೇಸ್ ಪಕ್ಷದ ಅದ್ಯಕ್ಷರುಗಳನ್ನ ದಿಡೀರ್ ಆಗಿ ಬದಲಾಯಿಸಿದ್ದು ಅಲ್ಲಿ ಬಿನ್ನಮತಕ್ಕೆ ಕಾರಣ ಆಗಿದೆ.
ಜಿಲ್ಲೆಯ ಏಕೈಕ ಕಾಂಗ್ರೇಸ್ ಶಾಸಕ ಭದ್ರಾವತಿಯ ಸಂಗಮೇಶರಿಗೆ ಮಂತ್ರಿ ಸ್ಥಾನ ದೊರೆಯದಂತೆ ಮಾಡಿ ಮೂಲೆಗುOಪು ಮಾಡಲಾಗಿದೆ.
ಮುಖಂಡರುಗಳು ಜಿಲ್ಲಾ ಕೇಂದ್ರದಲ್ಲಿ ಪತ್ರಿಕಾ ಗೋಷ್ಟಿ, ಸಭೆ ಸಮಾರಂಭದಲ್ಲಿ ಮುಖ ತೋರಿಸಿದರೆ, ಕಾಯ೯ಕತ೯ರು ಸೋಷಿಯಲ್ ಮೀಡಿಯಾದಲ್ಲಿ ಮುಖ ತೊರಿಸುತ್ತಾರೆ.
ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ ಭದ್ರಾವತಿ ವಿಧಾನಸಭಾ ಕ್ಷೇತ್ರ ಬಿಟ್ಟರೆ ಬೇರೆಲ್ಲ ಕ್ಷೇತ್ರಗಳನ್ನ ಕಳದು ಕೊಂಡಿರುವ ಕಾಂಗ್ರೇಸ್ ಪಕ್ಷಕ್ಕೆ 1775 ಬೂತ್ ಗಳಲ್ಲಿ ಸರಿಯಾಗಿ ಸಮಿತಿಗಳನ್ನು ಕೂಡ ರಚಿಸಲಾಗಿಲ್ಲವೆಂದರೆ ಇನ್ನು ಚುನಾವಣೆ ಹೇಗೆ ನಡೆಸ ಬಹುದು?
ಕಾಯ೯ಕತ೯ರಲ್ಲೂ ತಮ್ಮ ಪಕ್ಷದ ಅಭ್ಯಥಿ೯ ಇಲ್ಲದೇ ಇರುವುದು ಅವರ ಉತ್ಸಾಹಕ್ಕೆ ಭಂಗ ಬಂದಿದೆ, ಸಮ್ಮಿಶ್ರ ಅಭ್ಯಥಿ೯ಯ ಪಕ್ಷ ಒಂದೇ ಒಂದು ವಿಧಾನಸಭಾ ಕ್ಷೇತ್ರದಲ್ಲೂ ಇಲ್ಲದಿರುವುದು, ಅನೇಕ ತಾಲ್ಲೂಕಿನಲ್ಲಿ ಜೆಡಿಎಸ್ ಪಕ್ಷದ ಕಚೇರಿಯೂ ಇಲ್ಲದಿರುವುದು ಕಾಂಗ್ರೇಸ್ ಕಾಯ೯ಕತ೯ರಿಗೆ ಹುಮ್ಮಸ್ಸು ತರುತ್ತಿಲ್ಲ.
ಗ್ರಾಮೀಣ ಪ್ರದೇಶ, ಪರಿಶಿಷ್ಟ ಕಾಲೊನಿಗಳಲ್ಲೂ ಮೋದಿ ಹವಾ, ಯುವ ಜನಾಂಗಗಳಲ್ಲಿ ಸಜಿ೯ಕಲ್ ಸ್ಟೈಕ್ ಉOಟು ಮಾಡಿರುವ ಮೊದಿ ಅಲೆ ಜಿಲ್ಲೆಯ ಕಾ೦ಗ್ರೇಸ್ ಕಾಯ೯ಕತ೯ರಿಗೆ ಚುನಾವಣೆ ಕಬ್ಬಿಣದ ಕಡಲೆ ಆಗಿದೆ.
ವಾಸ್ತವಾoಶ ಮರೆಮಾಚಿ ನಾವೇ ಗೆಲ್ಲುತ್ತೇವೆ, ಡಿಕೆ ಶಿವಕುಮಾರ್ ಮ್ಯಾಜಿಕ್ ಮಾಡುತ್ತಾರೆ, ನಮ್ಮದೆ ಸಕಾ೯ರ, ಕೊನೆಯ ದಿನದಲ್ಲಿ ಹಣದ ಶಕ್ತಿ ಎಂತಲ್ಲ ಹೇಳುತ್ತಾರಾದರೂ ಗ್ರಾಮೀಣ ಕಾಂಗ್ರೇಸ್ ಕಾಯ೯ಕತ೯ನಿಗೆ ಇರುವ ಅನುಮಾನ ಅಪನಂಬಿಕೆ ಹಾಗೇ ಉಳಿದು ಬಿಟ್ಟಿದೆ.
ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ) ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ. ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ. ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ. ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ. ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...
Comments
Post a Comment