Skip to main content

Blog number 1683. ಶಾಸನ ರಹಿತ ಶಿಲ್ಪಗಳಾದ ಫಲವತ್ತತೆಯ ಸಂಕೇತವಾದ ಶಿವಮೊಗ್ಗ ಜಿಲ್ಲೆಯ ಸೊರಬ-ಸಾಗರ ಮತ್ತು ಶಿಕಾರಿಪುರ ತಾಲ್ಲೂಕಿನಲ್ಲಿ 15 - 16 ನೇ ಶತಮಾನದಲ್ಲಿ ನಿಮಿ೯ಸಿದ ಕೆರೆ ದಂಡೆಯಲ್ಲಿ ಮಾತ್ರ ಇರುವ ನಗ್ನ ಸ್ತ್ರೀ-ಪುರುಶ ವಿಗ್ರಹ ಇದನ್ನು ರಾತ್ರಿ ವೇಳೆ ಗುಪ್ತವಾಗಿ ಅವಿವಾಹಿತರು ಪೂಜಿಸುವ ಪದ್ಧತಿ ಇದೆ ಅಂತೆ.


#ಶಾಸನರಹಿತ_ಶಿಲ್ಪಗಳು.

#ನಮ್ಮ_ಚೆನ್ನಶೆಟ್ಟಿಕೊಪ್ಪದ_ಕೆರೆದಂಡೆಯ_ನಗ್ನ_ಸ್ತ್ರೀ_ಪುರುಷ_ವಿಗ್ರಹದ_ಮಾಹಿತಿ_ನೀಡಿದ

#ಇತಿಹಾಸ_ಸಂಶೋದನೆ_ಸಂರಕ್ಷಣೆ_ಮತ್ತು_ಅಧ್ಯಯನದಲ್ಲಿ_ತೊಡಗಿರುವ 

#ನಿವೃತ್ತ_ಕೃಷಿ_ಅಧಿಕಾರಿ_ಹಿರೇನೆಲ್ಲೂರು_ಪಾಂಡುರಂಗ_ ಕಳಸ 

#ಇವರು_ಹುಟ್ಟಿದ್ದು_ಸಾಗರ_ತಾಲ್ಲೂಕಿನಲ್ಲಿ

#ಇವರ_ತಂದೆ_ಮಡಸೂರುಲಿಂಗದಳ್ಳಿ_ಮಂಗಳಬೀಸು_ಶಾಲೆಯಲ್ಲಿ_ಶಿಕ್ಷಕರಾಗಿದ್ದ.

#ಹೆಚ್_ಜಿ_ರುದ್ರಪ್ಪನವರು.

  ಮೊನ್ನೆ ಸಾಗರ ತಾಲೂಕಿನ ಆನಂದಪುರಂ ಹೋಬಳಿ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೆನ್ನಶೆಟ್ಟಿಕೊಪ್ಪದ ಕೆರೆ ದಂಡೆಯ ಶಾಸನದ ಬಗ್ಗೆ ಬರೆದ ಲೇಖನ ಪೋಸ್ಟ್ ಮಾಡಿದ್ದೆ ಈ ಕ್ಷಣದವರೆಗೆ 14 ಸಾವಿರದ 554 ಜನರಿಗೆ ತಲುಪಿದೆ ಮತ್ತು ಆ ಕೆರೆ ದಂಡೆಯ ಮೇಲಿನ ನಗ್ನ ಸ್ತ್ರೀ ಪುರುಷ ವಿಗ್ರಹದ ಪೋಟೋದ ಬಗ್ಗೆ ಬಹು ಜನರು ಮಾಹಿತಿ ಕೇಳಿದ್ದರು.
  ನನಗೆ ಅಷ್ಟು ಹೆಚ್ಚು ಮಾಹಿತಿ ಇಲ್ಲವಾದ್ದರಿಂದ ನಾನು ಕಳಸದ ನಿವೃತ್ತ ಕೃಷಿ ಅಧಿಕಾರಿಗಳಾದ ಹಿರೇನೆಲ್ಲೂರು ಪಾಂಡುರಂಗ ಕಳಸ ಅವರನ್ನು ಸಂಪರ್ಕಿಸಿ ಮಾಹಿತಿ ಕೇಳಿದ್ದೆ.


   ಚಿಕ್ಕಮಗಳೂರು ಜಿಲ್ಲೆಯ ಹಿರೇನೆಲ್ಲೂರಿನ ಮೂಲದವರಾದ ಇವರ ತಂದೆ ಶಿಕ್ಷಕರಾಗಿ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಮಂಗಳಬೀಸು ಮತ್ತು ಮಡಸೂರು ಲಿಂಗದಳ್ಳಿ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದರಂತೆ ಆದ್ದರಿಂದ ಸಾಗರ  ಪಾಂಡುರಂಗ ಅವರು ಹುಟ್ಟಿದ ಸ್ಥಳ ಸಾಗರ.
   ಸಾಗರದ ಪಾಂಡುರಂಗ ದೇವರ ಹರಕೆ ಕಾರಣ ಇವರ ಹೆಸರು ಪಾಂಡುರಂಗ ಅಂತ ನಾಮಕರಣವಾಯಿತಂತೆ.
   ಹಿಸ್ಟರಿ ಮೇಜರ್ ಬಿಎ ವ್ಯಾಸಂಗ ಮಾಡಿದ್ದ ಇವರಿಗೆ ಇತಿಹಾಸ ಮೆಚ್ಚಿನ ವಿಷಯ ಅದಕ್ಕೆ ಪೂರಕವಾಗಿ ಕೃಷಿ ಇಲಾಖಾ ಅಧಿಕಾರ ಇವರದ್ದು ಈಗ ನಿವೃತ್ತರಾಗಿದ್ದಾರೆ.
  ಇತಿಹಾಸ ಸಂಶೋದನೆ, ಸಂರಕ್ಷಣೆ ಮತ್ತು ಅಧ್ಯಯನ ಇವರ ಪ್ರವೃತ್ತಿ ಆಗಿದೆ, ಮಾಸ್ತಿಕಲ್ಲು ಸ್ಥಳನಾಮಗಳ ಬಗ್ಗೆ ಅನೇಕ ಸಂಶೋಧನೆ ಮಾಡಿ ಪ್ರಕಟಿಸಿದ್ದಾರೆ.
  ಇತಿಹಾಸ ಅಕಾಡೆಮಿ ಸದಸ್ಯರಾಗಿ  ಈಗಾಗಲೇ 35 ಶಾಸನಗಳನ್ನು ಸಂಶೋದಿಸಿ ಪ್ರಕಟಿಸಿದ್ದಾರೆ, ಇನ್ನೂ 45 ಶಾಸನಗಳು ಪ್ರಕಟವಾಗಬೇಕಾಗಿದೆ ಈ ಬಗ್ಗೆ ನಾಲ್ಕು ಪುಸ್ತಕಗಳು ಪ್ರಕಟನೆಯ ಹಾದಿಯಲ್ಲಿದೆ ಈಗ ಕಳಸದಲ್ಲಿ ಹೊಸ ದಿಗಂತ ಮತ್ತು ಸ್ಥಳಿಯ ಜನ ಮಿತ್ರ ಪತ್ರಿಕಾ ವರದಿಗಾರರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.
   ನನ್ನ ಚಂಪಕ ರಾಣಿ ಇಂಗ್ಲೇಷ್ ಆವೃತ್ತಿಯ ಮುಖಪುಟ ವಿನ್ಯಾಸಕ್ಕೆ ಮತ್ತು ಪುಸ್ತಕದ ಹೆಸರು Champaka the Forgotten Queen of Keladi Kingdom ಎಂಬ ನಾಮಕರಣ ಮಾಡಿದ್ದು ಇವರೆ.
  ಅವರು ಕೆರೆ ದಂಡೆಯ ಮೇಲೆ ನಗ್ನ ಸ್ತ್ರೀ-ಪುರುಶರ ವಿಗ್ರಹ ಸ್ಥಾಪಿಸುವ ಬಗ್ಗೆ ಈ ಕೆಳಕಂಡಂತೆ ಮಾಹಿತಿ ನೀಡಿದ್ದಾರೆ...
  ಈ ರೀತಿಯ ಶಿಲ್ಪಗಳು ಶಿವಮೊಗ್ಗ ಜಿಲ್ಲೆಯ ಸೊರಬ, ಶಿಕಾರಿಪುರ ಮತ್ತು ಸಾಗರ ತಾಲೂಕಿನಲ್ಲಿ 15-16 ನೇ ಶತಮಾನದಲ್ಲಿ ನಿರ್ಮಾಣವಾದ ನಿರಾವರಿ ಕೆರೆ ದಂಡೆಗಳಲ್ಲಿ ಮಾತ್ರ ಕಾಣಸಿಗುತ್ತದೆ ಬೇರೆ ಜಿಲ್ಲೆಗಳಲ್ಲಿ ಇಲ್ಲ.
   ಈ ಬಗ್ಗೆ ಈವರೆಗೆ ಯಾವುದೇ ಶಾಸನ ದೊರೆತಿಲ್ಲ, ಈ ವಿಗ್ರಹಗಳು ಶಾಸನ ರಹಿತ ಶಿಲ್ಪಗಳೆಂದು ಗುರುತಿಸುತ್ತಾರೆ.
   ಸ್ತ್ರೀ ಭೂಮಿ ಸಂಕೇತವಾಗಿ ಪುರುಷ ಬೀಜದ ಸಂಕೇತವಾಗಿ ಕೃಷಿ ಭೂಮಿ ಫಲವತ್ತಾಗಲಿ ಎಂಬ ಉದ್ದೇಶದ ಶಿಲ್ಪಗಳು ಎಂದು ಭಾವಿಸಲಾಗಿದೆ.
   ಅವಿವಾಹಿತರು ಶೀಘ್ರ ವಿವಾಹ ಪ್ರಾಪ್ತಿಗಾಗಿ ರಾತ್ರಿ ವೇಳೆ   ಗುಪ್ತವಾಗಿ ಈ ವಿಗ್ರಹಗಳಿಗೆ ಪೂಜೆ ಮಾಡುವ ಪದ್ಧತಿ ನಂಬಿಕೆ ಕೂಡ ಇದೆಯಂತೆ.
  ಇದೇ ರೀತಿ ನಗ್ನ ವಿಗ್ರಹದಲ್ಲಿ ತಲೆ ಇಲ್ಲದ ಮತ್ತು ತಲೆ ಜಾಗದಲ್ಲಿ ಕಮಲದ ಹೂವಿನ ಲಜ್ಜಾಗೌರಿ ಶಿಲ್ಪಗಳು ಸ್ತ್ರೀ ಪ್ರದಾನ ಕುಟುಂಬಗಳು ಇರುವಲ್ಲಿ ದೇವಸ್ಥಾನ ಅಥವ ಮರಗಳ ಪಕ್ಕದಲ್ಲಿರುತ್ತದೆ ಅನ್ನುವ ಮಾಹಿತಿ ಕೂಡ ನೀಡಿದ್ದಾರೆ.
   ಆನಂದಪುರಂನ ಮುಖ್ಯ ಹೆದ್ದಾರಿಯ ದಾಸಕೊಪ್ಪದ ಕೆರೆ ಕಾಲುವೆ ಹೂಳು ತೆಗೆಯುವಾಗ ಇಂತಹ ಶಿಲ್ಪ ಸಿಕ್ಕಿತ್ತು ಬಹುಶಃ ಆನಂದಪುರಂನ ಕೆರೆದಂಡೆಯಲ್ಲಿ ಹೆದ್ದಾರಿ ನಿರ್ಮಿಸುವಾಗ ಈ ವಿಗ್ರಹ ತೆಗೆದು ಬದಿಗೆ ಇರಿಸಿದ್ದು ಕಾಲುವೆಯಲ್ಲಿ ಮಣ್ಣಿನಲ್ಲಿ ಹುಗಿದು ಹೋಗಿರ ಬಹುದು.
   ಕೆರೆ ದಂಡೆಯಲ್ಲಿ ಆ ಕೆರೆ ನೀರಿಂದ ಕೃಷಿ ಮಾಡುವ ಭೂಮಿ ಫಲವತ್ತಾಗಲಿ ಎ೦ದು ಈ ರೀತಿ ನಗ್ನ ಸ್ತ್ರೀ ಪುರುಷ ವಿಗ್ರಹಗಳನ್ನು 15-16ನೇ ಶತಮಾನದಲ್ಲಿ ಸ್ಥಾಪಿಸುವ ಪದ್ಧತಿ ಇತ್ತು.
  

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ