Skip to main content

#ಯಡೂರಪ್ಪರOತ ಇನ್ನೊಬ್ಬರು ಬಿಜೆಪಿಯಲ್ಲಿ ಕಾಣಲು ಸಾಧ್ಯವೇ?#

#ಯಡಿಯೂರಪ್ಪ ತರದವರು ಬಿಜೆಪಿಯಲ್ಲಿ ಮು೦ದಿನ ದಿನದಲ್ಲಿ ಇರಲು ಸಾಧ್ಯವಿಲ್ಲ#
   ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಪರಿಷತ್ ಸಮಾವೇಶ ಶೃ೦ಗೇರಿಯಲ್ಲಿ ಜಿಲ್ಲಾ ಮಂತ್ರಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ಸಿ.ಟಿ.ರವಿಯವರ ಎಲ್ಲಾ ರೀತಿಯ ಬೆದರಿಕೆ ಒತ್ತಡಗಳನ್ನ ಎದುರಿಸಿಯೂ ಪ್ರಾರಂಭ ಆಗಿದೆ.
    ಸಕಾ೯ರದ ಹಸ್ತಕ್ಷೇಪ ಇಲ್ಲದೆ ನಾಡು ನುಡಿಯ ಅಕ್ಷರ ಜಾತ್ರೆಯನ್ನ ಸಾಹಿತ್ಯ ಪರಿಷತ್ ನಡೆಸಿಕೊಂಡ ಇತಿಹಾಸವನ್ನ ಬಿಜೆಪಿ ಮಂತ್ರಿ ಮುರಿದಿದ್ದಾರೆ ಕಲ್ಕುಳಿ ವಿಠಲ ಹೆಗ್ಡೆಯನ್ನ ವೈಯಕ್ತಿಕವಾಗಿ ವಿರೋದಿಸಲು ಹೋಗಿ ಬಿಜೆಪಿ ಪಕ್ಷಕ್ಕೆ ಕೆಟ್ಟ ಇಮೇಜ್ ತಂದಿದ್ದಾರೆ ಮತ್ತು ಬಿಜೆಪಿ ವಿರೋದಿ ಶಕ್ತಿಗಳಿಗೆ ಹೆಚ್ಚಿನ ಆತ್ಮವಿಶ್ವಾಸಕ್ಕೆ ಕಾರಣರಾಗಿದ್ದಾರೆ.
  ಇವತ್ತು ನಮ್ಮ ಜಿಲ್ಲೆಯ ಯಡೂರಪ್ಪನವರು ಮುಖ್ಯಮಂತ್ರಿ, ಅವರ ಇವತ್ತಿನ ತನಕದ ರಾಜಕಾರಣದಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಇಂತಹ ಯಾವುದೇ ಕಪ್ಪು ಚುಕ್ಕೆ ಉoಟು ಮಾಡುವ ಘಟನೆಗೆ ಆಸ್ಪದ ನೀಡಲಿಲ್ಲ, ಕಳೆದ ಅವದಿಯಲ್ಲಿ ಇವರು ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಯ ವರೇ ಆದ ಸಾಹಿತಿ ನಾ.ಡಿಸೋಜ ಇವರನ್ನ ಎಲ್ಲಾ ರೀತಿಯಿಂದಲೂ ವಿರೋದಿಸುತ್ತಿದ್ದರು ಆದರೆ ಒಮ್ಮೆಯೂ ಯಡೂರಪ್ಪ ತಮ್ಮ ಅಧಿಕಾರ ದುಬ೯ಳಕೆ ಮಾಡಲಿಲ್ಲ ಅವರ ಕಾಯ೯ಕ್ರಮ ತಡೆಯಲಿಲ್ಲ.
  1980 ರಲ್ಲಿ ಆನಂದಪುರಕ್ಕೆ ಆಗಾಗ್ಗೆ ಕುಮಧ್ವತಿ ಬಸ್ ನಲ್ಲಿ ಬಂದು ಅವತ್ತಿನ ದಿನದಲ್ಲಿ ಆನಂದಪುರದ ಬಿಜೆಪಿ ತ್ರಿಮೂತಿ೯ಗಳಾಗಿದ್ದ ಗೀತಾ ಹೋಟೆಲ್ ಶೆಣೆಯ್, ಬಸ್ ಶ್ರೀಧರಣ್ಣ ಮತ್ತು ಬಸ್ ಏಜೆಂಟ್ ಮOಜು ಕವಲೇಕರ್ ಜೊತೆ ಕೋಟೆ ಆಂಜನೇಯ ದೇವಸ್ಥಾನದ ಹತ್ತಿರ ಮೀಟಿಂಗ್ ಮಾಡಿ ಶಿಕಾರಿಪುರಕ್ಕೆ ವಾಪಾಸಾಗುತ್ತಿದ್ದ ಯಡೂರಪ್ಪರವರನ್ನ ದೂರದಿಂದ ನೋಡುತ್ತಿದ್ದೆ.
     ನಂತರ ನಾನು ಮೊದಲ ಸಾರಿ ಇವರನ್ನ ನೋಡಿದ್ದು ಶಿವಮೊಗ್ಗ ಜಿಲ್ಲಾ ಪಂಚಾಯತನ ಮೊದಲ ಸಭೆಯಲ್ಲಿ ಅವತ್ತು ನನ್ನ ಮೊದಲ ಸಭೆಯ ಮಾತಿಗೆ ಬೆನ್ನು ತಟ್ಟಿ ಅಭಿನಂದಿಸಿದ್ದರು, ಆಗಾಗ್ಗೆ ಜಿ.ಪಂ.ಸಭೆಗೆ ಬರುತ್ತಿದ್ದರು.
     ನಂತರ ಅವರ ಬೇಟಿ 2014ರ ಲೋಕಸಭಾ ಚುನಾವಣೆಗೆ ಇವರು ಅಭ್ಯಥಿ೯ ಆದಾಗ ಸಾಗರ ತಾಲ್ಲೂಕ್ ಜೆ.ಡಿ.ಎಸ್.ಅಧ್ಯಕ್ಷನಾಗಿದ್ದ ನನ್ನನ್ನ ಮಾಜಿ ಶಾಸಕರಾದ ಗೋಪಾಲಕೃಷ್ಣರು ಅವರೊಂದಿಗೆ ಬಿಜೆಪಿಗೆ ಸೇರಿಕೊಂಡಾಗ.
         ನಂತರ ನಾನು ರಾಜಕೀಯದಿ೦ದ ದೂರ ಆದ ಮೇಲೆ ಅವರನ್ನು ಬೇಟಿ ಮಾಡಲಿಲ್ಲ, ಅವರಿಗೂ ನೆನಪು ಇರಲಿಕ್ಕಿಲ್ಲ ಆದರೆ ಅವರು ಸಾಗರ ತಾಲ್ಲೂಕಿನ ತುಮರಿ ಸೇತುವೆ ಮಂಜೂರು ಮಾಡಿದ್ದು ಮತ್ತು ಬ್ರಾಡ್ ಗೇಜ್ ಗೆ ರಾಜ್ಯ ಸಕಾ೯ರದ ಸಹಬಾಗಿತ್ವದ ಹಣ ನೀಡಿ ಶಿವಮೊಗ್ಗ ತಾಳಗುಪ್ಪ ಬ್ರಾಡ್ ಗೇಜ್ ರೈಲು ಓಡುವ೦ತೆ ಮಾಡಿದ್ದು ನನಗೆ ಅವರ ಮೇಲೆ ಅಪಾರ ಅಭಿಮಾನ.
    ಇದಕ್ಕೆ ಕಾರಣವೂ ಇದೆ ಈ ಎರೆಡು ಮುಖ್ಯ ವಿಚಾರದ ಜೊತೆ ಹಂದಿಗೋಡು ಕಾಯಿಲೆಗೆ ಸಂಶೋದನೆ ಜಾಷದಿ ಕಂಡು ಹಿಡಿಯುವುದು, ಜೋಗ ಜಲಪಾತ ಪ್ರವಾಸೋದ್ಯಮದ ಅಭಿವೃದ್ದಿ, ಸಾಗರ ರೈಲು ನಿಲ್ದಾಣ ಸಾಗರ ಜಂಬಗಾರು ಹೆಸರು ಡಾ.ರಾಮಮನೋಹರ ಲೋಹಿಯಾ ಎಂದು ಮರುನಾಮಕರಣ, ಜಿಲ್ಲೆಯ ಇಂಡಿಕರಣ ಪ್ರಕ್ರಿಯೆ ರದ್ದು ಮಾಡಲು ಒತ್ತಾಯಿಸಿ ಇಡೀ ಸಾಗರ ತಾಲ್ಲೂಕಿನಲ್ಲಿ ಪಾದಯಾತ್ರೆ ಮೂಲಕ ಸಕಾ೯ರಕ್ಕೆ ಒತ್ತಾಯಿಸಿದ್ದು, ದೆಹಲಿ ಚಲೋ ಮಾಡಿದ್ದರಿಂದ ನಮ್ಮ ಬೇಡಿಕೆ ಈಡೇರದಿದ್ದರೂ ಯಡೂರಪ್ಪ ಮುಖ್ಯಮಂತ್ರಿ ಆದಾಗ ನಾವು ಒತ್ತಾಯಿಸುತ್ತಿದ್ದ ಬೇಡಿಕೆಯಲ್ಲಿನ ಈ ಎರೆಡು ದೊಡ್ಡ ಕೆಲಸ ಆಯಿತು, ಇದು ನಮ್ಮ ಹೋರಾಟದ ಕಾರಣ ಅಲ್ಲವಾದರೂ ನಮ್ಮ ಹೋರಾಟ ಸ್ಥಳಿಯ ಅವರ ಪಕ್ಷದವರಿಗೆ ಅವರ ನಾಯಕರಿಗೆ ಬೇಡಿಕೆ ಸಲ್ಲಿಸಲು ಕಾರಣ ಆಯಿತು ಆಗಿನ ಸಾಗರ ಶಾಸಕರಾಗಿದ್ದ ಗೋಪಾಲಕೃಷ್ಣರ ಸಮಯೋಜಿತ ಒತ್ತಾಯ ಮತ್ತು ಒತ್ತಡವೂ ಸೇರಿದ್ದರಿಂದ ಇದು ಸಾಧ್ಯವಾಯಿತು, ಸಹಜವಾಗಿ ಇವರ ಮೇಲಿನ ಅಭಿಮಾನಕ್ಕೆ ಇದು ಕಾರಣ ಆಯಿತು ಇದನ್ನ ಇಡೀ ಜಿಲ್ಲೆಯ ಜನ ಮರೆಯಬಾರದು.
  ಸಿ.ಟಿ.ರವಿ ಇಂತವರೆಲ್ಲ ಯಡೂರಪ್ಪನವರಿಗೆ ಪದೇ ಪದೇ ಸಂಕಷ್ಟ ತರುವುದು, ಏನೇನೋ ಹೇಳಿಕೆ ನೀಡಿ ಅವರನ್ನ ಇರುಸು ಮುರುಸು ಮಾಡುವುದು ಸರಿಯಲ್ಲ ಇದಕ್ಕೆಲ್ಲ ಬೆಂಬಲಿಸುವಂತೆ ಸಂತೋಷ್ ಜಿ, ಅಮಿತ್ ಶಹಾ ಮತ್ತು ಮೋದಿ ಕೂಡ ಪರೋಕ್ಷವಾಗಿ ನಡೆಯುತ್ತಿರುವುದು ರಹಸ್ಯವೇನಲ್ಲ.
  ಇದೆಲ್ಲ ನೋಡಿದರೆ ಯಡೂರಪ್ಪರ ನಂತರ ಬಿಜೆಪಿಯಲ್ಲಿ ಇಂತವರು ಬರುವುದು ಸಾಧ್ಯವಿಲ್ಲ ಅನ್ನಿಸುತ್ತೆ.

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ